ಒಂದು ಕವಿತೆ

ಕವಿತೆ

ಒಂದು ಕವಿತೆ

ಡಾ.ಶಿವಕುಮಾರ ಮಾಲಿಪಾಟೀಲ

Abstract Earth Art #6991627

ದ್ವೇಷದಿಂದ ಭೂಮಿ ಮೇಲೆ
ಗೆದ್ದೋರು ಯಾರಿಲ್ಲ
ಆದರೂ ಒಬ್ಬರನೊಬ್ಬರು
ಪ್ರೀತಿಸೋದು ಕಲಿತಿಲ್ಲ

ಯುದ್ದದಿಂದ ಗೆದ್ದ ಕೋಟೆ
ಒಂದು ಉಳಿದಿಲ್ಲ
ಆದರೂ ಒಗ್ಗಟ್ಟಾಗಿ
ಬಾಳೋದು ಕಲಿತಿಲ್ಲ

ಎಲ್ಲ ಉಟ್ಟು ಇಲ್ಲೆ ಬಿಟ್ಟು
ಹೋಗುವುದು ಅರಿತಿಲ್ಲ
ಎಲ್ಲ ಮಾಯೆಯ ಬೆನ್ನು
ಬಿದ್ದು ಹೊರಗೆ ಬರುತಿಲ್ಲ

ಜಾತಿ ಮತದ ಗಡಿ ಮೀರಿ
ಮನುಜರಾಗತಿಲ್ಲ
ಶತ ಶತಮಾನ ಕಳೆದರೂ
ಮಾನವೀಯತೆ ಒಪ್ಪಲಿಲ್ಲ

ಶರಣ ಸಂತರ ಶರೀಫರ ಮಾತು ಮನಸಿಗೆ ನಾಟಲಿಲ್ಲ
ಅಜ್ಞಾನದ ಸಂತೆಯಲ್ಲಿ
ಬಿದ್ದು ಒದ್ಯಾಡೋದು ತಪ್ಪಲಿಲ್ಲ

ಮಾಡಿದ ಪಾಪ ಬೆನ್ನಿನ ಹಿಂದೆ ಅನುಭವಿಸಲೇ ಬೇಕಲ್ಲ
ಹೇಗೋ ಬದುಕಿ ಪಾರಾಗಲೂ
ಆ ದೇವರು ಬಿಡೊದಿಲ್ಲ

ಜೀವ ದೇವರ ಕೊಟ್ಟ ಪ್ರಸಾದ
ಅರಿಯಬೇಕಲ್ಲ
ಅರಿಷ್ಡ್ವರ್ಗಗಳ
ಗೆಲ್ಲೋದು ಕಲಿಯಬೇಕಲ್ಲ

ಶ್ರೇಷ್ಠ ಮಾನವನ ಜನ್ಮ
ಹಾಳಾಗಿ ಹೋಗಬಾರದಲ್ಲ
ಪ್ರೀತಿಯಿಂದ ಭೂಮಿನೇ
ಸ್ವರ್ಗ ಮಾಡಬಹುದಲ್ಲ?

ಮತ್ತೊಂದು ಜನ್ಮ ನಮಗೆ
ಯಾರಿಗೂ ಬೇಕಿಲ್ಲ
ಈ ಜನ್ಮವನ್ನೆ ಸಾರ್ಥಕ
ಮಾಡಿಕೊಂಡರೆ ಸಾಕಲ್ಲ?

********************************

Leave a Reply

Back To Top