ವ್ಯಕ್ತಿ ಚಿತ್ರಣ
ಸಾಮಾಜಿಕ ಕಾರ್ಯಕರ್ತೆ
ಶ್ರೀಮತಿ ರಮಾಬಾಯಿ ಮಹಾದೇವ ರಾನಡೆ

.
25 ಜನೆವರಿ 1862 ರಲ್ಲಿ ಜನಿಸಿದ ರಮಾಬಾಯಿ ರಾನಡೆಯವರು
ಸಾಮಾಜಿಕ ಕಾರ್ಯಕರ್ತರಾಗಿದ್ದರು.ಅತ್ಯಂತ ಕಟ್ಟುನಿಟ್ಟಿನ ಸಂಪ್ರದಾಯಸ್ಥ ಮನೆತನಗಳು ಮತ್ತುಶಿಕ್ಷಣಕ್ಕೂಮಹಿಳೆಗೂ ಸಂಬಂಧವೇ ಇಲ್ಲವೆನ್ನುವ ಕಾಲ ಅದ್ದಾಗಿತ್ತು. ಅಂಥಹ ಕಾಲದಲ್ಲಿ ಮಹಿಳೆಯರ ಶಿಕ್ಷಣ ಪ್ರಜ್ಞೆ ಮತ್ತು ಪರಿಸರವನ್ನು ನಿರ್ಮಿಸಿದ ಪ್ರಥಮ ಮಹಿಳೆಯರ ಸ್ಥಾನದಲ್ಲಿದವರು ಇವರು. ರಮಾಬಾಯಿಯವರಿಗೆ ಅವರ ಪತಿ ಜಸ್ಟಿಸ್ ಮಹಾದೇವ ಗೋವಿಂದ ರಾನಡೆಯವರ ಪ್ರೋತ್ಸಾಹ ಮತ್ತು ಸಹಕಾರ ಅವರಿಬ್ಬರ ದಾಂಪತ್ಯ ಜೀವನದಲ್ಲಿ ಒಂದು ಸುವರ್ಣರೇಖೆಯಾಗಿ ಪರಿಣಮಿಸುತ್ತದೆ.

ರಮಾಬಾಯಿಯವರದು ಹನ್ನೂಂದನೆ ವಯಸ್ಸಿಗೆ ಮಹಾದೇವ ರಾನಡೆ
ಅವರೂಂದಿಗೆ ಮದುವೆಯಾಗುತ್ತದೆ.ಇನ್ನು ಆಟವಾಡುವ ವಯಸ್ಸು
ರಮಾಳದು.ಕಲಿಯುವ ವಯಸ್ಸು ರಮಾಳದು ಹುಡುಗಾಟದ ವಯಸ್ಸು
ರಮಾಳದು.ವಿಶೇಷವೆಂದರೆ ಅವರ ಪತಿಯೇ ಅವರಿಗೆ ಮರಾಠಿ, ಇತಿಹಾಸ ,ಭೂಗೋಲ ,ಗಣಿತ ಮತ್ತು ಇಂಗ್ಲೀಷ ಪಾಠವನ್ನು ಹೇಳಿ ಕೂಡುತ್ತಿದರು. ರಮಾಳಿಗೆ ಒದುವುದಕ್ಕೆ ಮತ್ತು ಬರೆಯುವುದಕ್ಕೆ ಕಲಿಸಿದರು.ಹೀಗಾಗಿ ಪ್ರಗತಿಶೀಲ ಮನೋಭಾವದವರಾದ ರಮಾಬಾಯಿಯವರು ಪುಣೆ ನಗರದಲ್ಲಿ ಹೆಣ್ಣು ಮಕ್ಕಳಿಗಾಗಿ ಹೈಸ್ಕೂಲನ್ನು ಪ್ರಾರಂಭಿಸಿದರು. ಮುಂಬಯಿ ಮತ್ತು ಪುಣೆ
ನಗರಗಳಲ್ಲಿ ಸೇವಾಸದನ ಸೂಸೈಟಿ ಮತ್ತು ಲೇಡಿಸ್ ಸ್ಸೂಷಿಯಲ್
ಕ್ಲಬನ್ನು ಪ್ರಾರಂಭಿಸಿದರು. ರಮಾಬಾಯಿಯವರ ಜನ್ಮ ಶತಮಾನೂ ತ್ಸವದ ಸಂದರ್ಭದಲ್ಲಿ ಇಂಡೂ- ಆಸ್ಟ್ರೇಲಿಯನ್, ಪೋಸ್ಟಲ್ ಸರ್ವಿಸ್ ರಮಾಬಾಯಿಯವರ ಚಿತ್ರವಿರುವ. ಪೂಸ್ಟೇಜ ಸ್ಯಾಂಪನ್ನು (Postagestamp) ನ್ನುಅವರ ಗೌರವಾರ್ಥವಾಗಿ.ಪ್ರಕಟಿಸಿತು.
