ಯುಗಾದಿ ಕಾವ್ಯ

ಬಾರೆ ಶಾರ್ವರಿ

green leafed plant

ಡಾ.ಗೋವಿಂದ ಹೆಗಡೆ

ಬಂದೆಯಾ ಬಾ ಬಾರೆ ಶಾರ್ವರಿ
ನಲವಿನೂಟೆ ತಾರೆ |
ಕಾಲನ ಕಾಲಲಿ ಕುಸಿದಿದೆ ಜನಪದ
ಬದುಕನುಣಿಸು ಬಾರೆ||

ಕಿರೀಟಿ ಕ್ರಿಮಿಯ ಬಾಧೆಯ ಬೇಗೆಗೆ
ನಲುಗಿದೆಯೇ ಜೀವ |
ನೆಲೆಗಾಣದೆ ಗೋಳಿಟ್ಟಿದೆ ಮನುಕುಲ
ತಾರೆ ಕರುಣೆ ತೇವ ||

ನಿನ್ನಯ ಹೆಸರೇ ಇರುಳೆಂದರಿತೆ
ಶಕ್ತಿಯೂ ಹೌದು ನೀನು |
ಕತ್ತಲ ಮಣ್ಣಲಿ ಬೆಳಕನು ಬೆಳೆವ
ವರವನು ನೀ ತಾರೆ ||

ಬಾಳಲಿ ಶ್ರದ್ಧೆಯ ನೀ ಮರುಕಳಿಸು
ಬೆಳೆಯಲಿ ನಿನ್ನೊಲುಮೆ |
ದುರಿತವ ದೂರಾಗಿಸಿ ನೀ ಹರಸು
ಎರೆ ನೆಮ್ಮದಿ ನಲುಮೆ ||

********

Leave a Reply

Back To Top