ರೈತ ಗಜಲ್

How Social Networks Are Helping Indian Farmers Hit By the Coronavirus  Lockdowns | Development | RESET.org

ಬೆಳೆದ ಬೆಳೆಗೆ ಈಗಲಾದರೂ ಬೆಲೆ ಬರುವುದೆಂದು ಕಾದಿದ್ದೇನೆ
ಕಷ್ಟ ಕೋಟಲೆ ಆಗಲಾದರೂ ಕಳೆವುದೆಂದು ನಿರೀಕ್ಷಿಸಿದ್ದೇನೆ

ಸಾಲ ಶೂಲವಾಗಿ ಪ್ರತಿಕ್ಷಣ ಇರಿದಿರಿದು ನರಳಿಸುತ್ತಲೇ ಇದೆ
ಕಂಡ ಕನಸುಗಳು ನನಸಾಗುವ ಕಲ್ಪನೆಯಲಿ ಮುಳುಗಿದ್ದೇನೆ

ಹದಿಹರೆಯದ ಮಗಳ ಕಂಗಳಲಿ ನೂರಾರು ಆಸೆ ಮಿಂಚುಗಳು
ಬಿಳಿಕುದುರೆಯ ರಾಜಕುಮಾರ ಆಗಮಿಸಲೆಂದು ಬಯಸಿದ್ದೇನೆ

ಗಾಜಿನ ಬಳೆ ತೊಟ್ಟ ಸಂಗಾತಿಯ ಬಡ ಕೈಗಳು ಅಣಕಿಸುತ್ತಿವೆ
ತಪ್ತ ಮನಕೆ ತೃಪ್ತ ಭಾವ ತುಂಬುವ ಘಳಿಗೆಗೆ ಹಾತೊರೆದಿದ್ದೇನೆ

ಬಾಳಹಾದಿಯ ಕಲ್ಲು ಮುಳ್ಳು ಬದಿಗೆ ಸರಿವ ಕಾಲ ಬರಲಿ ಹೇಮ
ನೋವು, ಸಂಕಟಗಳ ಭೂತ ನೇಪಥ್ಯ ಸೇರಲೆಂದು ಹಂಬಲಿಸಿದ್ದೇನೆ

***********************************************

ಎ . ಹೇಮಗಂಗಾ

Leave a Reply

Back To Top