ಕಥಾಯಾನ

ಮೇರಿಯ ಮಕರಸಂಕ್ರಮಣ

Image result for images of human sculptures

ವೇಣುಗೋಪಾಲ್

ಸ್ನಾನ ಮುಗಿಸಿ ಉದ್ದ ಕೂದಲಿಗೆ ಟವಲ್ ಸುತ್ತುಕಟ್ಟಿ ಕನ್ನಡಿಯ ಎದುರು ಬೆತ್ತಲೆ ನಿಂತವಳಿಗೆ ನವಯೌವನದ ಉಮ್ಮಸ್ಸೊಂದು ದೇಹದ ಪ್ರತಿ ಅಂಗಗಳಲ್ಲೂ ಹೊಮ್ಮಿದಂತೆ ಕಾಣುತಿತ್ತು.
ಆ ಅನಿರೀಕ್ಷಿತ ಮಿಲನದ ಘಳಿಗೆಯನ್ನು ಮೆಲುಕು ಹಾಕುತ್ತ ನಿಂತುಬಿಟ್ಟಳು, ಕೆಲವು ವರ್ಷಗಳೇ ಕಳೆದಿದ್ದೋ ಗಂಡನ ಅಗಲಿಕೆಯ ನಂತರ ದೇಹ ಸುಖ ಕಂಡು.! ಅನಿರೀಕ್ಷಿತವೆಂಬಂತೆ ವಾರಪೂರ್ತಿ ಸುರಿದ ಇಳೆ ಮಳೆಯಾಟದೊಳಗೆ ಅವರಿಬ್ಬರ ರತಿಕಾಮದಾಟವೂ ಮುಗಿದಿತ್ತು..! ಅವನು ಎಂದಿನಂತೆ ಸಂಜೆಯ ನಾಲ್ಕು ಘಂಟೆಗೆ ಬರುತ್ತಿದ್ದವನು ಸ್ವಲ್ಪತಡವಾಗಿ ಬಂದಿದ್ದ..! ಮೊಗವೇಕೋ ಬಾಡಿದಂತಿತ್ತು.! ಹೊರಗೆ ಕಟ್ಟಿದ್ದ ‘ಮುನ್ನಿ’ ಯಾಕೋ ಇಂದು ಹುಚ್ಚು ಬಂದವಳಂತೆ ಬೊಗುಳುತ್ತಿದ್ದಳು.! ಎಷ್ಟು ಸಾಮಧಾನಿಸಿದರು ಬೊಗಳುವುದು ಮಾತ್ರ ನಿಲ್ಲಿಸಲಿಲ್ಲ.. ಆಗಸ ಪೂರ್ತಿಯಾಗಿ ಕಡುಕಂದು ಬಣ್ಣದ ಮೋಡಗಳಿಂದ ಅವಕುಂಠನವಾಗುತ್ತಿತ್ತು. ಮೋಡದ ಸಂಧುಗಳಲ್ಲಿ ಸಣ್ಣನೆಯ ಮಿಂಚುಗಳಿಂದ ಶುರುವಾದ ತಿಳಿಮಳೆ ಸಿಡಿಲಿಗೆ ತಿರುಗಿ ಜೋರಾಗಿ ಧರೆಗೆ ಎರಗುತ್ತಿತ್ತು. ಇವನು ಮಾತ್ರ ಸದ್ದಿಲ್ಲದೆ ಮೌನಕ್ಕೆ ಶರಣಾಗಿದ್ದ.! ಟೀ ತಂದುಕೊಟ್ಟೆ ಹೀರುತ್ತ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ, ನಾನು ಅವನನ್ನೇ ನೋಡುತ್ತಾ ಕುಳಿತುಬಿಟ್ಟೆ ಹೊರಗಿನ ಚಳಿಯಿಂದ ಮೈ ಕಂಪಿಸುತ್ತಿತ್ತು.! ಇಂದೆಕೋ ಅವನ ಕಣ್ಣುಗಳು ಮಾದಕವಾಗಿ ಕಾಣುತ್ತಿತ್ತು, ನಾನೇ ಎದ್ದು ದಿನವೂ ಆಡುತ್ತಿದ್ದ ಚದುರಂಗದ ಬೋರ್ಡ್ ಅನ್ನು ಅವನ ಮುಂದಿಟ್ಟೆ..! ಏನು ಮಾತನಾಡದೆ ಆಟದ ಒಳಗಿಳಿದು ಮಗ್ನನಾದ.! ಈ ಮಳೆಯ ಚಳಿಗೆ ನನ್ನ ಭಾವನೆಗಳು ಸಣ್ಣಗೆ ಅರಳುತ್ತ ಅವನ ಉಸಿರಿನ ಬಿಸಿಗೆ ಬಿರಿದು ಕಟ್ಟದಾಚೆ ಮುಗುಚುವ ನೀರಿನಪಾತದಲ್ಲಿ ಉದುರಿ ಸತ್ತ ಹೂಗಳಂತೆ..! ಅವನ ಶುಭ್ರವಾದ ಕಡುಕಪ್ಪಿನ ಕಣ್ಣುಗಳ ನೋಟಕ್ಕೆ ನೋಟ ಬೆಸೆಯಾಲಾಗದೆ ಆಸೆಗಳು ಸಾಯುತ್ತಿದ್ದವು..! ಪ್ರತಿ ಬಾರಿಯ ಚದುರಂಗದ ನಡೆಯಲ್ಲಿ ನನ್ನ ಕಾಲಾಳು ಬಲಿಯಾದಾಗಲು ನಾನು ಅವನ ಕಂಗಳನ್ನು ನೋಡುತ್ತಿದ್ದೆ.! ಅವನು ಮಾತ್ರ ಆ ನೋಟದ ಸೆಳೆತಕ್ಕೆ ಸಿಗುತ್ತಿರಲಿಲ್ಲ, ಆಟವು ಕೊನೆಹಂತಕ್ಕೆ ತಲುಪಿತ್ತು.! ನಾನು ಕೂಡ..!
ರಾಜನನ್ನು ಅಲುಗದಂತೆ ಕಟ್ಟಿಹಾಕಿ ‘ಚೆಕ್ಮೇಟ್’ ಹೇಳಿ ಮುಗುಳುನಗುತ್ತ ನನ್ನ ಮೊಗನೋಡಿದ. “ಹೌದು” ಆ ಘಳಿಗೆಯಲ್ಲಿ ಅವನನ್ನು ನನ್ನ ನೋಟದ ಸೆಳೆವಿನಲ್ಲಿ ಸಿಕ್ಕಿಸಿಕೊಂಡುಬಿಟ್ಟೆ; ನೋಟ ಕದಲದಂತೆ. ಅವನು ಸಣ್ಣಗೆ ಕಂಪಿಸಿದ್ದ.! ನನ್ನ ಎದೆಯ ಏರಿಳಿತ ಹೆಚ್ಚಾಗುತ್ತಿತ್ತು.! ಮಳೆಯ ಅಬ್ಬರವು ಹೆಚ್ಚಾಗುತ್ತಿತ್ತು.! ಮುನ್ನಿಯ ಬೊಗಳುವಿಕೆ ಕೂಡ ಹೆಚ್ಚಾಗುತ್ತಿತ್ತು.! ಕಂದರದ ಒಡಲಾಳದಿಂದ ಭಾರಿ ಸಿಡಿಲೊಂದು ಢಮ್ ಎಂದು ಭೂಮಿಗೆ ಅಪ್ಪಳಿಸಿತು. ಬೆಚ್ಚಿಹೋದೆ.! ಅವನ ಮಗುಲಿಗೆ ಬಂದು ಭುಜವಿಡಿದು ಕುಳಿತೆ, ಮತ್ತೊಂದು ಮೊಗದೊಂದು ಬಡಿಯುತ್ತಲಿವೆ..! ಅವನು ನನ್ನ ಬೆನ್ನ ಮೇಲೆ ಭಯ ನೀಗಿಸಲು ಕೈಇಟ್ಟ.! ಆ ಕೈಗಳನ್ನಿಡಿದು ತುಟಿಗೆ ಒತ್ತಿಹಿಡಿದೆ.! ಪ್ರತಿರೋಧಿಸುತ್ತಿದ್ದ ಇಷ್ಟು ವರ್ಷಗಳಿಂದ ಕಟ್ಟಿದ್ದ ಬಯಕೆ ಇಂದು ಬೋರ್ಗರೆದು ಸುರಿಯುತ್ತಿರುವ ಮಳೆಗೆ ತುಂಬಿ ಕೋಡಿಯೊಡೆದಿತ್ತು.! ಹೌದು ನನ್ನ ಬಯಕೆಯ ಪಾತಕ್ಕೆ ಸಿಕ್ಕಿ ಮಗುಚಿ ಬಿದ್ದು ತೋಯ್ದು ಹೋದ..! ನನ್ನ ಪ್ರತಿ ಮುತ್ತಿನಲ್ಲೂ ಕರಗಿ ಶರಣಾಗತನಾದ.! ಇಬ್ಬರೂ ಶೃಂಗಾರದ ಕಡಲೊಳಗೆ ಈಜುವ ಮೀನುಗಳಾಗಿದ್ದರೂ ಅವನ ಪ್ರತಿ ಸ್ಪರ್ಶದಲ್ಲೂ ಅವಳ ಹೆಣ್ಣತನದ ಆಸೆಯೆಲ್ಲ ಜಿನುಗಿ ನೀರಾಗಿ ಅವನ ಆಗಮನಕ್ಕೆ ಅಣಿಯಾಗಿ ಸುಖದ ತುತ್ತತುದಿಗೆ ತಲುಪಿದ್ದಳು.! ಇಬ್ಬರೂ ಮಳೆಯೊಳಗೆ ಬಿಸಿಯಾದ ಹನಿಗಳಾಗಿ ಕರಗಿ ಹೋಗಿದ್ದರು ಆಸೆಯೂ ಕೂಡ ಬೆವರಾಗಿ ಬಸಿದು ಇಂಗಿಹೋಗುತ್ತಿತ್ತು.! ವಾರಪೂರ್ತಿ ಅಖಂಡ ಕಾಮದೊಳೊಗೆ ಮುಳುಗಿ ವಿಧ ವಿಧವಾಗಿ ಈಜಿದ್ದರು.! ಈ ಅಖಂಡ ಮಿಲನದಿಂದ ಅವಳ ಕಾಮದಸಿವು ಇಂಗಿತ್ತ…!?

