ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಗಾದೆ ಮಾತು-ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ‌ ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಗಾದೆ ಸಂಗಾತಿ ಗಾದೆ ವಿಶ್ಲೇಷಣೆ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ‌ ​ಕನ್ನಡ ಜನಪದ ಸಾಹಿತ್ಯವು ಜೀವನದ ದೊಡ್ಡ ಸತ್ಯಗಳನ್ನು ಅತ್ಯಂತ ಸರಳ ರೂಪದಲ್ಲಿ ನಮಗೆ ಉಣಬಡಿಸುತ್ತದೆ. ಇಂತಹ ಮುತ್ತಿನಂತಹ ಗಾದೆಗಳಲ್ಲಿ “ಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ” ಎಂಬುದು ಪ್ರಮುಖವಾದ ಮಾತು.ನಮ್ಮೆಲ್ಲರಿಗೂ ನಮ್ಮದೇ ಆದ ಒಂದು ಸ್ವಂತಿಕೆಯ ವ್ಯಕ್ತಿತ್ವವಿದೆ.ನಮ್ಮತನ ಎಂಬುದು ನಮ್ಮೊಳಗೆ ಅಡಗಿದ್ದರೂ ಸಹ ಅದನ್ನು ಸದ್ವಿನಿಯೋಗ ಮಾಡಿಕೊಳ್ಳಲಾಗದೆ,ನಾವು ನಾವೇ ಸಣ್ಣದಿರುವ ವಿಷಯವನ್ನು ಬಹು ಗಂಭೀರವಾಗಿ ತೆಗೆದುಕೊಂಡು ಎಲ್ಲೋ ಕಳೆದು ಹೋದೆವು ಎಂದು ಗೋಳಾಡಿಬಿಡುತ್ತೇವೆ.ನಮ್ಮಂತೆ ಪ್ರಾಣಿಗಳು ಬದುಕುತ್ತವೆಯೆ?ಅದಕ್ಕೆ ಎರಡು ಮಾತಿಲ್ಲ.,ಹಠವಿಲ್ಲ,ಭರದಲ್ಲಿ ಬದುಕಬೇಕೆಂಬುದಿಲ್ಲ,ಉಲ್ಟಾ ಪಲ್ಟಾ ಮಾಡಬೇಕೆಂಬುದಿಲ್ಲ,ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾಗಿ ಬಾಳಬೇಕೆಂಬುದಿಲ್ಲ.ಅದರ ಇಚ್ಛಾಶಕ್ತಿ ಏನೆಂದರೆ ಹೊಟ್ಟೆ ತುಂಬಿಸಿಕೊಳ್ಳುವುದು ಮಾತ್ರವಾಗಿದೆ.ಹೊಟ್ಟೆ ತುಂಬಿದರೆ ಸಾಕು ಮಲಗುವುದೆ ಅದರ ಕೆಲಸ.ಆದರೆ ಈ ಮನುಷ್ಯರಾದ ನಾವುಗಳು ಪರಿವರ್ತನೆಯನ್ನು ಮರೆತು, ಎಂಥ ಕೆಲಸ ಮಾಡಿಬಿಟ್ಟರು?,ಅದೇಕೆ ಹಾಗೆ ಅವರು ಮಾಡಬೇಕಿತ್ತು?, ಮನೆತನವೆ ಹಾಳು ಮಾಡಲು ಅನ್ಯಾಯ ಮಾಡಿದರು?;ಹೀಗೆಲ್ಲಾ ಬೈದಾಡಿ,ರೇಗಾಡಿಬಿಡುತ್ತೇವೆ.ಅವರ ತಪ್ಪಲ್ಲ.ಮೇಲ್ನೋಟಕ್ಕೆ ಕೆಲವು ನಿರ್ಧಾರಗಳು ನಮಗೆ ಹಾಗೆ ಕಾಣುವುದು ಸತ್ಯ.ಆದರೆ ನಿಜವಾದ ಸಂಗತಿ ಹಾಗಿರುವುದಿಲ್ಲ.ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಕೆಲವೊಮ್ಮೆ ಕೆಲ ಕಹಿ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತೇವೆ.ಈ ಗಾದೆಯ ಮಾತಿನಂತೆ,ಇಲ್ಲಿ ‘ಆನಿ’ ಎಂದರೆ ಆನೆ ಅಥವಾ ದೊಡ್ಡ ವಸ್ತು.ಬಹುದೊಡ್ಡದಾದ ಮೊತ್ತ ಎಂದರ್ಥ. ಈ ಗಾದೆಯು ಮನುಷ್ಯನ ಜಿಪುಣತನ, ಆದ್ಯತೆಗಳ ತಪ್ಪು ನಿರ್ಧಾರ ಮತ್ತು ವಿವೇಕಹೀನತೆಯನ್ನು ಮಾರ್ಮಿಕವಾಗಿ ಟೀಕಿಸುತ್ತದೆ. ​ಒಬ್ಬ ವ್ಯಕ್ತಿ ಸಾವಿರಾರು ರೂಪಾಯಿ ಬೆಲೆಬಾಳುವ ಆನೆಯನ್ನೇ ಕಳೆದುಕೊಂಡಾಗ ಅಥವಾ ತನ್ನ ಮನಸಾರೆ ದಾನ ಮಾಡುತನಕ ಸುಮ್ಮನಿದ್ದು, ಕೇವಲ ಒಂದು ಪುಕ್ಕಟೆ ಸಿಗುವ ಅದರ ಕೊರಳಿಗೆ ಕಟ್ಟಿದ ಗಂಟೆಗೆ ಕ್ಯಾತೆ ತೆಗೆಯುತ್ತಾನೆ ಎಂದರೆ ಆತನು ಧರ್ಮದಿಂದ ದಾನ ಮಾಡಿಲ್ಲ. ಅಥವಾ ಅತ್ಯಂತ ಕಡಿಮೆ ಬೆಲೆಯ ಆನೆಯ ‘ಬಾಲ’ದ ವಿಷಯಕ್ಕೆ ಬಂದಾಗ ಜಾಣತನ (ಸ್ಯಾಣೇತನ) ಪ್ರದರ್ಶಿಸುವುದು ಅಥವಾ ಲೆಕ್ಕಾಚಾರ ಮಾಡುವುದು ಎಷ್ಟು ಮೂರ್ಖತನ ಎಂಬುದು ಇದರ ನೇರ ಅರ್ಥ. ಅಂದರೆ, ದೊಡ್ಡ ನಷ್ಟ ಅಥವಾ ದೊಡ್ಡ ನಿರ್ಧಾರಗಳ ಮುಂದೆ ಕ್ಷುಲ್ಲಕ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ವ್ಯರ್ಥ.​ ಹಣಕಾಸು ಮತ್ತು ವ್ಯವಹಾರದ ವಿಷಯ ಬಂದಾಗನಾವು ಜೀವನದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಐಷಾರಾಮಿ ವಸ್ತುಗಳಿಗೆ ಅಥವಾ ಅನಗತ್ಯ ಖರ್ಚುಗಳಿಗೆ ಲಕ್ಕವಿಲ್ಲದಂತೆ ಸುರಿಯುತ್ತೇವೆ. ಆದರೆ ಹಲವು ಬಡ ವ್ಯಾಪಾರಿಗಳು ಮನೆ ಮುಂದೆ ತರಕಾರಿ ಮಾರುವವರ ಜೊತೆ, ಹಣ್ಣು ಹಂಪಲು ಮಾರುವವರ ಬಳಿ ತಕರಾರು,ಆಟಿಕೆ ಸಾಮಾನು ಮಾರುವವರ ಜೊತೆ ಒಂದು,ಎರಡು ರೂಪಾಯಿಗಳಿಗೆ ಚೌಕಾಸಿ ಮಾಡುತ್ತೇವೆ. ಆನೆಯಂತಹ ದೊಡ್ಡ ಖರ್ಚನ್ನು ಒಪ್ಪಿಕೊಂಡ ಮೇಲೆ, ಬಾಲದಂತಹ ಸಣ್ಣ ಮೊತ್ತಕ್ಕೆ ಜಾಣತನ ತೋರಿಸುವುದು ನಮ್ಮ ವ್ಯಕ್ತಿತ್ವದ ಸಣ್ಣತನವನ್ನು ತೋರಿಸುತ್ತದೆ. ದೊಡ್ಡ ಗುರಿಯನ್ನು ಹೊಂದಿದವರು ಸಣ್ಣಪುಟ್ಟ ನಷ್ಟಗಳಿಗೆ ಕುಗ್ಗಬಾರದು.ಸಂಬಂಧ ಮತ್ತು ಜೀವನದ ಮೌಲ್ಯಗಳಲ್ಲೂ ನಮ್ಮ ಮನಸ್ಸು ಹಾಗೆನೆ.ಒಂದು ಸುಂದರವಾದ ಸಂಬಂಧವನ್ನು ಉಳಿಸಿಕೊಳ್ಳಲು ನಾವು ಎಷ್ಟೋ ತ್ಯಾಗಗಳನ್ನು ಮಾಡಿರುತ್ತೇವೆ (ಇದು ಆನೆಯನ್ನು ಕೊಟ್ಟಂತೆ). ಆದರೆ, ಯಾವುದೋ ಒಂದು ಸಣ್ಣ ತಪ್ಪು ಅಥವಾ ಒಂದು ಮಾತಿನ ವಿಷಯಕ್ಕೆ ಜಗಳವಾಡಿ ಆ ಸಂಬಂಧವನ್ನೇ ಮುರಿದುಕೊಳ್ಳುತ್ತೇವೆ (ಇದು ಬಾಲಕ್ಕೆ ಜಾಣತನ ತೋರಿಸಿದಂತೆ). ಇಡೀ ಆನೆಯೇ ಹೋದ ಮೇಲೆ ಬಾಲದ ಬಗ್ಗೆ ಹಠ ಹಿಡಿಯುವುದು ಸಂಬಂಧಗಳಲ್ಲಿ ಬಿರುಕು ತರುತ್ತದೆ ಎಂಬುದ ಅರಿವಿಗೆ ಬರಬೇಕು.​ಸಮಯ ಮತ್ತು ಶ್ರಮದ ಪ್ರತಿಫಲದಲ್ಲೂ ಅಷ್ಟೆ.ಯಾರೋ..ಬಡವರು ಬೆಳಿಗ್ಗೆಯಿಂದ ಸಂಜೆಯವರೆಗೆ  ಹೊಟ್ಟೆಪಾಡಿಗಾಗಿ ಕೆಲಸ ಮಾಡಿರುತ್ತಾರೆ.ಅಂತವರಿಗೆ ತಕ್ಕ ಪ್ರತಿಫಲ ನೀಡುವುದಿಲ್ಲ.ಆದರೆ ಯಾರೋ ಇನ್ನೊಬ್ಬ ಗರ್ಧಿಗಮ್ಮತ್ತಿನಿಂದ, ಜಾಣತನದಿಂದ ಮಾತಾಡಿ ಅರ್ಧಗಂಟೆಯ ಕೆಲಸ ಮಾಡಿದರೆ ಹೆಚ್ಚು ಹಣ ನೀಡಿ ಬಿಡುತ್ತಾರೆ. ಜಿಪುಣತನ ಇರಬಾರದು ಅಂತಲ್ಲ.ಇರಬೇಕು ನಿಜ.ಎಷ್ಟಿರಬಾರದೆಂದರೆ  ದೀನತೆಯನ್ನು ಮರೆತು ಹೋಗುವಷ್ಟಿರಬಾರದು.ಒಂದು ದೊಡ್ಡ ಕೆಲಸವನ್ನು ಮಾಡುವಾಗ ಅಥವಾ ಸಾಧನೆಯ ಹಾದಿಯಲ್ಲಿರುವಾಗ ನಮಗೆ ದೊಡ್ಡ ಸವಾಲುಗಳು ಎದುರಾಗುವುದು ಸರ್ವೆ ಸಾಮಾನ್ಯ.ಆ ಸವಾಲುಗಳನ್ನು ಎದುರಿಸಿ ಗೆದ್ದ ನಂತರ, ತೀರಾ ಸಣ್ಣ ವಿಷಯಗಳಲ್ಲಿ ಸೋಲು ಒಪ್ಪಿಕೊಳ್ಳುವುದು ಅಥವಾ ಅಲ್ಲಿ ಜಿಪುಣತನ ತೋರುವುದು ಸರಿಯಲ್ಲ. ಮನೆ ಕಟ್ಟಲು ಲಕ್ಷಾಂತರ ಹಣ ಖರ್ಚು ಮಾಡಿ,ಗೃಹ ಪ್ರವೇಶದ ದಿನ ಉಂಡ ಎಲೆಗಳ ತೆಗೆದು,ಅಂಗಳದಲ್ಲಿ ಚೆಲ್ಲಿದ ಅನ್ನವನ್ನು ಬಳಿದು ಹಾಕುವವರ ಜೊತೆ ಅಷ್ಟೇ ತಗೊ…ಇಷ್ಟೆ ತಗೋ..ಎನ್ನಬಾರದು. ಕೇವಲ ಕೆಲವು ರೂಪಾಯಿಗಳ ಉಳಿತಾಯಕ್ಕಾಗಿ ಅವರನ್ನು ಬೈದಾಡುವುದು ಸಭ್ಯತೆಯಾಗಲಾರದು.ಶುಭವಾಗಲಿ ಎನ್ನದೆ ಹಾಳಾಗಿ ಹೋಗು ಎಂದು ಬೈದು ಹೋಗುತ್ತಾರಷ್ಟೆ.​ಇವತ್ತಿನ ದಿನ ನಾವು ದೃಶ್ಯ ಮಾಧ್ಯಮಗಳಲ್ಲಿ,ಸಾಮಾಜಿಕ ಜಾಲತಾಣದಲ್ಲಿ,ಕಣ್ಣೆದುರಿನ ​ಸಮಾಜದಲ್ಲಿ ನಿತ್ಯವೂ ನೋಡುತ್ತೇವೆ, ದೊಡ್ಡ ದೊಡ್ಡ ಹಗರಣಗಳು ರಾಜಕೀಯದಲ್ಲಿ ನಡೆದಾಗ ಮೌನವಾಗಿರುವ ವ್ಯವಸ್ಥೆ, ಒಬ್ಬ ಸಣ್ಣ ನೌಕರ ಸಾಮಾನ್ಯ ಮನುಷ್ಯ ಸಣ್ಣ ತಪ್ಪು ಮಾಡಿದಾಗ ಕಾನೂನಿನ ಎಲ್ಲಾ ಪಟ್ಟುಗಳನ್ನು ಬಳಸಿ ಆತನನ್ನು ಶಿಕ್ಷಿಸಲು ಇವತ್ತು ಮೋಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದು ಅಧಿಕಾರಿಗಳಿಗೆ ತೋರಿಸಿ  ಆತನಿಗೆ ಶೀಕ್ಷೆ  ಕೊಡಿಸಲು  ಮುಂದಾಗುತ್ತಾರೆ.ಆದರೆ ಅಧಿಕಾರಿ ದೊಡ್ಡ ಹಡಗವನ್ನೆ ನುಂಗಿದ್ದು ಗೊತ್ತಾಗುವುದಿಲ್ಲ.ಇದು ಇವತ್ತಿನ ನಮ್ಮ ವ್ಯವಸ್ಥೆ. “ಆನೆ ಹೋದರೂ ಪರವಾಗಿಲ್ಲ, ಬಾಲ ಮಾತ್ರ ಸಿಗಬೇಕು” ಎನ್ನುವ ವಿಪರ್ಯಾಸದಂತಿದೆ. ನಮ್ಮ ಜಾಣತನವು ದೊಡ್ಡ ಬದಲಾವಣೆಗಳಿಗೆ ಬಳಕೆಯಾಗಬೇಕೇ ಹೊರತು, ಸಣ್ಣತನದ ಪ್ರದರ್ಶನಕ್ಕಲ್ಲ.​​”ಸಣ್ಣ ವಿಷಯಗಳ ಬಗ್ಗೆ ಅತಿಯಾಗಿ ಯೋಚಿಸುವವರು ದೊಡ್ಡ ವಿಷಯಗಳಲ್ಲಿ ಸೋಲುತ್ತಾರೆ.” ಆನೆಯನ್ನು ನಿರ್ವಹಿಸುವ ಶಕ್ತಿ ಇರುವವನಿಗೆ ಬಾಲದ ಬಗ್ಗೆ ಚಿಂತೆ ಇರಬಾರದು. ನಮ್ಮ ಬದುಕು ಉದಾತ್ತವಾಗಿರಬೇಕು. ದೊಡ್ಡ ಗುರಿಯನ್ನು ತಲುಪುವ ಹಾದಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು ಅಥವಾ ನಷ್ಟಗಳು ಸಹಜ. ಅವುಗಳನ್ನು ನಿರ್ಲಕ್ಷಿಸಿ ಮುಂದೆ ಸಾಗುವುದೇ ನಿಜವಾದ ‘ಸ್ಯಾಣೇತನ’ (ಜಾಣತನ).​ಕೇವಲ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಬಾಲಕ್ಕೆ ಗಂಟು ಬೀಳುವ ಬದಲು, ಆನೆಯಂತಹ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಗಾದೆ ಮಾತು-ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ‌ ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »

ಕಾವ್ಯಯಾನ

ಪ್ರೊ .ರಾಜೇಶ್ವರಿ ಶೀಲವಂತ ಪುಣೆ ಅವರ ʻಅಡುಗೆʼ

ಕಾವ್ಯ ಸಂಗಾತಿ ಪ್ರೊ .ರಾಜೇಶ್ವರಿ ಶೀಲವಂತ ಪುಣೆ ʻಅಡುಗೆʼ ಏನೇ ಏನಿವತ್ತು ಊಟಕ್ಕೆ  ಊಟಕ್ಕೇನಮ್ಮಎಲ್ಲರ ಮನೆಯ  ಸಹಜ ಪ್ರಶ್ನೆಅದಕ್ಕವಳದು ಹರ ಸಾಹಸನಿನ್ನೆಯದು ಇಂದಾಗೋಲ್ಲಪ್ರತಿದಿನವೂ ಹೊಸದಿರಬೇಕಲ್ಲಉಪ್ಪು ಖಾರ ಹದವಾಗಿರಲುಅವಳ ಪರಿವೆಯಿಲ್ಲಅದು  ತಪ್ಪಿದರೆ ಅವಳಿಗೇನೆ  ಎಲ್ಲಆ ಸಿಟ್ಟಿನಲ್ಲಿ  ಮಾಡೋಲ್ಲಅವಳು ರೊಟ್ಟಿಬಡೀತಾಳೆ ಸಿಟ್ಟಿನಲ್ಲಿ ತಟ್ಟಿ ತಟ್ಟಿಸೇರಿಸೋಲ್ಲ ಪಲ್ಯಕ್ಕೆ ಉಪ್ಪು ಖಾರಸುರೀತಾಳೆ ಭರ ಭರ ಕೋಪದಬ್ಬರ  ಎಲ್ಲರೂ ಹೋಟಲ ಮೊರೆರುಚಿಯಿರದ  ತಿಂಡಿಗೆ  ಟಿಪ್ಸ ಬೇರೆ  ನೀ ಮಾಡಿದ  ಚಹಾ ನಿನ್ನಷ್ಟೇ ಸಿಹಿಚಪಾತಿ ನಿನ್ನತರಹ ಮೃದುನಿನ್ನ ಕೈ ರುಚಿ ಜೇನಿನಂತೆಅಂತ   ನೀವೂಮ್ಮೆ ಪಿಸುಗುಟ್ಟಿದರದೆ ಅವಳಿಗೆ ಹೆಮ್ಮೆ  ಹೊಸ ಹುಮ್ಮಸ್ಸಿನೊಂದಿಗೆ ಪ್ರವೇಶಿಸುವಳವಳುಅಡುಗೆ ಮನೆಯ ಮತ್ತೊಮ್ಮೆಹೊತ್ತು ನೋಡಿ  ಈ ಎಲ್ಲವನುಒಂದು ದಿನವಾದರೂಮರುದಿನವೇ ತೇನಾಲಿ ರಾಮಕೃಷ್ಣನ ಬೆಕ್ಕಿನಂತೆ  ನೀವು ಪರಾರಿ                ನಿಟ್ಟುಸಿರಿನೊಂದಿಗೆಕೊನೆಗಂದೆಅಬ್ಬಾ!!  ನೀನೆ ಸರಿಸಾಟಿ ಇದಕೆಲ್ಲ. ಪ್ರೊ .ರಾಜೇಶ್ವರಿ ಶೀಲವಂತ ಪುಣೆ

