ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಥಾಕಥಿತ ದೊಡ್ಡಣ್ಣ ದೂರದೇಶದಿಂದಲೇ ಕಳುಹಿದ ತನ್ನೆಲ್ಲ ಅಷ್ಟೈಶ್ವರ್ಯದ ಶಸ್ತ್ರಾಸ್ತ ಸಾಮರ್ಥ್ಯ

ತನ್ನ ನೆಲ ತಣ್ಣಗಿರಲಿ
ಬೇರೆಯವನ ನೆಲ ಜಲ ವಾಯುಗಳು ವಿಷಾನಿಲಗಳಾಗಲಿ, ಉರಿಯುತಿರಲಿ ಸದಾ.

ತಾ ಮಾತ್ರ ಹೊಂದಬೇಕು ಮಾರಕಾಸ್ತ್ರ ಅಣ್ವಸ್ತ್ರ
ಅವನಿಗೇಕೆ ಬೇಕು ಈ ಅಶ್ವತ್ಥಾಮಾಸ್ತ್ರ

ದೊಡ್ಡಣ್ಣ ನಾನೇ ನಾನೇ
ದುರ್ಯೋಧನನೇ ಅಂದವನು.

ಇಬ್ಬರೂ ಮೂರ್ಖರು
ಇಬ್ಬರೂ ದುರ್ಬುದ್ಧಿಯವರು
ಇಬ್ಬರಿಗೂ ಹೇಳ ಬಹುದು
ವಿನಾಶ ಕಾಲೇ ವಿಪರೀತ ಬುದ್ಧಿಃ

ಅಡಕತ್ತರಿಯಲ್ಲಿರುವ ನಾವು
ಇಹ ಪರಗಳ ನೆನೆವವರು


About The Author

Leave a Reply

You cannot copy content of this page

Scroll to Top