ಅಥವಾ ಅವನ ನಿರ್ಮಲ ಪ್ರೇಮವೂ ಸತ್ತು ಅವಳ ಕಾಮದಸಿವಿಗೆ ಆಹಾರವಾಗಿತ್ತ..!? ಇಲ್ಲಾ ಪ್ರೇಮವೂ ಕೊನೆಯ ಹಂತ ತಲುಪಿ ಮಿಲನವಾಗಿ ಅವಳಲ್ಲಿ ಕರಗಿತ್ತ..!?

ಹತ್ತು ವರುಷಗಳ ಹಿಂದೆ ರಂಗನಾಥಗುಡಿಯ ಹೊರಭಾಗದ ಒಂಟಿ ಅರಳಿಮರದ ಕೆಳಗೆ ಜನಿವಾರವಾಕಿದ್ದ ಈ ಸತ್ಯ ಕುಳಿತಿದ್ದ, ವಸಂತನ ಹಾವಳಿಗೆ ಬದಲಾಗುತ್ತ ಹಚ್ಚ ತಿಳಿಹಸಿರಿನಿಂದ ಚಿಗುರೊಡೆಯುತ್ತಿರುವ ಅರಳಿಮರ ಹಿಂಬದಿಗಿತ್ತು, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಗಿದ್ದ ಸೂರ್ಯ ಎದುರಿಗಿದ್ದ ರೇಖಾಳಿಂದ ಬದಲಾಗಿದ್ದ ಈ ಮೇರಿ ಅವನ ಪಕ್ಕದಲ್ಲೇ ಕುಳಿತ್ತಿದ್ದಳು, ಬದಲಾವಣೆ ಈ ಜಗದ ನಿಯಮ ಹೊಸದೊಂದು ಹುರುಪಿನೊಂದಿಗೆ ಹೊಸತನ ಆಗಮಿಸಲೇ ಬೇಕು, ಹಾಗೆ ಆಗಮನವಾಗಿದ್ದು ಕೂಡ ನಿರ್ಗಮಿಸಲೇ ಬೇಕು.! ಇದು ಕೂಡ ಜಗದ ನಿಯಮವೇ.! ಆದರೆ ಅಂದು ನನಗೆ ತಿಳಿಯಲೇ ಇಲ್ಲ.! ಅವನು ಮೌನವಾಗಿ ಕುಳಿತಿದ್ದ ಸಣ್ಣಗೆ ಗಾಳಿ ಬೀಸಿದರು ಸತ್ತುಬಿದ್ದ ಎಲೆಗಳ ಜೂರ್ಗುಟ್ಟುವ ಶಬ್ದಮಾತ್ರ ಕೇಳುತ್ತಿತ್ತು..! ಇದೆ ಎಲೆಗಳು ಚಿಗುರೊಡೆದು ಬೆಳೆದು ಬಲಿಯುವಾಗ ಮೌನವಾಗಿರುತ್ತವೆ ಆದರೆ ಸತ್ತು ಬಿದ್ದಿರುವಾಗ ಸದ್ದುಮಾಡುತ್ತಿವೇ.! ಮನುಷ್ಯಮಾತ್ರ ಇದರ ತದ್ವಿರುದ್ಧ..!
ನಾನೇ ಆ ಮೌನ ಒಡೆದು ‘ಸತ್ಯ’ ಎಂದೇ ಅವನು ಮಾತನಾಡಲಿಲ್ಲ.! ಮತ್ತೊಮ್ಮೆ ಏರುಧನಿಯಲ್ಲಿ ‘ಹೇ ಸತ್ಯ’ ಎಂದೇ ‘ಹೂ’ ಎಂದ..
ಆದರೆ ನನ್ನೆಡೆಗೆ ತಿರುಗಲಿಲ್ಲ ನನ್ನ ಸಂಭ್ರಮಕ್ಕೆ ಅಷ್ಟೇ ಸಾಕಿತ್ತು.!
ನನ್ನ ಮದುವೆಯ ಬೆಳವಣಿಗೆಯನ್ನೆಲ್ಲ ಮತ್ತು ಹುಡುಗನ ಬಗ್ಗೆ ಗೊತ್ತಿದ್ದಷ್ಟು.! ನಾನು ಸೃಷ್ಟಿಸಿಕೊಂಡಿದಷ್ಟು.! ಇಲ್ಲದಷ್ಟು.! ಇರುವುದಕ್ಕಿಷ್ಟು.! ಸೇರಿಸಿ ಅವನು ಕರುಬುವಂತೆ ಗುಣಗಾನ ಮಾಡಿ ಹೇಳುತ್ತಿದ್ದೆ, ಅವನ ಮುಖದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ, ಶಿಲುಬೆ ಏರಿದ ಏಸುವಿನಂತಿತ್ತು.! ನಾನು ನಿರುತ್ಸಾಹಳಾದೆ, ಸಿಕ್ಕಾಗಲೆಲ್ಲ ನನ್ನ ಧರ್ಮದ ಬಗ್ಗೆ ಹೀಯಾಳಿಸುವ ಮಾತನಾಡುತ್ತಿದ್ದ.! ಎಲ್ಲಾ ಧರ್ಮಗಳ ಲೋಪಗಳನ್ನೆಲ್ಲ ತೆಗಳಿ ಉಗಿಯುತ್ತಿದ್ದ.! ತನ್ನ ಧರ್ಮವೇ ಮೇಲೆಂದು ಎಂದು ಹೇಳಿದವನಲ್ಲ.! ಮನುಷ್ಯನ ಸುಖ ಜೀವನಕ್ಕೆ ಈ ಧರ್ಮಗಳೇ ಬೇಲಿ ಎನ್ನುತ್ತಿದ್ದ.! ಅವನು ಹೇಳುವುದು ಸರಿ ಎನಿಸಿದರೂ ಸೋಲುವಂತ ಹೆಣ್ಣು ನಾನಾಗಿರಲಿಲ್ಲ; ಪ್ರತಿವಾದಿಸುತ್ತಿದ್ದೆ. ವಿತಂಡವಾದಕ್ಕಿಳಿಯುತ್ತಿದ್ದೆ.! ನಂತರ ಇಬ್ಬರು ಜಗಳವಾಡಿ ಸುಮ್ಮನಾಗುತ್ತಿದ್ದೆವು.. ಇಂದು ನಾನು ಅಷ್ಟು ಮಾತನಾಡಿದರು ಪ್ರತಿಮಾತನಾಡಲಿಲ್ಲ, ನಿರ್ಲಿಪ್ತತತೆಯಿಲ್ಲದ್ದಿದ್ದರು ಅವನು ಗೊಂದಲದಲ್ಲಿದ್ದ,
‘ಏನು ಹೇಳು ಸತ್ಯ ಏತಕ್ಕಾಗಿ ಈಗಿದ್ದಿಯ ಮಾತನಾಡು’ ಎಂದೇ
ಮುಖ ನೋಡಿದ. ಎದ್ದು ನಿಂತ.
ಅವನು ಕೇಳುವ ಪ್ರಶ್ನೆಗಳಿಗೆಲ್ಲ ನನ್ನಿಂದ ಆಗಲೇ ಉತ್ತರ ಸಿಕ್ಕಿವೆಂಬಂತೆ!
ನಾಳೆಯಿಂದ ನಾನು ಊರಿನಲ್ಲಿ ಇರುವುದಿಲ್ಲವೆಂದ.
ಎಷ್ಟು ದಿನ ಸತ್ಯ.?
‘ಗೊತ್ತಿಲ್ಲ’
‘ಎಲ್ಲಿಗೆ ಹೋಗುತ್ತಿಯ.?
‘ನಿನಗೆ ಬೇಡದ ವಿಷಯ’, ಧನಿಯಲ್ಲಿ ತಿರಸ್ಕಾರವಿತ್ತು.
‘ನನ್ನ ಮದುವೆಗಾದರು ಬರುತ್ತಿಯ ತಾನೇ’ ಎಂದೆ.
ಅವನು ಮಾತನಾಡಲಿಲ್ಲ…
ಆ ಮೌನ ಅವನ ಮಾತಿಗಿಂತ ಕಠಿಣವಾಗಿತ್ತು .
ಹಾಗೆ ಹೊರಟುಹೋದ. ಮೌನದಲ್ಲಿ ಮುಳುಗಿದ ಸೂರ್ಯನಂತೆ
ಗುಡಿಯ ಒಳಗೆ ಸಂಕ್ರಮಣ ಪೂಜೆಯ ಘಂಟವಾದ್ಯಗಳು ಮೊಳಗಿದ್ದವು, ಸಂಕ್ರಮಣದ ಸೂರ್ಯಕೂಡ ಎದುರಿನ ಚಿಕ್ಕ ಬೆಟ್ಟದ ಕೆಳಗೆ ಮುಳುಗಿದ್ದರು ಅವನ ಇರುವಿಕೆಯ ಬೆಳಕು ಮಾತ್ರ ಮೋಡಗಳಿಂದ ಗೆರೆ ಗೆರೆಯಾಗಿ ಸೀಳಿ ಪ್ರಕಾಶಿಸುತ್ತಿತ್ತು..
ಅವಳು ಸ್ವಲ್ಪ ಸಮಯ ಅಲ್ಲೇ ನಿಂತು ಸೂರ್ಯ ಮುಳುಗಿದ ದಿಕ್ಕಿನೆಡೆಗೆ ಹೊರಟುಹೋದಳು..

