ಚುನಾವಣಾ ತನಗಗಳು-ಪ್ರೊ. ಸಿದ್ದು ಸಾವಳಸಂಗ,ತಾಜಪುರ

ಕಾವ್ಯ ಸಂಗಾತಿ

ಚುನಾವಣಾ ತನಗಗಳು

ಪ್ರೊ. ಸಿದ್ದು ಸಾವಳಸಂಗ,ತಾಜಪುರ


ಮತದಾನ ಬಂದಿದೆ
ಮತ ಚಲಾಯಿಸಿರಿ
ಹಾಗೆಯೇ ಉಳಿದರೆ
ಹುಟ್ಟಿದ್ದಕ್ಕೂ ವ್ಯರ್ಥರಿ !!


ಮತ ಮಾರಾಟಕ್ಕಿಲ್ಲ
ತಿಳಿದುಕೋ ಮನುಜ
ಹಣದಾಸೆಗೆ ಬಲಿ
ನೀನಲ್ಲವೋ ಕುಲಜ !!


ಬೇಡ ಸ್ವಾರ್ಥ ಮನುಜ
ಮಾರಬೇಡಿರಿ ಮತ
ನೀವಾಗಿ ಪ್ರಾಮಾಣಿಕ
ದೇಶಕ್ಕದುವೇ ಹಿತ !!


ಚುನಾವಣೆ ಬಂದಿದೆ
ಹಾಕಿ ಎಲ್ಲರೂ ಓಟು
ಅತಿಯಾಸೆಗೆ ಬಲಿ
ಕೇಳಬೇಡಿರಿ ನೋಟು !!


ಯುವಜನತೆ ಏಳಿ
ದೇಶ ನಿಮ್ಮದೇ ಆಸ್ತಿ
ಇಷ್ಟು ದಿನ ಮಲಗಿ
ಸಾಧಿಸಿದ್ದಿದ್ದು ನಾಸ್ತಿ !!


ಪ್ರೊ. ಸಿದ್ದು ಸಾವಳಸಂಗ,ತಾಜಪುರ








Leave a Reply

Back To Top