ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಗಜಲ್

ಅನಸೂಯ ಜಹಗೀರದಾರ

I

ನನ್ನ ನೆನಪು ನಿನ್ನ ಜೀವ ಹಿಂಡಿ ಕೊಲ್ಲುವುದಾದರೆ ಅದೇಕೆ ಬೇಡಬಿಡು
ಬಾರದ ನಗುವ ಅಧರದಿ ಎಳೆದು ತರುವುದಾದರೆ ಅದೇಕೆ ಬೇಡಬಿಡು

ಪ್ರತಿಯೊಂದು ಮಾತಿಗೆ ಅರ್ಧ ಗಿರ್ಧ ಪ್ರತಿಮಾತು ಮೌನಕ್ಕಿಂತ ಹರಿತವದು
ನುಡಿಯ ಸೆಲೆ ತುಟಿ ಅಂಚಲಿ ಒಣಗುವುದಾದರೆ ಅದೇಕೆ ಬೇಡಬಿಡು

ನಮ್ಮಕಂಗಳ ನೋಟವೇ ಪರಮ ಸತ್ಯ ಮಿಥ್ಯವಲ್ಲಿ ಸುಳಿಯದು
ನೇತ್ರ ಸನ್ನೆ ಇಲ್ಲದಿಟ್ಟಿ ಅತ್ತಿತ್ತ ಹೊರಳಿಸುವುದಾದರೆ ಅದೇಕೆ ಬೇಡಬಿಡು

ನೆಪದ ನಿನ್ನ ನಟನೆ ನೈಜತೆಯ ಮೀರಿಸಿದೆ ನನಗೆ ಗೊತ್ತಾಗದೆ ಇರುವುದೆ
ಗಿಲೀಟು ಚಿನ್ನ ತನ್ನ ಹೊಳಪ ಮಂಕಾಗಿಸುವುದಾದರೆ ಅದೇಕೆ ಬೇಡಬಿಡು

ಜೀವನ ಪರ್ಯಂತ ಯಾರು ಸಾಥಿ ಆದಾರು ಹುಚ್ಚು ಖೋಡಿ ಮನಸು ಅನು
ಬಾಡಿಗೆ ನೆಲೆ ಇಲ್ಲಿ ವಾರಸುದಾರ ದೂಡುವುದಾದರೆ ಅದೇಕೆ ಬೇಡಬಿಡು


ಅನಸೂಯ ಜಹಗೀರದಾರ

About The Author

2 thoughts on “”

  1. Sarasijaa Rajan Adv klb

    ಬಾಡಿಗೆ ನೆಲೆ ಇಲ್ಲಿ ವಾರಸುದಾರ ದೂಡುವುದಾದರೆ ಬೇಡ ಬಿಡು
    ಅದ್ಭುತ ಸಾಲುಗಳು

Leave a Reply

You cannot copy content of this page

Scroll to Top