ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಮೌನ ಸರೋವರ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಮೌನ ಸರೋವರ” ಬಾಲ್ಯದ ಬೆಳಗಿನ ಹೊತ್ತಿನಲ್ಲಿನೀಲಿ ನೀರಿನ ನಿಶ್ಶಬ್ದ,ಪ್ರಶ್ನೆಯೇ ಅರಳದ ದಿನಗಳು,ಉತ್ತರವೇ ಕೇಳದ ಕಾಲ. ಆಕಾಶ ತಬ್ಬಿದ ಸರೋವರ,ಆಟದ ಕಲ್ಲು ಬಿದ್ದರೂನಗು ತೇಲಿ ಹೋದಿತುಮಸುಕು ಮನದವರೆಗೂ ತಲುಪಲಿಲ್ಲ. ಕಾಲ ನಡೆದು ದಾರಿಯಾದಂತೆಹೆಜ್ಜೆಗಳು ಬಂತು ಹಲವು,ಕೆಲವು ನೀರು ತಂದವು,ಕೆಲವು ಮಣ್ಣು ಸುರಿದವು. ನೋವುಗಳು ಇಳಿದವುನೀರಿನ ಆಳದೊಳಗೆ,ಮಾತಿಲ್ಲದೆ ಕುಳಿತವುಸರೋವರದ ಹೃದಯದಲ್ಲಿ. ಭೇದದ ಮೊದಲ ಸ್ಪರ್ಶಅಲೆ ಎಬ್ಬಿಸಿತು,ಹೊರಗೆ ಕದಲಿಕೆ,ಒಳಗೆ ಮೌನ ಗಾಯ. ಸರೋವರ ಮಾತಾಡಲಿಲ್ಲ,ಮೌನವೇ ಅದರ ನಾಡಿ,ಧ್ವನಿಯಿಲ್ಲದ ನೋವೇನೀರಿನ ಭಾಷೆ. ಸಮಾಜ ಬಂದು ನಿಂತುಬಣ್ಣ ಮಾತ್ರ ನೋಡಿತು,ಆಳ ಕೇಳದೆ ತೀರ್ಪುನೀರಿನ ಮೇಲೆ ಬರೆದಿತು. ಬಿರುಗಾಳಿ ಬೀಸಿದರೂನೀರನ್ನೇ ತಪ್ಪೆಂದರೂ,ಮೇಲ್ಮೈ ಕದಡಿದರೂಆಳ ಮಾತ್ರ ನಿಂತಿತು. ಸಂಧ್ಯದ ಹೊತ್ತಿನಲ್ಲಿನೀರು ಕಡಿಮೆಯಾಯಿತು,ಆಳ ಹೆಚ್ಚಾಯಿತು,ಅರ್ಥಗಳು ಗಾಢವಾದವು. ಅಲೆಗಳು ಮೌನವಾಯಿತು,ಹೇಳದ ಕಥೆಗಳುನೀರಿನೊಳಗೆನೆಲೆಯಾದವು. ಆಕಾಶ ಬಿದ್ದರೆ ಹಿಡಿಯುವೆ,ಹೂ ಬಿದ್ದರೆ ಕಾಪಾಡುವೆ,ಕಲ್ಲು ಬಿದ್ದರೂನೀರಾಗಿಯೇ ಇರುವೆ. ಮೌನ ಸರೋವರಕಲ್ಲುಗಳನ್ನು ಕ್ಷಮಿಸಿದ ನೀರು,ಬಿರುಗಾಳಿಗೆ ಸಾಕ್ಷಿಯಾದ ಆಳ,ತೋರಿಸದೆ ಹೊತ್ತ ನೋವು. ಮಾತಿಲ್ಲದೆ ಉಳಿದ ಸಹನೆ,ಒಡೆಯದೆ ನಿಂತ ಶಕ್ತಿಅದೇ ಬದುಕಿನಮೌನ ಸಾರ. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಮೌನ ಸರೋವರ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಸುಳ್ಳಿನ ಬಲೆ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ “ಸುಳ್ಳಿನ ಬಲೆ” ಸುಳ್ಳಿನ ಬಾಯಿಗೆಸಿಗಬಾರದುಯಾಕೆಂದರೆ ಸುಳ್ಳುಮೆರವಣಿಗೆಯಲ್ಲಿರಾಜಾರೋಷವಾಗಿಹೊರಡುವುದು.ಸತ್ಯದ ಬಟ್ಟೆಯುಟ್ಟುಸುಳ್ಳನ್ನು ಮೂಲೆಗೆ ಸರಿಸಿಮುನ್ನೆಯುವುದು,,,ಆದರೆಸತ್ಯ ಒಂಟಿಯಾಗಿನಿಲ್ಲುವುದು.ಸತ್ಯದ ಬೆಳಕಲ್ಲಿ ಇರಲಿನಮ್ಮ ಜೀವನ ಪಥಮೋಸದ ನೆರಳಿಗೆಮನ ಸಾಯಬಾರದು,ನಂಬಿಕೆಯ ಹೂವಿಗೆಸುಳ್ಳಿನ ಮುಳ್ಳುತಾಗಬಾರದುಸುಳ್ಳು ಸಿಹಿ ಮಾತುಹೊದಿಸಿ ಬರುವುದುಕೆಲವೊಮ್ಮೆ,ಸತ್ಯದ ಕಾಠಿಣ್ಯಕಲ್ಲಿನಂತೆ ತೋರುವುದುಕೆಲವೊಮ್ಮೆ.ಆದರೂ ಸತ್ಯವೇದೀಪವಾಗಿ ದಾರಿತೋರಿಸಬೇಕುಆದರೆಸುಳ್ಳು ಮುಖವಾಡಧರಿಸಿ ಕೇಕೆ ಹಾಕುವುದುಅಸತ್ಯದ ಅಂಧಕಾರನಮ್ಮ ಹಾದಿಕೊನೆಯಾಗಬಾರದುಸುಳ್ಳಿನ ನಗುವಿಗೆಮನವುಮರುಳಾಗಬಾರದು,ಸ್ವಾರ್ಥದ ಸುಳಿಯಲ್ಲಿಸತ್ಯ ಮುಳುಗಬಾರದು.ನಿಷ್ಕಳಂಕ ಹೃದಯದಶುದ್ಧ ಶಪಥ ಇರಲಿ,ನೀತಿಯ ನಾದವುನಿತ್ಯ ನಮ್ಮೊಳಗೆ ಹರಡಲಿ.ಸುಳ್ಳು ಕ್ಷಣಿಕ ಮೋಡ,ಸತ್ಯ ಚಿರಂತನ ಆಕಾಶ,ಅದು  ಮುಸುಕಿದ  ಮರೆಸತ್ಯವೇ ಕೊನೆಯ ಪ್ರಕಾಶ.ಆದ್ದರಿಂದ ಜೀವದಪ್ರತಿಯೊಂದು ಹೆಜ್ಜೆಸುಳ್ಳಿನ ಬಾಯಿಗೆಸಿಗದಿರಲಿ ನಮ್ಮ  ಮಾತುಸತ್ಯ ಮೇವ ಜಯತೆ.ಸುಳ್ಳು ಸರಿಯಲಿಹಿಂದೆ ಹಿಂದೆ ಹಿಂದೆ… ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಸುಳ್ಳಿನ ಬಲೆ” Read Post »