ಪ್ರೊ .ರಾಜೇಶ್ವರಿ ಶೀಲವಂತ ಪುಣೆ ಅವರ ʻಅಡುಗೆʼ Read Post »

ಕಾವ್ಯಯಾನ

“ವೇದಿಕೆಯ ಮೆಟ್ಟಿಲುಗಳು”ಡೋ ನಾ ವೆಂಕಟೇಶ

ಕಾವ್ಯ ಸಂಗಾತಿ ವೇದಿಕೆಯ ಮೆಟ್ಟಿಲುಗಳು ಡೋ ನಾ ವೆಂಕಟೇಶ್ ಆಗಿರಲಿ ವೇದಿಕೆಗಳುಪ್ರಬುದ್ಧ ಸಂವೇದನೆಗಳಕಿಚ್ಚುಆಗದಿರಲಿ ವೇದಿಕೆಗಳು ಅಬದ್ಧ ಕೊರೆತಗಳ ಕಾಳ್ಗಿಚ್ಚು ವೇದಿಕೆಯಲಿ ವಿಜೃಂಭಿಸಲಿಅಗಣಿತ ತಾರೆಗಳುದೇದೀಪ್ಯಮಾನ ಲಹರಿಗಳುಅನನ್ಯ ಸಾಂಗತ್ಯದ ಗೀತೆಗಳು ವೇದಿಕೆಗಳೊಳಗೆ ಇರಲಿವಿಚಾರವಂತನಿಗೆ ವಿನಯಅನಾಚಾರಿಗೆ ದುರ್ದಾನಮಾನವಂತನಿಗೆ ಸನ್ಮಾನ. ಹೇಳದೆಯೇ ಕೇಳಿಸಿಕೊಳ್ಳುವ ಶ್ರೋತೃಗಳುಶೋಕ ಗೀತೆಯಿಲ್ಲದೆಯೇ ಮಿಡಿಯುವ ಕಣ್ಣೀರಧಾರೆಗಳುಧ್ವನಿವರ್ಧಕವಿಲ್ಲದೇ ಮಾರ್ದನಿಸುವ ಅಮೃತ ವಚನಗಳು. ಎಲ್ಲಾಜೀವನದ ಅನುಭಾವ ಮೆಟ್ಟಿಲುಗಳು! ಡೋ ನಾ ವೆಂಕಟೇಶ

“ವೇದಿಕೆಯ ಮೆಟ್ಟಿಲುಗಳು”ಡೋ ನಾ ವೆಂಕಟೇಶ Read Post »

ಇತರೆ

“ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್.” ವೀಣಾ ಹೇಮಂತ್‌ ಗೌಡ ಪಾಟೀಲ್

