ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ Read Post »
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ Read Post »
ಲೇಖನ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ ಟಿಶ್ಯೂ ಪೇಪರ್ ಬಳಸಬೇಕೆ? ಬೇಡವೇ?…. ಒಂದು ಲೆಕ್ಕಾಚಾರ- ಯಾವುದೇ ಸಮಾರಂಭಕ್ಕೆ ಹೋಗಲಿ ಅಲ್ಲಿ ನಾವು ಊಟದ ತಟ್ಟೆಯ ಜೊತೆಗೆ ಪಡೆಯುವ ಟಿಶ್ಯೂ ಪೇಪರನಿಂದ ತಟ್ಟೆಯನ್ನು ಒರೆಸಿ ಎಸೆದು ಮತ್ತೊಂದನ್ನು ಕೇಳಿ ಪಡೆಯುತ್ತೇವೆ. ಇನ್ನು ಹೋಟೆಲ್ಗಳಿಗೆ ಹೋದಾಗಲಂತೂ ಒಂದು ಬಳಸುವ ಕಡೆ ನಾಲ್ಕೈದು ಟಿಶ್ಯೂ ಪೇಪರ್ ಗಳನ್ನು ಬಳಸಿ ಇಡುತ್ತೇವೆ. ಮುಖದ ಮೇಲಿನ ಎಣ್ಣೆಯ ಪಸೆಯನ್ನು ಹೋಗಲಾಡಿಸಲು, ಧೂಳಿನ ಕಣಗಳನ್ನು ಹಾಗೂ ಬೆವರನ್ನು ಒರೆಸಿಕೊಳ್ಳಲು. ಟೇಬಲ್, ಲ್ಯಾಪ್ಟಾಪ್, ಡೆಸ್ಕ ಟಾಪ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳ ಮೇಲ್ಮೈಗಳನ್ನು ಸ್ವಚ್ಛಗೊಳಿಸಲು, ವಾಶ್ರೂಮ್ ಗಳಲ್ಲಿ ಹೀಗೆ ಹತ್ತು ಹಲವು ಕಡೆ ನಾವು ಕೇವಲ ಒಂದು ಬಾರಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಗಳನ್ನು ಬಳಸುತ್ತೇವೆ. ಬಳಸುವುದಕ್ಕಿಂತ ಬಿಸಾಡುವುದೇಹೆಚ್ಚಾಗಿದೆ. ಖರ್ಚಿನ ಬಾಬತ್ತು ಎಂದು ಇನ್ನೂ ಕೆಲ ಮನೆಗಳಲ್ಲಿ ಟಿಶ್ಯೂ ಪೇಪರ್ ದೈನಂದಿನ ಬದುಕಿನಲ್ಲಿ ಕಾಲಿಟ್ಟಿಲ್ಲ ನಿಜ ಆದರೆ ಕೆಲವರ ಮನೆಗಳಲ್ಲಿ ಈ ಟಿಶ್ಯೂ ಪೇಪರ್ಗಳನ್ನೇ ಬಹಳಷ್ಟು ಬಾರಿ ಬಳಸುತ್ತಾರೆ. ಈ ಹಿಂದೆಯೂ ನಾವು ಕಾರ್ಯಕ್ರಮಗಳಿಗೆ ಮದುವೆ ಮುಂಜಿ ಮುಂತಾದ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ಅತಿಯಾದ ಸ್ವಚ್ಛತೆಯ ಪರಿಕಲ್ಪನೆ ತೊಳೆದಿದ್ದೆಲ್ಲವೂ ಸ್ವಚ್ಛವಾಗಿಲ್ಲ ಎಣ್ಣೆಯ ಜಿಡ್ಡಿನಿಂದ ಕೂಡಿದೆ ಎಂಬ ಭಾವ ( ಅದು ಸ್ವಲ್ಪಮಟ್ಟಿಗೆ ನಿಜವು ಕೂಡ!) ಟಿಶ್ಯೂ ಪೇಪರ್ ಬಳಸಿ ತಟ್ಟೆಯನ್ನು ಒರೆಸಲು ಕಾರಣವಾಗುತ್ತದೆ. ಹಾಗಾದರೆ ಈ ಟಿಶ್ಯೂ ಪೇಪರ್ ಗಳನ್ನು ಬಳಸಬಾರದೇ ಎಂದು ಆಶ್ಚರ್ಯಸೂಚಕ ಧ್ವನಿಯಲ್ಲಿ ನಿಮ್ಮ ಪ್ರಶ್ನೆ ಬಂದರೆ ಪರಿಸರ ಪ್ರೇಮಿಗಳ ಉತ್ತರ ಹೀಗಿರುತ್ತದೆ…. ತೀರ ಅವಶ್ಯಕತೆ ಇದ್ದರೆ ಮಾತ್ರ ಬಳಸಿ ಎಂದು. ಅನವಶ್ಯಕವಾಗಿ ಟಿಶ್ಯೂ ಪೇಪರ್ ಗಳನ್ನು ಬಳಸುವ ಮೂಲಕ ಪರಿಸರವನ್ನು ಹಾನಿಗೊಳಿಸದಿರಿ ಎಂಬುದು ಅವರ ಕಳಕಳಿಯ ಮನವಿಯಾಗಿರುತ್ತದೆ. ಟಿಶ್ಯೂ ಪೇಪರ್ ಬಳಕೆಗೂ ಪರಿಸರದ ಹಾನಿಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಭಯಾನಕ ಸತ್ಯ ಕಣ್ಣಿಗೆ ಬೀಳುತ್ತದೆ. ನಮ್ಮ ದೇಶದಲ್ಲಿ ಈ ಹಿಂದೆ ಮರದಿಂದ ಬೇರೆಯಾಗಿ ಬಿದ್ದ ಕಟ್ಟಿಗೆಯ ತುಂಡುಗಳನ್ನು ಉರುವಲು ಮತ್ತಿತರ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಕಾಗದ ತಯಾರಿಕೆಗೆ ಶೇಕಡ 35ರಷ್ಟು ಕಟ್ಟಿಗೆಯನ್ನು ಬಳಸಲಾಗುತ್ತಿದೆ. ಅದರಲ್ಲೂ ಕಾಗದಕ್ಕಿಂತ ಹೆಚ್ಚಾಗಿ ಟಿಶ್ಯೂ ಪೇಪರ್ ಗಳ ತಯಾರಿಕೆಗೆ ಹೆಚ್ಚು ಬಳಸಲಾಗುತ್ತಿದೆ.ಪ್ರಾರಂಭದಲ್ಲಿ ಅಷ್ಟೇನೂ ಉತ್ತಮ ಗುಣಮಟ್ಟದ ಟಿಶ್ಯೂ ಪೇಪರ್ ಗಳು ಬರುತ್ತಿರಲಿಲ್ಲ. ಜನರ ಆಧ್ಯತೆ ಬದಲಾಗುತ್ತಾ ಹೋದಂತೆ ಅತ್ಯುತ್ತಮ ಗುಣಮಟ್ಟದ ಟಿಶ್ಯೂ ಪೇಪರ್ ಗಳು ಬೇಕು ಎಂಬ ಕಾರಣವನ್ನು ಒಡ್ಡಿಕಾಗದದ ಮರುಬಳಕೆಯನ್ನು ತಡೆಹಿಡಿದರು. ಅತ್ಯಂತ ನಯವಾದ ಮೇಲ್ಮೈಯುಳ್ಳ ಟಿಶ್ಯೂ ಪೇಪರ್ ಗಳು ತಯಾರಾಗತೊಡಗಿದವು. ಹೀಗೆ ತಯಾರಾಗುತ್ತಿರುವ ಟಿಶ್ಯೂ ಪೇಪರ್ ಗಳ ತಯಾರಿಕೆಗೆ ಅತ್ಯವಶ್ಯಕ ಮೂಲ ವಸ್ತುವಾಗಿ ಒಣಗಿದ ಮರದ ತುಂಡಿನ ಬದಲಾಗಿ ಹಸಿ ಮರವನ್ನು ಕಡಿದು ಬಳಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಪ್ರತಿದಿನ ಸುಮಾರು 27 ಸಾವಿರಕ್ಕೂ ಹೆಚ್ಚು ಮರಗಳನ್ನು ಕೇವಲ ಟಿಶ್ಯೂ ಪೇಪರ್ ತಯಾರಿಸಲು ಕಡಿಯಲಾಗುತ್ತಿದೆ. ಹೀಗೆ ಕಡಿಯುವ ಒಟ್ಟು ಮರಗಳ ಸಂಖ್ಯೆ ವರ್ಷಕ್ಕೆ ಸುಮಾರು ಒಂದು ಕೋಟಿಯಷ್ಟು. ಕೇವಲ ಟಿಶ್ಯೂ ಪೇಪರ್ ಗಳನ್ನು ತಯಾರಿಸಲು ಕೋಟಿ ಸಂಖ್ಯೆಯಲ್ಲಿ ಮರಗಳನ್ನು