ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಕಳಚಿಕೊ ಬಡಿವಾರದ ಬಾಳ್ವೆ

ಅಶೋಕ ಹೊಸಮನಿ

ಯಾರನ್ನು ಕುರಿತು ಮಾತನಾಡಬೇಕೆಂದಿರುವೆ
ಗಟ್ಟಿಗೊಳಿಸಿಕೊ ದನಿಯ

ಯಾರ ಕರುಣೆಯ ಕಾಣಬೇಕೆಂದಿರುವೆ
ಗಟ್ಟಿಗೊಳಿಸಿಕೊ ಮನವ

ಯಾರನ್ನು ಕುರಿತು ಆಗ್ರಹವಾಗಬೇಕೆಂದಿರುವೆ
ಗಟ್ಟಿಗೊಳಿಸಿಕೊ ದನಿಯ

ಏನಿಲ್ಲವೆಂದರೂ ಪರಿತಪಿಸುತಿರುವೆ
ಗಟ್ಟಿಗೊಳಿಸಿಕೊ ಮನವ

ಯಾರನ್ನು ಕುರಿತು ವೃತ್ತವಾಗಿಸಿರುವೆ
ತಿರುವುಗಳಲ್ಲೇ ತಿರುಗಣಿ ಬಾವಿಗಳು
ಗಟ್ಟಿಗೊಳಿಸಿಕೊ ದನಿಯ

ಕಳಚಿಕೊ ಬಡಿವಾರದ ಬಾಳ್ವೆ
ಗಟ್ಟಿಗೊಳಿಸಿಕೊ ಮನವ


About The Author

Leave a Reply

You cannot copy content of this page

Scroll to Top