ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ, ಕಥಾಗುಚ್ಛ

ತೆಲುಗು ಕಥೆ “ನಾಸ್ತಿಕ ದೇವರು”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ ನಾಸ್ತಿಕ ದೇವರು ತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಶ್ರೀಶೈಲಂ ಪ್ರಾಜೆಕ್ಟ್ ಕಾಲೋನಿಯಲ್ಲಿ ಎಲ್ಲರನ್ನೂ ಅತ್ತೆ-ಮಾಮಾ ಎಂದು ಕರೆಯುವುದುವಾಡಿಕೆ. ಹಾಗಾಗಿ ಅವರು ಯಾವದೇ ಪ್ರದೇಶದವರಾಗಲಿ, ಯಾವುದೇ ಧರ್ಮದವರಾಗಲಿ, ಯಾವುದೇ ಜಾತಿಯವರಾಗಲಿ ಅಲ್ಲಿ ಅತ್ತೆ-ಮಾವ. ಮಕ್ಕಳು ನಮಗಿಂತ ದೊಡ್ಡವರಾಗಿದ್ದರೆ, ಅಣ್ಣ ಮತ್ತು ಅಕ್ಕಾ ಎಂದೇ ಕರೆಯುತ್ತಿದ್ದೆವು.  ಹಾಗೆ ನನ್ನ ತಂದೆಯ ಕಛೇರಿಯಲ್ಲಿ ಕೆಲಸಮಾಡುವ ಲಕ್ಷ್ಮೀರೆಡ್ಡಿ ಅವರು ನಮಗೆ ಮಾಮವಾದರು. .ಸ್ವಲ್ಪ ತೆಳ್ಳಗಿನ ಗುಂಗುರು ಕೂದಲನ್ನು ಹಿಂದಕ್ಕೆ ಬಾಚಿಕೊಂಡು ಬಿಳಿಅಂಗಿ ಹಾಕಿಕೊಂಡು ಮೊಣಕೈಯ ವರೆಗೆ ಮಡಚಿ ಸೈಕಾಲ್ ತುಳಿಯುತ್ತಿದ್ದರು. ಅವರು ನನ್ನ ತಂದೆಯ ಕಛೇರಿಯ ಅಕೌಂಟ್ಸ್ ವಿಭಾಗದಲ್ಲಿ ಕೆಲಸಮಾಡುತ್ತಿದ್ದರು. ಆ ದಿನಗಳಲ್ಲಿ ಪ್ರಾಜೆಕ್ಟ್  ಕೆಲಸಗಳು  ಬಿರುಸಿನಿಂದ ನಡೆಯುತ್ತಿದ್ದರಿಂದ ಕೆಲಸದ ಒತ್ತಡ ಹೆಚ್ಚಿತ್ತು. ಎಲ್ಲರೂ  ತಪಾಸಣೆಗೆ ಹೋಗಿ ನೋಟ್ ಮಾಡಿದ ಎಂ.ಬುಕ್ಸ್ ಗಳಲ್ಲಿನ (ಮೇಸರ್ಮೆಂಟ್ಸ್ ಬುಕ್ಸ್)  ವಿವರಗಳನ್ನು ಪರಿಶೀಲಿಸಿ, ಅವುಗಳನ್ನು ಎಣಿಸಿ ಅವು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು  ನಿರ್ಧರಿಸಿದರು. ಇದಲ್ಲದೆ ಅವರು ಕ್ಲೆಯಿಮ್  ಮಾಡಿದ ಮೊತ್ತವೂ, ಈ ವಿವರಗಳಿಗ ಅನುಗುಣವಾಗಿಯಿದಯೆ  ಅಥವಾ ಇಲ್ಲವೇ ಎಂಬುದನ್ನೂ ಸಹಾ ಪರಿಶೀಲಿಸುತ್ತಿದ್ದರು. ಕ್ಷೇತ್ರದಲ್ಲಿ ಕೆಲಸ ಮಾಡುವವರೆಲ್ಲರೂ ದಿನವಿಡೀ ಕೆಲಸ ಮಾಡುತ್ತಿದ್ದರು ಮತ್ತು ಸಂಜೆಯ ಹೊತ್ತಿಗೆ, ಅವರು ಆ ಪುಸ್ತಕಗಳನ್ನು  ಅಕೌಂಟ್ಸ್ ವಿಭಾಗಕ್ಕೆ ಸಲ್ಲಿಸುತ್ತಿದ್ದರು ಮತ್ತು ಉಳಿದ ಕೆಲಸವನ್ನು ನನ್ನ ತಂದೆ ಮನೆಗೆ ತರುತ್ತಿದ್ದರು.  ಅವುಗಳಲ್ಲಿ ಹೆಚ್ಚಿನವು ಘನ ಪರಿಮಾಣದ ಲೆಕ್ಕಾಚಾರಗಳಲ್ಲಿ ಇರುತ್ತಿದ್ದವು . ಎತ್ತರ, ಉದ್ದ, ಅಗಲ ಇರುತ್ತಿದ್ದವು- ಅದರ ಆಧಾರದಮೇಲೆ ಅವರು ಎಷ್ಟು ಘನಅಡಿ ಕೆಲಸ ಮಾಡಲಾಗಿದೆ ಎಂದು ಲೆಕ್ಕಹಾಕಿ ಅದನ್ನು ಯೂನಿಟ್ ರೇಟ್  ನಿಂದ  ಗುಣಿಸುತ್ತಿದ್ದರು.  ಆ ಲೆಕ್ಕಾಚಾರಗಳನ್ನು ಆಗಾಗ ಕಲಿತಿದ್ದರಿಂದ ನಾನು ಆಗಾಗ ಅಪ್ಪನ ಜೊತೆ ಕುಳಿತು ಕೆಲವು ಲೆಕ್ಕಾಚಾರಗಳನ್ನು ಮಾಡುತ್ತಿದ್ದೆ. ತುಂಬಾ ಕೆಲಸವಿದ್ದಾಗ, ಲಕ್ಷ್ಮಿರೆಡ್ಡಿ ಮಾಮ ಭಾನುವಾರ ಬೆಳಿಗ್ಗೆ ಟಿಫಿನ್  ಮಾಡಿದ ನಂತರ ಸೈಕಲ್‌ನಲ್ಲಿ ನಮ್ಮ ಮನೆಗೆ ಬರುತ್ತಿದ್ದರು. ಅವರು ಬರುತ್ತಾರೆಂದು ತಿಳಿದ ದಿನ ನಾನು ಅವರ ಆಗಮನಕ್ಕಾಗಿ ಸಾವಿರ ಕಣ್ಣುಗಳಿಂದ ಕಾಯುತ್ತಿದ್ದೆ. ನಾನು ಕಾಯುತ್ತಿದ್ದೇನೆ ಎಂದು ಗ್ರಹಿಸಿದ ಅವರು ಬಂದೊಡನೆ ‘ಮಾಸ್ಟರ್’ಎಂದು