ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಮ್ಮಾರ್ಕೆ ಕವಿತೆ”ಸದ್ದಿಲ್ಲದ ಬಂದೈತಿ”

ಕಾವ್ಯ ಸಂಗಾತಿ ಎಮ್ಮಾರ್ಕೆ “ಸದ್ದಿಲ್ಲದ ಬಂದೈತಿ” ಸದ್ದಿಲ್ಲದ ಬಂದೈತಿ ಈ ಸಂಕ್ರಾಂತಿತರಲಿ ಪ್ರತಿ ಜೀವಿಗೂ ಸುಖಶಾಂತಿಬನ್ನಿ ನೂಕೋಣ ನಮ್ಮೆಲ್ಲ ನೋವಪ್ರತಿ ಮನದಾಗೂ ಅರಳಲಿ ಹೂವ ಎಳ್ಳು ಬೆಲ್ಲವ ಸವಿಯೋಣ ಕೂಡಿನಾಕು ಒಳ್ಳೊಳ್ಳೆ ಮಾತುಗಳ ಆಡಿಸುಗ್ಗಿ ಮಾಡೋಣ ಹಿರಿ ಹಿರಿ ಹಿಗ್ಗಿಹೊಟ್ಟ್ತುಂಬ ಉಣ್ಣೋಣ ಹಾಲ್ಹುಗ್ಗಿ ನೇಸರ ಬದಲಿ ಮಾಡ್ಯಾನೋ ದಿಕ್ಕಬಲ್ಲವರಾರಯ್ಯ ಆ ದೇವರ ಲೆಕ್ಕಈ ಸಂಕ್ರಾಂತಿ ಕರಿಯ ಕಟ್ಟು ಹಬ್ಬನೋಡಬೇಕ ಮ್ಯಾಲೇರಿಸಿ ಹುಬ್ಬ ಹಳ್ಳಿಯ ಹಾದಿ-ಬೀದೆಲ್ಲ ಸಿಂಗಾರಬಿತ್ತಿ ಬೆಳೆದಾರೋ ಬಗಸಿ ಬಂಗಾರಮನಿ ಮುಂದ ಬಿಡಿಸಿ ರಂಗೋಲಿಮೈ ಮರೆತಾರ ಖುಷಿಯ ಗುಂಗಲ್ಲಿ ಬನ್ನಿ ಕುಣಿಯೋಣ ಮೈ ಚಳಿ ಬಿಟ್ಟಭಗವಂತನ ಮ್ಯಾಲ ನಂಬಿಕಿ ಇಟ್ಟನೋಡಲಾಕತ್ಯಾನು ಕುಂತ ಮ್ಯಾಲಅವಗ ಒಪ್ಪಿಸಿವ್ನಿ  ನನ್ನೆರಡು ಸಾಲ ಎಮ್ಮಾರ್ಕೆ

ಎಮ್ಮಾರ್ಕೆ ಕವಿತೆ”ಸದ್ದಿಲ್ಲದ ಬಂದೈತಿ” Read Post »