ಬಳಸಲಾಗುತ್ತಿದೆ ಎಂದರೆ ನಾವು ಅವುಗಳ ಮೇಲೆ ಅದೆಷ್ಟು ಅವಲಂಬಿತರಾಗಿದ್ದೇವೆ ಎಂಬುದನ್ನು ಯೋಚಿಸಿ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ನೂರು ವರ್ಷಗಳಲ್ಲಿ ನಾವು ಈ ಭೂಮಿಯ ಮೇಲೆ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಭೀಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಹಸಿರಿಲ್ಲದೆ ನಮಗೆ ಉಸಿರು ದೊರೆಯುವುದಾದರೂ ಹೇಗೆ?ಮರಗಳನ್ನು ಕಡಿಯುತ್ತಾ ಹೋದರೆ ಅದೇ ಪ್ರಮಾಣದಲ್ಲಿ ಬೆಳೆಸಲು ಸಾಧ್ಯವೇ? ಕ್ಷಣಮಾತ್ರದಲ್ಲಿ ಕೊಡಲಿಯ ಏಟಿನಿಂದ ನಾವು ಮರವೊಂದನ್ನು ಉರುಳಿಸಬಹುದು, ಆದರೆ ಅದೇ ಮರ ಬೆಳೆಯಲು ವರ್ಷಗಳೇ ಬೇಕು. ಇಡೀ ಭಾರತ ದೇಶದ ಪ್ರಜೆಗಳು ಮೊಣಕಾಲೂರಿ ಪ್ರಾರ್ಥಿಸಿದರೂ, ಅತ್ತು ಗೋಗರೆದರೂ ಕೂಡ ಒಂದೇ ಒಂದು ಗಿಡ ಒಂದಡಿಯಷ್ಟು ಕೂಡ ಬೆಳೆಸಲು ಒಂದು ದಿನಕ್ಕೆ ಸಾಧ್ಯವಾಗುವುದಿಲ್ಲ….. ಜೀವದಾಯಿನಿಯಾಗಿರುವ ಹಸಿರು ಮರಗಳನ್ನು ಬೆಳೆಸಿದ ನಾವು ಅವುಗಳನ್ನು ಕಡಿಯಲು ಯಾವ ಹಕ್ಕನ್ನು ಹೊಂದಿದ್ದೇವೆ ನೀವೇ ಹೇಳಿ? ಹಾಗಾದರೆ ನಾವು ಟಿಶ್ಯೂ ಪೇಪರ್ ಗಳ ಬಳಕೆಯನ್ನು ಹೇಗೆ ತಡೆ ಹಿಡಿಯಬಹುದು? ಮೊದಲನೆಯದಾಗಿ ಸದಾ ನಮ್ಮ ಜೊತೆ ಒಂದು ಕರ ವಸ್ತ್ರ, ನಮ್ಮ ಪ್ಯಾಂಟುಗಳ ಜೇಬುಗಳಲ್ಲಿ, ಹ್ಯಾಂಡ್ ಬ್ಯಾಗುಗಳಲ್ಲಿ ಇರಲೇಬೇಕು. ಇನ್ನು ನಾವು ಟಿಶ್ಯೂ ಪೇಪರ್ಗಳನ್ನು ಬಳಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ಒಂದೊಂದು ಬಟ್ಟೆಯ ನ್ಯಾಪ್ಕಿನಗಳನ್ನು ಇಡಬೇಕು. ಅಡುಗೆ ಮನೆಯಲ್ಲಿ ಬಚ್ಚಲುಮನೆ, ವಾಶ್ ಬೇಸಿನ್ಗಳ ಬಳಿ, ಊಟದ ಮೇಜಿನ ಬಳಿ, ಕಾರುಗಳಲ್ಲಿ ಸಾಧ್ಯವಾದಷ್ಟು ಬಟ್ಟೆಯನ್ಯಾಪ್ಕಿನ್ಗಳನ್ನು ಬಳಕೆ ಮಾಡಬೇಕು. ಕಾಗದದ ಹಾಳೆಯಿಂದ ತಯಾರಿಸಲಾಗುವ ಟಿಶ್ಯೂ ಪೇಪರಗಳ ಬಳಕೆಯನ್ನು ತೀರಾ ಅನಿವಾರ್ಯವಲ್ಲದ ಹೊರತು ಮಾಡಲೇಬಾರದು. ನಮ್ಮ ಬಳಿ ಬಟ್ಟೆ ಇಲ್ಲವೇ ಇಲ್ಲ, ಕೈ ತೊಳೆಯಲು ನೀರು ಕೂಡ ದೊರೆಯುತ್ತಿಲ್ಲ ಎಂಬ ಸಮಯದಲ್ಲಿ ಮಾತ್ರ ಟಿಶ್ಯೂ ಪೇಪರನ್ನು ಬಳಸಿ. ಕಳೆದ ಕೆಲವೇ ವರ್ಷಗಳಿಂದ ತುಸು ಹೆಚ್ಚೇ ಚಾಲ್ತಿಯಲ್ಲಿರುವ ಟಿಶ್ಯೂ ಪೇಪರ್ ಗಳನ್ನು ಬಳಸುತ್ತಿರುವ ನಾವು ಊಟದ ಮೊದಲು ಹಾಗೂ ಊಟದ ನಂತರ ಕೈ ತೊಳೆಯುವುದನ್ನು ರೂಢಿಸಿಕೊಳ್ಳೋಣ. ನೀರು ಎಷ್ಟೊಂದು ಬಳಕೆಯಾಗುತ್ತದಲ್ಲವೇ ಅಂತ ನೀವು ಕೇಳಬಹುದು, ಆದರೆ ಸಂಶೋಧನೆಗಳ ಪ್ರಕಾರ ಒಂದು ಟಾಯ್ಲೆಟ್ ಪೇಪರ್ ನ ಸುರುಳಿಯನ್ನು ತಯಾರಿಸಲು ಸುಮಾರು 37 ಗ್ಯಾಲನ್ ನಷ್ಟು ನೀರನ್ನು ಬಳಸಲಾಗುತ್ತದೆ ಮತ್ತು ಇದರ ಜೊತೆಗೆ ಸಾಕಷ್ಟು ಪ್ರಮಾಣದ ಮರಗಳನ್ನು ಕಡಿಯುವುದು ಕೂಡ ಸೇರಿದೆ. ಈಗ ಹೇಳಿ… ಕೈ ತೊಳೆಯುವುದು ಒಳ್ಳೆಯದೋ ಟಿಶ್ಯೂ ಪೇಪರ್ ಬಳಕೆಯೋ ಎಂದು. ನಮ್ಮ ನಾಡಿನ ಭವ್ಯ ಭವಿಷ್ಯಕ್ಕೆ ಒಳ್ಳೆಯ ಪರಿಸರವನ್ನು ಹೊಂದಲು ತೀರ ಅನಿವಾರ್ಯವಲ್ಲದ ಹೊರತು ನಾವು ಸಾಧ್ಯವಾದಷ್ಟು ಟಿಶ್ಯೂ ಪೇಪರ್ ಗಳ ಬಳಕೆಯನ್ನು ನಿಲ್ಲಿಸೋಣ.ಏನಂತೀರಾ ಸ್ನೇಹಿತರೆ? ————– ವೀಣಾ ಹೇಮಂತಗೌಡ ಪಾಟೀಲ್ ʼ “
ಟಿಶ್ಯೂ ಪೇಪರ್ ಬಳಸಬೇಕೆ? ಬೇಡವೇ?…. ಒಂದು ಲೆಕ್ಕಾಚಾರ-ವೀಣಾ ಹೇಮಂತ್ ಗೌಡ ಪಾಟೀಲ್ Read Post »
” ಕರ್ನಾಟಕ ಶಾಸನಗಳು : ಕಾನೂನು ದೃಷ್ಠಿಯಲ್ಲಿ ಅಧ್ಯಯನ”. ವಿಜಯ್ ಅಮೃತ್ ರಾಜ್
” ಕರ್ನಾಟಕ ಶಾಸನಗಳು : ಕಾನೂನು ದೃಷ್ಠಿಯಲ್ಲಿ ಅಧ್ಯಯನ”. ವಿಜಯ್ ಅಮೃತ್ ರಾಜ್ Read Post »
ಮಡಿವಾಳೇಶನ ಶಾಪ ಮತ್ತು ಕಿತ್ತೂರು ಸಂಸ್ಥಾನದ ಅವನತಿ
ಮಡಿವಾಳೇಶನ ಶಾಪ ಮತ್ತು ಕಿತ್ತೂರು ಸಂಸ್ಥಾನದ ಅವನತಿ Read Post »
“ನಮ್ಮ ಸಂವಿಧಾನ” ಗಾಯತ್ರಿ ಸುಂಕದ
ನಮ್ಮ ಸಂವಿಧಾನ ನಮ್ಮ ದೇಶದ ಆಡಳಿತದ ಚುಕ್ಕಾಣಿಯನ್ನು ನಿರ್ಧರಿಸುತ್ತದೆ. ನಮ್ಮ ಸಂವಿಧಾನ ನನ್ನದೇ ಆದ ಘನತೆಯನ್ನು ಹೊಂದಿದೆ. ಇದು ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಆಗಿದೆ
“ನಮ್ಮ ಸಂವಿಧಾನ” ಗಾಯತ್ರಿ ಸುಂಕದ Read Post »
“ನಮ್ಮ ಸಂವಿಧಾನ… ನಮ್ಮಹೆಮ್ಮೆ” ವೀಣಾ ಹೇಮಂತ್ ಗೌಡ ಪಾಟೀಲ್.