ಇಬ್ಬರ ಬದುಕಿಗೂ ವಸಂತನ ಆಗಮನವಾಗಿತ್ತು ಅವಳು ಚಿಗುರೆಲೆಯ ಹುರುಪಿನಲ್ಲಿದ್ದಳು.! ಅವನು ಉದುರಿಬಿದ್ದ ಎಲೆಯಂತಿದ್ದ..!

ಮದುವೆಯ ಹಿಂದಿನ ದಿನಕೂಡ ಅರಳಿಮರದ ಬಳಿ ಬಂದು ಹೋಗಿದ್ದಳು ಬೃಹದಾಕಾರದ ದೈತ್ಯಮರ ಮಾತ್ರ ಹಸಿರೋದ್ದು ನಿಂತಿತ್ತು..!
ಸತ್ಯ ಕಾಣಲಿಲ್ಲ.! ಅವನೆದೆಯ ಕಗ್ಗತ್ತಲ ಕಮರಿಯೊಳಗೆ ದಾರಿ ತಪ್ಪಿದವನಂತೆ ಅಲೆಯುತ್ತಿದ್ದ ಕಿರುಚುತ್ತಿದ್ದ ಅಳುತ್ತಿದ ಸುತ್ತಲೂ ನೋಡುತ್ತಿದ್ದ ಗವ್ವೆನುವಷ್ಟು ಅಂಧಕಾರ ಬೆಳಕಿಲ್ಲ.! ಸೂರ್ಯನಿಲ್ಲ.! ಚಂದ್ರನಿಲ್ಲ..! ಚುಕ್ಕಿಗಳಿಲ್ಲ.! ತಂಪಾದ ಗಾಳಿಯೂ ಇಲ್ಲ..! ಆ ಗಾಢಾಂಧಕಾರದಲ್ಲಿ ಸತ್ಯ ಸಣ್ಣಗೆ ಜರ್ಜರಿತನಾಗಿ ನಲುಗುತಿದ್ದ.! ಇದ್ದ ಊರೆಕೋ ನರಕವಾಗುತ್ತಿತ್ತು ಆ ಮರ ಮುಂದಿನ ದೇವಸ್ಥಾನ ಇಬ್ಬರು ನೆಡೆದ ಹಾದಿಗಳು.. ಮರಕೋತಿ ಆಡುತ್ತಿದ್ದ ಜಾಗ, ಮಾವಿನ ಹಣ್ಣು ಕದ್ದು ತಿನ್ನುವಾಗ ಸಿಕ್ಕಿಬಿದ್ಧ ತೋಟಗಳು ಎಲ್ಲವೂ ಈಗ ಅವನಿಗೆ ನರಕದ ರಾಯಭಾರಿಗಳಗಿದ್ದವು ಊರುಬಿಟ್ಟವನೆ,
ಅಕ್ಕನ ಮನೆಯ ಮಹಡಿಸೇರಿ ಮಲಗಿಬಿಟ್ಟ ಸತ್ಯನ ಆ ಮಹಡಿಯ ಮನೆಗೂ ಮನಕ್ಕೂ ಸೂತಕ ಬಂದು ಒಳಹೊಕ್ಕಿ ಮಲಗಿ ಬಿಟ್ಟಿದೆ ಎಚ್ಚರವಾದಗ ಸಾವಾಗಬಹುದು….. ಕುಡಿದ ಅಮಲಿನಲ್ಲಿ ರಾತ್ರಿ ಹಗಲುಗಳ ಪರಿವಿಲ್ಲದಂತೆ ನಶೆಯಲ್ಲಿ ಮುಳುಗಿ ಮೌನವಾಗಿ ಹಳೆಯದನ್ನೆಲ್ಲ ಕ್ಷಣಕಾಲ ಮರೆತು ಮತ್ತೊಮ್ಮೆ ದೈತ್ಯಕಾರವಾಗಿ ಸೃಷ್ಟಿಸಿಕೊಂಡು ಮನದ ಒಳಗೂ ಹೊರಗೂ ಕಾದಾಡುತ್ತಿದಾನೆ..

ಆತ ಮನೆಯ ಹೊರಗಿನ ಬೆಳಕನ್ನು ಕಾಣುವುದು ಕೂಡ ವಾರಕೊಮ್ಮೆ ಅಷ್ಟೇ..! ತನ್ನ ಬಳಿ ಇದ್ದ ತುಂಬಿದ ಬಾಟಲುಗಳು ಖಾಲಿಯಾದಗ ಮಾತ್ರ ಮಹಡಿಯ ಒಂದೊಂದೇ ಮೆಟ್ಟಿಲುಗಳನ್ನ ತಡವರಿಸಿಕೊಂಡಿಳಿದು ಗೇಟಿನ ಬಾಗಿಲು ತೆಗೆಯುವ ಸದ್ದಿಗೆ ತನ್ನ ಅಕ್ಕನ ಬೈಗುಳ ಕೇಳುತ್ತವೆ ಆದರೆ ಅವು ಅವನ ಒಳ ತಾಕುವುದಿಲ್ಲ, ಆತುರ ಆತುರದಲ್ಲೇ ನೆಡೆದು ಬೇಕಾದಷ್ಟನ್ನು ತಂದು ಮಹಡಿ ಹತ್ತಿ ಬಾಗಿಲು ಮುಚ್ಚಿ ಕುಳಿತು ಬಿಡುತ್ತಾನೆ..! ಊಟ ತಿಂಡಿಗಳು ಅಕ್ಕನ ಮನೆಯಿಂದಲೇ ಮೆಟ್ಟಿಲನತ್ತಿ ಬರುತ್ತವೆ.. ಕೆಲವು ಬಾರಿ ಖಾಲಿಯಾಗುತ್ತದೆ ಕೆಲವೊಮ್ಮೆ ಹಾಗೆ ಒಣಗಿಯೋ ಹಳಸಿಯೋ ವಾಪಸಿಳಿದು ಕಸದ ಬುಟ್ಟಿ ಸೇರುತ್ತವೆ.

ಇತ್ತ ಮೇರಿಯ ಸಂಸಾರದ ಸಂತೋಷದ ದಿನಗಳೆಲ್ಲ ಮುಗಿದ್ದುಹೋಗಿದ್ದೊ, ಸೂತಕವು ಇವಳ ಮನೆಯ ಬಾಗಿಲನ್ನು ಬಂದು ಬಡಿಯಿತು ಅವಳ ಗಂಡನೆಂಬ ಜೀವ ಸತ್ತುಬಿತ್ತು.. (ಸಾವಿಗೆ ಸಾವಿರ ಕಾರಣಗಳು ಇರುತ್ತವೆ.ಇಲ್ಲಿ ಈ ಸಾವಿಗೆ ಕಾರಣದ ಅವಶ್ಯಕತೆ ಇಲ್ಲ ಹೆಸಲಿಲ್ಲದ ಪಾತ್ರ ಸಾಯಬೇಕು) ಇವಳು ಕೂಡ ಕೆಲವು ತಿಂಗಳುಗಳು ನಲುಗಿದ್ದಳು ಆದರೆ ಸೋಲುವ ಹೆಣ್ಣಲ್ಲ ಬದುಕಿನ ಸವಾಲುಗಳನ್ನೇ ತುಳಿದು ನೆಡೆಯುತ್ತಿದಳು. ಇಂದಿಗೂ ಅವಳನ್ನು ಸೆಣಸಿ ಸೋಲಿಸಿ ಕಣ್ಣೀರಿಡಿಸುವ ಕೊರತೆಯೆಂದರೆ ಮಕ್ಕಳದ್ದು ಮಾತ್ರ.
ಭಾನುವಾರದಂದು ಚರ್ಚೆಗೆ ಬರುವ ಮಕ್ಕಳೊಂದಿಗೆ ಆಟವಾಡಿ ನಲಿಯುತ್ತ ಆ ಕೊರತೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾಳೇ. ಇಲ್ಲದನೆಲ್ಲ ತನ್ನೊಳಗೆ ಸೃಷ್ಟಿಸಿಕೊಂಡು ಬದುಕುತ್ತಿದ್ದಾಳೆ, ಹೀಗೆ ಇಬ್ಬರ ದಿನಗಳು ಕಳೆಯುತ್ತಿವೆ…..(ಈ ಕಥೆಯಲ್ಲಿ ಇಬ್ಬರೂ ಮತ್ತೊಮ್ಮೆ ಭೇಟಿಯಾಗಬೇಕು ಆಗಾಗಿ ಇಬ್ಬರನ್ನು ಒಂದೇ ರಸ್ತೆಗೆತಂದುಬಿಟ್ಟೆ) ಮೇರಿಗೆ ತನ್ನ ಸತ್ಯನ ದರ್ಶನವಾಯಿತು ಆದರೆ ಸತ್ಯ ಅವಳನ್ನು ಗಮನಿಸಲಿಲ್ಲ ಅವನು ಹಾಗೆ ನೆಡೆದ ಹಿಂಬಾಲಿಸಿದಳು ಮಹಡಿ ಹತ್ತಿ ಒಳಹೋದ ಸಲ್ಪ ಸಮಯಕಾದಳು ಮತ್ತೆ ಹೊರಬರಲಿಲ್ಲ ಅವಳು ಕೂಡ ಮಹಡಿ ಹತ್ತಿ ಬಾಗಿಲು ತೆರೆದು ಒಳ ಹೋದಳು.

