ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಯಾತ್ರೆ

ರಾಜೇಶ್ವರಿ ಚನ್ನಂಗೋಡು

ಮುಗಿವಾಗ ನೀನು
ನನ್ನೆದೆ ಧುತ್ತಂದು
ನಿಂದು
ಮುನ್ನಡೆದಿದೆ.
ಎದೆಗಿನ್ನೇನು ದಾರಿ?
ಇನ್ನೆಷ್ಟು ಮಂದಿ ನನ್ನವರು
ನನ್ನ ನಾನಾಗಿಸಿದವರು
ಹೋದಾಗಲೂ ಹೀಗೇ ಮುನ್ನಡೆಯುತಿರುವುದು…
ಅರ್ಥಹೀನವೀ ಯಾತ್ರೆ
ಹಿಂದಿದ್ದ ಸುಖವನೆಲ್ಲ ಬಿಟ್ಟು ಮುನ್ನಡೆಯಲೇ ಬೇಕಾದ ಯಾತ್ರೆ
ಅಂದವ ಹುಡುಕಿ ಚಂದವ ಹುಡುಕಿ
ನಡೆದಷ್ಟೂ ಹಿಂದಿನಂದುಗಳೇ
ನೀನಿದ್ದಾಗಿನ ಅವರಿದ್ದಾಗಿನಂದುಗಳೇ
ಸೊಗಸೆಂದರಿತೂ
ಮುಂದಡಿಯಿಡುವ ಯಾತ್ರೆ
ನಾಳೆ ಇವನೂ ಅವಳೂ ಇಲ್ಲದ
ಕಂದರಗಳಿಹವೆಂದರಿತೂ
ನಿಲ್ಲಿಸಲಾಗದ ಯಾತ್ರೆ
ಬೆಳಕಿತ್ತ ನೀನಾರಿದಾಗ
ಇನ್ನಾರೂ ಆರುವ ಮುನ್ನ
ನಾನಾರಿದರೇ ಚೆನ್ನ
ವೆಂದನಿಸುವ ಯಾತ್ರೆ
ಹೇಗೆ ಕಲ್ಪಿಸಿಕೊಳಬೇಕು?
ಯಾಕೆ ನಡೆಯಲೆ ಬೇಕೀ ಯಾತ್ರೆ?

About The Author

Leave a Reply

You cannot copy content of this page

Scroll to Top