ಭಾರತಿ ಅಶೋಕ್ ಕವಿತೆಯಾದ ಭಾವದಲಿ

ಕಾವ್ಯಸಂಗಾತಿ

ಭಾರತಿ ಅಶೋಕ್

ಕವಿತೆಯಾದ ಭಾವದಲಿ

ಭಾವದೊಡತಿ
ಮೌನ ಬಾಗಿಲೊಮ್ಮೆ
ತೆರೆದು ಭಾವಕೆ ಕನಸ ರೆಕ್ಕೆ ಕಟ್ಟಿ ಹಾರಿ ಬಿಡು
ಮೌನ ಮುರಿದು ಹಾಡಿಬಿಡಲಿ
ಮನದ ಕಾಜಾಣ ಕೋಗಿಲೆ

ಕಟ್ಟಿ ಕೊಡು
ನನಸಾಗದೆ ಉಳಿದ ಕನಸುಗಳ ಮೂಟೆ
ಬಿತ್ತಿ ಬರಲಿ
ಅಂತ್ಯವಿರದ ದಿಗಂತದ ಮೂಲೆಗು
ಎಲ್ಲಾದರು ಚಿಗುರಲಿ

ಮನೆಗೆ ಮರಳುವ ಮುನ್ನ
ಮತ್ತೊಮ್ಮೆ ಇಣುಕಲಿ
ಕನಸ ಬೆಳೆದ ಊರಿಗೆ
ಕನಸ ಬಿತ್ತುವ ಮಾರ್ಗ ತೋರಲು

ಮತ್ತೆಂದು ಮೌನದರಮನೆಗೆ
ಮರಳದೇ ಹಾರುತಿರಲಿ
ಹಾಡುತಿರಲಿ
ಕನಸು ನನಸಾದವರ ಸಿರಿಯ
ಕಂಡು ಕವಿತೆಯಾದ ಭಾವದಲಿ


Leave a Reply

Back To Top