ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನೀಲಕಂಠನೆ ಆಗು

ಅಬ್ಳಿ,ಹೆಗಡೆ

ಎದೆಯ ಕಡಲೊಡಲಿನಲಿ
     ಮಡುವುಗಟ್ಟಿರೆ ಶೋಕ
     ಮುಖದಲ್ಲಿ ಸುಖದ ನಗು
                       ನಗಲಿ ಹೇಗೆ.?
     ನನ್ನೊಳಗೆ ತುಂಬಿರಲು
     ಬರಿ ಮೌನ, ಏಕಾಂತ
     ಬಾಯಿಂದ ಸವಿನುಡಿಯ
                      ನುಡಿವೆ ಹೇಗೆ..?
    ಬದುಕ ಪಾತ್ರೆಯತುಂಬ,
    ತುಂಬಿ ತುಳುಕಿರೆ ಕಹಿಯು,
    ಸುತ್ತ ಸಿಹಿಯುಣಬಡಿಸೆ,
                      ಸಾಧ್ಯವೇನು.?
    ಕುರುಡ ಕತ್ತಲಿನಲ್ಲಿ
    ದಾರಿಯರಸುತಲಿರಲು,
    ಬೆಳಕೆ ಇಲ್ಲದೆ ದಾರಿ
                      ಕಾಣ್ವುದೇನು.?
    ಬರಿ ಸುಖವು,ಸವಿನುಡಿಯು,
    ಬರಿ ಸಿಹಿಯು,ಬರಿ ಬೆಳಕು,
    ಏಕತಾನದ ಬದುಕು
                     ಸಪ್ಪೆಯಹುದು.
    ದುಃಖ ಕಳೆಯಲು ಖುಷಿಯು
    ಕಹಿಯಳಿಯೆ ಸಿಹಿ ಇಹುದು
    ರಾತ್ರಿ ಕಳೆಯಲು ಹಗಲು
  .                   ಬಂದೆ ಬಹುದು.
    ನಿತ್ಯ ವೈವಿಧ್ಯಮಯ
    ಸುಂದರತೆ ಬದುಕಲ್ಲಿ
    ‘ನೀಲಕಂಠನೆ ಆಗು’
                     ಸೋಲೆ ಇಲ್ಲ.
     ನಿರ್ಜೀವ ಜಡಶಿಲೆಗೆ
     ದೇವ ಭಾವವ ಬೆಸೆದು,
     ಕಾಡಿ ಬೇಡಲು ಕಷ್ಟ
                     ಕಳೆವುದಿಲ್ಲ.

————————–

              

 ಅಬ್ಳಿ ಹೆಗಡೆ

About The Author

Leave a Reply

You cannot copy content of this page

Scroll to Top