ಕಾವ್ಯ ಸಂಗಾತಿ
ಗಜಲ್
ಪ್ರಭಾವತಿ ಎಸ್ ದೇಸಾಯಿ
ಬಿರುಗಾಳಿಗೆ ಸಿಲುಕಿ ಬಾಳ ನೌಕೆ ಸುತ್ತುತಿದೆ ದಿಕ್ಕು ಕಾಣದೆ
ಬದುಕಿನ ದೋಣಿಯನು ದಡ ಸೇರಿಸಲು ನೀ ಬರ ಬೇಕಾಗಿತ್ತು
ಕಂಡ ಕನಸುಗಳು ನನಸಾಗದೆ ನರಳುತಿದೆ ಒಂಟಿ ಹಣತೆ
ಇರುಳಿನ ವಿರಹ ತಾಪ ಆರಿಸಲು ನೀ ಬರ ಬೇಕಾಗಿತ್ತು
ನಮ್ಮ ಪ್ರಣಯದ ಹೊತ್ತಿಗೆ ಬಿಕ್ಕುತಿದೆ ಮುನಿದು ಮೂಲೆಯಲಿ
ಎದೆ ಪುಟದಲಿ ಒಲವ ಓಲೆ ಬರೆಯಲು ನೀ ಬರ ಬೇಕಾಗಿತ್ತು
ವ್ಯಾವೋಹದ ಅಮಲಿನ ಕಿರಣಗಳ ಬಯಸುವ ಚಕೋರಿ ನಾನು
ಹಾಲ ಬೆಳದಿಂಗಳ “ಪ್ರಭೆ” ಹರಡಲು ನೀ ಬರ ಬೇಕಾಗಿತ್ತು