ಇತರೆ

“ಕುಟುಂಬಗಳ ಮಧ್ಯೆ ಬಾಂಧವ್ಯ ಬೆಸೆಯುವ ಸಂಕ್ರಾಂತಿ ಹಬ್ಬ” ನಾಗರತ್ನ ಹೆಚ್‌ ಗಂಗಾವತಿ

ಸಂಕ್ರಾಂತಿ ಸಂಗಾತಿ ನಾಗರತ್ನ ಹೆಚ್‌ ಗಂಗಾವತಿ “ಕುಟುಂಬಗಳ ಮಧ್ಯೆ ಬಾಂಧವ್ಯ ಬೆಸೆಯುವ ಸಂಕ್ರಾಂತಿ ಹಬ್ಬ” ಸಂಕ್ರಾಂತಿ ಹಬ್ಬದ ಪ್ರತೀಕವಾಗಿದ್ದು  .ಇದು ರೈತನ ಸುಗ್ಗಿ ಹಬ್ಬವಾಗಿದೆ ಅಷ್ಟೇ ಅಲ್ಲದೆ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ ಮತ್ತು ಕುಟುಂಬದ ನಡುವೆ ಬಾಂಧವ್ಯ ಬೆಸುವ ಹಬ್ಬ ವಾಗಿದೆ  . ಎಲ್ಲಾ ರಾಜ್ಯಗಳಲ್ಲಿ ಒಂದೊಂದು ಬಗೆಯ ಹೆಸರಿನಿಂದ ಕರೆಯಲಾಗುತ್ತದೆ ಕರ್ನಾಟಕದಲ್ಲಿ ಸಂಕ್ರಾಂತಿ, ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಪಂಜಾಬ್ ಮತ್ತು ಹರಿಯಾಣದಲ್ಲಿ ಲೋಹರಿ ಮತ್ತು ಅಸ್ಸಾಂನಲ್ಲಿ ,ಮಘಾ ಎಂದು ಆಚರಿಸಲಾಗುತ್ತದೆ. ಹೊಸ ಬೆಳೆ ಬಂದ ಸಮಯದಲ್ಲಿ ಆಚರಿಸುವ ಹಬ್ಬ ಇದು ರೈತರ ತಮ್ಮ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸಿ ಅಲಂಕರಿಸುತ್ತಾರೆ ಮತ್ತು ಕೆಲವೆಡೆ ಎತ್ತುಗಳನ್ನು ಸಿಂಗರಿಸಿ ಓಟದ ಸ್ಪರ್ಧೆಯನ್ನು ಕೂಡ ಮಾಡಲಾಗುತ್ತದೆ.ಸೂರ್ಯದೇವ ,ಬ್ರಹ್ಮ ವಿಷ್ಣು, ಮಹೇಶ್ವರ ಗಣೇಶ ಮತ್ತು ಆದಿಶಕ್ತಿಯನ್ನು ಕೂಡ ಈ ಹಬ್ಬದಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಹಾಗೂ ಚಿಕ್ಕ ಮಕ್ಕಳಿಗೆ ಆರತಿ ಮಾಡಿ ಶುಭ ಹಾರೈಸಲಾಗುತ್ತದೆ. ಸಂಕ್ರಾಂತಿ ಕೇವಲ ಧಾರ್ಮಿಕ ಹಬ್ಬವಲ್ಲ ಇದು ಸಂಸ್ಕೃತಿ ಮತ್ತು ಕೃಷಿ ಮತ್ತು ಕುಟುಂಬದ ನಡುವಿನ ಭಾಂಧವ್ಯ ಬೆಳೆಸುವ ಒಂದು ಸಂಭ್ರಮದ ಹಬ್ಬವಾಗಿದೆ . ಹಾಗೂ ವಿಶೇಷ ಸ್ಥಳದಲ್ಲಿ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುವ ವಿದ್ಯಮಾನಗಳು ಕೂಡ ನಾವು ಕಾಣಬಹುದು. ಸಾಮಾನ್ಯವಾಗಿ ಈ ದಿನ ಸೂರ್ಯನ ತನ್ನ ಪಥ ಬದಲಿಸಿ ಉತ್ತರಾಯಣಕ್ಕೆ ಚಲಿಸುತ್ತಾನೆ ಎಂದು ನಂಬಲಾಗುತ್ತದೆ ಉತ್ತರಾಯಣಕ್ಕೆ ಎಂದರೆ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸಂಚರಿಸಲು ಪ್ರಾರಂಭಿಸುವ ಪವಿತ್ರ ಕಾಲ ಎಂದು ಕೂಡ ಕರೆಯಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಈ ದಿನದಂದು ಸ್ನಾನ ಮಾಡೋದು ಮತ್ತು ದಾನ ಮಾಡುವುದು ಮುಂತಾದ ಆಚರಣೆಯನ್ನು ಮಾಡುವುದರಿಂದ ಶುಭ ಫಲಿತಾಂಶ ದೊರೆಯುತ್ತವೆ ಎಂದು ನಂಬಿಕೆ ಅಷ್ಟೇ ಅಲ್ಲದೆ ಸಂತೋಷ ಸಮೃದ್ಧಿ ತುಂಬಿದ ಬದುಕು ಸಿಗುತ್ತದೆ. ಈ ದಿನ ಗಂಗಾ ಸ್ನಾನ ಮಾಡೋದು ಪವಿತ್ರ ಎಂದು ನಂಬಲಾಗಿದೆ ಬೆಳಿಗ್ಗೆ ಬೇಗ ಎನ್ನು ಸ್ನಾನ ಮುಗಿಸಿ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಒಳ್ಳೆಯ ಶುಭ ಫಲವನ್ನು ಕೂಡ ಪಡೆಯಬಹುದು ಎಂಬ ನಂಬಿಕೆ ಇದೆ. ಸಂಕ್ರಾಂತಿಯಲ್ಲಿ ಎಳ್ಳನ್ನು ಅದೃಷ್ಟ ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ ಉದಾಹರಣೆಗೆ:  ನಿನ್ನ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು ಪೂಜ್ಯರಿಗೆ  ಎಳ್ಳು ದಾನ ಮಾಡುವುದು ಶಿವಮಂದಿರಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದು ಉತ್ತಮ ಎಂದು ಹಿರಿಯರ ಸಂಪ್ರದಾಯ. ನಾಗರತ್ನ ಹೆಚ್ ಗಂಗಾವತಿ.

“ಕುಟುಂಬಗಳ ಮಧ್ಯೆ ಬಾಂಧವ್ಯ ಬೆಸೆಯುವ ಸಂಕ್ರಾಂತಿ ಹಬ್ಬ” ನಾಗರತ್ನ ಹೆಚ್‌ ಗಂಗಾವತಿ Read Post »

ಕಾವ್ಯಯಾನ

ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ” ಮೈ ನಡುಗುವ ತಂಪುಗಾಳಿಯುಕಂಪ ಸೂಸುತ್ತಿತ್ತು ಅದು…ನೀ ಮುಡಿದ ದುಂಡುಮಲ್ಲಿಗೆ ಘಮವೆಂದು ಮನಸು ಹೇಳುತ್ತಿತ್ತು. ಹಚ್ಚಹಸುರಿನ ಪಚ್ಚೆಪೈರಿನಬೆಳೆಯ ನೋಡುತ ಕೋಗಿಲೆಕೂಗುತ್ತಿತ್ತು. ಬರುವ ಸಂಕ್ರಾಂತಿಮುದತರಲಿ ರೈತರಿಗೆ ಎಂದು ಹಾಡುತ್ತಿತ್ತು. ಉಡಿತುಂಬಿದ ಧರೆಮುಡಿಗೇರಿದ ಫಸಲುಮುತ್ತಿಕ್ಕುವ ಚಳಿ ತಾ….ಮುನುಗುತ್ತಾ ಸುಗ್ಗಿಯಹಾಡಗುನುಗುತ್ತಾ.ಬರುವ ಸಂಕ್ರಾಂತಿಯಲಿ ಹಸನಾಗಿರಲಿ ಅನ್ನದಾತನ ಬದುಕುಎಂದು ದೇವರ ಬೇಡುತ್ತಿತ್ತು. ತಳಿರು ತೋರಣ ಕಟ್ಟುತಚಾಮರ ಬೀಸಿದೆ ಮಾಮರ.ಕರಗದಿರಲಿ ಅನ್ನದಾತನ ಕನಸುಈ ವರುಷ ಬರದೇ ಇರಲಿ ಬರ. ಹಸನಾಗಿರಲಿ ಅನ್ನದಾತನ ಮನಸುಹರಿದೋಗಿ ಬಿಡಲಿ ಈ ವರುಷ.ಸಾಲ ಸಾಲದ ಬಡ್ಡಿಮತ್ತೆಂದೂ ಕಾಡದಿರಲಿ ಸಾಲದ ಕನಸು. ಆ ಪಥ ಬದಲಿಸಿ ಈ ಪಥದಲಿಚಲಿಸಿ.ಆ ರಾಶಿ ಈ ರಾಶಿಯಲಿ ಸಾಗಿಕತ್ತೆ.ಕಪ್ಪೆ.ಗೋವು.ಮಾವುಯಾವುದೇ ವಾಹನ ಏರುಮಡಿವಾಳರ ಮನೆಯಲ್ಲೇ ವಾಸವಿರು  ಮಡಿಯುಳ್ಳವರ ಮನೆಯಲ್ಲೇ ಮಲಗು  ಒಟ್ಟಾರೆ ಅನ್ನದಾತನ ಮನೆಯಲ್ಲಿ ಅನವರತವಾಗಿರಲು ಬಂದುಬಿಡುಸಂಕ್ರಾಂತಿ ಬಾಡದಿರಲಿಅನ್ನದಾತನ ಮುಖದ ಕಾಂತಿ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ” Read Post »

