ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಜಲ್

ಬಾಗೇಪಲ್ಲಿ

ಇರುವವರಲಿ ನೀ ತುಸು ಹೆಚ್ಚು ತಿಳಿದಿಹೆಯಾ ಒಬ್ಬಂಟಿಯಾಗುವಿ
ಮಾನವೀಯತೆ ಚೂರು ನಿನ್ನಲಿ ಹೆಚ್ಚಾಗಿದೆಯಾ ಒಬ್ಬಂಟಿಯಾಗುವಿ

ರೋಮ್ ಸಾಮ್ರಾಜ್ಯದಿ ರೋಮನಿಗನಾಗಿರು ಎಂದಿಹರು ತಿಳಿದಿರು
ದುರ್ಹಂಕಾರಿಗೆ ಬುದ್ಧಿ ಹೇಳ ಯತ್ನಿಸುವೆಯಾ ಒಬ್ಬಂಟಿಯಾಗುವೆ

ಸಕಲರೂ ನಿನ್ನನು ಗುರುತಿಸಿ ಗೌರವಿಸಬೇಕೆಂದು ಬಯಕೆಯೇ ನಿನಗೆ
ಕೊಳಕರಲಿ ಶುಭ್ರ ದುಸ್ತುಗಳನು ಧರಿಸುವೆಯಾ ಒಬ್ಬಂಟಿಯಾಗುವಿ

ಲೋಕಾರೂಡಿ ಆದುದನು ನೀ ಅನುಸರಿಸಿ ಬಾಳುವುದು ಉತ್ತಮ
ಮಡಿವಾಳಗೆ ಇಂಗಿತ ಜ್ಞಾನ ಹೇಳ ಯತ್ನಿಸುವೆಯಾ ಒಬ್ಬಂಟಿಯಾಗುವೆ

ಎಲ್ಲರೊಳಗೊಂದಾಗಿ ಬದುಕುವುದು ಒಳಿತೆಂದರು ಗುಂಡಪ್ಪನವರು ಕೃಷ್ಣಾ!
ಹುಚ್ಚರಸಿ ಮದುವೆಯೆಂದು ಪ್ರತಿಷ್ಠೆಗೆ ಉಣ್ಣದಿರುವೆಯಾ ಒಬ್ಬಂಟಿಯಾಗುವಿ


ಬಾಗೇಪಲ್ಲಿ

About The Author

Leave a Reply

You cannot copy content of this page

Scroll to Top