ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಅಮೃತ – ಸ್ವಾತಂತ್ರ್ಯ

ಕುಸುಮ ಮಂಜುನಾಥ್

ಬಂದಿಹುದು ಭಾರತ
ಸ್ವಾತಂತ್ರ್ಯದ ಅಮೃತ ಮಹೋತ್ಸವ
ತಂದಿಹುದು ಎಲ್ಲರಿಗೂ ಹರ್ಷೋತ್ಸಾಹ.

ಕಿತ್ತೊಗೆಯಬೇಕಿದೆ
ಜಾತಿ -ಜಾತಿಗಳ ಧರ್ಮ ಮತಗಳ
ಸಂಕೋಲೆಗಳನೀಗ
ಒಕ್ಕೊರೊಳಲಿ ಹಾಡಬೇಕಿದೆ
ಸಹಿಷ್ಣತೆಯ ರಾಗ.

ಬಡವ ಬಲ್ಲಿದರೆಂಬ
ಭೇದ ಕೊನೆಯಾಗಬೇಕಿದೆ ಈಗ
ಉಳ್ಳವರು ಇಲ್ಲದವರ ನಡುವಿನ ಕಂದಕ
ಇಲ್ಲವಾಗಬೇಕಿದೆ ತುರ್ತಾಗಿ ಈಗ

ಹಚ್ಚಬೇಕಿದೆ ನಾವು
ನಿಜ ರಾಷ್ಟಾಭಿಮಾನದ ದೀಪ
ತೊಲಗಬೇಕಿದೆ ಅಂಧ
ಅಹಂಕಾರದ ಲೇಪ

ಕಹಿ ಕಳೆಗಳನೆಲ್ಲ ಕಿತ್ತು ಇಂದು
ಸಾಮರಸ್ಯದ ಸಹಬಾಳ್ವೆಯ ಅಮೃತವ
ಹಂಚೋಣ ಎಂದೆಂದು…


Leave a Reply

Back To Top