ಕಾವ್ಯಯಾನ

ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ” ಬಂದಿತೋ ಬಂದಿತು ಮೊದಲ ಹಬ್ಬಸರಿಸಿ ಎಲ್ಲರ ಮನದ ಮಬ್ಬಸವಿಯಲು ಕರೆಯಿತು ಸಿಹಿ ಕಬ್ಬಒಟ್ಟಿಗೆ ಆಡೋಣ ಎತ್ತರದ ದಿಬ್ಬ ದ್ವೇಷದ ಯೋಚನೆ ಎಂದಿಗೂ ಸಲ್ಲಒಟ್ಟಿಗೆ ಸವಿಯೋಣ ಎಳ್ಳು ಬೆಲ್ಲಸ್ನೇಹ ಸಂಪಾದಿಸೋಣ ಮೆಲ್ಲ ಮೆಲ್ಲಪ್ರೀತಿಯಲಿ ಸಿಹಿ ಮಾತಾಡೋಣ ಎಲ್ಲಾ ಉತ್ತರಾಯಣದ ಪುಣ್ಯಪರ್ವ ಕಾಲವಿದುಮಕರ ಸಂಕ್ರಮಣದ ಜ್ಯೋತಿಯಿದು.ಸೂರ್ಯದೇವನ ಕರುಣೆ ನಮಗೆಂದುಮನುಕುಲದ ಉನ್ನತಿಗೆ ಸಹಕರಿಸೆಂದು ಮಾನವರಲ್ಲಿ ತುಂಬಿರಲಿ ಪ್ರೀತಿ ಶಾಂತಿಮನದಿಂದ ದೂರಗಲಿ ಕಲ್ಮಶದ ಬ್ರಾಂತಿಸಾದಿಸಲು ಬೇಕಿದೆ ಸ್ವಲ್ಪ ಕ್ರಾಂತಿಅದಕಾಗಿ ಬಂದಿಹುದು ಮಕರ ಸಂ…..ಕ್ರಾಂತಿ. ದಬ್ಬಾಳಿಕೆ ಕಂಡರೆ ವಿರೋಧವಿರಲಿಲಂಚದ ಅಧಿಕಾರಕ್ಕೆ ತಲೆ ಬಾಗದಿರಲಿಪ್ರತಿ ಹೆಜ್ಜೆಯಲಿ ನಮ್ಮತನದ ದೃಢತನವಿರಲಿದಿಟ್ಟತನದ ಬದುಕು ಎಂದೆಂದೂ ಸಾಗುತಿರಲಿ. ಲತಾ ಎ ಆರ್ ಬಾಳೆಹೊನ್ನೂರು.

ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ” Read Post »

ಕಾವ್ಯಯಾನ

ಗೀತಾ ಆರ್‌ ಅವರ ಕವಿತೆ “ಸುಗ್ಗಿ ಸಂಕ್ರಾಂತಿ”

ಕಾವ್ಯ ಸಂಗಾತಿ ಗೀತಾ ಆರ್‌ “ಸುಗ್ಗಿ ಸಂಕ್ರಾಂತಿ” ಹೊಸ ವರುಷದ ಹೊಸತುಬೆಳೆ ಹರುಷದಲಿ….ಸುಗ್ಗಿ ಸುಗ್ಗಿ ಸಂಭ್ರಮವುಮನೆಯಲಿ ಸಡಗರವು….ಕಷ್ಟವೆಂಬ ಕಹಿಎಳ್ಳು ಮರೆವಕಬ್ಬು ಬೆಲ್ಲದ ಸವಿಯಲಿ…ಸೂರ್ಯ ಪಥ ಬದಲಿಸುವಸಂಚಲನ ಕಾಲಚಕ್ರದಲಿ…ತುಂಬಿರಲಿ ಸುಖ ಸಂತೋಷಮಕರ ಸಂಕ್ರಾಂತಿಯಲಿ….ರಂಗೋಲಿಯ ಬಣ್ಣಗಳಲ್ಲಿಪಚ್ಚೆ ತಳಿರುತೋರಣದಲಿ…ಜೀವನದ ನೋವುಗಳೆಲ್ಲಾಮರೆವ ನಾವು ಬಾಳಿನಲ್ಲಿ….ಸ್ನೇಹ ಪ್ರೀತಿ ಸಂಬಂಧಗಳುಇರಲಿ ಸಾಮರಸ್ಯದಲಿ….ಆಯುಷ್ಯ ಆರೋಗ್ಯ ಆನಂದಪ್ರಾರ್ಥಿಸು ದೇವರಲಿ….ಧನ ಧಾನ್ಯ ಸಂಪತ್ತು ಸಮೃದ್ಧಿಏಲ್ಲಾರ ಬದುಕಿನಲಿ….ಸುಖ ಶಾಂತಿ ನೆಮ್ಮದಿ ಸಿಗಲಿಎಲ್ಲಾರಿಗೂ ಸುಗ್ಗಿಯಲಿ…ಸಂಭ್ರಮಿಸಿರಿ ಏಲ್ಲಾರೂಮಕರ ಸಂಕ್ರಾಂತಿಯಲಿ….  ಗೀತಾ ಆರ್.

