ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಮುಂಗಾರು ಮಳೆ

ವೀಣಾ ರಮೇಶ್

ಮುದ್ರೆಯೊತ್ತಿದೆ
ಮುಂಗಾರು
ಕೆನ್ನೆ ಮೇಲೆ
ಸುರುಳಿ ಸುಳಿದಾಡಿ
ಮುತ್ತುವ ಕುರುಳ
ಸಿಂಗಾರ
ಮುಂಗುರುಳಿನದೇ
ಸಂಚಾರ

ಹೆರಳು ಬಿಚ್ಚಿದೆ ಇಳೆ
ಮಳೆರಾಯನ ತುಂಟ
ಕಾರುಬಾರು
ಮುಗುಳು ನಗೆ ತುಟಿ
ಅಂಚಿನ ಕಿರುನಗೆ
ನನ್ನೆದೆಗೆ.ಹೂಬಾಣ
ಚೆಲ್ಲಾಟದ ಮಳೆಬಿಲ್ಲುಗಾರ

ಬಯಕೆಗಳ ಮೇಲೆ
ಬಣ್ಣದ ಚೀತ್ಕಾರ
ಮೈ ಮನಗಳ ಮೇಲೆ
ಪ್ರಥಮ ಚುಂಬನದ ದಾಳಿ
ಬಲೆ ಬೀಸುವ ಬೇಟೆಗಾರ

ಭೂರಮೇಯ ಎದೆಗೆ
ಚಲುವ ಚೆನ್ನಿಗನ
ಮುತ್ತಿನ ಹಾರ
ತಂಪೆರೆವ ಮಳೆರಾಯ

***************************

About The Author

Leave a Reply

You cannot copy content of this page

Scroll to Top