ಕಾಡಜ್ಜಿ‌ ಮಂಜುನಾಥ-ತಪ್ಪಿತಸ್ಥ ಭಾವ !

ಕಾವ್ಯ ಸಂಗಾತಿ

ತಪ್ಪಿತಸ್ಥ ಭಾವ !

ಕಾಡಜ್ಜಿ‌ ಮಂಜುನಾಥ

ಒಮ್ಮೊಮ್ಮೆ
ಒಳ್ಳೆಯ
ಕೆಲಸ ಮಾಡಿದಾಗಲೂ
ತಪ್ಪಿತಸ್ಥರಾಗಬೇಕಾಗಬಹುದು
ಏಕೆಂದರೆ;
ಕಾಲನ ಬಲೆಯೇ
ಅಂತಹುದು ;
ಸತ್ಕಾರ್ಯವ
ನೋಡುವ ನರರ ಕಣ್ಗಳಲ್ಲಿ
ಪೂರ್ವಗ್ರಹ ಪೀಡಿತ ಭಾವ
ಮೂಡಿ
ಪರರಿಗೆ ತಪ್ಪಿನ ಭಾರವ
ಹೊರಿಸಲು..ಹೊಂಚು ಹಾಕಿ
ಗುಳ್ಳೆ ನರಿಯು
ಯಜಮಾನಿಕೆಯ ಏರುವ
ವಸಾಹತುಶಾಹಿಯ
ಸೊಲ್ಲು
ಕುಣಿದಾಡುತ್ತದೆ !!
ಕೊನೆಗೂ
ಸದ್ಬಾವನೆಯೇ
ಗೆದ್ದರೂ ಮೊಸರಲ್ಲಿ
ಕಲ್ಲು ಹುಡುಕುವ
ಮನದಿ
ನೀಚತೆಯ ನೆರಳಿನ
ಮಬ್ಬು
ಆವರಿಸಿ
ಹಾಸ್ಯ ಮಾಡುತ್ತದೆ !!!


One thought on “ಕಾಡಜ್ಜಿ‌ ಮಂಜುನಾಥ-ತಪ್ಪಿತಸ್ಥ ಭಾವ !

  1. ಸಂಗಾತಿ ಪತ್ರಿಕೆಯಲ್ಲಿ ಪ್ರಕಟಿಸಿದ ನಿರ್ವಾಹಕರಿಗೆ ಧನ್ಯವಾದಗಳು

Leave a Reply

Back To Top