ಪರಿಮಳ ಐವರ್ನಾಡು ಸುಳ್ಯಹನಿಗವನಗಳು

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ಹನಿಗವನಗಳು

ಕುರುಡು ಕಾಂಚಾಣ

ಅರಳುವ ಮುನ್ನವೇ ಬಾಡಿದ ಹೂವು
ಮನದಲ್ಲೇ ಉಳಿದಿತ್ತು ನೂರಾರು ನೋವು
ನೈತಿಕತೆಯ ಮರೆತ ದುರುಳನ ನರ್ತನ
ಎಳೆಜೀವ ಸೇರಿತು ಮರಳದೆ ಮಸಣ
ಬಡವಿಯ ಮನೆಯಲಿ ನೀರವ ಮೌನ
ಕಾಮುಕನ ಉಳಿಸಿತು ಕುರುಡು ಕಾಂಚಾಣ

ಪಾವನ

ಎತ್ತ ನೋಡಿದರೂ ಕತ್ತಲು
ಕಣ್ಣು ಕಾಣದೆ ಬಾಳು ಇರುಳು
ಅನುದಿನವೂ ನಿನ್ನದೇ ನಿರೀಕ್ಷೆ
ಸಾಕು ನಿಲಿಸು ಈ ಅಗ್ನಿಪರೀಕ್ಷೆ
ಬಾಚಿ ತಬ್ಬಿಕೋ ನನ್ನ ನಯನ
ಜೀವನವಾಗಲಿ ನಿನ್ನಿಂದ ಪಾವನ


ಪರಿಮಳ ಐವರ್ನಾಡು ಸುಳ್ಯ

Leave a Reply

Back To Top