ಕಾವ್ಯಸಂಗಾತಿ
ಗಜಲ್
ಬಾಗೇಪಲ್ಲಿ
ಇರುವವರಲಿ ನೀ ತುಸು ಹೆಚ್ಚು ತಿಳಿದಿಹೆಯಾ ಒಬ್ಬಂಟಿಯಾಗುವಿ
ಮಾನವೀಯತೆ ಚೂರು ನಿನ್ನಲಿ ಹೆಚ್ಚಾಗಿದೆಯಾ ಒಬ್ಬಂಟಿಯಾಗುವಿ
ರೋಮ್ ಸಾಮ್ರಾಜ್ಯದಿ ರೋಮನಿಗನಾಗಿರು ಎಂದಿಹರು ತಿಳಿದಿರು
ದುರ್ಹಂಕಾರಿಗೆ ಬುದ್ಧಿ ಹೇಳ ಯತ್ನಿಸುವೆಯಾ ಒಬ್ಬಂಟಿಯಾಗುವೆ
ಸಕಲರೂ ನಿನ್ನನು ಗುರುತಿಸಿ ಗೌರವಿಸಬೇಕೆಂದು ಬಯಕೆಯೇ ನಿನಗೆ
ಕೊಳಕರಲಿ ಶುಭ್ರ ದುಸ್ತುಗಳನು ಧರಿಸುವೆಯಾ ಒಬ್ಬಂಟಿಯಾಗುವಿ
ಲೋಕಾರೂಡಿ ಆದುದನು ನೀ ಅನುಸರಿಸಿ ಬಾಳುವುದು ಉತ್ತಮ
ಮಡಿವಾಳಗೆ ಇಂಗಿತ ಜ್ಞಾನ ಹೇಳ ಯತ್ನಿಸುವೆಯಾ ಒಬ್ಬಂಟಿಯಾಗುವೆ
ಎಲ್ಲರೊಳಗೊಂದಾಗಿ ಬದುಕುವುದು ಒಳಿತೆಂದರು ಗುಂಡಪ್ಪನವರು ಕೃಷ್ಣಾ!
ಹುಚ್ಚರಸಿ ಮದುವೆಯೆಂದು ಪ್ರತಿಷ್ಠೆಗೆ ಉಣ್ಣದಿರುವೆಯಾ ಒಬ್ಬಂಟಿಯಾಗುವಿ
ಬಾಗೇಪಲ್ಲಿ