ಕರೆಯುತ್ತಿದ್ದರು. ಅದು ಕೇಳಿದ ತಕ್ಷಣ  ಎಲ್ಲಿದ್ದರೂ  ಓಡೋಡಿ ಬಂದು ಚಾಚಿದ  ಅವರ ಕೈಯಲ್ಲಿನ ಸೈಕಲ್ ಕೀಲಿಗಳನ್ನು ನಾಯಿ ಮರಿಯಂತೆ ಗಪ್ಪೆಂದು ಹಿಡಿದುಕೊಂಡು ಸರ್ರ್  ಎಂದು ಓಡಿಹೋಗುತ್ತಿದ್ದೆ. ಅಷ್ಟು ಆಸೆ ಯಾಕೆ  ನಮ್ಮ ಮನೆಯಲ್ಲಿ  ಸೈಕಲ್ಇರಲಿಲ್ಲ. ಆಫೀಸು ಅರ್ಧಕಿಲೋ ಮೀಟರ್ ಇರಲಿ  ಅಥವಾ  ಆರು ಕಿಲೋ ಮೀಟರ್ ಇದ್ದರೂ ನಮ್ಮ  ಅಪ್ಪ   ಆಫೀಸಿಗೆ ನಡೆದುಕೊಂಡೇ ಹೋಗುತ್ತಿದ್ದರು. ಬಾಡಿಗಗೆ  ಸೈಕಾಲ್ ಪಡೆದರೂ, ಒಂದು ಗಂಟೆಗಿಂತ ಹೆಚ್ಚು ಸಮಯ ಸವಾರಿ ಮಾಡಲು ನನಗೆ ಹಣ ಕೊಡುತ್ತಿರಲಿಲ್ಲ. ಅದಕ್ಕಾಗಿಯೇ ಲಕ್ಷ್ಮಿರೆಡ್ಡಿ ಮಾಮ ಬಂದಾಗ, ನಾನು ಕೀಲಿಗಳನ್ನು ತೆಗೆದುಕೊಂಡು, ಸೈಕಲ್ ಹತ್ತಿ ಅಡ್ಡ ಕಾಲಿಂದ ಫೆಡಲ್ ತುಳಿಯುತ್ತಾ ಕ್ಲಬ್ ಬಳಿಯ ಗ್ರೌಂಡ್ ಗೆ ಓಡಿಹೋಗುತ್ತಿದ್ದೆ!  ಅಡ್ಡ ಕಾಲು ಹಾಕಿ ಸೈಕಲ್ ತುಳಿಯುತ್ತಾ ಊರೆಲ್ಲಾ ತಿರುಗುತ್ತಿದ್ದೆ. ಒಂದೊಂದು ದಿನ ಒಂದೊಂದು ದಾರಿಯಲ್ಲಿ ಪ್ರಯಾಣ ಸಾಗುತ್ತಿತ್ತು.  ಮೂರನೇ ಸಾಲಿನಿಂದ ಕೆಳಗಿಳಿಯುವಾಗ ಡೌನ್ ನಲ್ಲಿ ಹೋಗುತ್ತಿರುವಾಗ  ತುಂಬಾ ಸಂತೋಷದಿಂದ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಯಿತು. ಮತ್ತೆ ನಾನು ಹಿಂತಿರುಗಿ ಅಪ್  ಏರುವಾಗ ಬೆವರು ಸುರಿಸುತ್ತಿದ್ದೆ. ಅಲ್ಲದೆ ನಾನು ವಾಟರ್ ವರ್ಕ್ಸ್ ನಿಂದ   ಎಡಕ್ಕೆ ತಿರುಗಿ, ವರ್ಕ್ ಷಾಪ್ ದಾಟಿ, ನಂತರ ಬರುವ ಮುಂದಿನ ತಿರುವುಗಳಿಗೆ ಹೆದರಿ ಹಿಂತಿರುಗುತ್ತಿದ್ದೆ. ಸ್ಕೂಲ್ , ಪಾರ್ಕ್, ಬಸ್ ಸ್ಟಾಂಡ್ ನಿಂದ  ನೇರವಾಗಿ ಉಮಾಮಹೇಶ್ವರ ಟಾಕಿಸ್ ತನಕ, ಎಲ್ಲಿಯೂ ಕಾಲು ಕೆಳಗೆ ಇಡದೆ ಸೈಕಲ್ ತುಳಿಯುವುದು ಸಾಧ್ಯವಾಗುತ್ತಿರವಿಲ್ಲ. SBI ಬಳಿ ಒಂದು ಸಣ್ಣ ಬೆಟ್ಟವಿತ್ತು. ಸೈಕಲ್ ತುಳಿಯುವ ಮತ್ತು ಕಾಲುಗಳನ್ನು ಕೆಳಗೆಇಡದೆ ಮೇಲಕ್ಕೆ ಏರುವ ಸ್ಪರ್ಧೆಗಳು ಸಹ ನಡೆಯುತ್ತಿದ್ದೆವು.  ನಮ್ಮ ತರಗತಿಯಲ್ಲಿ ಈಗಾಗಲೇ ಎತ್ತರವಾಗಿದ್ದ ಅನೇಕ ಮಕ್ಕಳು ತಮ್ಮ ಸೈಕಲ್‌ಗಳಲ್ಲಿ  ಚೆಕ್‌ಪೋಸ್ಟ್‌ ವರೆಗೆ ಸುಲಭವಾಗಿ ಹೋಗಿ ಬರುತ್ತಿದ್ದರು. ಅವರಲ್ಲಿ ಕೆಲವರು  ಶ್ರೀಶೈಲಕ್ಕೂ ಹೋಗಿ ಬಂದಿವೆ ಎಂದು ಹೇಳುತ್ತಿದ್ದರು. ಅವೆಲ್ಲವೂ ನನ್ನ ಪಾಲಿಗೆ ದೊಡ್ಡ ಸಾಹಸ ಕೃತ್ಯ ಗಳೆಂದು ಎನಿಸುತ್ತವೆ. ರಾಮಮಂದಿರ, ಕಾಗೆಗಳ ಸೆಂಟರ್, ಐ.ಟಿ.ಐ.. ಹೀಗೆ ಇಡೀ ಇಡೀ ಊರು ಸೈಕಲ್ ಮೇಲೆ ಎಷ್ಟು ರೌಂಡ್ಸ್ ಹಾಕಿದ್ದೇವೋ ಆ  ಹೀರೋ  ಸೈಕಲ್ ಗೂ, ನನಗೂ ಗೊತ್ತು. ಮತ್ತೆ ಯಾವಾಗಲೋ ಮಧ್ಯಾಹ್ನದ  ಊಟದ ಸಮಯಕ್ಕೆ ಅವರಿಗೆ ಸೈಕಲ್ ಹಿಂತಿರುಗಿಸುತ್ತಿದ್ದೆ. ನಾನೆಂದರೆ ಅವರಿಗೆ ತುಂಬಾ ಪ್ರೀತಿ ಮತ್ತು ಅಭಿಮಾನ. ನನ್ನನ್ನು ಮುದ್ದಾಗಿ,  ಇಷ್ಟದಿಂದ ‘ಮಾಸ್ಟರ್’  ಎಂದು ಕರೆಯುತ್ತಿದ್ದರು. ಅವರು  ದೊಡ್ಡ ಆಚರಣೆವಾದಿ ಎಂದು, ತಾವು ಏನು ಹೇಳುವರೋ  ಅದೇ  ಮಾಡುತ್ತಾರೆಂದು, ಏನು ಮಾಡುತ್ತಾರೋ ಅದೇ ಹೇಳುತ್ತಾರೆಂದು  ಅಪ್ಪ ಅಮ್ಮನೊಂದಿಗೆ ಹೇಳುವುದನ್ನು ಕೇಳುತ್ತಿದ್ದೆ. ಆ ಮಾತುಗಳಿಗೆ  ನಿಜವಾದ ಅರ್ಥವೇನೋ ಆ   ಸಮಯದಲ್ಲಿ ನನಗೆ ಅರ್ಥವಾಗಲಿಲ್ಲ. ಆದರೆ  ಆ ಮಾತುಗಳು ಎಲ್ಲೋ ಮನದಲ್ಲಿ  ನೆಲೆಗೊಂಡಿವೆ ಎಂದು ದೊಡ್ಡವನು ಆದಮೇಲೆ ವಿವಿಧ ಹಂತಗಳಲ್ಲಿ ನನಗೆ ತಿಳಿಯಿತು. ಸದಾ  ವೈಟ್ ಅಂಡ್ ವೈಟ್ ನಲ್ಲಿ ಕಾಣುತ್ತಿದ್ದ ಲಕ್ಷ್ಮೀರೆಡ್ಡಿ ಮಾವನ ಮನವೂ ಅಷ್ಟೇ ಬೆಳ್ಳಗಿತ್ತು. ಜೀವನವನ್ನು ಹೇಗೆ ಸುಲಭವಾಗಿ ಮತ್ತು ಸರಳವಾಗಿ ಬದುಕಬೇಕು ಎಂಬುದನ್ನು ನೀವು ಅವರನ್ನು  ನೋಡಿದರೆ ಅರ್ಥವಾಗುವುದು . ಸುನ್ನಿಪೆಂಟದಿಂದ , ಶ್ರೀಶೈಲದೇವಸ್ಥಾನ ಒಂಬತ್ತು, ಹತ್ತು ಕಿಲೋಮೀತರ್ ದೂರದಲ್ಲಿತ್ತು. ಪ್ರಾಜೆಕ್ಟ್ ನಲ್ಲಿ  ಕೆಲಸ ಮಾಡುವವರಿಗೆ ನೇರವಾಗಿ ಗರ್ಭಗುಡಿಗೆ ಪ್ರವೇಶವಿತ್ತು. ನಮ್ಮಪ್ಪ ವಾರಕ್ಕೊಮ್ಮೆಯಾದರೂ ದೇವರ ದರ್ಶನಕ್ಕೆ ಹೋಗುತ್ತಿದ್ದರು.  ಆಗ ಇಡೀ ಪ್ರಾಜೆಕ್ಟ್   ತುಂಬಾ , ಟಿಪ್ಪರ್ ಗಳು , ಜೀಪುಗಳು ವಿಪರೀತವಾಗಿ ಓಡಾಡುತ್ತಿದ್ದವು. ನನ್ನ ತಂದೆ ಡ್ಯಾಮ್  ಡಿವಿಜನ್  ಒಂದರಲ್ಲಿ ಡಿವಿಜಿನಲ್ ಅಕೌಂಟ್  ಆಫೀಸರ್ ಕೆಲಸ ಮಾಡುತ್ತಿದ್ದರು.  ಹಾಗೆ ಡ್ಯಾಮ್ ಸೈಟ್ ಗೆ ಹೋಗುವಾಗಯೋ, ಹೀಗೆ ಬರುವಾಗಯೋ  ಯಾವುದೋ ಒಂದು ವೆಹಿಕಲ್ ನಲ್ಲಿ ದೇವಸ್ಥಾನಕ್ಕೆ ಹೋಗಿ ದರ್ಶನ  ಮಾಡಿಕೊಂಡು ಬರುತ್ತಿದ್ದ ರು. ನಮ್ಮ ಮನೆಗೆ ಬಂಧುಗಳು ಬಂದರೆ ಅವರಿಗೆ ದೇವಾಸ್ಥಾನದಲ್ಲಿ ಸ್ವಾಮಿ ಮತ್ತು ಅಮ್ಮನ ದರ್ಶನ, ಹಾಗೂ ಸುತ್ತಮುತ್ತಲಿರುವ ಶಿಖರೇಶ್ವರಂ, ಹಠಕೇಶ್ವರಂ, ಪಾಲಧಾರ-ಪಂಚದಾರ, ಸಾಕ್ಷಿಗಣಪತಿ, ಡ್ಯಾಮ್ ಸೈಟ್ ಸ್ಥಳಗಳನ್ನು ತೋರಿಸುವುದು ಒಂದು ಸಂಪ್ರದಾಯ. ನಮಗಷ್ಟೇಅಲ್ಲ, ಅಲ್ಲಿರುವ ಎಲ್ಲರಿಗೂ ಇದು ಅನ್ವಯಿಸುತ್ತದೆ. ಒಂದುದಿನ, ನನ್ನ ತಂದೆಯ ಕಡೆಯ ಸಂಬಂಧಿಯೊಬ್ಬರು, ನನ್ನಚಿಕ್ಕಪ್ಪನಾಗುವರು, ನಮ್ಮನ್ನು ಭೇಟಿಮಾಡಲು ಬಂದರು.  ಅವರನ್ನು ದರ್ಶನಕ್ಕೆ ಕರೆದುಕೊಂಡು ಹೋಗಲು ನನ್ನ ತಂದೆ ಕಚೇರಿಯಿಂದ ಮನೆಗೆ ಬಂದು ಅವರನ್ನು ರೆಡೀ ಮಾಡಿಕೊಂಡು ಹೋಗುವಾಗ  ಜೀಪಿನಲ್ಲಿ ಲಕ್ಷ್ಮೀರೆಡ್ಡಿ ಮಾಮ ಕೂಡ ಕಾಣಿಸಿದರು. ಎಲ್ಲೋ ಹೋಗುವ ಮಧ್ಯದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ನಾನು  ಹೊರಗೆ ಕಾಣಿಸಿಕೊಂಡರೆ ನನ್ನನ್ನು ಬರಲು ಕರೆದರು ಲಕ್ಷ್ಮೀರೆಡ್ಡಿ ಮಾಮ. ಹಾಗಾಗಿ ಅಪ್ಪ, ಚಿಕ್ಕಪ್ಪ,ಮಾಮ, ನಾನು, ಸೇರಿ ಎಂದಿನಂತೆ ಹಠಕೇಶ್ವರಂ, ಫಾಲಧರ-ಪಂಚಧರ, ಸಾಕ್ಷಿಗಣಪತಿಯನ್ನು ನೋಡಿಕೊಂಡ ದೇವಸ್ಥಾನಕ್ಕೆ ಹೋದೆವು.  ಶಿಖರವು ಬೇರೆ ದಿಕ್ಕಿನಲ್ಲಿರುವುದರಿಂದ, ಅದು ರಿಟರ್ನ್ ನಲ್ಲಿ ಕವರ್ ಮಾಡುತ್ತಾರೆ. ಅಲ್ಲಿನ ಡ್ರೈವರ್ ಗಳಿಗೆ   ಇವೆಲ್ಲ ಕಟ್ಟಿಟ್ಟ ಬುತ್ತಿ. ದೇವಸ್ಥಾನದ ಮುಖ್ಯದ್ವಾರದ ಬಳಿ ಜೀಪು ನಿಂತಿತು. ನಾವೆಲ್ಲ ಇಳಿದೆವು. ಅರ್ಧಗಂಟೆಯ ನಂತರ ಬರುತ್ತೇನೆ ಎಂದು ಡ್ರೈವರ್  ಹೊರಟುಹೋದ. ಎಲ್ಲರೂ ದೇವಸ್ಥಾನದ ಒಳಗೆ ಹೋಗಲು ತಯಾರಾಗುತ್ತಿದ್ದಾಗ ಲಕ್ಷ್ಮೀರೆಡ್ಡಿ ಮಾಮ  ‘ಮಾಸ್ಟರ್ ನೀನು ಇರು’ ಎಂದ. ನಾನು ನಿಂತುಬಿಟ್ಟೆ. ನನ್ನ ತಂದೆ ಮತ್ತು ಇತರರು ಮುಂದೆಕ್ಕೆ ಹೋದರು.  