ಸಿಗರೇಟಿನ ಗಾಟು ಎಣ್ಣೆಯ ಕಮಟುಮಿಶ್ರಿತವಾಸನೆ ರಪ್ಪೆಂದು ಮೂಗಿಗೆ ಬಡಿಯಿತು, ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದ ಮನೆಯೊಳಗೆ ನಿಂತ ಗೋಡೆಗಳು.! ಮೌನವಾಗಿ ಬಿಗಿದುನಿಂತ ಕಿಟಕಿಗಳು.! ಚಾವಣಿಗೂ ಗೋಡೆಗಳ ಮೂಲೆಗೂ ಸೇರಿಸಿ ಎಣೆದ ಜೇಡರ ಬಲೆಯೊಳಗೆ ಸತ್ತ ಹುಳಗಳು.! ನೆಲದ ಮೇಲೆಲ್ಲ ಬಿದ್ದ ಸಿಗರೇಟಿನ ಫಿಲ್ಟರಗಳು.! ಕದದಮೂಲೆಯಲ್ಲಿದ್ದ ಖಲಿಬಾಟಲ್ಗಳು.! ಗಾಢಮೌನದೊಳಗೆ ಅಲಲ್ಲಿ ತೂತುಬಿದ್ದ ಬನಿಯನ್ ಮತ್ತು ಲುಂಗಿ ತೊಟ್ಟು ದಿಂಬನ್ನೂರಗಿ ಕುಡಿಯುತ್ತ ಕುಳಿತ್ತಿದ್ದ ಸತ್ಯ.! ಕೃಷವಾದ ದೇಹ ವಯಸ್ಸಿಗಿಂತ ಹೆಚ್ಚಾಗಿ ಕಾಂತಿಗುಂದಿದ ಚರ್ಮ.! ಅಡ್ಡದಿಡ್ಡಿ ಬೆಳೆದ ಗಡ್ಡ ಮೀಸೆಗಳು.! ಅವನ ಕಣ್ಣಗಳಲ್ಲಿ ಜೀವಚೈತನ್ಯದ ಬೆಳಕಿಲ್ಲ ಶವವೊಂದು ಕುಡಿಯುತ್ತಿದ್ದಂತಿತ್ತು..!
ಇಬ್ಬರ ನೋಟಗಳು ಸಂಧಿಸಿದವು ಕುಶೋಲೋಪರಿಯ ಅಗತ್ಯವಿರಲಿಲ್ಲ.! ಇಬ್ಬರ ಕಣ್ಣುಗಳಲ್ಲೂ ಸಿಕ್ಕ ಸಂತೋಷವಿರಲಿಲ್ಲ.! ಕೆಲವೇ ಕ್ಷಣಗಳಲ್ಲಿ ಮೌನ ಮನೆಕಟ್ಟಿತ್ತು ಮಾತಿನ ಪೆಟ್ಟು ಬೇಕಿತ್ತು ಮೌನ ಒಡೆಯಲು.! ಅವನೇ ಆ ಮೌನ ಒಡೆದ ಮಾತಿಗಿಳಿದ.! ಮತ್ತಿನಲ್ಲಿದ್ದ.!
“ಈ ಕಾಲವೇ ಹೀಗೆ ಹಳೆಯದೆಲ್ಲ ಕಳೆದುಹೋಗಿದ್ದರು ಸಾಕ್ಷಿಗಳನ್ನು ಮಾತ್ರ ನಿಲ್ಲಿಸಿ ಹೋಗುತ್ತವೆ ನಿನ್ನ ಜೊತೆ ಕಳೆದ ಬಾಲ್ಯದ ದಿನಗಳು ಯೌವನದ ಕ್ಷಣಗಳನೆಲ್ಲ ಸಾಯಿಸಬೇಕೆಂದು ಈ ಅಮಲಿಗೆ ದಾಸನಾಗಿಬಿಟ್ಟೆ.! ಅಮಲು ಹೆಚ್ಚಾದಗಳಲೇಲ್ಲ ನೀ ನನ್ನೊಳಗೆ ಇರುವಂತೆ ಮುದ್ದಿಸಿದಂತೆ ತಾಯಿತನದ ಸುಖ ನೀಡಿದಂತೆ ಅನಿಸುತ್ತದೆ ರೇಖಾ..!
ಈ ಅಮಲು ಎಷ್ಟು ನೆಮ್ಮದಿಕೊಡುತ್ತದೆ ಗೊತ್ತಾ..!
ಆ ಯೌವನದ ದಿನಗಳಲ್ಲಿ ನಾನು ನಿನ್ನ ಹತ್ತಿರಕ್ಕೆ ಬರಲು ಪ್ರತಿ ಹೆಜ್ಜೆ ಮುಂದಿಟ್ಟಗಾಲು ನೀನು ಮಾತ್ರ ಅದರ ಹತ್ತುಪಟ್ಟು ದೂರವಾಗುತ್ತಿದ್ದೆ.!
ನಾನು ಈ ಧರ್ಮವೆಂಬ ಮುಳ್ಳುಪೊದೆಗಳ ದಾಟಿ ಪ್ರೀತಿಯ ಬೋರೆಮೇಲೆ ಬಂದುನಿಂತು ನೀನಗಾಗಿ ಕನವರಿಸಿದೆ ನೀನು ಮಾತ್ರ ಆ ಧರ್ಮಗಳ ಬೇಲಿಯಿಂದಾಚೆ ಬರಲೇ ಇಲ್ಲಾ..!
ಮೂಲಕ್ರಿಶ್ಚಿಯನ್ನರು ಪಾಲಿಸದಷ್ಟು ನಿನ್ನ ಧರ್ಮನಿಷ್ಠೆಗಳು ಅತಿರೇಖವಾಗಿದ್ದವು ರೇಖಾ..! ನೀನು ನಿನ್ನ ಧರ್ಮದ ಹೆಸರಿನಲ್ಲಿ ಕೃತಕಗೋಡೆಯೊಂದನ್ನು ನಿರ್ಮಿಸಿಕೊಳ್ಳುತ್ತಿದ್ದೆ.. ನಿನ್ನ ಜೋತೆ ಪ್ರತಿಬಾರಿ ಮಾತನ್ನಾಡುವಾಗಲು ಅದನ್ನು ಅಲುಗಿಸಿ ಕೆಡವಬೇಕೆಂದುಕೊಳ್ಳುತ್ತಿದ್ದೆ.! ಆದರೆ ಆ ಗೋಡೆಗಳು ಇನ್ನು ಸದೃಢವಾಗಿ ಬೆಳೆಯುತ್ತಿದ್ದವು.!
ನಿನ್ನ ಪಾಲಿಗೆ ಅದು ನಿನ್ನ ಭಗವಂತನ ದಿವ್ಯದೇಗುಲವಾಗಿತ್ತೇನೋ..!? ನನಗೆ ಗೋರಿಯಂತೆ ಕಾಣುತ್ತಿತ್ತು ಸಂಪೂರ್ಣವಾಗಿ ಕಟ್ಟಿಕೊಂಡು ರೇಖಾಳಿಂದ ಮೇರಿಯಾಗಿ ಬದಲಾದೇ ಅಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದಿಯ ಗೊತ್ತಿಲ್ಲ..? ಆದರೆ ನನಗೆ ಮಾತ್ರ ಗೋರಿಯೊಳಗಿನ ಪ್ರೇಯಸಿಯಾಗಿ ಉಳಿದುಬಿಟ್ಟೆ ರೇಖಾ..!