ಸಮಾನತೆಯ ಹಕ್ಕು, ವಾಕ್ ಸ್ವಾತಂತ್ರ್ಯದ ಹಕ್ಕು ಹಾಗೂ ನ್ಯಾಯಯುತ ವಿಚಾರಣೆಯ ಹಕ್ಕಿನಂತಹ ಮೂಲಭೂತ ಹಕ್ಕುಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸಿ ಮಾತನಾಡಲು ನಾಗರಿಕರನ್ನು ಪ್ರೋತ್ಸಾಹಿಸುವುದು
“ನಮ್ಮ ಸಂವಿಧಾನ… ನಮ್ಮಹೆಮ್ಮೆ” ವೀಣಾ ಹೇಮಂತ್ ಗೌಡ ಪಾಟೀಲ್. Read Post »
“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್ ಅವರ ಲೇಖನಿಯಿಂದ.
ಇದು ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು ಮತ್ತು ಯಾರಿಗೂ ತಮ್ಮ ಕೃತ್ಯದ ಫಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನ್ಯಾಯದ ಸ್ಥಿರತೆಯನ್ನು ಖಾತರಿಪಡಿಸುತ್ತದೆ.
“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್ ಅವರ ಲೇಖನಿಯಿಂದ Read Post »
“ವಾಚ್ ಮನ್ ಸಂಸಾರ ಹಾಗೂ ಶೆಡ್”ಎಂ.ಆರ್. ಅನಸೂಯ
ಮನೆಯ ಮುಂದೆ ಹಾಕಿಕೊಂಡಿದ್ದ ಅಡುಗೆ ಒಲೆಯ ಮೇಲೆ ಚಿತ್ರ ವಿಚಿತ್ರ ಆಕಾರದ ತೂತುಗಳಿದ್ದ ಹೆಂಚನ್ನು ನೋಡಿ ಅದೇಕೆ ಹಾಗೇ ಎಂದು ಕೇಳಿದೆ.
“ವಾಚ್ ಮನ್ ಸಂಸಾರ ಹಾಗೂ ಶೆಡ್”ಎಂ.ಆರ್. ಅನಸೂಯ Read Post »
ಎಲ್ಲಶಿಕ್ಷಕರು ಮತ್ತು ಪೋಷಕರುಓದಲೇ ಬೇಕಾದಂತಹ ಅದ್ಣುತ ಬರಹ ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರಿಂದ
ಹೀಗೆ ಮಾಡಿದ್ದರೆ ಮಾತ್ರ ಮತ್ತೆ ಒಮ್ಮೆ ಕೇಳಬಹುದು—
“ಮಕ್ಕಳಿರಲ್ಲವ ಮನೆಯ ತುಂಬ!”
ಅದಾಗಲೆ, ಈ ಪ್ರಶ್ನೆ —
“ಮಕ್ಕಳೇ ಎಲ್ಲಿದ್ದೀರಿ?” —
ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರದೊಂದು ಅದ್ಭುತ ಬರಹ Read Post »
“ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ…. ಒಂದು ನುಡಿ ನಮನ” ವೀಣಾ ಹೇಮಂತ್ ಗೌಡ ಪಾಟೀಲ್
ತಿಮ್ಮಕ್ಕನವರು ನಮ್ಮನ್ನು ಅಗಲಿರುವ ಈ ಕ್ಷಣದಲ್ಲಿ ಮನಸ್ಸಿಗೆ ತೋಚಿದ್ದು ಅವರ ಭೌತಿಕ ದೇಹ ನಮ್ಮೊಡನೆ ಇರದೆ ಹೋದರೂ ಅವರ ಆತ್ಮಿಕ ದೇಹದ ಉಸಿರು ನಮ್ಮ ಸುತ್ತಲೂ ನಾವು ಬೆಳೆಸುವ ಹಸಿರಿನಲ್ಲಿರುತ್ತದೆ. ಆ ಹಸಿರನ್ನು ಸದಾ ಕಾಯ್ದುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು
“ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ…. ಒಂದು ನುಡಿ ನಮನ” ವೀಣಾ ಹೇಮಂತ್ ಗೌಡ ಪಾಟೀಲ್ Read Post »
You cannot copy content of this page
Notifications