ಕಾವ್ಯಯಾನ

ಕವಿತೆಯದಿನಕ್ಕೊಂದು ಕವಿತೆ

ರೇಖಾ ವಿ.ಕಂಪ್ಲಿ

ಕವಿತೆ ನಿನಗೊಂದು
ಖಲಾಮು ಇದ್ದರೆ ಸಾಕೆ
ಇಲ್ಲ ಕವಿ ಬೇಕೇ?
ಬರಿ ಕವಿ ಇದ್ದರೆ ಸಾಕೆ
ಇಲ್ಲ ಭಾವನೆ ಬೇಕೇ?
ಭಾವನೆಯೊಂದಿದ್ದರೆ ಸಾಕೆ
ಇಲ್ಲ ಭಾಷೆ ಬೇಕೇ?
ಭಾಷೆ ಒಂದು ಇದ್ದರೆ ಸಾಕೆ
ಬರವಣಿಗೆ ಬೇಕೇ?
ಬರಿ ಬರವಣಿಗೆ ನಿನಗೆ ಸಾಕೆ
ಇಲ್ಲ ಓದುಗನೊಬ್ಬ ಬೇಕೇ?
ಓದುಗನೊಬ್ಬ ಇದ್ದರೆ ಸಾಕೆ?
ಕವಿತೆ ಕೊನೆಯಲಿ ಹಾಡಿ ಹೇಳಿತು
ಮೆಲ್ಲಗೆ ಎಲ್ಲವು ಬೇಕು ಎನಗೆ..

Leave a Reply

Back To Top