ಮೇ-ದಿನದ ವಿಶೇಷ

ಬಿ.ಟಿ.ನಾಯಕ್.

ಕಾಯಕ ಯೋಗಿ ಕಾರ್ಮಿಕ ಯೋಗಿ
ಕಾಯಕ ಯೋಗಿ ಕಾರ್ಮಿಕ ಯೋಗಿ ಚಿಂತಿಸಿ ಒಮ್ಮೆ,
ಕಾರ್ಮಿಕ ದೇಶದ ಬೆನ್ನೆಲುಬೆಂದು ಯೋಚಿಸಿ ಒಮ್ಮೆ.

ರಾತ್ರಿ ಹಗಲಿನ ಭೇದವಿಲ್ಲದ ದುಡಿತ ಕೊಡುವನು,
ಕಷ್ಟವ ಲೆಕ್ಕಿಸದೇ ತದೇಕ ಚಿತ್ತದೀ ದುಡಿಯುವನು,
ಧಣಿಗಾಗಿ ದುಡಿತ ದೇಶಕ್ಕೆ ನಾಡಿ ಬಡಿತ ಏನ್ವನು,

ಸಂತೃಪ್ತಿ ಜೀವನ್ದಲೀ ಅಡೆ ತಡೆ ಬಂದ್ರೇ ಬೇಡುವನು,
ಧಣಿ ತನ್ನ ದಣಿವು ಅರಿಯಲೆಂದು ಧರಣಿ ಮಾಡ್ವನು,
ಆತನ ಶ್ರಮ ಫಲಕ್ಕೆ ಕಟ್ಟಲಾಗದು ನೈಜ ಬೆಲೆಯನ್ನು,

ಆತನರಿತರೇ ಸಂತುಷ್ಟದೀ ಹೆಚ್ಚಿನ ಲಾಭ ತರ್ವನು.
ಕಾರ್ಮಿಕ ಯೋಗಿ ಪ್ರೀತಿಸ್ವನು ನಮ್ಮಯ ದೇಶವನ್ನು.
ಕಾರ್ಮಿಕಂಗೆ ನಾವು ನೀಡೋಣ ನೈಜ ಗೌರವವನ್ನು.

——————————-


ಬಿ.ಟಿ.ನಾಯಕ್

Leave a Reply

Back To Top