ಇವಳ ಕಣ್ಣಗಳಲ್ಲಿ ನೀರು ಸಣ್ಣಗೆ ಹರಿಯುತ್ತಿತ್ತು, ಅವನು ಮಾತು ನಿಲ್ಲಿಸಿದ ಅಳುವಿನಬುಗ್ಗೆಯೊಂದು ಚಿಮ್ಮಿಬಂತು ತಡೆದರು ತಡೆಯಲಾಗುತ್ತಿಲ್ಲ ಕಣ್ಣುಗಳು ನೀರು ಜಿನಿಗಿಸುತ್ತಿದ್ದವು, ಅತ್ತಳು.. ತಕ್ಕನೆ ಹಿಂತಿರುಗಿ ಹೊರಟು ಹೋದಳು…
ನಂತರದ ದಿನಗಳಲ್ಲಿ ಇಬ್ಬರು ಭೇಟಿಯಾಗುತ್ತಿದ್ದರು ಮತ್ತೆ ಇಬ್ಬರ ಮಾತುಗಳು ಜಗಳಗಳು ಶುರುವಾದವು.! ಯೌವನದ ಆ ದಿನಗಳು ಮರುಕಳಿಸುತ್ತಿದ್ದವು ಅವಳು ತನ್ನ ಧರ್ಮದ ಒಂದೊಂದೇ ಗೋಡೆಗಳನ್ನು ಕೆಡವಿಕೊಂಡಿದ್ದಳು ನೆಪಮಾತ್ರಕ್ಕೆ ಬೇಲಿಯೊಂದಿತ್ತು.! ಆ ಬೇಲಿಯ ಮೇಲೆಲ್ಲ ಪ್ರೀತಿಯ ಹೂ ಬಳ್ಳಿಯೊಂದು ಕವಾಲೊಡೆದು ಸೊಂಪಾಗಿ ಬೆಳೆಯತೊಡಗಿತು. ಅವನು ಕೂಡ ಎಣ್ಣೆಯ ಅಮಲಿನಿಂದ ಎದ್ದು ಹೆಣ್ಣಿನ ಅಮಲಿಗೆ ಬಿದ್ದ..!

                    ೫
       ಕಾಲ ಬೆತ್ತವಿಡಿದು ನಿಂತಿತ್ತು

ಹಿಂದಿನ ನೆನಪಿನ ಆಳದಲ್ಲಿ ಮುಳುಗಿದ್ದವಳಿಗೆ ಬಾಗಿಲಿನಿಂದ ನಾಯಿಯ ಬೊಗಳುವ ಶಬ್ದ ಕೇಳಿಬಂತು, ಸೀರೆಯ ನೆರಿಗೆಗೆ ಪಿನ್ನುಹಾಕಿ ನಡುವಿಗೆ ಸಿಕ್ಕಿಸಿಕೊಂಡು ಬಾಗಿಲು ತೆರೆದಳು “ಮುನ್ನಿ” ಮೃದುವಾಗಿ ಬೊಗಳುತ್ತ ಬಾಲ ಅಲ್ಲಾಡಿಸುತ್ತಿತ್ತು.! ಹತ್ತಿರಕ್ಕೆ ಹೋದಳು ಹಿಂತಿರುಗಿ ಓಡಿಹೋಯ್ತು.! ಮನಸ್ಸಿನಲ್ಲೇ ಗೋಣಗುತ್ತ ಒಳಹೋದಳು ಮತ್ತೆ ಸತ್ಯನ ನೆನಪಾಯ್ತು ಅವನ ಬರುವಿಕೆಗಾಗಿ ಕಾದುಕುಳಿತಳು, ಸಂಜೆ ಕಳೆದು ರಾತ್ರಿಯಾದರು ಬರಲಿಲ್ಲ ಹೀಗೆ ಕಾಯುವಿಕೆಯಲ್ಲಿ ಇನ್ನೆರಡು ದಿನ ಕಳೆದು ಭಾನುವಾರವಾಗಿತ್ತು, ಅವನು ಮಾತ್ರ ಬರಲೇ ಇಲ್ಲಾ.!
ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಏಸುವಿನ ಮುಂದೆ ನಿಂತು ಪ್ರಾರ್ಥಿಸಿ ಸತ್ಯನ ಮನೆಯ ಬಳಿ ಹೊರಟಳು, ಹೋಗುವ ಹಾದಿಯಲ್ಲಿ ಮಕರ ಸಂಕ್ರಮಣದ ಕಬ್ಬು ಕಡಲೆ ಅವರೆ ಗೆಣಸಿನ ವ್ಯಾಪಾರ ಜೋರಾಗಿ ನೆಡೆಯುತ್ತಿತ್ತು.! ಅವಳ ಮನಸ್ಸು ಎಲ್ಲೆಲ್ಲೂ ಹಸಿರು ಕಂಡ ಚಿಗರೆಯಂತೆ ಸಂಭ್ರಮಿಸಿ ಕುಣಿಯುತ್ತಿತ್ತು.! ಅವಳು ನಿಂತಿದ್ದ ಆ ಬದಿಗಿದ್ದ ದೇವಸ್ಥಾನದ ಒಳಗಿಂದ ಘಂಟವಾದ್ಯಗಳು ಮೊಳಗಿದವು.! ಒಳಹೋದಳು ಕೈಮುಗಿದು ತೀರ್ಥ ತೆಗೆದುಕೊಂಡು ಹೊರಬಂದವಳ ಹಣೆಯಲ್ಲಿ ಸಣ್ಣನೆಯ ತಿಲಕವಿತ್ತು.! ಕೈಯಲ್ಲಿ ಪ್ರಸಾಧವಿಡಿದು ಅವನ ಮನೆಯ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿ ಬಾಗಿಲು ಬಡಿದಳು ಒಳಗೆ ಯಾರು ಇದ್ದಂತಿರಲಿಲ್ಲ, ಕೆಳ ಮನೆಗೆ ಬಂದಳು ಅಲ್ಲೂಕೂಡ ಯಾರು ಇರಲಿಲ್ಲ.! ಅಲ್ಲೇ ಮೆಟ್ಟಿಲಿನ ಬಳಿ ಕುಳಿತಳು ಭಗವಂತನ ದರ್ಶನಕ್ಕಾಗಿ ಅವನ ಕೃಪೆಗಾಗಿ ಕಾದುಕುಳಿತವಳಂತೆ, ನೆತ್ತಿಗೆ ಬಂದ ಸೂರ್ಯ ಸತ್ಯ ಬರಲಿಲ್ಲ.! ಸಂಜೆಯ ಕೆಂಬಣ್ಣತೊಟ್ಟ ಸೂರ್ಯ ಸತ್ಯ ಬರಲೇ ಇಲ್ಲ..! ಗೇಟಿನ ಬಾಗಿಲು ತೆರೆಯಿತು ಸತ್ಯನ ಅಕ್ಕ ಭಾವ ಮಕ್ಕಳು ಇನ್ನು ಕೆಲಸಂಬಂಧಿಗಳು ಒಳ ಬಂದರು ಆದರೆ ಅವಳ ಕಣ್ಣು ಸತ್ಯನನ್ನು ಹುಡುಕುತ್ತಿತ್ತು ಅಕ್ಕನನ್ನು ಕೇಳಿದಳು ಅವಳು ಮಾತಾನಾಡದೆ ಬಾಗಿಲು ತೆರೆದು ಒಳಹೋದಳು ‘ರೇಖಾ’ ಕೂಡ ಒಳಹೋದಳು ಅಕ್ಕನ ಕೈ ಹಿಡಿದು ಬೇಡುವವಳಂತೆ ಕೇಳಿದಳು ಅಕ್ಕನ ನಿರ್ಲಪ್ತತೆಯ ಮುಖ ಕಣ್ಣುಗಳು ಏನನ್ನೋ ತೋರಿಸುವಂತೆ ಅತ್ತ ತಿರುಗಿದವು ಅವಳು ಕೂಡ ತಿರುಗಿದಳು ಸತ್ಯನ ಮುಗುಳುನಗೆಯ ಪಟ ಕಣ್ಣಿಗೆ ಬಿತ್ತು ಇವಳ ನಗು ಮರೆಯಾಯ್ತು ಪಟಕ್ಕೆ ಹಾರಹಾಕಿ ಮುಂದೆ ದೀಪಹಚ್ಚಿಟ್ಟಿದ್ದರು.! ದುಃಖದ ಚಿಲುಮೆಯುಕ್ಕಿ ಎದೆಯನ್ನು ಒತ್ತರಿಸಿ ಬರುತ್ತಿದೆ ಜೋರಾಗಿ ಕಿರುಚಿ ಅಳಬೇಕು ಅನಿಸುತ್ತಿದೆ ಪಟದ ಹತ್ತಿರಕ್ಕೆ ಬಂದಳು ಅವನ ನಗುವನ್ನೇ ನೋಡುತ್ತ ನಿಂತಳು ಸತ್ಯನ ಹಳೆಯಪಟ ಈ ರೂಪದ ಸತ್ಯ ಅವಳ ಪಾಲಿಗೆ ಎಂದೋ ಸತ್ತಿದ್ದ… ಕಣ್ಣುಗಳು ನೀರು ತುಂಬುತ್ತಿದ್ದವು ಎದುರಿಗಿದ್ದ ಪಟ ಮಂಜಾಗುತ್ತಿತ್ತು ಪ್ರಸಾದವನ್ನು ಎದುರಿಗಿಟ್ಟು ಹೊರಟಳು.

