ಕಾಡಜ್ಜಿ ಮಂಜುನಾಥರವರ ಕವಿತೆ-“ಬಿಂಬ”

ಕಾವ್ಯ ಸಂಗಾತಿ

“ಬಿಂಬ”

ಕಾಡಜ್ಜಿ ಮಂಜುನಾಥ

ಸಮಸ್ಯೆಗಳ
ಬಿಂಬವು ಸರ್ಕಾರಕ್ಕೆ
ಕಾಣದ ದೃಶ್ಯ!

ಬೇಡಿಕೆಗಳ
ಸುರಿಮಳೆ ಕಂಡರೂ
ಮೌನದ ದಾಸ್ಯ!

ನಾಗರೀಕರ
ಆರ್ತನಾದ ಕೇಳುವ
ಕರ್ಣವೇ ಹಾಸ್ಯ!

ಜನರ ಕಷ್ಟ
ಆಳೋ ಧಣಿಗಳನು
ರಕ್ಷಿಸೋ ಅಸ್ತ್ರ!

ಧಮನೀತರ
ಧ್ವನಿಗಳು ,ಧಣಿಗೂ
ತಟ್ಟದ ಶಾಸ್ತ್ರ!

ಪ್ರಜಾಪ್ರಭುತ್ವ
ದೃಶ್ಯವಾದ್ರೂ ಸಮಸ್ಯೆ
ಮಾತ್ರ ,ಅದೃಶ್ಯ!


One thought on “ಕಾಡಜ್ಜಿ ಮಂಜುನಾಥರವರ ಕವಿತೆ-“ಬಿಂಬ”

Leave a Reply

Back To Top