ಸ್ಥಿತಿ

ಕವಿತೆ

ಸ್ಥಿತಿ

ಸುರೇಖಾ. ಜಿ . ರಾಠೋಡ.

ರಾಮ ಹುಟ್ಟಿದ್ದು
ಸೀತೆಯನ್ನು ಪರೀಕ್ಷಿಸಲು
ಅನಿಸುತ್ತದೆ
ಸೀತೆ ಹುಟ್ಟಿದ್ದು
ರಾಮನ ಪರೀಕ್ಷೆಗೆ
ಒಳಪಡಲು ಅನಿಸುತ್ತದೆ

ಆದರೆ….
ಇಂದಿನ ಸೀತೆಯರು
ಇಂದಿನ ರಾಮರಿಗೆ
ಪ್ರಶ್ನಿಸಬೇಕಾಗಿದೆ
ಪ್ರತಿಯೊಂದು ದೌರ್ಜನ್ಯದ ಕುರಿತು

ವಿನಾಕಾರಣ
ಸಹಿಸುವುದಿಲ್ಲ
ಅಸಮಾನತೆ, ದೌರ್ಜನ್ಯವನೆಂದು

ಕೇಳಬೇಕಿದೆ ಇಂದಿನ
ಸೀತೆಯರು
ಸಮಾನತೆ, ಸ್ವಾತಂತ್ರ್ಯ ಇತ್ಯಾದಿ
ನಮಗೂ ಬದುಕುವ,
ಅನಿಸಿದ್ದು ಹೇಳುವ
ಸ್ವಾತಂತ್ರ್ಯ ವಿದೆ ಎಂದು

ಹೇಳಬೇಕಿದೆ ಇಂದಿನ
ರಾಮರಿಗೆ
‘ನೀವು ರೂಪಿಸಿ ಕೊಟ್ಟ ಸಿದ್ದ ಮಾದರಿ ಸೀತೆಯರಲ್ಲವೆಂದು’

ಹೇಳಬೇಕಿದೆ ಬಾಬಾ ಸಾಹೇಬ್ ಅಂಬೇಡ್ಕರ್
ರೂಪಿಸಿದ ಸಂವಿಧಾನದಂತೆ
ನಡೆಯುತ್ತೆವೆಂದು
ಹೇಳಬೇಕಿದೆ, ತಿಳಿಸಬೇಕಿದೆ,
ಅರಿವು ಮೂಡಿಸಬೇಕಿದೆ
ಇಂದಿನ ಸೀತೆಯರು.

**********************

Leave a Reply

Back To Top