ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರಣಾಳಿಕೆ

ಸುಲೋಚನಾ ಮಾಲಿಪಾಟೀಲ

ಚುನಾವಣೆಯಲ್ಲಿ ಕಾಣುವ
ಪ್ರಣಾಳಿಕೆಯ ಸುರಿಮಳೆ
ಬಡಜನರ ಮರುಳಾಗಿಸಲು
ಇವರದೇ ಕಹಳೆ
ಯಾರು ಗೆದ್ದರೇನು
ಬಿಡದು ದಿನದ ರಗಳೆ
ಗಾಳಕೆ ಬಿದ್ದನಂತರ
ಪರಿತಪಿಸಬೇಡಿ ಪ್ರಜೆಗಳೆ

ಭ್ರಷ್ಟಾಚಾರಕೆ ಬೇಡಿ
ಹಾಕುವವರಾರಿಲ್ಲ
ದೌರ್ಜನ್ಯ ಎಸೆದ ಆರೋಪಿ
ಶಿಕ್ಷೆಗೆ ಒಳಪಟ್ಟಿಲ್ಲ
ಚುನಾವಣೆಯ ಪ್ರಣಾಳಿಕೆ
ಯಾರ ಕೈ ಸೇರುವುದಿಲ್ಲ
ದುಡ್ಡಿನ ಆಸೆಗೆ ಜನ
ಮುಗಿಬೀಳುವರಲ್ಲ

ಪ್ರಣಾಳಿಕೆಗೆ ಪ್ರಜೆಗಳದೇ
ಹಣದ ದುರ್ಬಳಕೆ
ಯಾರಿಗೆ ಬೇಕು
ಇಂತಹ ಹೊಗಳಿಕೆ
ಮೈ ಮುರಿದು ದುಡಿದರೆ
ಅದುವೇ ಜೀವನಕೆ
ಎರಡೊತ್ತಿನ ಹಸಿವಿನ
ಚೀಲ ತುಂಬುವುದಕೆ

ತಿಳಿದವರ ಛತ್ರ
ಕಾಯಕವೇ ಕೈಲಾಸ
ಬಿಡಬೇಡಿ ಧೃಡ
ಸಂಕಲ್ಪದ ಮಂತ್ರ
ಮರುಳಾಗಲು ಹೂಡುವರು
ಹೊಸ ಹೊಸ ತಂತ್ರ
ನಿಮ್ಮ ಹಕ್ಕಿನ ಮತಕೆ
ತೆರೆದಿರಲಿ ನಿಮ್ಮಯ ನೇತ್ರ

ಪ್ರಣಾಳಿಕೆ ಹೊರಡಿಸಲು
ಯಾರಪ್ಪನ ಗಂಟು
ಬೂಟಾಟಿಕೆಯ ಮಾತಲಿ
ತೋರಿಸುವ ನಂಟು
ಮತದಾನದ ಮರುದಿನವೇ
ಅಭ್ಯರ್ಥಿಗಳು ಕಟ್ಟುವರು ಗಂಟು
ಮರು ಮತದಾನದಕೆ
ಇವರ ಪಾದಾರ್ಪಣ ನೂರಕ್ಕೆ
ನೂರು ಪರ್ಸೆಂಟ್


About The Author

Leave a Reply

You cannot copy content of this page

Scroll to Top