ವ್ಯಕ್ತಿ ಸಂಗಾತಿ “ಸಾವಿನಲ್ಲೂ ಸಾರ್ಥಕತೆ ಮೆರೆದ… ನೀರಜಾ ಭಾನೋಟ್.” ವೀಣಾ ಹೇಮಂತ್‌ ಗೌಡ ಪಾಟೀಲ್ ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್. ಕೇವಲ 22 ವರ್ಷದ ಹರಯದಲ್ಲಿ ಆಕೆ ತನ್ನ ಬದುಕಿನಲ್ಲಿ ಮೊತ್ತ ಮೊದಲ ಬಾರಿಗೆ ಅಂತರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದಳು. ಆ ದಿನ ಸಪ್ಟಂಬರ್ 5 1986. ತನ್ನ ಹುಟ್ಟು ಹಬ್ಬಕ್ಕೆ ಎರಡು ದಿನ ಮೊದಲು ಫ್ರಾಂಕ್ ಫರ್ಟ್ ಮೂಲಕವಾಗಿ ನ್ಯೂಯಾರ್ಕ್ ಗೆ ತೆರಳುತ್ತಿದ್ದ ಅಂತರಾಷ್ಟ್ರೀಯ ವಿಮಾನ ಪ್ಯಾನ್ ಆ್ಯಮ್  ವಿಮಾನ ಸಂಖ್ಯೆ 73  ಎಂಬ ಹೆಸರಿನ ಆ ವಿಮಾನವು ಕರಾಚಿಯಲ್ಲಿ ನಸುಕಿನ ಜಾವ ಐದು ಗಂಟೆಯ ಸುಮಾರಿಗೆ  ಇಂಧನವನ್ನು ತುಂಬಿಸಲು ರನ್‌ ವೇಯಲ್ಲಿ ನಿಂತಿತ್ತು. ಆಗ ಸೆಕ್ಯೂರಿಟಿ ಗಾರ್ಡ್ಗಳಂತೆ ವೇಷ ಧರಿಸಿದ ನಾಲ್ವರು ಯುವಕರು ವಿಮಾನವನ್ನು ಪ್ರವೇಶಿಸಿದರು  ಒಳ ಬಂದ ನಾಲ್ಕು ಜನ ಯುವಕರು ಜೋರಾಗಿ ಆರ್ಭಟ ಮಾಡಿದಾಗ ಪ್ರಯಾಣಿಕರೆಲ್ಲರೂ ಭಯದಿಂದ ಕಿರುಚಿದರು. ವಿಮಾನದ ಸಿಬ್ಬಂದಿಗಳು ಕೂಡ ನಿಂತಲ್ಲಿಯೇ ತಣ್ಣಗಾದರೂ…. ಆಕೆ ಮಾತ್ರ ಧೈರ್ಯದಿಂದ ಸನ್ನಿವೇಶವನ್ನು ಎದುರಿಸುವ ಮನಸ್ಥಿತಿಯನ್ನು ಹೊಂದಿದ್ದಳು.ವಿಮಾನದ ಮುಖ್ಯ ಫ್ಲೈಟ್ ಅಟೆಂಡೆಂಟಾಗಿ ಕಾರ್ಯನಿರ್ವಹಿಸುತ್ತಿದ್ದ ಕೇವಲ 22 ರ ಹರೆಯದ ಆಕೆ ತನ್ನ ಬದುಕಿನಲ್ಲಿ ಅತಿ ಮುಖ್ಯ ಮಾರ್ಗವನ್ನು ಪ್ರಥಮ ಬಾರಿಗೆ ಪ್ರಯಾಣಿಸಲಿದ್ದಳು…. ಆಕೆಯೇ ನೀರಜಾ ಭಾನೋಟ್. ವಿಮಾನವನ್ನು ಅಪಹರಿಸಿದ ಹೈಜಾಕರ್ ಗಳನ್ನು ನೋಡಿಯೇ ವಿಮಾನದ ಪ್ರಯಾಣಿಕರು ಗಾಬರಿಗೊಂಡರೆ ನೀರಜಾ ಮಾತ್ರ ಕೊಂಚವೂ ಧೃತಿಗೆಡದೆ ನೂರಾರು ಜನರ ಜೀವವನ್ನು ಉಳಿಸಿದಳು. ಅತ್ಯಂತ ಸೂಕ್ಷ್ಮವಾಗಿ ( ಅದರಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಹೈಜಾಕರ್ ಗಳಿಗೂ ಕೂಡ ಗೊತ್ತಾಗದಷ್ಟು )ಆಕೆ ಹೈಜಾಕರ್ ಗಳ ಕೋಡ್ ಸಂಖ್ಯೆಯನ್ನು ಇಂಟರ್ಕಾಂನಲ್ಲಿ ತನ್ನ ಮೇಲಧಿಕಾರಿಗಳಿಗೆ ಕಳುಹಿಸಿದ್ದಳು  ಕಾಕ್ ಪಿಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ರಿವ್ ಸಿಬ್ಬಂದಿಯವರು ಅದರಲ್ಲೂ ವಿಶೇಷವಾಗಿ ಪೈಲೆಟ್ ಗಳು ತಮ್ಮ ತಲೆಯ ಮೇಲಿರುವ ಓವರ್ ಹೆಡ್ ಹ್ಯಾಚ್ಗಳ ಮೂಲಕ ಅಲ್ಲಿಂದ ತಪ್ಪಿಸಿಕೊಂಡು ಹೊರಟು ಹೋದರು…. ಸಾಧಾರಣವಾಗಿ ಹೈಜಾಕರ್ ಗಳ ಕೈಯಲ್ಲಿ ಪೈಲೆಟ್ ಗಳು ಸಿಕ್ಕಾಗ ಹೈಜಾಕರಗಳು ಅವರನ್ನು ವಿಮಾನವನ್ನು ತಮ್ಮಿಷ್ಟ ಬಂದ ಜಾಗಕ್ಕೆ ಹಾರಿಸಲು ಒತ್ತಾಯಿಸುತ್ತಾರೆ… ಅವರ ಈ ತಂತ್ರವನ್ನು ತಡೆ ಹಿಡಿಯಲು ಹಾಗೂ ವಿಮಾನವು ನೆಲದಲ್ಲಿಯೇ ಇರುವಂತೆ ಮಾಡಲು ವಿಮಾನಯಾನ ಸಿಬ್ಬಂದಿಗಳಿಗೆ ಈ ಕುರಿತು ತರಬೇತಿ ನೀಡಲಾಗಿರುತ್ತದೆ…. ಈಗಾಗಲೇ ಪ್ಯಾನ 73 ಎಂಬ ಹೆಸರಿನ ಆ ವಿಮಾನವನ್ನು ಹೈಜಾಕ್ ಮಾಡುವ ತಂತ್ರ ತುಸುಮಟ್ಟಿಗೆ ವಿಫಲಗೊಂಡಿತ್ತು ಆದರೆ 379 ಜನ ಪ್ರಯಾಣಿಕರು ಹಾಗೂ ಇನ್ನುಳಿದ ಗಗನಯಾನ ಸಿಬ್ಬಂದಿಗಳು ಉಗ್ರರ ಕೈಯಲ್ಲಿ ಸಿಲುಕಿದ್ದರು. ಮುಂದಿನ ಸುಮಾರು 17 ಗಂಟೆಗಳ ಕಾಲ ನೀರಜಾ ಉಗ್ರಗಾಮಿಗಳು ಹಾಗೂ ಮುಗ್ಧ ಪ್ರಯಾಣಿಕರ ನಡುವೆ ತಡೆಗೋಡೆಯಾಗಿ ನಿಂತುಕೊಂಡರು. ಆ ಎಲ್ಲ ಹೈಜಾಕರ್ ಗಳು ಅಬು ನಿಡಲ್ ಆರ್ಗನೈಜೇಷನ್ ಎಂಬ ಪ್ಯಾಲಸ್ಟನಿಯನ್ ಮಿಲಿಟರಿ ಗುಂಪಾಗಿತ್ತು. ಅವರ ಪ್ರಮುಖ ಗುರಿ ಅಮೆರಿಕದ ಪ್ರಜೆಗಳಾಗಿದ್ದರು…. ಎಲ್ಲ ಪ್ರಜೆಗಳ ಪಾಸ್ ಪೋರ್ಟ್ ಗಳನ್ನು ಅವರು ಪರೀಕ್ಷಿಸುತ್ತಿದ್ದರು.  ನೀರಜಾ ಮತ್ತು ಆಕೆಯ ಸಹೋದ್ಯೋಗಿಗಳು ಅತ್ಯಂತ ಸೂಕ್ಷ್ಮವಾಗಿ ಅಮೆರಿಕದ ಪಾಸ್ಪೋರ್ಟ್ ಹೊಂದಿರುವವರ ಪಾಸ್ಪೋರ್ಟ್ ಗಳನ್ನು ಸಂಗ್ರಹಿಸಿ ಸೀಟುಗಳ ಕೆಳಗೆ ಬಚ್ಚಿಡಲು ಆರಂಭಿಸಿದರು. ಮತ್ತೆ ಕೆಲವರ ಪಾಸ್ಪೋರ್ಟ್ ಗಳನ್ನು ಕಸದ ಬುಟ್ಟಿಗಳ ಹಿಂದೆಯೂ,ತಲೆಯ ಮೇಲಿರುವ ಬ್ಯಾಗುಗಳನ್ನು ಇಡುವ ಕಂಪಾರ್ಟ್ಮೆಂಟುಗಳ ನಡುವೆ  ಅಡಗಿಸಿ ಇಟ್ಟರು. ಮತ್ತೆ ಕೆಲ ಪಾಸ್ಪೋರ್ಟ್ ಗಳನ್ನು ಆಕೆ ಟಾಯ್ಲೆಟ್ ನ ನೀರಿನಲ್ಲಿ ಫ್ಲಶ್ ಮಾಡಿ ಇನ್ನಿಲ್ಲದಂತೆ ಮಾಡಿದಳು. ಅತ್ಯಂತ ಚಾಣಾಕ್ಷತೆ ಹಾಗೂ ಶಾಂತ ಮನಸ್ಥಿತಿಯಿಂದ ಆಕೆ ಅಮೆರಿಕದ ನಿವಾಸಿಗಳನ್ನು ಗುರುತಿಸಿ ಅವರನ್ನು ಸೂಕ್ಷ್ಮವಾಗಿ ಎಚ್ಚರಿಸಿದಳು. ಇಡೀ ವಿಮಾನದಲ್ಲಿರುವ ಯಾವುದೇ ಪ್ರಯಾಣಿಕರು ಗಾಬರಿಗೊಳ್ಳದೆ ಇರುವಂತೆ ಅವರನ್ನು ಪ್ರಶಾಂತವಾಗಿ ಇರಿಸಲು ಆಕೆ ಪ್ರಯತ್ನಿಸಿದಳು  ಅಳುವ ಚಿಕ್ಕ ಮಕ್ಕಳನ್ನು ಸಮಾಧಾನಿಸಿದ ಆಕೆ ಹಿರಿಯರಿಗೆ ಏನೂ ಆಗುವುದಿಲ್ಲ, ಧೈರ್ಯದಿಂದಿರಿ ಎಂದು ಭರವಸೆ ನೀಡಿದಳು. ಹಿಂದಿ, ಇಂಗ್ಲಿಷ್, ಪಂಜಾಬಿ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಹೊಂದಿದ್ದ ಆಕೆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೊಂದಿಗೆ ಲಘು ಸಂಭಾಷಣೆಯಲ್ಲಿ ನಿರತಳಾಗಿ ಅವರ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದಳು. ಆಕಸ್ಮಿಕದಲ್ಲಿ ಬದುಕುಳಿದ ನೂರಾರು ಜನ ಪ್ರಯಾಣಿಕರು ಆಕೆ ಅತ್ಯಂತ ಚಿಕ್ಕ ಹುಡುಗಿಯಾಗಿದ್ದರೂ ಕೂಡ ಹೆದರಿದ್ದರೂ ಕೂಡ ತನ್ನ ಹೆದರಿಕೆಯನ್ನು ಯಾರಿಗೂ ತೋರಿಸದೆ ನಮ್ಮಂತಹ ನೂರಾರು ಜನರಿಗೆ ಧೈರ್ಯ ತುಂಬಿದ ಕಾರಣವೇ ನಾವು ನಮ್ಮ ದುಃಖವನ್ನು ಹೊರ ಹಾಕದೆ ಇರಲು ಸಾಧ್ಯವಾಯಿತು ಎಂದು ಹೇಳಿದರು ಗಂಟೆಗಳ ಕಾಲ ಹೈಜಾಕರ್ಸ್ ಮತ್ತು ವಾಯುಯಾನ ಸಂಸ್ಥೆಯ ನಡುವೆ ಮಾತುಕತೆ, ಸಂಧಾನ ಪ್ರಕ್ರಿಯೆ ನಡೆದು ಒಂದು ಹಂತದಲ್ಲಿ ನಿಲುಗಡೆಯಾಯಿತು. ಇದು ಹೈಜಾಕರ್ಸ್ ಗಳಲ್ಲಿ ತಳಮಳವನ್ನು ಉಂಟು ಮಾಡಿತು ಇದೇ ಸಮಯದಲ್ಲಿ ವಿಮಾನದ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಪರಿಸ್ಥಿತಿ ಒದಗಿತು. ಕ್ಯಾಬಿನ್ ಲೈಟ್ ಗಳು ಪಕ ಪಕ ಮಾಡಲಾರಂಭಿಸಿ ಅಂತಿಮವಾಗಿ ಎಲ್ಲರನ್ನು ಕತ್ತಲೆಗೆ ದೂಡಿ ಆರಿ ಹೋದವು. ಹೀಗೆಯೇ 17 ಗಂಟೆಗಳು ಕಳೆದು ಹೋದವು. ಇದು ಹೈಜಾಕರ್ಸಗಳಲ್ಲಿ ಸಿಟ್ಟು ಮತ್ತು ಆತಂಕವನ್ನು ಹೆಚ್ಚಿಸಿ ಆಗ ಅವರು ಸರ್ಕಾರವನ್ನು ಹೆದರಿಸಲು ಗನ್ ಫೈಯರ್ ಆರಂಭಿಸಿದರು   ಜನನಿಬಿಡವಾದ ಕ್ಯಾಬಿನ್ ನಲ್ಲಿ ಒಂದೊಮ್ಮೆ ಗುಂಡಿನ ಮೊರೆತ ಶುರುವಾದಾಗ ಆ ಗಾಢವಾದ ಕತ್ತಲಿನಲ್ಲಿ ಭಯದ ಕೇಕೆ ಹಾಕುತ್ತ ಪ್ರಯಾಣಿಕರು ಸೀಟುಗಳ ಅಡಿಯಲ್ಲಿ ಕಿರುಚುತ್ತಾ ಅಡಗಿಕೊಳ್ಳಲು ಪ್ರಯತ್ನಿಸಿದರು. ಇದೇ ಸಮಯದಲ್ಲಿ ನೀರಜಾ ಅತ್ಯಂತ ಚಾಣಾಕ್ಷತೆಯಿಂದ ಓಡಿ ಹೋಗಿ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದಳು. ತೆರೆಯಲು ಅಪಾರ ಶಕ್ತಿಯ ಅವಶ್ಯಕತೆ ಇದ್ದು ಆಕೆ ಪ್ರಯಾಣಿಕರನ್ನು ಬಾಗಿಲಿನ ಕಡೆ ಜೋರಾಗಿ ತಳ್ಳುತ್ತಾ ಆ ಬಾಗಿಲಿನ ಮೂಲಕ ಹಾರಿ ಓಡಿ ತಪ್ಪಿಸಿಕೊಳ್ಳಲು ಕೂಗಿ ಹೇಳಿದಳು    ಜೀವಭಯದಿಂದ ತತ್ತರಿಸಿದ ಜನರು ತುರ್ತು ನಿರ್ಗಮದ ಬಾಗಿಲಿನ ಮೂಲಕ ರನ್ ವೇ ಮೂಲಕ ಇಳಿದು ಓಡಿ ಹೋಗಲು ಪ್ರಯತ್ನಿಸಿದರು ಮತ್ತೆ ಕೆಲವರು ಬಿದ್ದು ಗಾಯಗೊಂಡರು. ಕೆಲವರಿಗೆ ಗುಂಡಿನ ಪೆಟ್ಟು ತಗುಲಿತ್ತು.. ಆದರೂ ಕೂಡ ಅವರೆಲ್ಲರೂ ಅಲ್ಲಿಂದ ತಪ್ಪಿಸಿಕೊಂಡಿದ್ದರು.