ಹೊರಗಿನ ಅಕಾಶವು ಸಂಜೆ ಸೂರ್ಯನ ಕೆಂಬೆಳಕಿನಿಂದ ಭೂಮಿಗೆ ಬಿಳುತ್ತಿದ್ದವು ಹಸಿರೋದ್ದ ಮರಗಿಡಗಳೆಲ್ಲ ಆ ಬೆಳಕನ್ನು ಆವಾಯಿಸುತ್ತಿದ್ದವು, ಆ ಚೇತುಹಾರಿ ಸಂಜೆಯಲ್ಲಿ ಚೀತ್ಕಾರದ ಮನಸ್ಸೊಂದು ನೆಡೆದು ಹೋಗುತ್ತಿತ್ತು ಮನೆಯ ಮುಂದೆ ಬಂದು ನಿಂತಳು ಪ್ರೀತಿಯಿಂದ ಸಾಕಿದ್ದ ನಾಯಿ ಮುದುರಿಕೊಂಡು ಮಲಗಿತ್ತು ಬಾಗಿಲು ತೆರೆದು ಒಳಹೋಗಿ ಮೌನವಾಗಿ ಕುಳಿತುಬಿಟ್ಟಳು ಸಂಕ್ರಮಣದ ಸೂರ್ಯ ಕೂಡ ಮುಳುಗಿದ..!

ಹೊರಗೆ ಸಾಕಿದ್ದ ಅವಳ ಪ್ರೀತಿಯ ನಾಯಿ ಅಪರಿಚಿತರು ಕಂಡರೆ ಬೊಗಳುತ್ತಿತ್ತು..! ಆದರೆ ಈಗ ಮನದೊಳಗೆ ಕಟ್ಟಿದ್ದ ಅಹಃ ಎಂಬ ನಾಯಿಮರಿ ಸೋತು ಮೌನವಾಗಿ ಮಲಗಿತ್ತು.! ಅದಕ್ಕೆ ಸತ್ಯದ ಅರಿವಾಗಿತ್ತು.! ಇಷ್ಟು ದಿನ ಅನುಕೂಲವಾಗುವ ಸುಳ್ಳುಗಳನ್ನೇ ಸತ್ಯವೆಂದು ನಂಬುತ್ತಾ ಅದನ್ನೇ ಆಹ್ವಾನಿಸಿ ಬದುಕುತ್ತಿದ್ದ ಅಹಃಗೆ ಸತ್ಯದ ನಗ್ನ ದರ್ಶನವಾದಗ ಮಾತ್ರ ಅದರ ಮೇಲೆ ದೂರುಗೈಯುತ್ತದೆ ದೂರಸರಿಸುತ್ತದೆ, ಕತ್ತಲಿಗೆ ತಳ್ಳಿ ಸತ್ಯವೇ ಇಲ್ಲವೆಂದು ಭ್ರಮಿಸುತ್ತದೆ, ಸತ್ಯವು ಸೊರಗಬಹುದು ಆದರೆ ಸಾಯುವುದಿಲ್ಲ. ನೀನು ಸತ್ಯದೊಳಗೆ ಮಿಲನಗೊಳ್ಳಬೇಕು “ಸತ್ಯದೊಳಗೆ ನೀನೋ ನಿನ್ನೊಳಗೆ ಸತ್ಯವೋ” ಎಂಬಂತೆ ಮಿಲನವಾದಗಲೇ ಸತ್ಯ ಬಾಹ್ಯವಾಗಿ ಸತ್ತು ನಿನ್ನೊಳಗೆ ಬೃಹದಾಕಾರವಾಗಿ ಬೆಳೆದು ನಿಲ್ಲುತ್ತದೆ ಅರಳಿಮರಕ್ಕಿಂತ ಎತ್ತರವಾಗಿ ಆಗಲೇ ನಿಮಗೆ ಬದುಕಿನ ಅರಿವಾಗುವುದು…

***********

Leave a Reply

Back To Top