ಗೀತಾ ಆರ್‌ ಅವರ ಕವಿತೆ “ಸುಗ್ಗಿ ಸಂಕ್ರಾಂತಿ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಅವರ ಕವಿತೆ,”ಸಂಕ್ರಾಂತಿ ಸಂಭ್ರಮ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ “ಸಂಕ್ರಾಂತಿ ಸಂಭ್ರಮ” ಭಾನು ಉದಯಿಸಿಕಿರಣ ಚೆಲ್ಲಿದ ದಿನಶೀತದ ನೆರಳು ಸರಿದುಹೊಸ ಕಾಲ ಅದುಬೆಳೆದು ನಿಂತ ಪೈರುಗಳು ನಗುವಿನ ಗೀತೆ ಮುಗುಳು ಮನೆ ಮನ ತುಂಬಿತುಸಂಕ್ರಾಂತಿಯ ಸಂಭ್ರಮ ಎಳ್ಳು–ಬೆಲ್ಲ ಹಂಚಿಹೃದಯ ಬೆಸೆಯುವಸಂಪ್ರದಾಯ,ಕಹಿ–ಸಿಹಿಯ ಸಂಗಮವೇಬದುಕಿನ ಸತ್ಯೋಪಾಯ,ಸಂಕ್ರಾಂತಿಯ ಸಂಭ್ರಮ “ಎಳ್ಳು ಬೆಲ್ಲ ತಿನ್ನಿಒಳ್ಳೇ ಮಾತಾಡಿ”  ಹಾರೈಕೆ,ಸ್ನೇಹದ ಬೀಜ ಬಿತ್ತುವಮಧುರ ಸಂಸ್ಕೃತಿಯ ಸಖ್ಯಹಸಿರು ಹೊಲಗಳಲ್ಲಿಕಂಗೊಳಿಸುವ ದವಸ,ಸಂಕ್ರಾಂತಿಯ ಸಂಭ್ರಮ ರೈತನ ಶ್ರಮಕ್ಕೆ  ಸಿಕ್ಕಿತುಸಾರ್ಥಕ ಉತ್ಸವ,ನೇಗಿಲು ಹಿಡಿದ ಕೈಗಳಿಗೆಗೌರವದ ನಮನ,ಅನ್ನದಾತನ ಬದುಕಿಗೆಬೆಳಕಿನ ಕಿರಣ.ಸಂಕ್ರಾಂತಿಯ ಸಂಭ್ರಮ ಗೋ  ಮಾತೆಗೂ ಹಬ್ಬ, ಕೊಂಬುಗಳಿಗೆ ಬಣ್ಣಗಂಟೆಯ ನಾದದಲ್ಲಿತುಂಬಿತು ಹಳ್ಳಿ–ಹಾಡುಉತ್ಸಾಹದ ಆಟ–ಪಾಠಸಂಕ್ರಾಂತಿ ತಂದಿತುಸಂಕ್ರಾಂತಿಯ ಸಂಭ್ರಮ ಸಂಭ್ರಮದ  ನೋಟ.ಆಕಾಶದಲ್ಲಿ ಗಾಳಿಪಟಬಣ್ಣದ ಬಣ್ಣದ  ಕೂಟಸಕ್ಕರೆ ಕಬ್ಬು ಕೈಯಲ್ಲಿಕನಸ  ಮನದಲ್ಲಿ,ಸಂತಸದ ಸಿಹಿ ಬೆಲ್ಲ ಎಲ್ಲರ ಬದುಕಿನಲ್ಲಿ.ಸಂಕ್ರಾಂತಿಯ ಸಂಭ್ರಮ ಸೂರ್ಯನಿಗೆ ನಮಿಸಿಹೊಸ ದಾರಿಗೆ ಪಯಣ ಭವಿಷ್ಯ ಕಟ್ಟುವೆವು, ಪಣಒಗ್ಗಟ್ಟಿನ ಸಂದೇಶ ಸಾರುವಪುಣ್ಯದ ಹಬ್ಬ,ಸಂಕ್ರಾಂತಿ , ಸಂಸ್ಕೃತಿ ಸಂಭ್ರಮ, ಸೌಭಾಗ್ಯಸಂಕ್ರಾಂತಿಯ ಸಂಭ್ರಮ. ಡಾ ತಾರಾ ಬಿ ಎನ್

ಡಾ ತಾರಾ ಬಿ ಎನ್ ಅವರ ಕವಿತೆ,”ಸಂಕ್ರಾಂತಿ ಸಂಭ್ರಮ” Read Post »

ಕಾವ್ಯಯಾನ

ಮಮತಾ ಜಾನೆ ಅವರ ಕವಿತೆ “ಹಸಿರು ಕಾಯುವ ರೈತ”

ಕಾವ್ಯ ಸಂಗಾತಿ ಮಮತಾ ಜಾನೆ “ಹಸಿರು ಕಾಯುವ ರೈತ” ನೇಗಿಲು ಹಿಡಿದು ಬೆವರನು ಸುರಿಸಿಮಣ್ಣಲಿ ಕನಸನು ಬಿತ್ತುವನುರಜೆಗಳ ಲೆಕ್ಕಿಸದ ರೈತನಾಡಿಗೆ ಅನ್ನವ ನೀಡುವನು ಮೌನದಲಿ ಕಾಯಕ ತೋರುತದೇಶ ಸೇವೆಯ ಮಾಡುವನುಬಿತ್ತುವ ಬೀಜಕ್ಕೆ ಜೀವವ ತುಂಬುತಭೂಮಿಯ ಹಸಿರನು ಕಾಯುವನು ಶ್ರಮವನ್ನು ಹರಿಸುತ ರೈತಬೆಳೆಯನು ಬೆಳೆದು ಅನ್ನವ ನೀಡುವನುದೇಶಕ್ಕೆ ಬೆನ್ನೆಲುಬು ಆಗಿರುವ ರೈತಸರ್ವರಿಗೂ ಅನ್ನದಾತನು ಆಗಿರುವನು ಮಮತಾ ಜಾನೆ

ಮಮತಾ ಜಾನೆ ಅವರ ಕವಿತೆ “ಹಸಿರು ಕಾಯುವ ರೈತ” Read Post »

ಕಾವ್ಯಯಾನ

ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ”