ನನ್ನ ಕೈಹಿಡಿದು ಸ್ವಲ್ಪದೂರಕ್ಕೆ ಕರೆದೊಯ್ದರು. ಅಲ್ಲಿ ತನ್ನ ಜೇಬಿನಿಂದ ಐದು ರೂಪಾಯಿಯ ನೋಟನ್ನು ತೆಗೆದು,ಒಬ್ಬ ವ್ಯಕ್ತಿ ಯಿಂದ   ಐದು ಮತ್ತು ಹತ್ತು ಪೈಸೆ ಚಿಲ್ಲೆರೆಯಾಗಿ ಬದಲಾಯಿಸಿದನು.ಅದರಲ್ಲಿ ಕೆಲವನ್ನು ನನಗೆ ಕೊಟ್ಟನು, ಕೆಲವನ್ನು ತಮ್ಮ  ಬಳಿಯೇ ಇಟ್ಟುಕೊಂಡು ಭಿಕ್ಷುಕರ ಕಡೇಗೆ ಹೋಗಿ,ನನ್ನನ್ನು ಒಂದು ಕಡೆ ಯಿಂದ ಹಾಕಲು ಹೇಳಿ, ಅವರು ಇನ್ನೊಂದು ಕಡೆ ಯಿಂದ ಹಾಕುತ್ತಾ ಬಂದರು. ನಾವು ಎಲ್ಲವನ್ನೂ ಖರ್ಚು ಮಾದುತ್ತಾ,ವಿತರಣೆಮಾಡಿ ಕೈಖಾಲಿಮಾಡಿ ಮುಖ್ಯದ್ವಾರಕ್ಕೆ ಹಿಂತಿರುಗಿದೆವು. ವ “ನೀವು ಎಂದಾದರೂ  ಈ ಇಡೀ ಪ್ರಾಕಾರವನ್ನು ನೋಡಿದ್ದೀಯಾ?” ಎಂದು ಕೇಳಿದರು. ನಾನು ಇಲ್ಲ ಅಂದೆ. “ಹೋಗೋಣ ಬಾ ” ಎಂದು  ಕೈ ಹಿಡಿದು ಇಡೀ ಪ್ರಾಕಾರವನ್ನು  ಎಡಭಾಗದಿಂದ ಸುತ್ತಲು ಪ್ರಾರಂಭಿಸಿದೆವು. ಅವರು  ದೇವಸ್ಥಾನದ ಒಳಗೆ ಯಾಕೆ ಹೋಗಲಿಲ್ಲ ಅಂತ ಮನದಲ್ಲಿ ಒಂದು ಅನುಮಾನ ಕಾಡಿಸಿತು.  ಎಲ್ಲೆಲ್ಲಿಂದಲೋ ಸಾವಿರಾರು ಕಿಲೋಮೀಟರ್ ಗಳು  ಪ್ರಯಾಣಿಸಿ ಸ್ವಾಮಿಯ ದರ್ಶನಕ್ಕೆ  ಬರುತ್ತಾರೇ , ಇವರು ಇಷ್ಟು ಹತ್ತಿರದಲ್ಲಿದ್ದು  ಯಾಕೆ ಹೋಗುವು ದಿಲ್ಲವೋ ಅನ್ನಿಸಿತು.  ಅದಕ್ಕೂ ಮುನ್ನ ಕೂಡಾ ಒಮ್ಮೆ ಮಾತುಗಳಲ್ಲಿ  ಅಪ್ಪ, ಅಮ್ಮನೊಂದಿಗೆ ಹೇಳಿರುವಂತೆ  ನೆನಪಿದೆ – ಅವರು  ದೇವಸ್ಥಾನದೊಳಗೆ ಬರುವುದಿಲ್ಲ ಎಂದು. ನಾನೇ ಮೊದಲು ಮೌನವನ್ನು ಮುರಿದೆ “ಮಾಮ, ನೀವು ಯಾಕೆ  ದೇವಸ್ಥಾನದೊಳಗೆ ಹೋಗಿಲ್ಲ. ದೇವರನ್ನು ನೋಡಲಿಲ್ಲ?” ಎಂದು ಕೇಳಿದೆ.  ಅದಕ್ಕೆ ಅವರು “ನಾನು ನಾಸ್ತಿಕ” ಎಂದು ಉತ್ತರಿಸಿದರು. ನಾಸ್ತಿಕ ಎಂದರೆ ಏನು ಎಂದು ನನಗೆ ತಿಳಿದಿದೆ ಎಂಬ ನಂಬುಗೆಯಿಂದ.  “ಅಂದರೆ ನಾಸ್ತಿಕರು ದೇವರನ್ನು ನಂಬುವುದಿಲ್ಲವೇ?’’ ನಾನುಕೇಳಿದೆ.  “ಹೌದು” ಎಂದರು. “ಏಕೆ” “ನಿಮ್ಮ ದೃಷ್ಟಿಯಲ್ಲಿ ದೇವರು ಒಳ್ಳೆಯವನಾ? ಕೆಟ್ಟವನಾ?” ಅವರು ಕೇಳಿದರು. ಸಾಕ್ಷಾತ್ ದೇವರ ಬಗ್ಗೆ ಇಂಥದೊಂದು  ಪ್ರಶ್ನೆ ಕೇಳಿದರೆ ದೇವರನ್ನು ಹೀಗೆ  ಕ್ಯಾಟಗರೈಜ್  ಮಾಡಿದರೆ ಇನ್ನೇನಾದರೂ ಇದೆಯಾ? ಯಾವುದೇ ಕಾರಣಕ್ಕಾಗಿ ಅದು ಉತ್ತಮವೆಂದು ನಾನು ಮೌನವಹಿಸಿದ್ದೆ. ಅವರು ಮಾತು  ಮುಂದು ವರಿಸಿದರು- “ಸಿಂಪುಲ್ ಮಾಸ್ಟರ್, ದೇವರು ಒಳ್ಳೆಯವನಾಗಿದ್ದರೆ, ನಾವುಒಳ್ಳೆಯದನ್ನುಮಾಡಿದರೆ, ಅವನು ಅದನ್ನು ಗುರುತಿಸುತ್ತಾನೆ, ನಾವು ತಿಳಿಯದೆ ತಪ್ಪುಮಾಡಿದರೆ, ಅವನು ನಮ್ಮನ್ನು ಕ್ಷಮಿಸುತ್ತಾನೆ, ಮತ್ತು ನಾವು ತಿಳಿದೂ ತಪ್ಪುಮಾಡಿದರೆ, ಅವನು ನಮ್ಮನ್ನು ಶಿಕ್ಷಿಸುತ್ತಾನೆ ಎಂದು ನಂಬಿದರೆ, ಒಳ್ಳೆಯದನ್ನು ಮಾಡುತ್ತಲೇ ಇರಿ, ಮತ್ತು ತಪ್ಪುಗಳನ್ನು ಮಾಡಬೇಡಿ. ಒಂದು ಸಮಯ ದೇವರು ಕೆಟ್ಟವನಾಗಿದ್ದರೆ,” ಅವರು ಸ್ವಲ್ಪ ಸಮಯದ ನಂತರ ಹೇಳಿದರು, “ಕೆಟ್ಟ ಜನರಿಂದ ದೂರವಿರುವುದು ಉತ್ತಮ. ಅಲ್ಲವೇ” ಅದಕ್ಕಾಗಿಯೇ ಅವನೊಂದಿಗೆ ನಮಗೆ ಯಾವುದೇ ಕೆಲಸ ವಿಲ್ಲ. ಅವನಿಗೆ ನಮ್ಮೊಂದಿಗೆ ಯಾವುದೇ ಕೆಲಸ ವಿಲ್ಲ, ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಮಾಡುತ್ತಲೇ ಹೋಗಬೇಕು” ಎಂದ, ನಾನು ಬಹಳ ಸಮಯ ಯೋಚಿಸಿದೆ. ಈಬಾರಿ ಅವರು ಮೌನವನ್ನು ಮುರಿದು, “ಪೂರ್ವ ಕಾಲದಲ್ಲಿ ಅವರು ಇಷ್ಟಿಷ್ಟು ದೊಡ್ಡ ದೇವಾಲಯಗಳನ್ನು , ಗೋಪುರಗಳನ್ನು , ಶಿಲ್ಪಗಳನ್ನು ಏಕೆ ನಿರ್ಮಿಸಿದರೋ ನಿಮಗೆ ತಿಳಿದಿದೆಯೇ?”  ಎಂದು ಕೇಳಿದ. ನಾನು ತಲೆಯನ್ನು  ಅಡ್ಡವಾಗಿ ತಿರುವುದರೊಳಗೆ- “ಆ ಸಮಯದಲ್ಲಿ  ಈ ದೇವಾಲಯಗಳು ಮತ್ತು ದೇವಸ್ಥಾನಗಳು. ಸಂಸ್ಕೃತಿಕ  ಕೇಂದ್ರಗಳು. ಹತ್ತು ಜನ ಸೇರಿ ಏನಾದರೂ ಮಾಡಬೇಕಾದರೆ,  ಏನಾದರೂ ಚರ್ಚಿಸಬೇಕಾದರೆ  ಇರುವ ವೇದಿಕೆಗಳಿವು. ಅದೂ ಅಲ್ಲದೆ ಆ ಕಾಲದಲ್ಲಿ ಬೇರೆ ಕೆಲಸಗಳೂ ಯಾವು ಇರಲಿಲ್ಲ ಅಲ್ಲವೇ. ಅದಕ್ಕೆ ಇಂತಹ  ದೊಡ್ಡ ಕಟ್ಟಡಗಳನ್ನು ಕಟ್ಟಿಸಿ  ಅದಕ್ಕೆ ತಕ್ಕಷ್ಟು ಕೂಲೀ   ಹಣ ಕೊಡುವವರೇನೋ ? ” ಎಂದು ಉತ್ತರಿಸಿದರು. “ಮೇಲೆ ನೋಡು ಎಷ್ಟು ಬೆಳೆದಿಂಗಳು ಇದೀಯೋ ” ಎಂದು ಮೇಲೆ ತೋರಿಸಿದರು. ಹೌದು,ಬಹುಶಾ ಹುಣ್ಣಿಮೆಯ ದಿನ ವಾಗಿರಬಹುದು,  ಅಷ್ಟೊತ್ತಿಗೆ ಬೆಳಕು ಮರೆಯಾಗುತ್ತಾ ಕತ್ತಲಾಗುತ್ತಿತ್ತು. ಮೇಲೆ ಹಳದಿ ಹೂವಿನಂತೆ ಬೆಳದಿಂಗಳು. ಹಾಗೆ  ಆಕಾಶದತ್ತಾ ನೋಡುತ್ತಾ  ಎಷ್ಟೋ ತನ್ಮಯದಿಂದ ,ಇಂತಹ  ಬೆಳದಿಂಗಳ ರಾತ್ರಿಗಳಲ್ಲಿ ಕೆಲವು ಯಾವುದೋ ಝಾಮುದಲ್ಲಿ  ಶಿಲೆಗಳು ಮೃದುವಾಗುತ್ತವೆಯಂತೆ.  ಆಗ ಮಾತ್ರ ಅತ್ಯಂತ ಸಂಕೀರ್ಣವಾದ ಶಿಲ್ಪಗಳನ್ನು ಕೆತ್ತಲಾಗುತ್ತದೆಯಂತೆ. ದೇವತಾ  ವಿಗ್ರಹಗಳ ಮುಖಗಳು, ಆಭರಣಗಳು, ಇತ್ಯಾದಿಗಳನ್ನು ಆ ಸಮಯದಲ್ಲಿ ಮಾಡತ್ತಾರಂತೆ.  ಆ ಸಮಯಕ್ಕಾಗಿ  ಪೂರ್ತಿ ತಿಂಗಳು ಕಾಯುತ್ತಾರಂತೆ” ಎಂದು ಹೇಳಿದರು ಲಕ್ಷ್ಮೀರೆಡ್ಡಿ ಮಾಮ – ತನಗೆ ಯಾರೋ ಹೇಳಿದ ವಿಷಯ  ನೆನೆಪಿಸಿ ಕೊಳ್ಳುತ್ತಿದ್ದಂತೆಯೇ , ನನಗೆ ಹೇಳುತ್ತಿದ್ದಂತೆಯೇ  ಹೇಳಿದರು. ನನಗೆ ಅದು ತುಂಬಾ ಆಸಕ್ತಿದಾಯಕವಾಗಿ ಅನಿಸಿತು.  ಅದೇ ಸಂಭ್ರಮದಲ್ಲಿ ‘‘ಅಷ್ಟು ಎತ್ತರವಿರುವ ರಾಜಗೋಪುರಗಳು ಹೇಗೆ ಕಟ್ಟಿರುತ್ತಾರೆ? ಒಂದೇ ಶಿಲೆಯಲ್ಲಿ ಕೆತ್ತಿರ ಬಹುದೇ? ಅಥವಾ ಬಿಡಿಬಿಡಿ ಯಾಗಿ ಕೆಟ್ಟಿರುವವುಗಳನ್ನು ಒಂದರ ಮೇಲೆ ಒಂದರಂತೆ  ಜೋಡಿಸಲಾಗಿದೆಯೇ? ” ಎಂಬ ಪ್ರಶ್ನೆಯನ್ನು ತನ್ನಷ್ಟಕ್ಕೆ   ಕೇಳಿಕೊಂಡು ಮತ್ತು ಉತ್ತರವನ್ನೂ  ತಾನೇ ಹೇಳಲು ಆರಂಭಿಸಿದರು. “ಅರ್ಧ ಕೆತ್ತಿದ ಶಿಲೆಗಳನ್ನು ಬಲವಾಗಿ ಹೆಣಿದ ಹಗ್ಗಗಳಿಂದ ಕಟ್ಟಿ ಆನೆಗಲಿಂದ ಎಳೆದರು. ಮತ್ತು ಅವರು ಅಷ್ಟು ಎತ್ತರಕ್ಕೆ ಹೇಗೆ ಹತ್ತಿದರು ಎಂದು ನಿಮಗೆ ತಿಳಿದಿದೆಯೇ? ಅದನ್ನು ಸ್ಕಾ ಫೋಲ್ಡಿಂಗ್ ಎಂದು ಕರೆಯಲಾಗುತ್ತದೆ. ಅವರು ಅದರ ಎದುರಿನಲ್ಲಿ ತಾತ್ಕಾಲಿಕ ಕಟ್ಟಡವನ್ನು  ಇಳಿಜಾರಿನಲ್ಲಿ ನಿರ್ಮಿಸಿ,  ಭಾರವನ್ನು ಹೊತ್ತಿರುವ ಆನೆಗಳನ್ನು ಆ ಮಾರ್ಗದಲ್ಲಿ ಮುನ್ನಡೆಸಿ ಅವರಿಗೆ ಬೇಕಾದ ಎತ್ತರಕ್ಕೆ ಸೇರಿದ ತಕ್ಷಣ ಅವುಗಳನ್ನು ಅಲ್ಲಿ ಇಳಿಸುತ್ತಿದ್ದರು”, ಅವುಗಳನ್ನುಅಲ್ಲಿಇಳಿಸುತ್ತಿದ್ದರು.” ನಾನು ಆ ಸನ್ನಿವೇಶವನ್ನು ಊಹಿಸಿಕೊಳ್ಳಲು ಸ್ವಲ್ಪ ಗ್ಯಾಪ್ ಕೊಟ್ಟೆ. “ಈ ಎಲ್ಲಾ ಕಥೆಗಳನ್ನು ತಿಳಿದುಕೊಳ್ಳಲು ಬಯಸಿದರೆ, ಒಂದು ಮಧ್ಯಾಹ್ನ ಬಂದು ಗಮನಿಸಿ ನೋಡು. ಒಂದು ಭಾವವನ್ನು ತಿಳಿಸಲು ಶಿಲ್ಪಿಗಳು  ಎಷ್ಟು ಪ್ರಯತ್ನಿಸಿದರೋ ಅರ್ಥವಾಗುತ್ತದೆ. ಅವರ ಇಡೀ ಜೀವನವನ್ನು ಇವುಗಳಿಗೆ ಮೀಸಲಾಗಿಟ್ಟಿರಬೇಕು ಮತ್ತು ಅವುಗಳನ್ನು ಜೀವಂತಗೊಳಿಸಲು ಶ್ರಮಿಸಿರಬೇಕು. ಇವು ಐತಿಹಾಸಿಕ ಕಾಲ ಬಿಟ್ಟು ಹೋಗಿರುವ ಸಾಮಾಜಿಕ-ಸಾಂಸ್ಕೃತಿಕ ಕುರುಹುಗಳಾಗಿವೆ, ”ಎಂದುಅವರು ಹೇಳಿದರು. ಪ್ರಾಕಾರ ಸುತ್ತಲೂ ಕೆತ್ತಿರುವ ಅನೇಕ ಶಿವಪುರಾಣಗಳ ಕಥೆಗಳನ್ನು, ಶಿವಭಕ್ತರ ಇತಿಹಾಸಗಳನ್ನು ಅವರು ವಿವರಿಸುವಾಗ, ಅವರಿಗೆ ಇಷ್ಟು ವಿಷಯಗಳು ಹೇಗೆ ತಿಳಿದಿವೆ ಎಂದು ಆಶ್ಚರ್ಯವಾಯಿತು. ಅಕ್ಕಮಹಾದೇವಿಕಥೆ, ದಕ್ಷಯಜ್ಞ, ತ್ರಿಪುರಾಂತಕ

ತೆಲುಗು ಕಥೆ “ನಾಸ್ತಿಕ ದೇವರು”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-112 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಅನಾಥಾಶ್ರಮದ ಕೆಲಸಕ್ಕೆ ಹೊರಟ ಮಗಳು ಬಂಗಲೆಯಿಂದ ಇಬ್ಬರೂ ಮನೆಗೆ ಬಂದ ನಂತರ ಮೂರನೇ ಮಗಳ ಜೊತೆಗೆ ಕುಳಿತು ಅಮ್ಮ ಹೇಳಿದ ವಿಷಯದ ಬಗ್ಗೆ ಚರ್ಚಿಸಿದರು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅನಾಥಾಶ್ರಮದ ಮಕ್ಕಳ ಮೇಲ್ವಿಚಾರಣೆ ನನ್ನ ಮಗಳಿಂದ ಸಾಧ್ಯವೇ? ಕಲಿಸುವ ವಿಷಯದಲ್ಲಿ ಎರಡು ಮಾತಿಲ್ಲ. ಅವಳು ಖಂಡಿತ ಅಲ್ಲಿನ ಮಕ್ಕಳ ಶಾಲೆಯ ಪಠ್ಯ ವಿಷಯಗಳ ಕಲಿಕೆಯ ಸಹಾಯಕ್ಕೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾಳೆ. ಅದರಲ್ಲಿ ನನಗೆ ಸಂಶಯವಿಲ್ಲ. ಆದರೆ ಅಲ್ಲಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು, ಮಕ್ಕಳ ವಿಷಯದಲ್ಲಿ ಕಟ್ಟುನಿಟ್ಟಾಗಿ ಇರಲು ನನ್ನ ಮಗಳು ಸಮರ್ಥಳೇ? ಈ ಚಿಕ್ಕ ಹುಡುಗಿಯ ಮಾತನ್ನು ಅಲ್ಲಿನ ಮಕ್ಕಳು ಅನುಸರಿಸಿಯಾರೇ? ಆ ಮಕ್ಕಳ ನಡುವೆ ಈಕೆಯು ಕೂಡ ಮಕ್ಕಳಂತೆ ಅಲ್ಲವೇ? ಅಲ್ಲಿನ  ಖರ್ಚು- ವೆಚ್ಚ, ಉಳಿತಾಯ ಇತರೆ ವಿಷಯಗಳ ಬಗ್ಗೆ ಇವಳಿಗೆ ಯಾವುದೇ ಅರಿವಿಲ್ಲ. ಅಮ್ಮ ಹೇಳಿದಂತೆ ಅವಳಿಗೆ ಸಹಾಯಕ್ಕಾಗಿ ಅಲ್ಲಿ ಎಲ್ಲರೂ ಇರುತ್ತಾರೆ. ಅವಳು ಕೂಡ ಅಲ್ಲಿ ಇದ್ದುಕೊಂಡು ತನ್ನ ವಿದ್ಯಾಭ್ಯಾಸ ಮುಂದುವರಿಸಬಹುದು ಎಂದು ಹೇಳಿದ್ದಾರೆ. ಮೂರು ವರ್ಷದ ಪದವಿ ತರಗತಿಯನ್ನು ಮುಗಿಸಿದ ನಂತರ ಅವಳಿಗೆ ಯಾವುದಾದರೂ ಒಳ್ಳೆಯ ಕೆಲಸ ಸಿಗಬಹುದು. ಬಿ ಎಡ್ ತರಬೇತಿ ಪಡೆದು ಹೈ ಸ್ಕೂಲ್ ಶಿಕ್ಷಕಿಯೂ ಆಗಬಹುದು. ಅಲ್ಲದೇ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಟೈಪಿಂಗ್ ಸಹ ಕಲಿತಿದ್ದಾಳೆ. ನಮಗೂ ಈಗ ಹಣದ ಅಗತ್ಯವಿದೆ. ಇವಳಿಗೊಂದು ಒಳ್ಳೆಯ ಕೆಲಸ ಸಿಕ್ಕರೆ ಮುಂದೆ ನಾವು ಒಳ್ಳೆಯ ದಿನಗಳನ್ನು ನೋಡಬಹುದು.  