ಮರಾಠಿ ದೂರದರ್ಶನದಲ್ಲಿ ರಮಾಬಾಯಿಯವರ ಜೀವನವನ್ನು
ಆಧರಿಸಿದ ಒಂದು ಸಿರಿಯಲ (ಝಲೆ ಉಂಚ ಮಾಝಾ ಝೋಕಾ)(MySwing FliesHigh) ಎಂಬ ಹೆಸರಿನಿಂದ ಪ್ರಸಾರವಾಯಿತು . ಸಿರಿಯಲನ ಶೀರ್ಷಿಕಾ ಗೀತೆಯ (Title song) ಕನ್ನಡ ಅನುವಾದ
ಎತ್ತರೆತ್ತರಕೆ ಜೀಕಿದೆ ನಾನು ಎಂದು ಅನುವಾದಿಸಲಾಗಿದೆ.
ಎಳೆಯ ಹೆಜ್ಜೆಗಳಿಗೆ ಇತ್ತು,ಬೆಳದಿಂಗಳು ಹಿಡಿಯುವ ಹುಮ್ಮಸು.
ಉರುಳಿತು ಸೇರು ಹೂಸ್ತಿಲೂಳಗೆ,ದೂರವಾದವು ಗೂಂಬೆಗಳೆಲ್ಲಾ.
ಇತ್ತು ಆಟವಾಡುವ ವಯಸ್ಸು,ಅಂಗಳದ ನೆನಪೇ ನೆನಪು
ಮ್ರದು ಮನದ ಮೂಲೆಯಲ್ಲಿ ಆಕಾದಾಶಯ ತುಂಬಿ ತುಳುಕಿತು.
ಥಟ್ಟನೆ ನಿಂತೆ ಹೂಸ್ತಿಲವೂಳಗೆ,ಕಣ್ಣಿಗೆ ತೋರುತ ನವಪ್ರಭಾತ.
ಅರಿತೇ,ಈ ಜನ್ಮವೇ ಹೂಸತು,ಹಣೆಗೆ ಹಚ್ಚುತ ಕುಂಕುಮ ತಿಲಕ.
ಸಂಪ್ರದಾಯದ ಪುಣ್ಯ ಕಲಶಕೆ,ದೂರೆಯಿತು ಸಖನ ಸೌಖ್ಯದ ಭಾಗ್ಯ.
ಆತನ ಕ್ರುತಾರ್ಥ ಕಣ್ಣಿನ ಹೂಳಪಿಗೆ,ಝಮ್ಮನೆತ್ತರಕೆ ಜೀಕಿದೆ ನಾನು.
ಎತ್ತರೆತ್ತರಕೆ ಜೀಕಿದೆ ನಾನು, ಎತ್ತರೆತ್ತರಕೆ ಜೀಕಿದೆ ನಾನು.
ತೇಲಿತು ದಟ್ಟವಾದ ಮೇಘ, ತುಂಬಿತು ನೀರು ಗಗನದ ತುಂಬ
ವ್ರುತದ ಮಾಲೆಯನ್ನು ಜಪಿಸಿ, ಮನೆಯೇ ಮಂದಿರವಾದ ಕ್ಷಣವು.
ಸವೆದ ಹೆಜ್ಜೆಯ ಗುರುತಿನಿಂದ, ತೇದ ಚಂದನವಾಯಿತು ಜನ್ಮವು.
ಆರತಿಯ ತಟ್ಟೆಯೂಳಗೆ ನೀಲಾಂಜನದ ನಿಷ್ಠೆಯ ಬೆಳಕು
ತುಳಸಿಯ ಅಗಿಯು ನನ್ನದು ಎತ್ತರೆತ್ತರಕೆ ಚಿಗಿಯುತ ಚಿಮ್ಮಿತು
ನಾನೇ ದಾಟಿದೆ ನನ್ನನ್ನು,ನನ್ನೂಂದಿಗೆ ಸದೈವ ಸಖನು
ಹಿಡಿಯುತ ಕೈಯಲ್ಲಿ ಆಕಾಶ,ಝಮ್ಮನೆ ಜೀಕಿದೆ ಎತ್ತರಕೆ.
ಎಂಥ ಅಪರೂಪ ಜೋಡಿ,ಹೇಳುವಳು ಕಥೆ ರಮಾ ನಿನಗೆ
ನೆಟ್ಟ ಅಂತರಂಗದ ಬೀಜ,ಹೂವಾಗಿ ಅರಳಿತು ಜೀವನಬಧ್ದ
ಇಂಥ ಸಂಸಾರದ ಸ್ವರಕೆ ,ನಮ್ಮಿಬರದು ಒಂದೇ ತಾಲ
ಆತನ ಕ್ರುತಾರ್ಥ ಕಣ್ಣಿನ ಹೂಳಪಿಗೆ,ಝುಮ್ಮನೆತ್ತರಕ್ಕೆ ಜೀಕಿದೆ ನಾ
ಸುಲಭಾ ಜೋಶಿ ಹಾವನೂರ
