ಭರವಸೆ ಸರೋಜಾ ಶ್ರೀಕಾಂತ್ ಅಮಾತಿ

ಕಾವ್ಯ ಸಂಗಾತಿ

ಭರವಸೆ

ಸರೋಜಾ ಶ್ರೀಕಾಂತ್ ಅಮಾತಿ

ಬಿರಿದ ಹೂವುಗಳೆ ಹಾಗೇ ಇರಿ
ಸಂಜೆಯ ನಂತರವೂ
ನಿಮ್ಮ ಮುಗುಳ್ನಗುವ
ಕಾಣಬೇಕಿದೆ ಇನ್ನಷ್ಟು ಹೊತ್ತು ನೋವುಗಳನ್ನೆಲ್ಲ ಮರೆಯಬೇಕಿದೆ

ಹೃದಯವೆ ಬಿಟ್ಟು ಬಿಡು
ದುಗುಡವನ್ನು, ಒಳಗೊಳಗೇ
ಗುದ್ದಾಡುವುದನ್ನು
ಅಂತರಂಗದಿಯೇ ಅರಳಬೇಕಿದೆ ಸದಾನಂದದ ಸೊಗಸು

ಕಣ್ಣುಗಳೆ ಸುರಿಸಿ ಬಿಡಿ
ಕಣ್ಣೀರನ್ನು ಅಷ್ಟೂ;
ಅಡಗಿಸಿಟ್ಟ ಮೌನದ
ಬಿಕ್ಕುವಿಕೆಯ ಹೊರಹಾಕಿ,
ಸಜ್ಜಾಗಬೇಕಿದೆ
ಭರವಸೆಯ ನಾಳೆಗೆ ಹೊಸ ಹೊಂಗನಸು ಕಾಣಲು!


Leave a Reply

Back To Top