ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯುಗಾದಿ ವಿಶೇಷ

ಪ್ರೊ ರಾಜನಂದಾ ಘಾರ್ಗಿ

ಯುಗಾದಿ ಮರಳಿ ಬರುತಿದೆ

ಶಿಶಿರಕ್ಕೆ ಬರಡಾದ ಮರಗಿಡ ಬಳ್ಳಿಗಳು
ಹಸಿರುಟ್ಟು ನಳನಳಿಸುತಲಿವೆ ಚೈತ್ರದಲಿ
ಬರಡಾಗಿ ಬೆತ್ತಲಾಗಿದ್ದ ಹೊಂಗೆ ಮರ
ತುಂಬಿಕೊಂಡಿದೆ ತಿಳಿಗೆಂಪಿನ ಚಿಗುರಲಿ

ನವ ಸಂವತ್ಸರದಕ್ಕೆ ಸ್ವಾಗತ ಕೋರಲು
ನೀಸರ್ಗ ಕಟ್ಟುತಿದೆ ಹಸಿರು ತೋರಣ
ಹೂವುಗಳ ಸುತ್ತ ಭ್ರಮರಗಳ ಆಲಾಪ
ಕೋಗಿಲೆ ಜೊತೆ ಗೂಡಿ ಮಂಗಳ ಗಾನ

ಋತುಮಾನದ ಹಬ್ಬ ಸಂಭ್ರಮ ತಂದಿದೆ
ನಿಸರ್ಗದ ಕಣ ಕಣಗಳ ಜಡತೆ ಕಳೆದಿದೆ
ತನು ಮನಗಳಲ್ಲಿ ನವ ಚೇತನ ತುಂಬಿದೆ
ಹೊಸ ವರ್ಷದ ಹೊಸ ಕನಸು ತಂದಿದೆ

ಯುಗ ಸಂವತ್ಸರಗಳು ಕಳೆಯುತಲಿವೆ
ಯುಗಾದಿ ಮರಳಿ ಮತ್ತೆ ಬರುತಲಿದೆ
ಜೀವನದಲಿ ಹೊಸ ಹರುಷ ತರುತಲಿದೆ
ಭರವಸೆಗಳ ಹೊಂಕಿರಣ ತೊರುತಲಿದೆ

ಬೇವಿನ ಕಹಿ ಬೆಲ್ಲದ ಸಿಹಿ ಮೇಳೈಸುತಿವೆ
ಜೀವನದ ಸುಖ ದುಃಖಗಳ ನೆನಪಿಸುತಿವೆ
ಸಮಚಿತ್ತ ಸಮಭಾವದ ಅರ್ಥ ಸಾರುತಿವೆ
ಸಾರ್ಥಕ ಬದುಕಿನ ಸತ್ಯದರ್ಶನ ತೋರುತಿವೆ


ಪ್ರೊ ರಾಜನಂದಾ ಘಾರ್ಗಿ

About The Author

1 thought on “”

Leave a Reply

You cannot copy content of this page

Scroll to Top