ರಂಗಸ್ವಾಮಿ ಮಾರ್ಲಬಂಡಿ ಕವಿತೆ-ವಾಟ್ಸ್ಯಾಪ್ ಜಾತಿ

ಕಾವ್ಯಸಂಗಾತಿ

ವಾಟ್ಸ್ಯಾಪ್ ಜಾತಿ

ರಂಗಸ್ವಾಮಿ ಮಾರ್ಲಬಂಡಿ

ರಂಗಸ್ವಾಮಿ ಮಾರ್ಲಬಂಡಿ

ಜಾತಿ ಜಾತಿ ಜಾತಿ
ಹೋ..! ಜಾತಿ
ವಾಟ್ಸ್ಯಾಪ್ ಜಾತಿ…!

ಬಚ್ಚಲಲ್ಲಿದ್ದ ಜಾತಿ
ಜಗಲಿಗೆ ಹೋಯಿತು,
ಜಗಲಲ್ಲಿ ದೇವರಾಯಿತು.
ದೇವರೇ ಶಾಸನವಾಗಿದೆ ಇಂದು..!

ಪರಿಹಾರಕ್ಕೆ ಬೇಕು ಬತ್ತಳಿಕೆ
ಪರಿಹಾರ ಕಟ್ಟುವವನಿಗೂ ಗೊತ್ತು
ಬತ್ತಳಿಕೆ ಏಟು ನೋವಾಗುವುದೆಂದು..!

ನೋವಲ್ಲಿ ನಲಿವುಂಟೆ..?!
ಇಲ್ಲ ಇಲ್ಲ ನೋವು ನೋವೇ ಆಗಿರಲಿ
ನಲಿವೆಂಬ ಲೇಪನ ಬೇಡ
ಕರುಣೆಯ ಮುಲಾಮು ಮೊದಲೆ ಬೇಡ…!

ಜಗತ್ತಿಗೆ ತಿಳಿಯಲಿ ಬಿಡು…!
ಈ ವಾಟ್ಸ್ಯಪ್ ಕಾಲದ ಸಮಾನತೆಯನು…!
ಫೇಸ್ ಬುಕ್ ಕಾಲದ ಮಾನವೀಯತೆಯನು…!

ಇನ್ ಸ್ಟಾ ದಲ್ಲಿ ನೋಡಿ
ಅದರ ಶೋಷಿದ ಮುಖವನ್ನ …!
ಈಗಲಾದರೂ ತಿಳಿಯಳಿ
ಮೇಲಿನವರ ಕಾಣ್ಬುಕೆ…!
ನಿಜ ಅವರ ಕಾಣ್ಬುಕೆ..!

Leave a Reply

Back To Top