ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜೀವನ್ಮುಕ್ತಿ

ಡಾ ಶಶಿಕಾಂತ ಪಟ್ಟಣ

ದಿನವ ನೂಕಿ ವರ್ಷ ಜಾರಿ
ಕಳೆದು ಹೋಗುವ ಜೀವನ
ನೋವು ನಲಿವು ಹಿರಿಮೆ ಹಬ್ಬ
ಎರಡು ದಿನದ ಗಾಯನ
ಬಣ್ಣ ಹಚ್ಚಿ ಬದುಕಬೇಕು
ನಿತ್ಯ ನೂರು ವೇದನ
ನಕ್ಕು ನಗಿಸಿ ಬಾಳ ಬೇಕು
ಮಣ್ಣು ಸೇರುವ ಮುನ್ನ
ಯಾವುದನ್ನು ತರಲಿಲ್ಲ
ಏನನ್ನೂ ಒಯ್ಯಲಿಲ್ಲ
ಸ್ನೇಹ ಪ್ರೀತಿ ಶಾಂತಿ
ನಮ್ಮ ಬದುಕಿಗೆ ಸಾಧನ
ಇಲ್ಲ ಮುಕ್ತಿ ಮೋಕ್ಷ ಸ್ವರ್ಗ
ಇಲ್ಲ ಪಾಪ ನರಕವು
ಸತ್ಯ ನುಡಿದು ಹೆಜ್ಜೆ ಹಾಕು
ಅದುವೇ ಜೀವನ್ಮುಕ್ತಿಯು


About The Author

9 thoughts on “ಜೀವನ್ಮುಕ್ತಿ ಕವಿತೆ-ಡಾ ಶಶಿಕಾಂತ ಪಟ್ಟಣ”

  1. ಸರ್ ನಿಮ್ಮ ಕವನ ಓದಿದಾಗ ಬೇಂದ್ರೆ ಅಜ್ಜ ನೆನಪಿಗೆ ಬಂದರು. ಹುಸಿನಗುತ ಬಂದೇವ ನಸುನಗುತ ಬಾಳೋಣ,ಯಾಕಾರೆ ಕೆರಳೋಣ ಬಡನೂರು ವರುಷಾನ ಹರುಷದಿ ಕಳೆಯೋಣ.

  2. ಅರಿತಡೆ ಶರಣ ಮರೆತರೆ ಮಾನವ ಅನ್ನುವ ಹಾಗೆ, ಜೀವನವನ್ನು ಏಷ್ಟು ಅರ್ಥ ಪೂರ್ಣವಾಗಿ ಬದುಕಬೇಕು ಅನ್ನುವ ಕವಿತೆಯ ಸಾಲು

Leave a Reply

You cannot copy content of this page

Scroll to Top