ಶಂಕರಾನಂದ ಹೆಬ್ಬಾಳ ಗಝಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಝಲ್

ಬದಲಾವಣೆ ಜಗದ ನಿಯಮವೆಂದು
ಕರೆದಿದ್ದಾರೆ ನೋಡು
ಬದುಕಿನ ಪುಟಗಳನು ಮೌನದಲಿ
ತೆರೆದಿದ್ದಾರೆ ನೋಡು

ನಿಸರ್ಗವೂ ಹೀಗೆ ಅಲ್ಲವೇ ಒಂದೆತೆರನಾಗಿ
ಇರುವುದೆ ಇಲ್ಲ
ಹಸನು ಮನದೊಳು ನವಭಾವಗಳ
ಸುರಿದಿದ್ದಾರೆ ನೋಡು

ಸಮಚಿತ್ತದಿ ಬಾಳಿನ ಬಂಡಿಯನು
ಸಾಗಿಸಬೇಕಲ್ಲ ನಾವು
ಸಮವಿಲ್ಲದ ಕನಸುಗಳಿಗೆ ಸದ್ಗುಣಗಳ
ನೀರೆರಿದ್ದಾರೆ ನೋಡು

ಒಬ್ಬೊಬ್ಬರೂ ಒಂದೊಂದು ರೀತಿಯಿಲ್ಲದ
ಜಗವೇ ವಿಚಿತ್ರ
ಅಬ್ಬಬ್ಬಾ ಎನುವಂತೆ ಐಕ್ಯತೆಯನು
ಮೆರೆದಿದ್ದಾರೆ ನೋಡು

ಅಭಿನವನೆಟ್ಟ ಆಲದಮರಕ್ಕೆ ನೇತು
ಬೀಳವುದು ಸರಿಯಲ್ಲ
ನಭದ ಬೆಳಕಾಗಿ ಭೂಮಂಡಲವನು
ಬೆಳಗಿದ್ದಾರೆ ನೋಡು


Leave a Reply

Back To Top