ಕಾವ್ಯಯಾನ

ಆಯ್ಕೆ

ಪವಿತ್ರ ಎಂ.

‘ಮರ ಬೆಳೆಸಿ’ಧರೆ ಉಳಿಸಿ
ಕೂಗುತಿದೆ ಜಾಹಿರಾತು.
ಉರುಳಿಸಿ ಅಗಲಿಸಿ
ಡಾಂಬರರಿಸಿ ಪೋಷಿಸುತಿದೆ
ನಿಯಮದಾದೇಶ.
ಅದು ಮತಿಗಾಯ್ಕೆ ಅಗ್ನಿಪರೀಕ್ಷೆ
ಜಾಣ್ಮೆಗಾಯ್ಕೆ ವಿವೇಕಕಾಯ್ಕೆ
ಮಗುವ ಚಿವುಟಿ ಲಾಲಿ ಹಾಡ್ವ
ಕವಲದಾರಿ ಪಯಣ!
ತೋರಿಕೆಗೇಕೆ ಧೋರಣೆ?
ಜನರಾಯ್ಕೆ ನೀನು
ಕಾಯ್ವ ಹೊಣೆ ನಿನ್ನದೇ.

***********************

Leave a Reply

Back To Top