ಕಾವ್ಯ ಸಂಗಾತಿ ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ” ಮಾಗಿಯ ಚಳಿಯಲ್ಲಿಅಂಗಳಕೆ ನೀರೆರೆದುಚಿತ್ತಾರವ ಬಿಡಿಸುತ್ತಾಮಾಧವನ ನೆನೆನೆನೆದುಸುಗ್ಗಿ ಸಂಭ್ರಮದಿ ಮುಳುಗುವುದು. ವರುಷಕ್ಕೊಮ್ಮೆ ಹರುಷತರುವ ಸಂಕ್ರಮಣವುಎಳ್ಳಹೋಳಿಗೆ ಮಾದಲಿ ತಿನಿಸಿಭೂರಿಭೋಜನ ಉಣಿಸುವುದುಸಂಕ್ರಾಂತಿ ಸಂಭ್ರಮದಿ ಮುಳುಗುವುದು. ರೈತನ ಫಸಲಿಗೆ ಭಕ್ತಿಯಿಂ ನಮಿಸಿರಾಸುಗಳಿಗೆ ಗೆಜ್ಜೆಕಟ್ಟಿ ಸಿಂಗರಿಸಿಜನಪದ ಸೊಗಡ ಎಲ್ಲೆಡೆ ಬೀರಿಭೂತಾಯಿ ಪೂಜೆ ಮಾಡುವೆವುಸಂಕ್ರಾಂತಿ ಹರುಷದಿ ಮುಳುಗುವುದು ವರುಷದ ಮೊದಲ ಹಬ್ಬಉತ್ತರಾಯಣ ಆರಂಭಸೂರ್ಯನ ಪಥ ಸಂಚಲನಮಕರ ರಾಶಿಗೆ ಸಾಗುವ ನೇಸರಸಂಕ್ರಾಂತಿ ಹರುಷ ತುಂಬುವನು. ರವಿಯ ಕಾಂತಿ ಹೊಳೆಯಲುಮನಕೆ ಶಾಂತಿ ಮೂಡಲುಕ್ರಾಂತಿ ಬ್ರಾಂತಿ ಹೊರದೂಡಿಹೊಸತನದ ಕಳೆ ಕಾಣುವೆವುಮಕರ ಸಂಕ್ರಾಂತಿಲಿ ಮುಳುಗುವುದು. ಎಳ್ಳು ಬೆಲ್ಲದ ಸಿಹಿ ಜೆಗೆದುಕಬ್ಬಿನ ರಸವನು ಕುಡಿದುಹುಗ್ಗಿಯ ಸವಿ ಸವಿದುಹೊಲದಲಿ ಊಟ ಮಾಡುವೆವುಸಗ್ಗದ ಸಂಕ್ರಾಂತಿಲಿ ಮುಳುಗುವುದು.  ರಾಜೇಶ್ವರಿ ಎಸ್ ಹೆಗಡೆ.

ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ” Read Post »

