Day: December 3, 2020

ಶರದದ ಹಗಲಲ್ಲಿ ಆಷಾಢದ ಮೋಡಗಳು…

ಶರದದ ಹಗಲಲ್ಲಿ ಆಷಾಢದ ಮೋಡಗಳು… ಎಂ.ಆರ್.ಕಮಲ. ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ. ಆಷಾಢದ […]

ಶರದದ ಹಗಲಲ್ಲಿ ಆಷಾಢದ ಮೋಡಗಳು…

ಶರದದ ಹಗಲಲ್ಲಿ ಆಷಾಢದ ಮೋಡಗಳು… ಎಂ.ಆರ್.ಕಮಲ ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ  ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ. ಆಷಾಢದ […]

ಭಾವಲಹರಿ

ಲಹರಿ ಭಾವಲಹರಿ ರಶ್ಮಿ.ಎಸ್. ಸೌಹಾರ್ದ, ಸಹಬಾಳ್ವೆ ಮುಂತಾದ ಪದಗಳನ್ನು ನಾವೆಲ್ಲಿಯೂ ಓದಲಿಲ್ಲ. ವಿಶ್ಲೇಷಿಸಲಿಲ್ಲ. ಆದರೆ ಬಾಳಿದೆವು. ಆ ಬದುಕಿನ ಜೀವದ್ರವ್ಯ ಮೊಮ್ಮಾ.. ಜಿಯಾ ಸುಲ್ತಾನಾ. ಅವರ ನೆನಪಿನಲ್ಲಿ ಬರೆದ ಬರಹವಿದು.. ನಿಮ್ಮ ಉಡಿಗೆ.. ನೀವಷ್ಟು ಅವರ ಪ್ರೀತಿ ಉಣ್ಣಲಿ ಎಂದು… …………………………….. ಗಾಬರಿಯಾಗ್ತದ. ನಾವೆಲ್ಲ ಮೊಮ್ಮ ಇಲ್ಲದೇ ಬದುಕುತ್ತ್ದಿದೇವೆ. ಇನಿದನಿಯ, ವಾತ್ಸಲ್ಯ ತುಂಬಿ ಕರೆಯುವ ಮೊಮ್ಮ . ಸಾಯಿರಾಬಾನುವಿನ ಅಕ್ಕನಂತೆ ಕಾಣಿಸುತ್ತ್ದಿದ್ದ… ನಡೆದರೆ ದೇಹವೇ ಭಾರವೆಂದೆನಿಸುತ್ತ್ದಿದ ದೀರ್ಘದೇಹಿ. ಮುಟ್ಟಿದರೆಲ್ಲಿ ಕೊಳೆಯಗುವರೋ ಎಂಬ ದಂತವರ್ಣದವರು. ಮೊಮ್ಮ  ಇಲ್ಲ..!  ನಮ್ಮ […]

ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ

ಲೇಖನ ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ ಅಕ್ಷತಾ ರಾಜ್ ಪೆರ್ಲ         “ಆಂಟೀ ಸ್ವಲ್ಪ ನಿಲ್ಲಿ” ಗೇಟಿನ ಬಳಿಯೇ ಪುಟಾಣಿಯೊಬ್ಬಳು ನಿಲ್ಲಿಸಿದಾಗ “ಯಾಕೆ?” ಕೇಳಿದೆ. “ನಿಮ್ದು ಬಿಸಿ ನೋಡ್ಲಿಕ್ಕಿದೆ” ಮುದ್ದಾಗಿ ಹೇಳುತ್ತಾ ಪಟಾಕಿ ಸಿಡಿಸುವ ಪಿಸ್ತೂಲೊಂದನ್ನು ನನ್ನ ಹಣೆಗೆ ತೋರಿಸಿದಳು. “ಬಿಸಿ ಇದ್ರೆ ಏನ್ಮಾಡ್ತೀಯಾ?” ಮತ್ತೆ ಕೇಳಿದೆ. “ಅಲ್ಲಿಗೆ ಹಾಕ್ತೇನೆ” ಅವಳು ತೋರಿಸಿದ ದಿಕ್ಕಿನತ್ತ ನೋಡಿದೆ, ಆಗಷ್ಟೇ ತನ್ನ ಮರಿಗಳೊಡನೆ ಸೇರಿಕೊಂಡ ಕೋಳಿಗೂಡು ಕಂಡಿತು. ಮನದಲ್ಲೇ ನಗುತ್ತಾ “ಅದ್ಯಾಕೆ ಹಾಗೆ?ನನ್ನ ಅಲ್ಲೇ ಯಾಕೆ ಹಾಕ್ಬೇಕು?” ಗಲ್ಲ ಚಿವುಟಿ […]

