ರೇಖಾ ಸುದೇಶ್ ರಾವ್ ಕವಿತೆ-ಪ್ರೀತಿ ತಂದ ಆಪತ್ತು

ಕಾವ್ಯಸಂಗಾತಿ

ರೇಖಾ ಸುದೇಶ್ ರಾವ್

ಪ್ರೀತಿ ತಂದ ಆಪತ್ತು

ದತ್ತ ಪದ : ಪ್ರೀತಿ ತಂದ ಆಪತ್ತು

ಶೀರ್ಷಿಕೆ: ನಶಿಸಿದ ಮಾನವೀಯತೆ

ಮನದಲ್ಲಿ ಮಿಂಚಿದ್ದು ಪ್ರೀತಿ
ಪ್ರಣಯದ ಜೊತೆಗಿದ್ದ ರೀತಿ
ತನುವಿನಲ್ಲಿ ಒಂದಷ್ಟು ಭೀತಿ
ಕೊನೆಯಲ್ಲಿ ಆದದ್ದು ಪಜೀತಿ

ಮೊದಲು ಪ್ರೇಮದ ಕಾಣಿಕೆ ನೀಡಿದೆ
ಚಿತ್ತದಲ್ಲಿ ಸಂಶಯ ತುಂಬಿ ಕಾಡಿದೆ
ಹುತ್ತದ ಹಾವಂತೆ ಬುಸುಗುಟ್ಟಿದೆ
ಪದೆ ಪದೆ ಇಲ್ಲದ್ದು ಹೇಳಿ ನೋಯಿಸಿದೆ

ನೆನಪುಗಳು ಮಾತ್ರ ಮರುಕಳಿಸಿದೆ
ಮರೆಯೋಣ ಎಂದರೆ ಕಣ್ಣ್ ಮುಂದಿದೆ
ನುಡಿ ಮುತ್ತುಗಳು ಕಿವಿಗಪ್ಪಿಸುತ್ತಿದೆ
ಹೃದಯ ವೀಣೆ ಮಿಡಿಯುತ್ತಿದೆ

ಜೀವನದಲ್ಲಿ ಮೂಡಿದೆ ವೈರಾಗ್ಯ ಭಾವ
ಯಾರಲ್ಲಿ ಹೇಳಲಿ ಬದುಕಿನ ನೋವ
ಕಾಣಲಿದೆ ಈ ನಯನ ಘೋರ ಸಾವ
ತಂದಿಟ್ಟೆ ಕುತ್ತು ಒದ್ದಾಡಿದೆ ಸೊರಗಿ ಜೀವ


ರೇಖಾ ಸುದೇಶ್ ರಾವ್

Leave a Reply

Back To Top