ಇನ್ನೇನು ಎಲ್ಲರೂ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಹೊತ್ತಿಗೆ ನೀರಜಾಳ ಕಣ್ಣಿಗೆ ಮೂರು ಜನ ಪುಟ್ಟ ಮಕ್ಕಳು ತಮ್ಮ ಸೀಟಿಗೆ ಅಂಟಿಕೊಂಡು ಕುಳಿತು ಭಯದಿಂದ ತತ್ತರಿಸುತ್ತಿರುವುದು ಕಂಡು ಬಂತು. ಒಂದು ಕ್ಷಣ ಕೂಡ ಅಳುಕದೆ ಆಕೆ ಆ ಮಕ್ಕಳ ಬಳಿಗೆ ಓಡಿ ಹೋಗಿ ಅವರನ್ನು ಬಳಸಿ ಎತ್ತಿಕೊಂಡು ತುರ್ತು ನಿರ್ಗಮನದ ಬಾಗಿಲ ಬಳಿ ಧಾವಿಸಿ ಅವರನ್ನು ಎತ್ತಿ ಹೊರಗೆ ಹಾಕಿದಳು. ಇದನ್ನು ನೋಡುತ್ತಿದ್ದ ಉಗ್ರರು ಆ ಮಕ್ಕಳತ್ತ ಹಾರಿಸಿದ ಗುಂಡುಗಳು ನೀರಜಾಗೆ ತಗುಲಿದವು. ಆಕೆಯ ಪುಟ್ಟ ದೇಹ ರಕ್ತಸಿಕ್ತವಾಯಿತು.ಆಸ್ಪತ್ರೆಗೆ ತಲುಪುವ ಮುನ್ನವೇ 22 ವರ್ಷ 11 ತಿಂಗಳು 29 ದಿನಗಳ ಇನ್ನೇನು ಮುಂದಿನ ಎರಡು ದಿನಗಳಲ್ಲಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದ ಆಕೆ ವಿಪರೀತ ರಕ್ತಸ್ರಾವದಿಂದ ಅಸು ನೀಗಿದಳು. . 20 ಜನರು ಆ ದುರ್ಘಟನೆಯಲ್ಲಿ ಮರಣ ಹೊಂದಿದರೆ ಒಟ್ಟು 359 ಪ್ರಯಾಣಿಕರು ರಕ್ಷಿಸಲ್ಪಟ್ಟರು. ದುರ್ಘಟನೆಯಲ್ಲಿ ಮರಣ ಹೊಂದಿದ ಹಾಗೂ ಬದುಕುಳಿದವರ ಸಂಖ್ಯೆಯಲ್ಲಿನ ಅಗಾಧ ವ್ಯತ್ಯಾಸದ ಅನುಪಾತವನ್ನು ನೋಡಿ ಜನ ದಿಗ್ಭ್ರಮೆಗೊಂಡರು…. ಈ ಸಮಯದಲ್ಲಿ ಎಲ್ಲರಿಗೂ ಅರಿವಾಗಿದ್ದು ನೀರಜಾಳ ಸಮಯೋಚಿತ ಆಲೋಚನೆಗಳು ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿನ ಪ್ರಯತ್ನ. ಅಂತಿಮ ಘಟ್ಟದಲ್ಲಿ ಪೈಲೆಟ್ ಗಳಿಗೆ ಎಚ್ಚರಿಕೆ ನೀಡಿ ಅವರು ವಿಮಾನದಿಂದ ತಪ್ಪಿಸಿಕೊಂಡು ಹೋಗುವಂತೆ ಮಾಡುವ ಮೂಲಕ ಆಕೆ ಘಟನೆಗೆ ಅತಿ ದೊಡ್ಡ ತಿರುವನ್ನು ನೀಡಿದಳು. ಅತಿ ದೊಡ್ಡ ಹತ್ಯಾಕಾಂಡವಾಗಬೇಕಿದ್ದ ದುರ್ಘಟನೆಯು ಆಕಸ್ಮಿಕ ದುರಂತದಲ್ಲಿ ಪರ್ಯವಸಾನವಾಯಿತು. ಭಾರತ ಮಾತ್ರವಲ್ಲದೆ ಪಾಕಿಸ್ತಾನ ಮತ್ತು ಅಮೆರಿಕದಲ್ಲಿ ಆಕೆಗೆ ಮರಣೋತ್ತರ ಗೌರವವನ್ನು ಸಲ್ಲಿಸಲಾಯಿತು.ಭಾರತ ದೇಶವು ಶಾಂತಿ ಸಮಯದಲ್ಲಿ ನೀಡುವ ಅತ್ಯುನ್ನತ ಗೌರವ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಆಕೆಗೆ ನೀಡಿ ಗೌರವಿಸಿದ್ದು, ನೀರಜಾ ಈ ಗೌರವ ಪಡೆದ ಅತ್ಯಂತ ಚಿಕ್ಕ ವಯಸ್ಸಿನ ವ್ಯಕ್ತಿ ಹಾಗೂ ಮೊದಲ ಮಹಿಳಾ ನಾಗರಿಕಳಾಗಿದ್ದಾಳೆ. ವಿಶ್ವಸಂಸ್ಥೆಯು ಆಕೆಗೆ ವಿಮಾನಯಾನ ಸುರಕ್ಷಾ ಫೌಂಡೇಶನ್ ನಾಯಕತ್ವದ ಪ್ರಶಸ್ತಿಯನ್ನು ನೀಡಿ ( ಫ್ಲೈಟ್ ಸೇಫ್ಟಿ ಫೌಂಡೇಶನ್ ಹೀರೋಯಿಸಂ ಅವಾರ್ಡ್ )ಗೌರವಿಸಿದೆ. ಇದರ ಜೊತೆಗೆ ಜಸ್ಟಿಸ್ ಫಾರ್ ಕ್ರೈಂ ಅವಾರ್ಡ್ ಪ್ರಶಸ್ತಿಯನ್ನು ನೀಡಿದೆ. ಪಾಕಿಸ್ತಾನ ಸರ್ಕಾರವು ಆಕೆಗೆ ತಂಗ ಯೇ ಇನ್ಸಾನಿಯತ್ ( ಅವಾರ್ಡ್ ಫಾರ್ ಹುಮ್ಯಾನಿಟಿ ) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಆ ದಿನದ ದುರ್ಘಟನೆಯಲ್ಲಿ ರಕ್ಷಿಸಲ್ಪಟ್ಟ ಪ್ರಯಾಣಿಕರಿಂದ ಆಕೆಗೆ ದೊರೆತಿದೆ. ಅಮೆರಿಕದ ಓರ್ವ ಪ್ರಜೆ ಸನ ಶೈನ್ ವೇ ಸುವಾಲ ಎಂಬ ಹೆಣ್ಣು ಮಗಳು ತನ್ನ ಮಗಳಿಗೆ ಆಕೆಯನ್ನು ರಕ್ಷಿಸಿದ ನೀರಜಾ ಎಂಬ ಹೆಸರಿನಿಂದ ಪುನರ್ ನಾಮಕರಣ ಮಾಡಿದಳು. ಸಾಕಷ್ಟು ಜನ ಆಕೆಯನ್ನು ದೈವ ರಕ್ಷಕಿ (ಗಾರ್ಡಿಯನ್ ಏಂಜಲ್) ಎಂದು ಕರೆದರು. ಆಕೆಯಿಂದ ರಕ್ಷಿಸಲ್ಪಟ್ಟ ಮೂರು ಜನ ಮಕ್ಕಳ ಪಾಲಕರು ಆಕೆ ತನ್ನನ್ನು ತಾನು ಬಲಿಕೊಟ್ಟು ನಮ್ಮನ್ನು ಉಳಿಸಿದಳು ಎಂದು ಆಕೆಯನ್ನು ಕೊಂಡಾಡಿದರು  2016ರಲ್ಲಿ ಬಾಲಿವುಡ್ ಆಕೆಯ ಹೆಸರಿನಲ್ಲಿ ನೀರಜಾ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಆಕೆಯ ಕಥೆ ಲಕ್ಷಾಂತರ ಜನರಿಗೆ ತಲುಪುವಂತೆ ಮಾಡಿತು. ಏರ್ಪೋರ್ಟ್ ಗಳು, ಸ್ಕಾಲರ್ಶಿಪ್ ಗಳು ಹಾಗೂ ಪ್ರಶಸ್ತಿಗಳು ಆಕೆಯ ಹೆಸರಿನಲ್ಲಿ ನೀಡಲ್ಪಟ್ಟವು. ಇದೆಲ್ಲಕ್ಕಿಂತ ಶಾಶ್ವತವಾದ ನೆನಪನ್ನು ಕೆತ್ತಲಾಗಿದ್ದು ಯಾವುದೇ ಅಮೃತ ಶಿಲೆಯ ಇಲ್ಲವೇ ಕಂಚಿನ ಫಲಕದಲ್ಲಿ ಅಲ್ಲ ಬದಲಾಗಿ 369 ಜನ ಪ್ರಯಾಣಿಕರು ತಮ್ಮ ತಮ್ಮ ಕುಟುಂಬಗಳಿಗೆ ಮರಳಿ ದೊರೆತದ್ದು. ಇಂದಿಗೂ ಆ ಕುಟುಂಬಗಳ ಸಂತೋಷದ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ  ಮುಂತಾದ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳಲು ಕಾರಣವಾದದ್ದು ಪಾತಕಿಗಳ ವಿರುದ್ದ ನೀರಜಾಳ ಸೋಲೊಪ್ಪಿಕೊಳ್ಳದಿರುವ ಮನೋಭಾವ. ನೀರಜಾ ಭಾನೋಟ್ ಸೈನಿಕಳಾಗಿರಲಿಲ್ಲ.. ಆಕೆಗೆ ಇಂತಹ ಆಕಸ್ಮಿಕಗಳ ವಿರುದ್ಧ ಹೋರಾಡುವ ಯಾವುದೇ ತರಬೇತಿ ಇರಲಿಲ್ಲ. ಅತ್ಯಂತ ಚಿಕ್ಕ ವಯಸ್ಸಿನ ಸಾಮಾನ್ಯವಾಗಿ ವಿಮಾನ ಪರಿಚಾರಕರು ನಿರ್ವಹಿಸುವ ಕರ್ತವ್ಯದ ಬದ್ಧತೆ ಮಾತ್ರ ಆಕೆಯದಾಗಿತ್ತು….ಆದರೆ ದುಷ್ಟ ಶಕ್ತಿಗಳು ಆಕೆಯ ವಿಮಾನವನ್ನು ಏರಿದಾಗ ಆಕೆ ಅಲ್ಲಿಂದ ಓಡಿ ಹೋಗಲಿಲ್ಲ, ಅಡಗಿಕೊಳ್ಳಲಿಲ್ಲ ಬದಲಾಗಿ ಆಕೆ ಕತ್ತಲು ಮತ್ತು ಬೆಳಕಿನ ನಡುವೆ ಗೋಡೆಯಾಗಿ ನಿಂತಳು…. ಹಾಗೂ ತನ್ನ ಕೊನೆಯ ಉಸಿರಿನವರೆಗೂ ಅಚಲವಾದ ರಕ್ಷಣಾ ಗೋಡೆಯಾಗಿ ಪರಿಣಮಿಸಿದಳು  ಆಕೆಯ ಮುಂದೆ ಇಡೀ ಬದುಕು ಇತ್ತು. ಪ್ರೀತಿಸುವ ತಂದೆ ತಾಯಿ ಒಡಹುಟ್ಟಿದವರ ಕಾಳಜಿ ಕೂಡ…. ಆದರೆ ಆಕೆ ತನ್ನ ಬದುಕನ್ನೇ 350ಕ್ಕೂ ಹೆಚ್ಚು ಜನ ಅಪರಿಚಿತ ಪ್ರಯಾಣಿಕರ ಭವಿಷ್ಯಕ್ಕಾಗಿ ಮುಡುಪಾಗಿಟ್ಟಳು ಅದುವೇ ಆಕೆಯ ಮಹತಿ…. ಕರ್ತವ್ಯ ಪ್ರಜ್ಞೆ ಹಾಗೂ ಶಿಸ್ತಿನ ಅತ್ಯಂತ ಶುದ್ಧವಾದ ರೂಪ ನೀರಜಾ  ಈ ಜಗತ್ತಿಗೆ ನೀರಜಾ ಭಾನೋಟಿ ಏನೂ ಅಲ್ಲ ಆದರೆ ಆ 359 ಜನ ಪ್ರಯಾಣಿಕರ ಬದುಕಿಗೆ ಆಕೆಯೇ ಎಲ್ಲಾ. ಆಕೆಯಿಂದಲೇ ಅವರೆಲ್ಲ ಇಂದು ಬದುಕಿ ಬಾಳುತ್ತಿರುವುದು…… ಸಾವಿನಲ್ಲೂ ಸಾರ್ಥಕತೆ ಕಂಡವಳು ನೀರಜಾ ಆಕೆಗೆ ನಮ್ಮ ತುಂಬು ಹೃದಯದ ನಮನಗಳು ವೀಣಾ ಹೇಮಂತ್ ಗೌಡ ಪಾಟೀಲ್

“ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್.” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಕಾವ್ಯಯಾನ

“ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ

ಕಾವ್ಯ ಸಂಗಾತಿ “ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ ನೆರಳು ಕೊಡದ ಅಪ್ಪನೆಂಬಆಲದ ಮರನೆರಳು ಕೊಡದಿದ್ದರೂಬೇಸಿಗೆಯ   ಬರಡಾಗಿ ಮಧ್ಯೆ ನಿಂತಿರುವಆಲದ ಮರದಂತೆನಮ್ಮ ಅಪ್ಪಬಿಸಿಲಿಗೆ ಸುಟ್ಟು ಬಿಸಿನಲಿ ಬೆಂದುಮಳೆಯಿಲ್ಲದೆ ಒಣಗಿಬೇರುಗಳಲ್ಲಿ ನೋವು ಕಟ್ಟಿಕೊಂಡುನಿಂತವನು.ನಮಗೆ ನೆರಳು ಬೇಕಿತ್ತು,ಅವನಿಗೆ ಮಾತ್ರಆಕಾಶದಷ್ಟು ಹೊಣೆ.ಮಾತಾಡಲಿಲ್ಲ,ಅಳಲಿಲ್ಲ,ತನ್ನ ಹಸಿವನ್ನುರಾತ್ರಿಯ ಕತ್ತಲಲ್ಲಿ ಮುಚ್ಚಿಟ್ಟುಕೊಂಡುಬೆಳಗಿನ ಬೆಳಕಿಗೆನಮ್ಮ ಕನಸುಗಳನ್ನು ಎತ್ತಿಕೊಟ್ಟವನು.ಎಲೆಗಳಿಲ್ಲದ ಕೊಂಬೆಗಳ ಮೇಲೆನಮ್ಮ ನಾಳೆಗಳನ್ನೇ ಕಟ್ಟಿಕೊಂಡುಬಿರುಗಾಳಿಗೂ ಎದುರಾಗಿಅಚಲವಾಗಿ ನಿಂತವನು.ನೆರಳು ಸಿಗದಿದ್ದಕ್ಕೆನಾವು ಅವನನ್ನು ತಪ್ಪು ತಿಳಿದೆವು,ಆದರೆನೆಲದೊಳಗೆ ಅವನುನಮಗಾಗಿ ಹರಿಸಿದ್ದಅದೆಷ್ಟು ಮೌನವಾದ ಶ್ರಮ!ನೀರಿಲ್ಲದ ಆಲದ ಮರದಂತೆಅವನ ಪ್ರೀತಿಗೂಹೆಸರು ಇರಲಿಲ್ಲ,ಬಣ್ಣವೂ ಇರಲಿಲ್ಲ,ಆದರೆಅದು ಜೀವ ಉಳಿಸುವ ಬೇರು.ಇಂದು ನಾವುಎತ್ತರಕ್ಕೆ ಬೆಳೆದಾಗಹಿಂದೆ ನೋಡಿದರೆನೆರಳು ಕಾಣುವುದಿಲ್ಲ,ಆದರೆನೆಲದೊಳಗೆ ಕೈ ಹಾಕಿದರೆಅಪ್ಪನ ತ್ಯಾಗಇನ್ನೂ ತೇವವಾಗಿಯೇ ಇದೆ.ನೆರಳು ಕೊಡದ ಅಪ್ಪನೆಂಬ ಆಲದ ಮರ—ಬೀಳದೆ ನಿಂತುಬೇರೂರಿನಮ್ಮ ಬದುಕನ್ನೇತುಂಬಿಸಿಕೊಂಡವನು. ಡಾ ತಾರಾ ಬಿ ಎನ್ ಧಾರವಾಡ

“ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ Read Post »

ಕಾವ್ಯಯಾನ

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು”

ಕಾವ್ಯ ಸಂಗಾತಿ ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು“ ನನ್ನವರು ಸಾಯುವುದು ಗುಂಡಿನಿಂದಲ್ಲಎದೆ ಹಣೆ ಸೀಳಿದ್ದುಪಿಸ್ತೂಲು ಬಂದೂಕಿನಿಂದಲ್ಲ.ರುಂಡ ಮುಂಡ ಕತ್ತರಿಸಿದ್ದುಚಾಕು ಲಾಂಗುಗಳಲ್ಲ.ಸತ್ಯವಂತ ಸಾಯುವುದುದುಷ್ಟ ಹಂತಕರಿಂದಲ್ಲ.ಸಜ್ಜನ ಹೇಡಿಗಳಿಂದ ಅವರು ಇದ್ದಾಗ ಬೆಂಬಲಿಸಲಿಲ್ಲ.ಬೆನ್ನು ತಟ್ಟಿ ಕೈಜೋಡಿಸಲಿಲ್ಲ.ಸತ್ತಾಗ ಬಿಕ್ಕಿ ಬಿಕ್ಕಿ ಅಳುತ್ತೇವೆ.ಮಾನವ ಸರಪಳಿ ಪ್ರತಿಭಟನೆ.ಟಿವಿ ಪತ್ರಿಕೆಯಲ್ಲಿ ಭಾರಿ ಸುದ್ಧಿಆಕ್ರೋಶ ಅಬ್ಬರಹಂತಕರ ಹಿಡಿಯಲು ಸಮಿತಿಸರಕಾರ ಮಲಗುತ್ತದೆ.ಕೊಳಕು ವ್ಯವಸ್ಥೆ ನಾವೂ ಮಲಗುತ್ತೇವೆ . ಸತ್ಯವಂತ ಸಾಯುತ್ತಾನೆ.ಬದುಕಿನಿದ್ದಕ್ಕೂ ಹೋರಾಡುತ್ತಾನೆಸತ್ಯ ಶಾಂತಿ ಹಕ್ಕಿಗಾಗಿ.ಇದ್ದಾಗಲೂ ಒಬ್ಬಂಟಿಗಸತ್ತಾಗಲೂ ಒಬ್ಬನೇಸಾವು ಬೆನ್ನು ಬಿಡಲಿಲ್ಲ.ಸತ್ತವರಿಗೆ ಸಂತನ ಪಟ್ಟ ಕಟ್ಟಿ.ಕೊರಳಲ್ಲಿ ಬೋರ್ಡ್ ಹಾಕುತ್ತೇವೆ. ಅವರು ಸಾಯುವುದು ಗುಂಡಿನಿಂದಲ್ಲ.ನಮ್ಮ ಉದಾಸೀನ ಮೌನದಿಂದ. ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು” Read Post »

ಕಾವ್ಯಯಾನ

ರಶ್ಮಿ ಶಮಂತ್ ಅವರ ಕವಿತೆ, “ಅತ್ಯಾಚಾರ”

