ಕಾಡಜ್ಜಿ ಮಂಜುನಾಥ ಕವಿತೆ-ಪ್ರಜಾಪ್ರಭುತ್ವ

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವ
ಹಣ ಹೆಂಡ ಸೀರೆಯ
ಆರ್ಭಟದಲಿ
ಮೌಲ್ಯವ ಕಳಕೊಂಡ
ಹಳೆಯ ನೋಟಾಗಿದೆ !!

ಜಾತಿ ಧರ್ಮದ
ಸೊಂಕಿನ ಪಟ್ಟುಗಳ
ಆರ್ಭಟದಲಿ
ಅಪೌಷ್ಟಿಕತೆಯಿಂದ
ನರಳು ರೋಗಿಯಾಗಿದೆ !!

ಭರವಸೆಯ
ಮಾತಿನ ಬಾಣಗಳ
ಆರ್ಭಟದಲಿ
ಸಮಸ್ಯೆಗಳು ಸೋತು
ಸತ್ತ ಹೆಣವಾಗಿವೆ !!

ಕರ ಭಾರವು
ಏರಿದರೂ ಮೌನದಿ
ಅನುಭವಿಸೋ
ಬೇಸಿಗೆ ಬಿಸಿಲಲಿ
ಸುರಿವ ಬೆವರಂತಾಗಿದೆ !!

ಅಭಿವೃದ್ಧಿಯ
ಹೆಸರಲಿ ಘೋಷಣೆಗಳ
ಆರ್ಭಟದಲಿ
ನೋವನುಂಡ ಜನರಿಗೆ
ಸಂತ್ವಾನದ ಮಾತಿಗೂ ಬರಬಂದಿದೆ !!

ರಾಜಕಾರಣಿಗಳು
ಕುರ್ಚಿಯ ಮೋಹದಲಿ
ಮತದಾರರ


3 thoughts on “ಕಾಡಜ್ಜಿ ಮಂಜುನಾಥ ಕವಿತೆ-ಪ್ರಜಾಪ್ರಭುತ್ವ

Leave a Reply

Back To Top