ವಾರದ ಕವಿತೆ

ಹುಡುಗ ನೀ ಸಾಯಬೇಕಿತ್ತು

ಲಕ್ಷ್ಮೀ ಪಾಟೀಲ್

(ಶ್ರೀ ಕೆ ವಿ ಅಯ್ಯರ್ ಬರೆದಿರುವ “ರೂಪದರ್ಶಿ “
ಕಾದಂಬರಿಯಲ್ಲಿ ಬರುವ ” ಆರ್ನೆಸ್ಟ್” ನನ್ನು ಕುರಿತ ಕವಿತೆಯಿದು
)

ಹೊಟ್ಟೆಯಲ್ಲೇ ಅಪ್ಪ ಅಮ್ಮರಿಗಾಗಿ
ಗೋರಿಗರಸ ಎಬ್ಬುವಾಗ ಹಾಳಮಣ್ಣ ಹಾಸಿನಲ್ಲಿ
ಭ್ರಮೆಯ ಬದುಕು ಬಿಕ್ಕುವ ಮುನ್ನ
ಹುಡುಗ ನೀ ಸಾಯಬೇಕಿತ್ತು

ಅಜ್ಜಿಯ ಪೊರೆವ ಬಾಂಧವ್ಯದಲ್ಲಿ
ಬದುಕನ್ನು ಒದ್ದೆಯಾಗಿಸಿಕೊಳ್ಳುವಾಗ
ಅವಳ ನೋವಿಗೆ ಬಾಲ ಕನಸುಗಳತೇಪೆ ಜೋಡಿಸುವಾಗ ದೂರ ದುರಂತ ಕಾಣದ ಮುನ್ನ
ಹುಡುಗ ನೀ ಸಾಯಬೇಕಿತ್ತು

ಕೈಯಾಡಿಸಿದ ಕೈಗೆ ಬಾಲ ಭಾವದ ಹಾಲು ಗೆಣ್ಣೆ
ಅಪರೂಪದ ಬಾಲ ಯೇಸುವಿನ ವಿರಾಜತೆ
ಮೈಕಲ್ ಏಂಜಲೋನ ದಿವ್ಯ ಅಪ್ಪುಗೆಯ ತಂಪೇ
ಅಮರ ಶಿಲ್ಪಿಯ ನಿರೀಕ್ಷೆಯ ಕಕ್ಷೆ ಯಲ್ಲಿ ಅಪರಂಜಿಯಾದ ಪ್ಲಾರೆನ್ಸ್ ಪಟ್ಟಣದ ಜಾಜಿಯೇ
ಸಂದ ಭಾಗ್ಯ ಸರಿದು ಹೋಗುವ ಮುನ್ನ
ಹುಡುಗ ನೀ ಸಾಯಬೇಕಿತ್ತು

ಒಡೆಯನರಮನೆಯಲ್ಲಿ ಸರ್ಪ ಪೀಠದ ಉತ್ತರಾದಿಕಾರ ವಿಸಂಚಿನ ಮಜಭೂತ ಅಮಲಿನಲ್ಲಿ ನಿನ್ನ ಕೌಮಾರ್ಯ
ಯೌವ್ವನವೆಲ್ಲ ಜಾದುವಾಗುವ ಮುನ್ನ
ಹುಡುಗ ನೀ ಸಾಯಬೇಕಿತ್ತು

ಲೀಸಾ ನನ್ನೆಟ್ಟಿ ದಂಪತಿಗಳ ಆಸರೆಯಲ್ಲಿ
ಹದುಳಿದ್ದೆ ಆ ಕ್ಷಣ ಕಾಲೋಂದು ಕೈಯೊಂದು ಕಡೆ
ಎಳೆದು ಭೀಕರ ಆವಾಂತರಗಳಲ್ಲಿ ಸಿಗಿತ
ಅದೇ ದಿವಾಳಿಯನ್ನು ಪಥ್ಯವೆಂದು ನುಂಗುವ ಮುನ್ನ ಹುಡುಗ ನೀ ಸಾಯಬೇಕಿತ್ತು