ಹಾಯ್ಕುಗಳು

ಹಾಯ್ಕುಗಳು ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಗಹಗಹಿಸಿದೆನರನರವು ನಿತ್ರಾಣವೈಧ್ಯನ ಬಾಣ ಹಾಳಾದ ಗೋರಿಕೂಗಿ ಕರೆದಿದೆ ಕವಿಯಕಾವ್ಯ ಗೀಚಲು. ಗೋರಿಯ ಮೇಲೆಕೊನೆಯ ದಿನ-ಹಚ್ಚಿದಕಣ್ಣೀರ ದೀಪ. ಹಸಿದ ಹೊಟ್ಟೆಅವ್ವ-ಕಾವಿನ ಜೀವತುಂಬಿದೊಲವು. ನಿದ್ರೆಯಲೆದ್ದುರುದ್ರ ಲೀಲೆ ಕುಣಿತಕಾಂಚಣ ರಾಣಿ ಗಾಳಿಯ ಗುಟ್ಟುಬದುಕಿನಡಿ ಹೇಡಿಜೊಳ್ಳಿನ ಸುಳ್ಳು ಹೊನ್ನ ಬಳ್ಳಿಹೊತ್ತ ಹಾದಿಯ ಬುತ್ತಿಕನ್ನಡ ಪದ. ಒಂದೇ ‘ಎನಲು’ಗುಡಿ ಚರ್ಚು ಮಸೀದಿನಲಿವು ನಾಡು. ಎಳೆ ಹಸುಳೆತೊದಲು ನುಡಿದವುಮಾಗೀ-ಚಳಿಗೆ ಶಿಶಿರ ಋತುಭೂದೇವಿ-ಹೆಡಿಗೆಹುಗ್ಗಿ ಹೋಳಿಗೆ. ಮುಗುದೆ ‘ಒಲ್ಲೆ’ಮೂಕ ಮಾತಿನ ಎದಿಗೆನಲ್ಲನುರಿಗಾವು ಎಲೆಲೆ-ಬಾಳುಹಿತ ಮಿತಕೆ ಸೋಲುನೆಲೆ-ನೆರಳು ಕಾಗೆ ಗೂಗೆ ಬಾವ್ಲಿಬೇತಾಳ-ತಾಳಮೇಳರಾಜಕೀಯ. ಒಡಲೊಳಗಿದೆಕೊಳೆತನಾರು ಬೆಳೆಕಲ್ಮಶ […]