ಇತರೆ, ಜೀವನ

“ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?”ವನಜ ಮಹಾಲಿಂಗಯ್ಯ

ವಿಚಾರ ಸಂಗಾತಿ ವನಜ ಮಹಾಲಿಂಗಯ್ಯ “ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?” ಹಿಂದಿನ ಕಾಲದಲ್ಲಿ ಈ ಜ್ಯೋತಿಷ್ಯಕ್ಕೆ  ಈಗ ಕೊಡುವಷ್ಟು ಪ್ರಾಮುಖ್ಯತೆಯನ್ನು ಕೊಡತ್ತಿರಲಿಲ್ಲ. ಯಾಕೆಂದರೆ ಕಷ್ಟಪಟ್ಟು ದುಡಿಯೋದು  ಹೊಟ್ಟೆತುಂಬ ತಿನ್ನೋದು  ಕಣ್ತುಂಬ ನಿದ್ದೆ ಮಾಡೋದು ಅಷ್ಷೆ.   ಕಲ್ಲನ್ನು ಜೋಡಿಸಿ ಮಣ್ಣು ಕಲಸಿ ಮೆತ್ತಿ ಮನೆ ಕಟ್ಟಿ, ಅದಕ್ಕೆ ಸುಣ್ಣ, ಕೆಂಪುಬಣ್ಣ (ಉರುಮಂಜು) ಬಳಿದು ಕೊಂಡು ಬಂಗಾರದ ಬದುಕು ಬದುಕಿದವರು ನಮ್ಮ ಹಿರಿಯರು. ಹಬ್ಬ, ಮದುವೆ ಗಳಿಗೆ ಸಂಬಂಧಿ ಕರೆಲ್ಲ ಕೂಡಿಕೊಂಡು ಅವರ ಸಂಭ್ರಮ ಹೇಳತೀರದು. ಆಗ ಮನಸ್ಸನ್ನು ಹಾಳುಮಾಡುವ ಈ ಟಿ ವಿ , ಮೊಬೈಲು,   ಅಲ್ಲದೆ ಬೈಕು ಕಾರು ಇವ್ಯಾವು ಇರಲಿಲ್ಲ. ಅಂದು ಎತ್ತಿನ ಗಾಡಿ, ಕುದುರೆ ಸಾರೋಟ, ಸೈಕಲ್,ಇವ್ಯಾವು ಇಲ್ಲ ಅಂದ್ರೆ ಕಾಲ್ನಡಿಗೆ ಅಷ್ಟೇ. ಆದರೂ ಅಂದಿನಜನರೆಲ್ಲ ನೆಮ್ಮದಿಯಿಂದ  ಸಮಾಧಾನದಿಂದ ಪ್ರೀತಿ ವಿಶ್ವಾಸ ನಂಬಿಕೆಯಿಂದ ಹೊಂದಾಣಿಕಯಿಂದ ಜೀವಿಸುತ್ತಿದ್ದರು. ಎಲ್ಲವೂ ತನ್ನಷ್ಟಕ್ಕೆ ತಾನು ನಡೆಯುತ್ತಾ ಹೋಗುತ್ತಿತ್ತು. ಅಂದರೆ ಪ್ರಕೃತಿಯ ನಿಯಮಗಳನ್ನು ಪಾಲಿಸುತ್ತಾ ಜನ ಸೌಖ್ಯವಾಗಿ, ಖಷಿಯಿಂದ , ಹೊಂದಾಣಿಕೆಯಿಂದಬದುಕುತ್ತಿದ್ದರು. ಆಡಂಬರವಿಲ್ಲ, ಅತಿಯಾಸೆ ಇಲ್ಲ, ಅಸೂಯೆಯಿಲ್ಲ .  ಕಂಪ್ಲೇಟಿಲ್ಲ , ಕೋರ್ಟು ಕಚೇರಿಗಳಿಲ್ಲ. ಆದರೆ ಈಗ ವಿದ್ಯಾವಂತರು ಜಾಸ್ತಿಯಾಗಿ , ಅವರವರೇ ನಿಯಮಗಳನ್ನು ಹಾಕಿಕೊಂಡಿದ್ದಾರೆ. ಅಂದರೆ ಬದುಕಿನ ಅರ್ಥವೇ ಬದಲಾಗಿದೆ. ಎಲ್ಲವೂ ಕ್ಷಣಿಕ ಎನ್ನಿಸಿದೆ.ಕಾರಣ ಅವಸರದ ಅಪಾಯದ ಪಯಣ. ತಂತ್ರಜಾನದ ಮುಂದೆ ಯಾಂತ್ರಿಕ ಜೀವನ.10 ರಿಂದ 1 ಲಕ್ಷದವರೆಗಿನ  ಅಂಗೈಯಲ್ಲಿರುವ  ಮೊಬೈಲ್ ಎಲ್ಲವನ್ನು  ಎಲ್ಲರನ್ನೂ ಬದಲಾಯಿಸಿದೆ.  ಟಿ ವಿ ಧಾರಾವಾಹಿಗಳ ಅಬ್ಬರ. ಸಂಬಂಧಗಳ ದೂರ ತೀರ,  ಎಲ್ಲವೂ ಆನ್ಲೈನ್, ಅಮ್ಮನ ಕೈರುಚಿಯಿಂದ ವಂಚಿತರಾಗಿ,  ದುಡ್ಡೇ ದೊಡ್ಡಪ್ಪ ಅದಿಲ್ಲ ಅಂದರೆ ಬದುಕೇ ಇಲ್ಲಪ್ಪ ಅನ್ನುವ ಹಾಗೆ, ಬೇರೆ ಬೇರೆ ಊರು, ರಾಜ್ಯ, ದೇಶಗಳಿಗೆ ದುಡಿಯಲೆಂದು ಹೋದ ಮಕ್ಕಳು ತಂದೆ ತಾಯಿಯ ಸುಖಕ್ಕಲ್ಲ  ಅವರ ಶವಕ್ಕು ಬರದಂತಹ ಪರಿಸ್ಥಿತಿಯಲ್ಲಿ ಬದುಕು ಕಳೆಯುತ್ತಿದ್ದಾರೆ ಎಂದರೆ ಎಲ್ಲಿಗೋಯಿತು? ನಮ್ಮ  ಜೀವನ?  ಅದರ ನಡು ವೆ ಜ್ಯೋತಿಷ್ಯ, ವಾಸ್ತು ಅಂತ ಜನ ಮುಗಿಬಿದ್ದಿದ್ದಾರೆ. ಬೆಳಗ್ಗೆ ಎಂಟು ಗಂಟೆಗೆ ಎಲ್ಲಾ ನ್ಯೂಸ್ ಚಾನಲ್ಗಳಲ್ಲಿ ಬರುವ ಜ್ಯೋತಿಷಿಗಳು ಅವರ ಬದುಕೆ ಅದ್ವಾನಕ್ಕಿಟ್ಟಿರುತ್ತದೆ , ಅದರೆ ಅವರು ಎಲ್ಲರ ಬದುಕಿನ ಬಗ್ಗೆ ಹೇಳಲು ಕೂತಿರುತ್ತಾರೆ. ಅವರ ಹಿನ್ನೆಲೆ ಹೇಗಿದೆ,  ಅವರಿಗೆ ಅವರ ಭವಿಷ್ಯದ ಬಗ್ಗೆಯೇ ಅವರಿಗೆ ಗೊತ್ತಿಲ್ಲ, ಇತ್ತೀಚೆಗೆ ನಡೆದ ಜ್ಯೊತಿಷಿಯ ಕೊಲೆಯನಂತರವಾದರು ,ಟಿ ವಿ ಮಾಧ್ಯಮಗಳು ಅಂತಹ  ಕಾರ್ಯಕ್ರಮಳಿಗೆ   ಹಾಗೂ ಟಿವಿಗಳಲ್ಲಿ ಬರುವ ಕೆಲವು ಜಾಹೀರಾತುಗಳು ನಿಜಕ್ಕೂ ಮನೆ ಮಂದಿಯನ್ನು ಮುಜುಗರ ಪಡಿಸುತ್ತಿವೆ. ಅದೂ ಅಲ್ಲದೆ ಮಹಿಳೆರ ಒಳ ಉಡುಪುಗಳ ಜಾಹೀರಾತು ಗಳು ಹಾಗೂ ಪ್ಯಾಡ್ ಮತ್ತು IVF  ಜಾಹೀರಾತು ಗಳು ನಿಜಕ್ಕೂ ಬೇಜಾರು ತರುತ್ತವೆ. ಹಾಗೆಯೇ ಕೆಲವು ರಿಯಾಲಿಟಿ ಷೋಗಳು  ಡಬಲ್ ಮೀನಿಂಗ್ ಬಳಸುವುದು ಹಾಗೂ ಕೆಟ್ಟ ಕೆಟ್ಟ ದೃಶ್ಯ ಗಳನ್ನು ವೈಭವೀಕರಿಸಿ ತೋರಿಸುವುದು ನಿಜಕ್ಕೂ ಅಸಹ್ಯವಾಗುತ್ತಿದೆ.ಇದಕ್ಕೆಲ್ಲ ಕಡಿವಾಣ ಹಾಕಬೇಕಿತ್ತು ಅಲ್ಲವೇ  ? ಕಡಿವಾಣ ಹಾಕುವವರು ಯಾರು? ವನಜ ಮಹಾಲಿಂಗಯ್ಯ                          

“ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?”ವನಜ ಮಹಾಲಿಂಗಯ್ಯ Read Post »

ಇತರೆ

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತ ರಾಜು ಹಾಸನ.