ನನಗೆ ಸಹಾಯ ಮಾಡುವುದಕ್ಕಾಗಿ ನನ್ನ ಮಕ್ಕಳು ಯಾವುದೇ ರೀತಿಯ ಕೆಲಸವನ್ನು ಮಾಡಲು ತಯಾರಿದ್ದಾರೆ. ಹೈಸ್ಕೂಲ್ ಹಂತದಲ್ಲಿರುವಾಗಲೇ ತಮಗೆ ರಜೆ ಇದ್ದಾಗ ಕಾಫಿ ತೋಟಕ್ಕೆ ಹೋಗಿ, ಕಾಫಿ ಹಣ್ಣುಗಳನ್ನು ಕೊಯ್ದು ತಮಗೆ ಸಾಧ್ಯವಾದಷ್ಟು ಹಣವನ್ನು ಗಳಿಸಿ ನನ್ನ ಕೈಲಿಟ್ಟಿದ್ದಾರೆ. ನಾವು ಓದುತ್ತಿರುವ ಮಕ್ಕಳು ಎನ್ನುವ ಅಹಂಭಾವವಿಲ್ಲದೆ ಸೊಂಟಕ್ಕೆ ಗೋಣಿ ಚೀಲವನ್ನು ಕಟ್ಟಿ, ನಾನು ತುಂಬಿಸಿಕೊಟ್ಟ ಊಟದ ಬುತ್ತಿಯನ್ನು ತೆಗೆದುಕೊಂಡು ಹೋಗಿ, ಹಣ್ಣು ಕೊಯ್ಯುವ ಅಭ್ಯಾಸ ಇಲ್ಲದಿದ್ದರೂ ಕೂಲಿ ಕೆಲಸಗಾರರ ಜೊತೆ ಸೇರಿ ಹುಮ್ಮಸ್ಸಿನಿಂದ ನನ್ನ ಮೂವರು ಮಕ್ಕಳೂ ಅವರ ಜೊತೆ ಹಣ್ಣುಗಳನ್ನು ಕೊಯ್ದು ದೊಡ್ಡ ಚೀಲದಲ್ಲಿ ತುಂಬಿಸಿ ಟ್ರ್ಯಾಕ್ಟರ್ ಗೆ ಹಾಕಿ, ಕಾಫಿ ಕಣದಲ್ಲಿ ಅವರ ಚೀಲಗಳನ್ನು ಗುರುತಿಸಿ ತೆಗೆದು ಅದನ್ನು ತೂಕ ಹಾಕಿಸಿ, ಪಲ್ಪರ್ ಮಾಡುವಲ್ಲಿಗೆ ತೆಗೆದುಕೊಂಡು ಹೋಗಿ ಕೊಟ್ಟು ಸಂಬಳವನ್ನು ಪಡೆದು ಖುಷಿಯಿಂದ ತಮ್ಮ ಸಂಪಾದನೆಯನ್ನು…. ‘ಅಮ್ಮಾ…..ನೋಡು…. ನಾವೆಷ್ಟು ಸಂಪಾದನೆ ಮಾಡಿದ್ದೇವೆ…. ಎಂದು ಕಣ್ಣರಳಿಸಿ ಸಂತೋಷದಿಂದ ನನ್ನ ಕೈಲಿಟ್ಟಿದ್ದಾರೆ….. ಒಂದು ಬಿಡಿಗಾಸನ್ನು ಕೂಡಾ ನಮಗಾಗಿ ಕೊಡಿ ಎಂದು ಆ ಮಕ್ಕಳು ಕೇಳಿಲ್ಲ….”ಬೇಡ ಮಕ್ಕಳೇ ನಿಮಗಿದು ಅಭ್ಯಾಸವಿಲ್ಲದ ಕೆಲಸ…. ನೀವಿನ್ನೂ ಚಿಕ್ಕವರು…..ತೋಟದ ಗಿಡಗಳ ನಡುವೆ ಇಳಿಜಾರಿನಲ್ಲಿ ಕೂಡ ಇಳಿದು ಹಣ್ಣುಗಳನ್ನು ಕೊಯ್ಯಬೇಕು…. ನಿಮ್ಮಿಂದ ಇದು ಸಾಧ್ಯವಾಗದು…. ಎಂದು ನಾನು ಹೇಳಿದಾಗ…. ಏನು ಆಗೋದಿಲ್ಲ ಅಮ್ಮಾ… ಅಲ್ಲಿ ಕೆಲಸ ಮಾಡುವ ಕೆಲಸಗಾರರು ನಮಗೆ ಪರಿಚಿತರಲ್ಲವೇ?…. ರೈಟರ್ ಕೂಡ ಹೇಗೆ ಹಣ್ಣುಗಳನ್ನು ಕೊಯ್ಯಬೇಕೆಂದು ನಮಗೆ ತಿಳಿಸುತ್ತಾರೆ”…. ಎಂದು ಹೇಳಿ ನನ್ನ ಸಮ್ಮತಿಯನ್ನು ಪಡೆದುಕೊಂಡು ಹಣ್ಣು ಕೊಯ್ಯುವ ಕೆಲಸಕ್ಕೆ ಕೂಡ ಹೋಗಿದ್ದಾರೆ. ಆದರೆ ಅನಾಥಾಶ್ರಮದ ಕೆಲಸ ಹೆಚ್ಚು ಜವಾಬ್ದಾರಿಯುತವಾದದ್ದು. ಇದನ್ನು ನಿಭಾಯಿಸಲು ನನ್ನ ಈ ಮಗಳ ಕೈಲಿ ಸಾಧ್ಯವೇ? ಇವಳಿಂದೇನಾದರೂ ಪ್ರಮಾದವಾದರೆ ಕಷ್ಟವಲ್ಲವೇ? ನಾನು ‘ಹೂಂ’ ಅಂದರೆ ಇವಳು ಖಂಡಿತ ಈ ಕೆಲಸಕ್ಕೆ ಹೋಗುತ್ತಾಳೆ. ನೋಡೋಣ ಅವಳ ತೀರ್ಮಾನ ಏನೆಂದು ಎಂದು ಯೋಚಿಸುತ್ತಾ…. ಮಗಳೇ, ನೀನು ಅಮ್ಮ ಹೇಳಿದ ಈ ಕೆಲಸವನ್ನು ಮಾಡಬಲ್ಲೆಯೇ? ನಿನ್ನಿಂದ ಇದು ಸಾಧ್ಯವೇ? ಎಂದು ಸುಮತಿ ಕೇಳಿದಾಗ…. ಅಮ್ಮಾ …ಸ್ವಲ್ಪ ದಿನ ಹೋಗಿ ಅಲ್ಲಿ ಇದ್ದು ಕೆಲಸ ಮಾಡಿ ನೋಡುತ್ತೇನೆ…. ಸಾಧ್ಯವಾದರೆ ಮುಂದುವರೆಸುತ್ತೇನೆ… ಇಲ್ಲದಿದ್ದರೆ ಆ ಕೆಲಸವನ್ನು ಬಿಟ್ಟು ಬಂದು ಇಲ್ಲಿ ನಿನ್ನ ಜೊತೆ ಇರುತ್ತೇನೆ….. ನನ್ನ ಡಿಗ್ರಿ ಮುಗಿದ ಕೂಡಲೇ ಯಾವುದಾದರೂ ಸಣ್ಣ ಪುಟ್ಟ ಕೆಲಸ ಸಿಕ್ಕರೂ ಸೇರಿಕೊಂಡು ನಿನ್ನ ಜವಾಬ್ದಾರಿಯನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕು ಎನ್ನುವ ಹಂಬಲ ನನಗೆ ಇದೆ ಅಮ್ಮ…. ನಾನು ಅನಾಥಾಶ್ರಮಕ್ಕೆ ಹೋಗುತ್ತೇನೆ …. ಹೇಗಿದ್ದರೂ ಅದು ನಾನು ಕಳೆದ ಪರಿಸರವಲ್ಲವೇ? ವಾರಕ್ಕೊಮ್ಮೆ ಬಂದು ನಿನ್ನನ್ನು ನೋಡಬಹುದಲ್ಲವೇ?