ಅಂಬಮ್ಮ ಪ್ರತಾಪ್ ಸಿಂಗ್-ಗಜಲ್

ಕಾವ್ಯ ಸಂಗಾತಿ

ಅಂಬಮ್ಮ ಪ್ರತಾಪ್ ಸಿಂಗ್

ಗಜಲ್

ಹೆಣ್ಣಾಗಿ ಹುಟ್ಟಿದ ಬಳಿಕ ಸಾಲ ತೀರುವುದಿಲ್ಲ
ಮಣ್ಣಾಗಿ ಹೋಗುವ ತನಕ ಕಾಲ ಮುಗಿಯುವುದಿಲ್ಲ

ಮನದ ಮಾತನು ಕೇಳಲು ಜಗಕ್ಕೆ ಕಿವಿಗಳಿಲ್ಲ
ಬುದ್ಧಿಯ ಕಾರ್ಯಕ್ಕೆ ಪುರುಷ ಬಲ ಬಿಡುವುದಿಲ್ಲ

ಹೆಜ್ಜೆಯ ಗುರುತು ಅಳಿಸಲು ಕಾದಿಹರು ದುರುಳರು
ಕಪಟ ಅನ್ಯಾಯ ಮಹಿಳಾ ಕುಲ ಸಹಿಸುವುದಿಲ್ಲ

ಗಾಣದ ಎತ್ತಿನ ತರಹ ದುಡಿತ ಹಗಲು ರಾತ್ರಿ
ಸಾರ್ಥಕ ಜೀವನ ಸಾಗಲು ಛಲ ಅಳಿಯುವುದಿಲ್ಲ

ದಮನ ಮಾಡಲು ನಿಯಮ ರೂಪಿಸಿದೆ ಸಮಾಜ
ವನಿತಾ ಮತ್ಸರ ಎಂದಿಗೂ ಫಲ ಕೊಡುವುದಿಲ್ಲ

—————————[

Leave a Reply

Back To Top