ಕಾಡಜ್ಜಿ ಮಂಜುನಾಥ ಕವಿತೆ-ಉಡುಪು

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಉಡುಪು

ಅಸೂಯೆ ಎಂಬ ;
ಉಡುಪು ಧರಿಸಿದವರಿಗೆ
ಸಹ್ಯವಾಗುವ ಯಾವುದೇ
ಉಡುಪು (ಸಾಧನೆ)ಧರಿಸಿದವರು
ಸಹ್ಯವಾಗಿ ಕಾಣುವುದಿಲ್ಲ!

ಸ್ನೇಹವೆಂಬ ;
ಉಡುಪು ಧರಿಸಿದವರಿಗೆ
ಯಾವುದೇ ಬಣ್ಣದ
ಉಡುಪು ಧರಿಸಿದವರು
ಕಂಡರೂ,ಸ್ನೇಹದ
ಹಸ್ತ ಚಾಚುವುದು !

ಸತ್ಯವೆಂಬ ;
ಉಡುಪು ಧರಿಸಿದವರಿಗೆ
ಕಷ್ಟಗಳು ಸಂಕಟಗಳು ಸಹಜ
ಅಸತ್ಯದ ಜನರಿಗೆ ಇದುವೇ
ಸಜ !


Leave a Reply

Back To Top