ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಹೃದಯ ಶತ್ರು

ಪ್ರೊ ವಿಜಯಲಕ್ಷ್ಮಿಪುಟ್ಟಿ

ಒಮ್ಮೊಮ್ಮೆ ನನಗೆ
ನನ್ನ ಹೃದಯವೇ ಶತ್ರು
ನಿನ್ನ ನೆನಪ ಯಾಕೋ
ಇದೀಗ ಅತಿಯಾಗಿ
ಆಕಾಶವೇ ಕಳಚಿ
ಬಿದ್ದಂತೆ ನನಗೆ
ಸಿಗದಿರೆ ನೀ
ಪ್ರತಿ ದಿನದ ಕೊನೆಗೆ
ಭೂಕಂಪನ ಎದೆಯಲ್ಲಿ
ಕಂಪಿಸಿದೆ ಆಗಾಗ
ಒಮ್ಮೊಮ್ಮೆ ಸುನಾಮಿ
ತೀಡುವ ತಂಗಾಳಿ ಕೂಡ
ನಿನ್ನ ನೆನಪುಗಳು ಈಗೀಗ
ಸುಡುಸುಡು ಕೆಂಡ
ನಿಂತಲ್ಲಿಯೇ ನಾನು
ಬೇಗೆಯಲ್ಲಿ ಬೆಂದೆ
ನೆನಪಿನ ಬಿರುಗಾಳಿ
ನನ್ನೆದೆಯ ಸೀಳಿ
ಕಾಡುವ ನಿನ್ನ ವಿರಹ
ನನ್ನ ಹೆಗಲೇರಿ
ಇದೀಗ ಹೆಜ್ಜೆಹೆಜ್ಜೆಗೂ
ಬೇತಾಳ
ನೆನಪು. …

******************************

About The Author

Leave a Reply

You cannot copy content of this page

Scroll to Top