ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಾತು

ರೂಪ ಶಿವಕುಮಾರ್

ಮಾತು ಮಾತು ಮಾತು
ಜನರೆಲ್ಲಾ ಕಳೆಯುವರು
ಇದರಲಲ್ಲೇ ಬಹಳ ಹೊತ್ತು
ಮಾತು ಏನಿದರ ಕಿಮ್ಮತ್ತು
ಯಾರು ಅರಿಯರು ಇದರ ಗಮ್ಮತ್ತು

ನುಡಿಯ ಬಲ್ಲವರಿಗೆ ಇದುವೇ
ನಿಜ ಬಂಡವಾಳ
ಕೆಲವರ ಜೀವನದ ಜೀವಾಳ
ಅಂದು ಧರ್ಮರಾಯನ ಅರಿವಿಲ್ಲದ ಮಾತಿನಿಂದಾಯಿತು ಮಹಾಭಾರತ
ಅಂತೆಯೇ ದಶರಥನ ಮೋಹದ ಮಾತಿನಿಂದಾಯಿತು ರಾಮಾಯಣ

ಮಾತು ಏನಿದರ ಗಮ್ಮತ್ತು ಜಾರಿದರೆ ಏನಿಲ್ಲ ಕಿಮ್ಮತ್ತು ಒಂದೊಂದು ಮಾತು ಮನಕೆ ಮುದ ಕೊಡುವಂತೆ ಒಂದೊಂದು ಮಾತು ಚುಚ್ಚುವುದು ಮನವ ಮುಳ್ಳಂte

ಅದಕ್ಕೆ ಶರಣರು ನುಡಿದಿರುವುದು
ಮಾತೆ ಮುತ್ತು
ಮಾತೇ ಮೃತ್ಯು


About The Author

Leave a Reply

You cannot copy content of this page

Scroll to Top