…. ಎಂದಾಗ ಸುಮತಿ ಮಗಳನ್ನು ಅಪ್ಪಿಕೊಂಡಳು. ಅವಳ ಕಣ್ಣುಗಳು ತುಂಬಿ ಬಂತು. ಈ ಮಗಳು ನನ್ನ ಜೊತೆ ಇದ್ದಿದ್ದೇ ಕಡಿಮೆ. ಇವಳಿಗೆ ನಾಲ್ಕುವರೆ ವರ್ಷವಿದ್ದಾಗ ಅನಾಥಾಶ್ರಮಕ್ಕೆ ಸೇರಿದ ಹುಡುಗಿ, ಎಂಟನೇ ತರಗತಿಯಿಂದ 10ನೇ ತರಗತಿವರೆಗೂ ನನ್ನ ಹಿರಿಯ ಮಗಳ ಮನೆಯಲ್ಲಿದ್ದಳು. ಈಗ ಒಂದೆರಡು ವರ್ಷದಿಂದ ನನ್ನ ಜೊತೆ ಇದ್ದಾಳಷ್ಟೇ…. ಹೆಣ್ಣು ಮಕ್ಕಳು ಹೇಗಿದ್ದರೂ ಮುಂದೆಯಾದರೂ ನನ್ನನ್ನಗಲಿ ಇನ್ನೊಬ್ಬರ ಮನೆಗೆ ಹೋಗಬೇಕಾದವರೇ…. ಆದರೆ ಅಲ್ಲಿಯವರೆಗೂ ನನ್ನ ಜೊತೆಗಿರುವ ಅದೃಷ್ಟವಿಲ್ಲವೇ ದೇವರೇ?…. ಮಗಳ ಜೊತೆ ಇದ್ದು ಆಸೆ ಪೂರೈಸಿಲ್ಲ…. ಇಷ್ಟು ಬೇಗ ಮತ್ತೊಮ್ಮೆ ಅಗಲಿಕೆಯೇ? ಎಂದು ತನ್ನಲ್ಲೇ ಸ್ವಗತ ಹೇಳಿಕೊಂಡಳು. ತನ್ನ ಮಗಳನ್ನು ಅನಾಥಾಶ್ರಮದಲ್ಲಿ ಕೆಲಸಕ್ಕೆ ಕಳುಹಿಸದೆ ಬೇರೆ ದಾರಿ ಇರಲಿಲ್ಲ. ಅಕ್ಕನ ತೀರ್ಮಾನ ಕೇಳಿದಾಗ ತಂಗಿಗೆ ಬಹಳ ದುಃಖವಾಯಿತು. ಏಕೆಂದರೆ ಅಕ್ಕ ಎಂದರೆ ಅವಳಿಗೆ ಬಹಳ ಪ್ರೀತಿ. ಅಕ್ಕನ ಜೊತೆ ಕಾಲ ಕಳೆಯುವುದೆಂದರೆ ಅವಳಿಗೆ ಎಲ್ಲಿಲ್ಲದ ಸಂತೋಷ. ಅಕ್ಕನ ಜೊತೆ ಕಳೆದ ಕ್ಷಣಗಳು ಅವಳ ಅತ್ಯಂತ ಸಂತೋಷದ ಸಮಯವಾಗಿದ್ದವು. ಕೊನೆಯ ತಂಗಿಯು ಜೊತೆಯಲ್ಲಿಲ್ಲ ಅವಳು ದೂರದ ನವೋದಯ ಶಾಲೆಯಲ್ಲಿ ಓದುತ್ತಿರುವಳು. ವಾರ್ಷಿಕ ರಜೆ ಇದ್ದಾಗ ಮಾತ್ರ ಮನೆಗೆ ಬರುವಳು. ಈಗ ಅಕ್ಕ ಅನಾಥಾಶ್ರಮದ ಮೇಲ್ವಿಚಾರಕಿ ಹಾಗೂ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾಳೆ. ತಾಯಿಯ ಜೊತೆ ಇರುವುದೆಂದರೆ ಅವಳಿಗೆ ಸಂತೋಷದ ವಿಚಾರವೇ, ಆದರೂ ಸಣ್ಣ ವಯಸ್ಸಿನಿಂದ ಅಕ್ಕನ ಜೊತೆ ಅಕ್ಕನ ಪ್ರೀತಿಯಲ್ಲಿ ಕಳೆದ ಅವಳಿಗೆ ಈಗ ಅವಳು ಮತ್ತೆ ದೂರ ಹೋಗುತ್ತೇನೆ ಎಂದಾಗ ಸಂಕಟವಾಯಿತು. ಆದರೂ ಅವಳಿಗೂ ತಮ್ಮ ಮನೆಯ ಪರಿಸ್ಥಿತಿಯ ಅರಿವಿದ್ದ ಕಾರಣ ಏನೂ ಮಾತನಾಡದೆ ಸಮ್ಮತಿ ಸೂಚಿಸಿದಳು. ಸುಮತಿ ಬಂಗಲೆಗೆ ಹೋಗಿ ಅಮ್ಮನನ್ನು ಭೇಟಿ ಮಾಡಿ, ನನ್ನ ಮಗಳು ಅನಾಥಾಶ್ರಮದಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಸಮ್ಮತಿಸಿದ್ದಾಳೆ ಎನ್ನುವ ವಿಚಾರವನ್ನು ಅಮ್ಮನಿಗೆ ತಿಳಿಸಿದಳು. ವಿಷಯ ತಿಳಿದು ಅಮ್ಮನಿಗೆ ಸಂತೋಷವಾಯಿತು. ಶಾಲೆ ಪ್ರಾರಂಭವಾಗುವ ಮೊದಲೇ ಆದಷ್ಟು ಬೇಗ ಮುಂದಿನ ವಾರವೇ ಅಲ್ಲಿಗೆ ಹೋಗುವ ತಯಾರಿಯನ್ನು ಮಾಡಿಕೊಳ್ಳಲು ಮಗಳಿಗೆ ತಿಳಿಸಲು ಅಮ್ಮ ಸುಮತಿಗೆ ಹೇಳಿದರು.

Read Post »

You cannot copy content of this page

Scroll to Top