ಕಳಚಿಕೊ ಬಡಿವಾರದ ಬಾಳ್ವೆ

ಕಾವ್ಯಯಾನ

ಕಳಚಿಕೊ ಬಡಿವಾರದ ಬಾಳ್ವೆ

ಅಶೋಕ ಹೊಸಮನಿ

ಯಾರನ್ನು ಕುರಿತು ಮಾತನಾಡಬೇಕೆಂದಿರುವೆ
ಗಟ್ಟಿಗೊಳಿಸಿಕೊ ದನಿಯ

ಯಾರ ಕರುಣೆಯ ಕಾಣಬೇಕೆಂದಿರುವೆ
ಗಟ್ಟಿಗೊಳಿಸಿಕೊ ಮನವ

ಯಾರನ್ನು ಕುರಿತು ಆಗ್ರಹವಾಗಬೇಕೆಂದಿರುವೆ
ಗಟ್ಟಿಗೊಳಿಸಿಕೊ ದನಿಯ

ಏನಿಲ್ಲವೆಂದರೂ ಪರಿತಪಿಸುತಿರುವೆ
ಗಟ್ಟಿಗೊಳಿಸಿಕೊ ಮನವ

ಯಾರನ್ನು ಕುರಿತು ವೃತ್ತವಾಗಿಸಿರುವೆ
ತಿರುವುಗಳಲ್ಲೇ ತಿರುಗಣಿ ಬಾವಿಗಳು
ಗಟ್ಟಿಗೊಳಿಸಿಕೊ ದನಿಯ

ಕಳಚಿಕೊ ಬಡಿವಾರದ ಬಾಳ್ವೆ
ಗಟ್ಟಿಗೊಳಿಸಿಕೊ ಮನವ


Leave a Reply

Back To Top