ಪವನ್ ಕುಮಾರ್.ಕೆ ಕವಿತೆ -ವರ್ಗಾಯಿಸುವ ಪರಿಸರ

ವಿದ್ಯಾರ್ಥಿ ವಿಬಾಗ

ಪವನ್ ಕುಮಾರ್.ಕೆ

ವರ್ಗಾಯಿಸುವ ಪರಿಸರ

ಸುಡಬೇಡಿ ಅಗೆಯ ಬೇಡಿ
ತೋಡಬೇಡಿ ಪರಿಸರವ
ಬರಡಾದ ಬುವಿಯನು ಹಸಿರಾಗಿಸಿ
ಮುಂದಿನ ಪೀಳಿಗೆಗೆ ವರ್ಗಾಯಿಸುವ

ಸೂರ್ಯ ಚಂದ್ರ ತಾರೆಗಳಂತೆ
ಸ್ವಾರ್ಥ ಬಿಟ್ಟು ಬಾಳುವ
ಬನ್ನಿ ಎಲ್ಲ ಜೊತೆಗೂಡಿ
ಗಿಡವ ನೆಟ್ಟು ನಲಿಯುವ

ಸಾಲು ಸಾಲು ಗಿಡವ ನೆಟ್ಟು
ಕಾಡು ಬೆಳೆಸಿ ನಲಿಯುವ
ನಾಳಿನ ನಮ್ಮ ಒಳಿತಿಗಾಗಿ
ಪರಿಸರವನ್ನು ಉಳಿಸುವ.!

ನೆಲ, ಜಲ ,ಭುವಿ ಎನುತ
ಸಮೃದ್ಧಿಯಿಂದ ಬೆಳೆಸುವ,
ಪರಿಸರವ ಸ್ವಚ್ಚ ಮಾಡಿ
ನವ ನಿರ್ಮಾಣಕೆ ಕೈಕೈ ಜೋಡಿಸುವ..!!

—————–

Leave a Reply

Back To Top