ಕುಸುಮಾಂಜಲಿ

ಕವಿತೆ ಕುಸುಮಾಂಜಲಿ ಅಭಿಜ್ಞಾ ಪಿ ಎಮ್ ಗೌಡ ಕುಸುಮವು ನಗುತಿರೆನಸುಕಿನ ವೇಳೆಯುಮುಸುಕನು ತೆರೆಯುತ ನಲಿಯುತಿದೆಕಸವರ ವರ್ಣದಿಜಸದಲಿ ಬೀಗುತರಸಮಯ ಸೃಷ್ಟಿಸಿ ಜೀಕುತಿದೆ|| ಕುಹಕವ ಕೇಳದೆಕಹಿಯನು ಮರೆಯುತಮಹಿಯಲಿ ಹಾಸವ ಚೆಲ್ಲುತಿದೆಸಹನೆಯ ದಳವದುಸಹಿಸುತ ಬಿಸಿಲನುಬಹಳಾಕರ್ಷಣೆ ಗಳಿಸುತಿದೆ|| ಶುದ್ಧತೆ ಭಾವವುಬದ್ದತೆಯಿಂದಲೆಸಿದ್ಧತೆ ಹೊಂದುತ ಪಸರಿಸಿದೆಮುದ್ದಿನ ಹೂವಿದುಮದ್ದಲು ಮುಂದಿದೆಸದ್ದನು ಮಾಡದೆ ನಗುತಲಿದೆ|| ಭ್ರಾಂತಿಯ ತೊಲಗಿಸಿಶಾಂತಿಯ ಹರಡುವಕಾಂತಿಯು ದೇವರ ಮುಡಿಯಲ್ಲಿಕಾಂತನು ಕೊಟ್ಟಿಹಕಾಂತೆಗೆ ಸುಮವನುಕಾಂತಿಯು ಗುಂದದೆ ಹೊಳೆಯುತಿದೆ|| ನೋಡುವ ಕಣ್ಣಿಗೆಮಾಡಿದೆ ಮೋಡಿಯಕಾಡುತ ನಿತ್ಯವು ಕಚಗುಳಿಯಬೇಡುವ ಮನಸಿಗೆಕೇಡನು ಬಯಸದೆಬಾಡುವ ನಿರ್ಮಲ ಕುಸುಮವಿದು|| **********************************************

ತಕ್ಕ ಪಾಠ

ಅನುವಾದಿತ ಕವಿ ತಕ್ಕ ಪಾಠ ತೆಲುಗಿನಲ್ಲಿ: ಆದೋನಿ ಬಾಷಾ ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು. ರೈಲು ಚಲಿಸುತ್ತಿದ್ದ ಹಾಗೆ ಒಬ್ಬ ವ್ಯಕ್ತಿ ಬೇಗಬೇಗನೇ ನಾನಿದ್ದ ಡಬ್ಬಿಯೊಳಗೆ ಹತ್ತಿದ. ಅಲ್ಲಿಯವರೆಗೆ ಅದರಲ್ಲಿ ನಾನೊಬ್ಬನೇ ಪ್ರಯಾಣಿಕ. ಜೊತೆ ಸಿಕ್ಕಿತೆಂದು ಸ್ವಲ್ಪ ನಿರಂಬಳವಾಯಿತು. ಬೆಳೆಗ್ಗೆಯಿಂದ ಕುಂಭದ್ರೋಣ ಮಳೆ ! ಈ ಅಕಾಲ ಮಳೆಗಳಿಂದಾಗಿ ರೈಲುಗಳೆಲ್ಲಾ ಖಾಲಿಯಾಗಿ ತಿರುಗುತ್ತಿದ್ದವು. ನಾನೊಬ್ಬ ನಿವೃತ್ತ ಪೋಲೀಸ್ ಅಧಿಕಾರಿ. ಅನಂತಪುರದಲ್ಲಿ ನಿವೃತ್ತಿ ಪಡೆದು, ದೆಹಲಿಯಲ್ಲಿದ್ದ ನನ್ನ ಮಗನ ಹತ್ತಿರ ನನ್ನ ವಿಶ್ರಾಂತ ಜೀವನವನ್ನ ನಡೆಸುತ್ತಿದ್ದೇನೆ. ಪ್ರತೀ ವರ್ಷ […]

ಹೈಕುಗಳು

ಹೈಕುಗಳು ಕೆ.ಸುನಂದಾ. ಬಾನಲ್ಲಿ ನಕ್ಕಶಶಿ ; ಕಂಡು ತಂಪಾಯ್ತುನೊಂದ ಮನಕ್ಕೆ* ತಳಮಳವತಾಳೆನಾ ; ಕೇಳು ಸಖಿಯಾರಿ ಸುಂದರಿ* ಅಡವಿಯಲ್ಲಿಬಿರಿದ ಮಲ್ಲೆ ಕಾಯ್ವೆನೀ ಯಾರಿಗಿಲ್ಲಿ* ವೃಕ್ಷಗಳಲ್ಲಿಸಾಕ್ಷಾತ್ ದೇವನಿಹನುಎಲ್ಲರ ಭಾಗ್ಯ * ಕಾಣೋ ಕಣ್ಣಿಗೆಸಂಭ್ರಮ ; ಈ ನಿಸರ್ಗಬೇಕು ಜೀವಿಗೆ* ಸೃಷ್ಟಿಯೇ ದೈವತಿಳಿದಂತೆ ಇರುವನಮ್ಮಂತೆ ಅವ* ಪ್ರೀತಿಯ ಗೂಡುಅನುಭವಿಸಿ ಹಾಡುಎನಿಲ್ಲ ನೋಡು ************************************

ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು

ಕನಕ ಜಯಂತಿಯ ವಿಶೇಷ ಲೇಖನ ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು ಡಾ.ಸುಜಾತಾ ಸಿ. ವಿಜಯಪುರ ಕನ್ನಡ ನಾಡು ಕಂಡ ಶ್ರೇಷ್ಠ ಭಕ್ತ ಕವಿ ದಾರ್ಶನಿಕ ಸಮಾಜ ಸುಧಾರಕ ಮಹಾಮಾನವತಾವಾದಿ ಕನಕದಾಸರು. ವರ್ಗ ವರ್ಣಗಳ ಸಂಘರ್ಷದಲ್ಲಿ ನಲುಗುತ್ತಿದ್ದ ಸಮಾಜವನ್ನು ತೆರೆದ ಹೃದಯ ಮತ್ತು ಮನಸ್ಸುಗಳಿಂದ ಕಂಡು ವರ್ಗ ವರ್ಣರಹಿತ ತಳಹದಿಯ ಮೇಲೆ ನಿರ್ಮಿಸಬೇಕೆಂಬ ಅವರ ಆಶಯವಾಗಿತ್ತು. ಇಹಲೋಕದ ಜಂಜಾಟಗಳಿಂದ ತತ್ತರಿಸಿದ ಮನುಕುಲಕ್ಕೆ, ವಿಶ್ವಮಾನವ ಸಮತಾವಾದದ ಸಿದ್ಧಾಂತವನ್ನು ಕೀರ್ತನೆಗಳ ಮೂಲಕ ಬೋಧಿಸಿದರು. ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ಚಾತುರ್ವರ್ಣ […]

ಅಂಕಣ ಬರಹ ಸಾಮಾನ್ಯ ಸಂಗತಿಗಳಲ್ಲೇ ಅಸಾಮಾನ್ಯ ಬೆರಗನ್ನು ಹಿಡಿದಿಡುವ ಉಮಾ ಮುಕುಂದರ ಕವಿತೆಗಳು . ಸಂಗಾತಿಗಾಗಿ ಈ ಅಂಕಣವನ್ನು ಆರಂಭಿಸಿದಾಗ ಫೇಸ್ಬುಕ್ಕಿನ ಕವಿತೆಗಳ ವಿಶ್ಲೇಷಣೆ ಅಷ್ಟೇನೂ ಕಷ್ಟವಾಗದು ಮತ್ತು ನನ್ನ ಇಷ್ಟೂ ದಿನದ ಕಾವ್ಯದ ಓದು ಅದನ್ನು ಪೊರೆಯುತ್ತದೆಂದೇ ಅಂದುಕೊಂಡಿದ್ದೆ. ಆದರೆ ಫೇಸ್ಬುಕ್ಕಿನಲ್ಲಷ್ಟೇ ಮೊದಲು ಪ್ರಕಟಿಸಿ ಆ ಮಾಧ್ಯಮದ ಮೂಲಕವೇ ಬೇರೆಡೆಯೂ ಖ್ಯಾತರಾದ ಅನೇಕ ಹೆಸರುಗಳು ಆನಂದ ಮತ್ತು ಆಶ್ಚರ್ಯವನ್ನು ಉಂಟು ಮಾಡುವುದರ ಜೊತೆಗೇ ಈವರೆವಿಗೂ ಪತ್ರಿಕೆಗಳಲ್ಲಿ ಪ್ರಕಟಿಸದೆಯೂ ತಮ್ಮ ಆಳದನುಭವಗಳಿಗೆ ಕವಿತೆಯ ರೂಪ ಕೊಡುವುದಕ್ಕಷ್ಟೇ ಸೀಮಿತವಾಗದೇ […]

Back To Top