ಯುಗಾದಿ ವಿಶೇಷ

ಪ್ರೊ ರಾಜನಂದಾ ಘಾರ್ಗಿ

ಯುಗಾದಿ ಮರಳಿ ಬರುತಿದೆ

ಶಿಶಿರಕ್ಕೆ ಬರಡಾದ ಮರಗಿಡ ಬಳ್ಳಿಗಳು
ಹಸಿರುಟ್ಟು ನಳನಳಿಸುತಲಿವೆ ಚೈತ್ರದಲಿ
ಬರಡಾಗಿ ಬೆತ್ತಲಾಗಿದ್ದ ಹೊಂಗೆ ಮರ
ತುಂಬಿಕೊಂಡಿದೆ ತಿಳಿಗೆಂಪಿನ ಚಿಗುರಲಿ

ನವ ಸಂವತ್ಸರದಕ್ಕೆ ಸ್ವಾಗತ ಕೋರಲು
ನೀಸರ್ಗ ಕಟ್ಟುತಿದೆ ಹಸಿರು ತೋರಣ
ಹೂವುಗಳ ಸುತ್ತ ಭ್ರಮರಗಳ ಆಲಾಪ
ಕೋಗಿಲೆ ಜೊತೆ ಗೂಡಿ ಮಂಗಳ ಗಾನ

ಋತುಮಾನದ ಹಬ್ಬ ಸಂಭ್ರಮ ತಂದಿದೆ
ನಿಸರ್ಗದ ಕಣ ಕಣಗಳ ಜಡತೆ ಕಳೆದಿದೆ
ತನು ಮನಗಳಲ್ಲಿ ನವ ಚೇತನ ತುಂಬಿದೆ
ಹೊಸ ವರ್ಷದ ಹೊಸ ಕನಸು ತಂದಿದೆ

ಯುಗ ಸಂವತ್ಸರಗಳು ಕಳೆಯುತಲಿವೆ
ಯುಗಾದಿ ಮರಳಿ ಮತ್ತೆ ಬರುತಲಿದೆ
ಜೀವನದಲಿ ಹೊಸ ಹರುಷ ತರುತಲಿದೆ
ಭರವಸೆಗಳ ಹೊಂಕಿರಣ ತೊರುತಲಿದೆ

ಬೇವಿನ ಕಹಿ ಬೆಲ್ಲದ ಸಿಹಿ ಮೇಳೈಸುತಿವೆ
ಜೀವನದ ಸುಖ ದುಃಖಗಳ ನೆನಪಿಸುತಿವೆ
ಸಮಚಿತ್ತ ಸಮಭಾವದ ಅರ್ಥ ಸಾರುತಿವೆ
ಸಾರ್ಥಕ ಬದುಕಿನ ಸತ್ಯದರ್ಶನ ತೋರುತಿವೆ


ಪ್ರೊ ರಾಜನಂದಾ ಘಾರ್ಗಿ

One thought on “

Leave a Reply

Back To Top