ಹೆಗ್ಹೇಗೋ ತಿರುಗಾಡಿ ಗ್ಯಾರಿಬಾಲ್ಡಿಯ ವ್ಯಂಗ್ಯನಾಗಿ ಬದುಕ ಪರದೇಶಿಯಾದ ಹುಡುಗ
ಜಗತ್ತು ಪ್ರೀತಿಸದ ನತದೃಷ್ಟ ತಲೆ ಎದೆ ಸೀಳಿದ
ಜುದಾಸನ ಭಂಗಿಯಲ್ಲಿ ಮತ್ತದೇ ಮೈಕಲ್ ನ
ಅಪೇಕ್ಷಿತ ಅನುವರ್ತಿ ಬಾಲಯೇಸುವಿಗೆ ರೂಪದರ್ಶಿ ಅರ್ನೆಸ್ಟ ಈಗ ಜುದಾಸನ
ತಲೆಹಿಡುಕಕ್ಕೂ ಮಾದರಿ !
ಜುದಾಸ್ ಅಲ್ಲನೆಂಬ ನಿರ್ಲಿಪ್ತತೆ
ಮತ್ತದೇ ಹಸುಗೂಸಿನ ಮುಗ್ಧತೆ
ನಿಂತ ನೆಲ ಬಿರಿದಂತೆ ಅಟ್ಟವೇ ಕುಸಿದಂತೆ
ದೇವಶಿಲ್ಪಿಯ ಅಂಗೈಯಲ್ಲಿ ಜೀವಬಿಟ್ಟ ಮಗು
“ಪಾಪದಿಂದ ದೂರವಿರು ಪಾಪಿಯಿಂದಲ್ಲ “
ಏಸುವಿನ ದಿವ್ಯಧ್ವನಿ ಮೊಳಗುವ ಕಾಲ
“ತಂದೆಯೇ ಈತ ಪಾಪದಿಂದ ದೂರ ನಿಷ್ಪಾಪಿ ಮುಗ್ದ ನಿನ್ನದೇ ರೂಪ ” ಅಮರಶಿಲ್ಪಿಯ ಪ್ರಾರ್ಥನೆ ಮೈಕಲ್ ತೊಡೆಯಲ್ಲೀಗ” ಶಿಲುಬೆಯ ಯೇಸು” ಸಮಾನರು ಸಾವಿನಲ್ಲೀಗ
ಅದೆಂತಹುದೋ ಅಮರತ್ವ ದಿವ್ಯತ್ವದ ಸೆಳೆತ

ಇತ್ತಿತ್ತಲಾಗಿ ಸಾಯಬಾರದೆಂದುಕೊಂಡಿದ್ದ
ಹುಡುಗ ನೀ ಏನೇ ಹೇಳು…..
ಸಾಯುವುದಕ್ಕಾಗಿಯೇ ಹುಟ್ಟಿದ್ದ ನೀನು ಸಾಯಲೇಬೇಕಾಗಿತ್ತು ಹುಡುಗ ನೀ
ಸಾಯಲೇ ಬೇಕಾಗಿತ್ತು
ಘನಘೋರ ಬದುಕಿನಿದಿರಲ್ಲಿ
ಸಾವೆಂಬುದೆಷ್ಟು ಘನ ಅರ್ನೆಸ್ಟ್
ಏಸುವಿನಂತೆ ಮೈಕಲ್ ನಂತೆ ದಿವ್ಯಾತ್ಮನಾಗಲಿಲ್ಲಿಸಾಯಬೇಕಾಗಿತ್ತು ನೀನೀಗಅಮರನಾಗಬೇಕಾಗಿತ್ತು

************************

2 thoughts on “ವಾರದ ಕವಿತೆ

  1. ರೂಪದರ್ಶಿ ಒಂದು ಸಣ್ಣ ಎಳೆ ಹಿಡಿದುಕೊಂಡು ಬರೆಯಲಾದ ಒಂದು ಕಾದಂಬರಿ. ಕರುಣಾ ರಸಪೂರ್ಣವಾಗಿರುವ ಕತೆಯನ್ನು ಒಳಗೊಂಡಿದೆ. ಮಾನವ ಪ್ರಯತ್ನ ಮೀರಿಯೂ ಕಾಣದ ಕೈ ನಡೆಸುವ ಆಟದ ಮೇಲೆ ಚಿತ್ರಿತವಾಗಿರುವ ಈ ಕೃತಿ ಮಾನಸಿಕ ದೂರ ಕಾಯ್ದುಕೊಳ್ಳದೇ ಓದುವ ಓದುಗರಿಗೆ ತೀವ್ರ ಆಘಾತ, ದುಃಖ ತರುವಂತದ್ದು. ಇಡೀ ಕತೆಯನ್ನು ನಿಮ್ಮ ಕವಿತೆಯವ್ಲಿ ತಂದಿಡುವ ಪ್ರಯತ್ನ ಚೆನ್ನಾಗಿ ಮಾಡಿರುವಿರಿ. ಅಭಿನಂದನೆಗಳು.

  2. ಧನ್ಯವಾದಗಳು ವಸುಂಧರಾ ನಿಮ್ಮ ಪ್ರತಿಕ್ರಿಯೆಗೆ ಸಂತೋಷವಾಯಿತು ನಿಮ್ಮ ಕವಿತೆಗಳೂ ತುಂಬಾ ಚೆನ್ನಾಗಿರುತ್ತವೆ ನಾನು ಅನಾಮಿಕಳಾಗಿ ಪ್ರತಿಕ್ರಿಯಿದ್ದೇನೆ

Leave a Reply

Back To Top