ಕಾವ್ಯಯಾನ

ಮಮತಾ ಜಾನೆ ಅವರ ಕವಿತೆ “ಅಮ್ಮನ ಮಡಿಲು”

ಕಾವ್ಯ ಸಂಗಾತಿ ಮಮತಾ ಜಾನೆ “ಅಮ್ಮನ ಮಡಿಲು” ನವಮಾಸವ ಹೊರುವಳುಸಾಟಿ ಇಲ್ಲದ ಪ್ರೀತಿ ತೋರುವಳುಮಮತೆಯ ಸಾಗರದವಳುಕರುಣೆಯ ಗಣಿಯವಳು ಮೊದಲ ಗುರು ಆಗುವಳುಜೀವನ ದಾರಿ ತೋರಿಸುವಳುಧೈರ್ಯವ ತುಂಬುತ ನಡೆಸುವಳುಆತ್ಮವಿಶ್ವಾಸದಿ ಸದಾ ಸ್ಪರ್ಶಿಸುವಳು ಕಣ್ಣೀರು ಒರೆಸಿ ದುಃಖವ ಮರೆಸುವಳುಸಂತೋಷದ ಸಂಗಾತಿಯವಳುತಪ್ಪಿದರೆ ತಿದ್ದಿ ಬುದ್ಧಿ ಹೇಳುವಳುಬದುಕಿಗೆ ಅರ್ಥ ನೀಡುವಳು ಮಕ್ಕಳ ಜೀವನದ ಕನಸು ಕಟ್ಟುವಳುನನಸಾಗಲು ಪ್ರತಿ ಹೆಜ್ಜೆಗೂ ಹೋರಾಡುವಳುಸದಾ ತ್ಯಾಗದ ಮೂರ್ತಿಯವಳುತನ್ನ ಬದುಕೆ ಮುಡಿಪಾಗಿಟ್ಟವಳು ಕಷ್ಟವೋ ಸುಖವೋ ಲೆಕ್ಕಿಸದವಳುಸ್ವಾರ್ಥವ ಇಲ್ಲದ ನಿಸ್ವಾರ್ಥ ಗುಣದವಳುನಿತ್ಯ ಜೀವನದ ಶಕ್ತಿಯವಳುಹೊಗಳಲು ಪದಗಳೇ ಸಾಲದವಳು ಮಮತಾ ಜಾನೆ

ಮಮತಾ ಜಾನೆ ಅವರ ಕವಿತೆ “ಅಮ್ಮನ ಮಡಿಲು” Read Post »

You cannot copy content of this page

Scroll to Top