ಡಾ ಡೋ.ನಾ.ವೆಂಕಟೇಶ ಕವಿತೆ-ಅವಲೋಕನ

ಕಾವ್ಯ ಸಂಗಾತಿ

ಅವಲೋಕನ

ಡಾ ಡೋ.ನಾ.ವೆಂಕಟೇಶ

ರಾಜ್ಯ ಕೋಶ ಮಡದಿ ಮಗು
ತೊರೆದು ಸಿದ್ಧಾರ್ಥ
ಬುದ್ಧನಾದ.

ಅಧಿಕಾರ ಮದ ಮೋಹ
ಗಳಿಸಿ ಈ ಮನುಷ್ಯ
ಅಸ್ತಿತ್ವವಿಲ್ಲದಾದ

ಸಾವಿರಾರು ಸಂವತ್ಸರಗಳ ಹಿಂದೆ ಆಗಿ ಹೋದ ಸಿದ್ಧ
ನೆನಪಿನಾಳದಲ್ಲಿ
ಪ್ರಸಿದ್ಧ

ಆಸೆ ದುರಾಸೆಗಳ ಮೂಸೆಯಲ್ಲೆ
ಜ್ವಲಿಸಿದ ಮನುಜ
ಅಪರಂಜಿಗೇ ಅಂಜಿದ ಅಪ್ರಬುದ್ಧ,
ಚಿನ್ನಕ್ಕೂ ಬೂದಿಗೂ
ಆಳ ತಿಳಿಯದ ಮಂಕ.

ಅವಲೋಕನದ ಅಗತ್ಯ
ಈಗೀಗ ನಿತ್ಯ ಸತ್ಯ


ಡಾ ಡೋ.ನಾ.ವೆಂಕಟೇಶ

7 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಅವಲೋಕನ

  1. ಬುದ್ಧ ಪೂರ್ಣಮಿಯ ಶುಭದಿನದಂದು
    “ಅವಲೋಕನ” ಕವಿತೆ ಸಮಯೋಚಿತವಾಗಿದೆ.

  2. ಬುದ್ಧ ಪೂರ್ಣಮಿಯ ಶುಭದಿನದಂದು
    “ಅವಲೋಕನ” ಕವಿತೆ ಸಮಯೋಚಿತವಾಗಿದೆ

Leave a Reply

Back To Top