ಕಾವ್ಯ ಸಂಗಾತಿ ರಶ್ಮಿ ಶಮಂತ್ “ಅತ್ಯಾಚಾರ” ಮುಗಿಯದ ಕಥೆಯಿದುಸುಡುತ್ತೇವೆನೂರಾರು ಮೇಣದಬತ್ತಿಯನ್ನುಬಿಗಿಯುತ್ತೇವೆ ಭಾಷಣದುಃಖಿಸುತ್ತೇವೆ, ಕೊರಗುತ್ತೇವೆನೆನೆ ನೆನೆದು‘ಅಯ್ಯೋ ಸಣ್ಣ ಮಗುವಂತೆ’ಉದ್ಘರಿಸುತ್ತೇವೆ,ಚೆಲ್ಲುವೆವು ನಿಟ್ಟುಸಿರಚಿಂತಿಸುವೆವು ಮುಂದೇನೆಂದುಹೆಣ್ಣೇಕೆ ಹುಟ್ಟಿತೆಂದುಕೊಡುತ್ತೇವೆ ನೂರಾರು ಸಲಹೆಗಳನ್ನುಮರೆತು ಬಿಡುತ್ತೇವೆಆಕ್ಷಣವನ್ನು ನಡೆಯುತ್ತದೆ? ——- ಏನು?ಮತ್ತೊಮ್ಮೆ ಮಗದೊಮ್ಮೆ  ಅಲ್ಲೆಲ್ಲೋ ಇನ್ನೆಲ್ಲೋ ಮತ್ತೆಲ್ಲೋಕೊನೆಗೊಮ್ಮೆ ನಡೆದರೂ ನಮ್ಮ ಪಕ್ಕದಲ್ಲಿದಿವ್ಯ ನಿರ್ಲಕ್ಷ್ಯ ನಮ್ಮದುಅದೇ ಪುನರಾವರ್ತನೆದೂಷಿಸುತ್ತೇವೆ , ಮರುಗುತ್ತೇವೆಹಾಗೆಯೇ ತೇಲಿಬಿಡುತ್ತೇವೆ ವಿಷಯವನು ಹೊಣೆಯಾಗಿಸುತ್ತೇವೆಪಕ್ಷಗಳನ್ನು , ಜಾತಿಗಳನ್ನು, ಧರ್ಮಗಳನ್ನುತಿಳಿಯಲಾರೆವು ಮೂಲ ಕಾರಣವನಿಂದಿಸಿ, ಆರೋಪಿಸಿ, ನಡೆಸಿ ಜಾಥಾ,ಮಾಧ್ಯಮಗಳಲ್ಲಿ ಕುಳಿತುನಡೆಸುವಾಗ ವಿತಂಡವಾದವಟಿ ಆರ್ ಪಿ ಯ ಸರಕಾಗುತ್ತದೆ ಅವಳ ಕಣ್ಣೀರುಮರೆಯುತ್ತೇವೆ ಮತ್ತೆತಣ್ಣಗಾಗುತ್ತೇವೆ ಎಂದಿನಂತೆಏನೂ ಆಗದಂತೆ ಬಳಸುತ್ತವೆಪಕ್ಷಗಳು ತಮ್ಮ ಬೇಳೆಯ ಬೇಯುವಿಕೆಗೆಹಳಿಯುತ್ತದೆ  ವಿರೋಧ ಪಕ್ಷವುಆಡಳಿತ ಪಕ್ಷವನುಕೊನೆಗೊಮ್ಮೆ ನೀಡುತ್ತಾರೆ ಧರ್ಮ ಜಾತಿಯಹಣೆ ಪಟ್ಟಿಯನುನಗು ನಗುತ್ತಾ ಚರ್ಚಿಸುವರು ಸದನದಲಿಘೋಷವಾಕ್ಯವೊಂದು ತಯಾರಾಗುತ್ತದೆ‘ಮಲಗಿ ಆನಂದಿಸಿ’ ಬಿಸಿ ತಟ್ಟುತ್ತದೆ ಒಮ್ಮೆಸಂತ್ರಸ್ತೆ ನಮ್ಮದೇ ಮನೆಯ ಮಗಳಾದಾಗಎಚ್ಚರವಿರಲಿ ಮೊದಲಾಗಲಿ ಬದಲಾವಣೆ ನಮ್ಮಿಂದಲೇತಡೆಯೋಣ ಮುಂದಾಗದಂತೆ ಅತ್ಯಾಚಾರಗಳುನಿರೂಪಿಸೋಣ ಅಬಲೆಯಲ್ಲ ಅವಳು ಸಬಲಳುಬಲಹೀನತೆಯ ತೊರೆದುನನಸಾಗಿಸೋಣ ಸ್ವಸ್ಥ ಸಮಾಜದ ನಮ್ಮ ಕನಸು ರಶ್ಮಿ ಶಮಂತ್

ರಶ್ಮಿ ಶಮಂತ್ ಅವರ ಕವಿತೆ, “ಅತ್ಯಾಚಾರ” Read Post »

ಇತರೆ, ಜೀವನ

“ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ಮಾದಾಪುರ

ಬದುಕಿನ ಸಂಗಾತಿ “ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ನಾನು ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಿಲ್ಲ ಜಗತ್ತಿನ ಪ್ರತಿ ಒಬ್ಬರು ತಿಳಿದುಕೊಳ್ಳಬೇಕಾದ ಮಾತಿದು ಎಷ್ಟೇ ಕೋಟಿ ಹಣ ಆಸ್ತಿ ಇದ್ದರೂ ನಾವು ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ಇಷ್ಟೆಲ್ಲ ಇದ್ದರೂ ಅದನ್ನೆಲ್ಲವನ್ನು ಅನುಭವಿಸುವಂತಹ ಶಕ್ತಿ ಮನುಷ್ಯನಿಗೆ ಇಲ್ಲ. ಕಾರಣ ಆಸ್ತಿ ಹಣಕ್ಕೆ ಇರುವಷ್ಟು ವಯಸ್ಸು ಮನುಷ್ಯನಿಗೆ ಇಲ್ಲ.ಇದ್ದಾಗ ಇರುವಷ್ಟುನ್ನು ಅನುಭವಿಸುವಷ್ಟು ಮನೋ ಧೈರ್ಯವೂ ಮನುಷ್ಯನಿಗೆ ಇಲ್ಲ. 10 ಕಾರಿದ್ದರು ಒಂದು ಸಲಕ್ಕೆ ಒಂದೇ ಕಾರಿನಲ್ಲಿ  ಕುಳಿತು ಪ್ರಯಾಣ ಮಾಡಲು ಸಾಧ್ಯ. ಹಾಗೆಯೇ ಕೋಟಿ ಕೋಟಿ ಹಣ ವಿದ್ದರೂ ಅದನ್ನೆಲ್ಲ ಎಲ್ಲರ ಎದುರಿಗೆ ತೋರಿಸುವಷ್ಟು ಧೈರ್ಯವಿಲ್ಲ. ಕಾರಣ ಅಷ್ಟೊಂದು ಹಣ ಬರಲು ಒಳ್ಳೆಯ ದಾರಿಯಿಂದ ಅವಕಾಶವಿಲ್ಲ. ಇದ್ದ ಹಣದಲ್ಲಿ ಧಾರಾಳವಾಗಿ ಯಾರಿಗೂ ಸಹಾಯ ಮಾಡದೆ ತನ್ನಲ್ಲಿ ಹಾಗೆ ಇಟ್ಟು ಅದನ್ನು ಉಪಯೋಗಕ್ಕೆ ಬರದಂತೆ ಮಾಡುವುದು ಕೆಟ್ಟ ಮನಸ್ಥಿತಿ ಇರುವ ಮನುಷ್ಯನಿಗೆ ಮಾತ್ರ ಸಾಧ್ಯ. ಹಾಗೆ ತಾನು ಅನುಭವಿಸದೆ ತನ್ನವರಿಗೂ ಕೊಡದೆ ಸತ್ತಾಗ “ದರಿದ್ರದವರು ಬದುಕಿದ್ದು ಏನು ಪ್ರಯೋಜನ ಸತ್ತರೆ ಸಾಯಲಿ ಬಿಡಿ” ಎಂದು ಜನ ಅಂದುಕೊಳ್ಳುವಂತೆ ಬದುಕುವುದು ಏಕೆ ಬೇಕು? ನ್ಯಾಯವಾಗಿ ಬದುಕಿ ದುಡಿದದ್ದರಲ್ಲಿ ತನಗೆ ತನ್ನವರಿಗೆ ಎಂದು ಬಚ್ಚಿಡದೆ ಇರುವಷ್ಟು ದಿನ ಎಲ್ಲರೊಂದಿಗೆ ಪ್ರೀತಿಯಿಂದ ಬದುಕಿ ಸತ್ತಾಗ “ಈ ಮನುಷ್ಯ ಇನ್ನಷ್ಟು ದಿನ ಬದುಕಿರಬೇಕಿತ್ತು “ಅಂದುಕೊಳ್ಳುವಂತೆ ಬದುಕುವುದು ಎಷ್ಟು ಒಳ್ಳೆಯ ಸಾರ್ಥಕತೆಯ ಬದುಕಲ್ಲವೇ?.ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯನಾಗಿಯೇ ಇಲ್ಲ ಅವನನ್ನು ಮೃಗಗಳಿಗೆ ಹೋಲಿಸುವುದು ಖಂಡಿತ ಬೇಡವೇ ಬೇಡ. ಮೃಗಗಳಿಗಿರುವಷ್ಟು ಒಳ್ಳೆಯತನ ಈ ಕೆಟ್ಟ ಮನುಷ್ಯನಿಗಿಲ್ಲ. ಸ್ವಾರ್ಥ ಮೋಸ ಧಗ ವಂಚನೆ ಅನ್ಯಾಯ ಇವೆಲ್ಲವೂ ಮನುಷ್ಯನ ಐದು ಅಂಗಗಳಂತಾಗಿದೆ. ಮನುಷ್ಯ ತನ್ನ ದುನ೯ಡತೆ ದುರ್ಗುಣ ಇವುಗಳಿಂದ ತನ್ನನ್ನು ತಾನು ಹಾಳು ಮಾಡಿಕೊಂಡು ತನ್ನ ಸುತ್ತಮುತ್ತಲಿನ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾನೆ. ಒಳ್ಳೆಯದು ಮಾಡಲು ಒಂದು ಕ್ಷಣ ಯೋಚನೆ ಮಾಡಿದರೆ ಸಾಕು. ಕೆಟ್ಟದ್ದನ್ನು ಮಾಡಲು ಸಾವಿರ ಸಲ ಯೋಚಿಸಬೇಕು. ಆದರೆ ಈಗಿನ ಯುವ ಜನತೆ ತಪ್ಪನ್ನು ಮಾಡಲು ಒಂದೇ ಕ್ಷಣ ಯೋಚಿಸುತ್ತಾರೆ ಒಳ್ಳೆಯದನ್ನು ಮಾಡಲು ಸಾವಿರ ಸಲ ಯೋಚಿಸುತ್ತಾರೆ. ಹಾಗಾಗಿ ಇಂದು ಎಷ್ಟೋ ಯುವಜನತೆ ತಪ್ಪುಗಳನ್ನು ಮಾಡಿ  ಜೈಲನ್ನು ಸೇರಿದ್ದಾರೆ. ಅವರನ್ನೆಲ್ಲ ನೋಡಿ ಆದರೂ ಉಳಿಧ ಜನರುಬುದ್ದಿ ಕಲಿತು ಬದುಕಬೇಕು.ಇವತ್ತಿನ ಮಕ್ಕಳು ತಂದೆ ತಾಯಿಯರ ಮಾತಿಗೆ ಬೆಲೆ ಕೊಡದೆ, ತಮ್ಮದೇ ಆದ ರೀತಿಯಲ್ಲಿ ನಡೆದುಕೊಂಡು ಜೀವನ ವನ್ನೇ ಹಾಳುಮಾಡಿಕೊಂಡು, ಕೇಳಿದರೆ ಅವ್ರೆಲ್ಲ ಹೇಳೋ ಮಾತು ಏನು ಗೊತ್ತಾ? ನಾವು ನಿಮ್ಮ ಕಾಲದವರಲ್ಲ, ಇವತ್ತಿನ ಜನರೇಷನ್ ನಾವು ಎಂದು  ಉತ್ತರಿಸುವ ರೀತಿ ಅಸಯ್ಯ ತರುತ್ತೆ. ತಂದೆ ತಾಯಿಗಳು ಈ ಮಕ್ಕಳ ಕಾಲದಲ್ಲಿ ಸೋತು ಹೋಗಿದ್ದಾರೆ. ನಾನು ತಂದೆ ತಾಯಿಗಳಿಗೆ ಒಂದು ಮಾತು ಹೇಳುತ್ತೇನೆ. ಯಾರ ಮಕ್ಕಳೇ ಆಗಲಿ ಮರ್ಯಾದೆ ತೆಗೆಯೋ ಕೆಲಸ ಮಾಡಿದರೆ ನೀವು ನೊಂದುಕೊಂಡು ಜೀವ ಕಳೆದುಕೊಳ್ಳಬೇಡಿ. ಕಾರಣ ಯಾವ ತಂದೆ ತಾಯಂದಿರು  ಮಕ್ಕಳನ್ನು  ಕೆಟ್ಟ ದಾರಿಗೆ ಹೋಗಲು ಪ್ರೇರೇಪಿಸುವುದಿಲ್ಲ. ಹಾಗೆಯೇ ಯಾರು ನೋವುಂಡ ತಂದೆ ತಾಯಿಯರಿಗೆ ದಯವಿಟ್ಟು ಅವಮಾನಿಸಿ ಮಾತನಾಡಬೇಡಿ. ಹಣ ಇಲ್ಲ ಅಂದ್ರೆ ಜನಗಳ ಎದುರಿಗೆ ಓಡಾಡಬಹುದು  ಆದ್ರೆ ಮರ್ಯಾದೆ ಹೋದರೆ ಹೇಗೆ ಓಡಾಡಬಹುದು ಅಲ್ಲವೇ,  ಮರ್ಯಾದೆ ಇಲ್ಲ ಅಂದ್ರೆ ನೆಮ್ಮದಿ ಎಲ್ಲಿರುತ್ತೆ. ವನಜ ಮಹಾಲಿoಗಯ್ಯ ಮಾದಾಪುರ

“ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ಮಾದಾಪುರ Read Post »

ಕಾವ್ಯಯಾನ

ನಾಗರಾಜ ಬಿ ನಾಯ್ಕ ಅವರ ಕವಿತೆ “ತಕದಿಮಿತ”

ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ತಕದಿಮಿತ” ತಕದಿಮಿತಎದೆಯ ಕವಿತೆಯೊಳಗೆಭಾವದ ತಕದಿಮಿತಮೋಡ ಮಲ್ಲಿಗೆಯ ದಾಟಿಗಾಳಿ ವೀಣೆಯ ನುಡಿಸಿಪಲ್ಲವಿಯ ಹಿಡಿದೆಬ್ಬಿಸಿಜಗದ ಒಲವಿಗೆಬಾಳುವುದ ಕಲಿಸಿನಾದದಿ ಮತ್ತೆ ನಾದವಾಗಿಉಲಿವ ತಕದಿಮಿತಸುಳಿವ ತೇರಿನ ನೆರಳುಮುಂಗುರುಳ ಮಾತಾಡಿಸಿಮೌನದಲಿ ಹಬ್ಬಿರುವನಗೆಯ ನಗುವಾಗಿಸಿಕುಣಿವಂದದ ಕುಣಿತದಿಮೇಲ್ಮುಗಿಲ ತೋರಣದಿಹೆಜ್ಜೆಗೊಂದು ಕರಗಳ ಹಿಡಿದುನಡೆ ನಂಬಿ ಬಂದ ಹಕ್ಕಿಗೆಗೂಡೊಳಗೆ ಸವಿನಿದ್ದೆಬೆಟ್ಟದ ತುದಿಯಕಲ್ಲು ಮಂಚದ ಮೇಲೆಮಲಗಿದ್ದ ಉಸಿರಿನಬಡಿತವೂ ಒಂದು ತಕದಿಮಿತಹೂವರಳಿ ನಿಂತಂದಕೆಬೇರೊಳಗೆ ಸಂಚಲನಬೇರು ಮಣ್ಣೊಳಗೆಜೊತೆಗಿರುವ ಅನುಬಂಧಮಾತು ಮಾತಿಗೆಗೆರೆಯಾಗದ ಸಂಬಂಧಗರಿಗಳ ನಡುವೆ ಬೀಸುವತಂಗಾಳಿಯ ಪಿಸುಮಾತುಕೂಡ ಒಂದು ತಕದಿಮಿತ ನಾಗರಾಜ ಬಿ ನಾಯ್ಕ

ನಾಗರಾಜ ಬಿ ನಾಯ್ಕ ಅವರ ಕವಿತೆ “ತಕದಿಮಿತ” Read Post »

ಕಾವ್ಯಯಾನ

ಸುಮತಿ ನಿರಂಜನ ಕವಿತೆ, “ಪತಂಗ ಸಂಗ-ತಿ”

ಕಾವ್ಯ ಸಂಗಾತಿ ಸುಮತಿ ನಿರಂಜನ “ಪತಂಗ ಸಂಗ-ತಿ” ಹಾರೋಣ ಬನ್ನಿರಿ ಗೆಳೆಯರೇ ಹಾರೋಣನೀಲಿ ಆಕಾಶಕ್ಕೆ ಹಾಕೋಣ ಲಗ್ಗೆಒಂದೇ ದಿನವೆಂದು ಕುಂದದೆ ನಾವಿಂದುಒಂದಾಗಿ ಚಂದದಲಿ ನಲಿಯೋಣಚಂದಿರನ ಹೊಲದಲಿ ಚಿಕ್ಕೆಯ ಕುಯಿಲುಸಿಕ್ಕಷ್ಟು ಬಾಚಿ ತಬ್ಬೋಣ ಸುಗ್ಗಿಯಸಗ್ಗದ ಸುಖವ ಸವಿಯೋಣ !ಬೇರೆ ಬೇರೆ ರಂಗು ಬೇರೆ ಬೇರೆ ಗುಂಗುಲಂಗುಲಗಾಮಿಲ್ಲದೇ ಹಾರೋಣಒಬ್ಬರ ಬಿತ್ತರ ಇನ್ನೊಬ್ಬರೆತ್ತರಕಂಡು ಕರುಬದೆ ಮೇಲೆ ಹಾರೋಣರೆಕ್ಕೆ ಕತ್ತರಿಸದೆ ಕೊಕ್ಕಿಂದ ಚುಚ್ಚದೆಸಕ್ಕರೆ ಅಚ್ಚು ಹಂಚೋಣ ಸ್ನೇಹಿತರೆಅಕ್ಕರೆಯಿಂದ ಹರಸೋಣ ಕಣ್ಣಲ್ಲೆಕನಸಿನ ಗೋಪುರ ಕಟ್ಟೋಣಕೊನೆಯಿಲ್ಲ ಕಲ್ಪನೆ ಕ್ಷಿತಿಜಕ್ಕೆ ಕೆಳೆಯರೇಮಿತಿಯಿಲ್ಲ ಆತುಮ ಬಲಕೆ ಸಾಹಸಕೆಬನ್ನಿರಿ ಗೆಳೆಯರೆ ತನ್ನಿರಿ ಸುಮಶರಕಾಮನ ಬಿಲ್ಲ ಹೆದೆಗೇರಿಸೋಣಕಟ್ಟೋಣ ತೋರಣ ಬಾನ ಬಾಗಿಲಿಗೆಮುತ್ತಿನ ತೋರಣ ಕಟ್ಟೋಣ ಬನ್ನಿರಿಅಕ್ಷರ ದೀಪವ ಬೆಳಗೋಣ !! ಸುಮತಿ ನಿರಂಜನ

ಸುಮತಿ ನಿರಂಜನ ಕವಿತೆ, “ಪತಂಗ ಸಂಗ-ತಿ” Read Post »

You cannot copy content of this page

Scroll to Top