ನಾಗರತ್ನ .ಎಚ್ ಮಕ್ಕಳ ಕವಿತೆ

ಮಕ್ಕಳ ವಿಭಾಗ

ನಾಗರತ್ನ .ಎಚ್

ಚಿತ್ತಾರ

ಮೋಡ ಸೋನೆ ಸುರಿಯಲು
ಭೂಮಿಯು ತಂಪಾಯ್ತು.

ಹಸಿರುಟ್ಟ ಭೂಮಿ ತಾಯಿಯ
ಮಡಿಲು ಕಂಗೊಳಿಸುತ್ತಿರಲು.

ಕಾಣಿಸ್ತೊಂದು ಚಿತ್ತಾರ
ಮೂಡಿತು ನೋಡು ಜಗದಗಲ.

ಬಣ್ಣ ಬಣ್ಣದ ಚಿತ್ತಾರ
ಅದುವೇ ಕಾಮನಬಿಲ್ಲಿನ ಆಕಾರ.

ಮಾನಸ ಅಮ್ಮನ ಕರೆ ತರಲು
ಕಾಮನಬಿಲ್ಲದು ಮಾಯವಾಯಿತು.

ಅಯ್ಯೋ ಎನ್ನುತ ಕೂರಲು
ಮತ್ತೆ ಮೂಡಿತು ಚಿತ್ತಾರ.

ಮಾನಸ ಹೊರಟಳು
ಖುಷಿಯಿಂದ ಶಾಲೆಗೆ ಗೆಳತಿರೊಟ್ಟಿಗೆ.


ನಾಗರತ್ನ .ಎಚ್

One thought on “ನಾಗರತ್ನ .ಎಚ್ ಮಕ್ಕಳ ಕವಿತೆ

Leave a Reply

Back To Top