ಪ್ರವಾಸಿ ಸಂಗಾತಿ ಗೊರೂರು ಅನಂತ ರಾಜು “ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ” ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ನುಗ್ಗಿ ಬಸ್ ಹತ್ತಿ  ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ ಕುಡಿದು ಮೈಂಡ್ ಪ್ರೆಶ್ ಆಯಿತು. ಅಲ್ಲಿ ದೇವಾಲಯದ ದಾರಿ ಕೇಳಲು ನೀವು ಆಟೋದಲ್ಲಿ ಹೋಗಿ ಆರೂವರೆಗೆ ದೇವಸ್ಥಾನದ ಬಳಿಗೆಯೇ ಬಸ್ ಬರುತ್ತದೆ ಅಲ್ಲಿ ವಾಪಸ್ಸು ಹತ್ತಬಹುದು ಎಂದರು. ಎರಡು ಆಟೋದಲ್ಲಿ  ಮಧುಕೇಶ್ವರ ದೇವಸ್ಥಾನಕ್ಕೆ ಹೋದವು. ದೇವಸ್ಥಾನದ ಪ್ರವೇಶದ್ವಾರದಲ್ಲಿ ನಾವು ಐವರು ಎ.ಹೆಚ್.ಗಣೇಶ್, ಪುಟ್ಟಸ್ವಾಮಿಗೌಡರು, ಬೇಕ್ರೀ ರಾಜೇಗೌಡರು, ಪಟ್ನ ವೆಂಕಟೇಗೌಡರು ಪೋಟೋ ತೆಗೆಸಿಕೊಂಡವು.   ಅರ್ಚಕರು ನಿಮಗೆ ಗೈಡ್ ಬೇಕೆ ಎಂದರು. ಹೌದೆಂದು ಅವರಿಂದ ಅನೇಕ ಐತಿಹಾಸಿಕ ಮಾಹಿತಿ ಪಡೆದೆವು.  ಸಿರಸಿಯಿಂದ ಬನವಾಸಿಗೆ ೨೨ ಕಿ.ಮೀ. ದೂರದ ಪ್ರಯಣ. ನಾವು ಪ್ರಯಣಿಸಿದ್ದು ಸೊರಬ ರಸ್ತೆಯಲ್ಲಿ. ವರದಾ ನದಿ ದಂಡೆಯಲ್ಲಿ ಬನವಾಸಿ ಇದೆ. ಇದು ಶಿರಸಿ ತಾಲ್ಲೂಕಿಗೆ ಸೇರಿದೆ.  ಕ್ರಿ.ಶ. ೧ನೇ ಶತಮಾನದಲ್ಲಿ ಬಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು ಬನೌಸಿ ಇಂದು ಕರೆದಿದ್ದಾನೆ. ಕ್ರಿ.ಶ.೪ನೇ ಶತಮಾನದಲ್ಲಿ ಜಯಂತಿಪುರ ಅಥವಾ ವೈಜಯಂತಿ ಎಂದು ಕರೆಯಲಾಗುತ್ತಿತ್ತು. ಪಾಂಡವರು ತಮ್ಮ ವನವಾಸದ ಕೆಲಕಾಲ ಇಲ್ಲೇ ಕಳೆದರೆಂದೂ ಧರ್ಮರಾಜನ ಅಶ್ವಮೇಧಯಾಗದ ಸಂದರ್ಭ ಸಹದೇವ ದಕ್ಷಿಣ ಭಾರತದ ದಿಗ್ವಿಜಯ ಕಾಲದಲ್ಲಿ ವನವಾಸಕಾ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಬನವಾಸಿಯನ್ನು ವನವಾಸಕ ಎಂಬ ಉಲ್ಲೇಖವಿದೆ. ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಕೈಟಭರೆಂಬ ದೈತ್ಯರನ್ನು ವಿಷ್ಣು ಕೊಂದನೆಂದು, ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದರೂ ಈಗಿರುವಂತೆ ಆ ದೇವಾಲಯಗಳು ಅನಂತರ ಕಾಲದವು. ನಾನು ಹಾಸನದಲ್ಲಿ ನೋಡಿದ ದೇವಿ ಮಹಾತ್ಮೆ ನಾಟಕದಲ್ಲಿ ಈ ಎರಡು ಪಾತ್ರಗಳು ಬರುತ್ತವೆ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ  ಬೌದ್ಧ ಭಿಕ್ಷು ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತದೆ.  ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ  ಸಿಂಹಳದ ಭೌದ್ಧ ಭಿಕ್ಷುಗಳು ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ.  ಬನವಾಸಿ ಗೌತಮೀ ಪುತ್ರ ಸಾತಕರ್ಣಿಯ ನೇರ ಆಡಳಿತಕ್ಕೆ ಸೇರಿದ್ದು ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕದ ಶಾಸನ ಹೇಳುತ್ತದೆ.  ಬನವಾಸಿಯಲ್ಲಿ ದೊರಕಿದ ಸಾತವಾಹನ ದೊರೆ ವಾಸಿಷ್ಠೀ ಪುತ್ರ ಸಿವಸಿರಿ ಪುಳುಮಾವಿನ ಅನಂತರ ಬಂದ (ಕ್ರಿ.ಶ.೨ನೇ ಶತಮಾನ) ಶಿವಶ್ರೀ ಪುಳುಮಾವಿಯ ಶಾಸನ ಅವನ ರಾಣಿಯ ಸ್ಮಾರಕ ಶಿಲೆಯಾಗಿದ್ದು ಆ ಕಾಲದಲ್ಲಿ ಬನವಾಸಿಯ ಪ್ರಾಮುಖ್ಯವನ್ನು ಸೂಚಿಸುತ್ತದೆ. ಮುಂದೆ ಸಾತವಾಹನರ ಸಾಮಂತರೂ ಆ ವಂಶದ ಶಾಖೆಗೆ ಸೇರಿದವರೂ ಆದ ಚಟುಸಾತಕರ್ಣಿ ದೊರೆಗಳ ಕಾಲದಲ್ಲೂ ಬನವಾಸಿ ಪ್ರಮುಖ ನಗರವಾಗಿತ್ತು.  ಮಧುಕೇಶ್ವರ ದೇವಾಲಯದ ಕಂಬದ ಮೇಲೆ ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೇವಸ್ಥಾನದ ಜೀರ್ಣೋದ್ದಾರ ದಾನದತ್ತಿಗಳ ಬಗ್ಗೆ ತಿಳಿಸುತ್ತವೆ.  ಕನ್ನಡವನ್ನು ರಾಜ್ಯ ಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು.  ಈ ರಾಜ್ಯದ ಸ್ಥಾಪಕ ಮಯೂರಶರ್ಮ (ಕ್ರಿ.ಶ.೩೪೫-೩೬೫) ಈತನ ರಾಜಧಾನಿ ಬನವಾಸಿ. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ (೪೩೫-೪೫೫) ಉಚ್ರ್ರಾಯ ಸ್ಥಿತಿಯಲ್ಲಿತ್ತು. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ ಆರಂಕುಶವಿಟ್ಟೊಡಂ  ನೆನೆವುದೆನ್ನ ಮನಂ ಬನವಾಸಿ ದೇಶಮಂ  ಎಂದಿದ್ದಾನೆ. ಬನ ಮತ್ತು ವಾಸಿ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ ಕಾಡು ಮತ್ತು ವಸಂತ ಎಂಬ ಅರ್ಥ ಕೊಡುತ್ತದೆ. ಬನವಾಸಿ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು. ಕದಂಬರ ಕಾಲದ ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯ ಪ್ರಾಚೀನ ಇತಿಹಾಸ ಮತ್ತು ಶಾಸನಗಳಿಂದ ಕೂಡಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯ. ಗರ್ಭಗುಡಿಯಲ್ಲಿ ಜೇನು ಬಣ್ಣದ ಲಿಂಗವಿದೆ.  ಇಲ್ಲಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ತಾಳಗುಂದ ಗುಂಡನೂರು ಚಂದ್ರವಳ್ಳಿ ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ.  ಕನ್ನಡದ  ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ.೪೫೦) ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ದೊರಕಿದೆ. ರಾಜಾ ಶಾಂತಿವರ್ಮನ (ಕ್ರಿ.ಶ.೪೫೦) ಕಾಲದ ತಾಳಗುಂದದ ಶಾಸನವು ಬನವಾಸಿ ಕದಂಬರ ಸಾಮ್ರಾಜ್ಯದ ಹುಟ್ಟಿನ ಸಂಭವನೀಯ ವಿವರ ನೀಡುತ್ತದೆ. ತಾಳಗುಂದದ ನಿವಾಸಿ ಮಯೂರವರ್ಮನು ತನ್ನ ಅಜ್ಜ ಮತ್ತು ಗುರು ವೀರವರ್ಮನೊಂದಿಗೆ  ವೈದಿಕ ವಿದ್ಯಾರ್ಜನೆಗಾಗಿ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಾಪವಾಗಿ ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತನಾಗಿ ಪ್ರತೀಕಾರದ ಪ್ರತಿಜ್ಞೆಗೈದು ಕಂಚಿಯನ್ನು ಬಿಟ್ಟು ವಾಪಸ್ಸು ಬಂದು ಶಸ್ತ್ರಾಭ್ಯಾಸ ಪ್ರಾರಂಭಿಸುತ್ತಾನೆ.  ಸೈನ್ಯ ಕಟ್ಟಿ ಪಲ್ಲವರೊಂದಿಗೆ ದೀರ್ಘಕಾಲದ ಯುದ್ಧ ನಂತರ ಕದಂಬರು ಸ್ವತಂತ್ರ ರಾಜ್ಯ ಘೋಷಿಸಿ ಕದಂಬರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ರಾಜ್ಯವನ್ನು ಒಪ್ಪಬೇಕಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯ ಪತನವಾಯಿತು. ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರು ನಂತರ ರಾಷ್ಟ್ರಕೂಟರ  ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಈ ವಂಶ ಮುಂದುವರಿಯಿತು.     ದೇವಸ್ಥಾನದ ಆವರಣದಲ್ಲಿ ಇರುವ ಫಲಕದಲ್ಲಿ ದೇವಸ್ಥಾನ ಕುರಿತ್ತಾದ ಕೆಲವು ಐತಿಹಾಸಿಕ ಮಾಹಿತಿಗಳಿವೆ. ಕದಂಬರ ಕಾಲದ ಮಧುಕೇಶ್ವರ ದೇವಾಲಯ ಕಲ್ಯಾಣ ಚಾಲುಕ್ಯರಿಂದ ಸೋಂದಾ ಅರಸರ ಕಾಲದವರೆಗೆ ಅನೇಕ ವಾಸ್ತು ಸೇರ್ಪಡೆ ಬದಲಾವಣೆಗಳನ್ನು ಮಾಡುತ್ತಾ ಬಂದಿರುವುದು ಇಲ್ಲಿನ ವಾಸ್ತು ಶೈಲಿ  ಮತ್ತು ದೊರಕಿರುವ ೧೨ ಶಾಸನಗಳಿಂದ ತಿಳಿಯಬಹುದಾಗಿದೆ.  ಕದಂಬರು ಶಾತವಾಹನರ ಶಿಲ್ಪ ಕಲಾ ಶೈಲಿಯನ್ನು ಅಳವಡಿಸಿಕೊಂಡರು. ಪೂರ್ವಾಭಿಮುಖವಾಗಿ ಇರುವ ದೇವಾಲಯದ ಚೌಕಾಕಾರ ಗರ್ಭ ಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಮಧುಕೇಶ್ವರ ಲಿಂಗವಿದೆ. ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ. ಎಡಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಪೂರ್ವಭಾಗದ ಗೋಡೆಗೆ ಅಂಟಿಕೊಂಡoತೆ ಇರುವ  ೨ ಉಪಗುಡಿಗಳಲ್ಲಿ ಮಹಿಷಮರ್ದಿನಿ ಗಣೇಶನ ಶಿಲ್ಪಗಳಿವೆ ಮತ್ತು ದೊಡ್ಡ ಕಂಬಗಳಿರುವ ವಿಶಾಲ ಮಂಟಪವಿದೆ. ಈ ಎಲ್ಲಾ ರಚನೆಗಳು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿವೆ. ಈ ಮಂಟಪದ ಮುಂಭಾಗದಲ್ಲಿ ತಿರುಗಣಿ ಯಂತ್ರದಿಂದ ರಚಿತವಾದ  ಅಲಂಕೃತ ಕಂಬಗಳಿರುವ ನವರಂಗವಿದೆ. ಅದರಲ್ಲಿ ಕುಳಿತ ನಂದಿಯ ಶಿಲ್ಪವಿದೆ. ನಂದಿಯ ಒಂದು ಕಣ್ಣು ಮಧುಕೇಶ್ವರನನ್ನು ಇನ್ನೊಂದು ಕಣ್ಣು ಪಾರ್ವತಿಯನ್ನು ನೋಡುತ್ತಿದೆ ನೋಡಿ ಎಂದರು ಅರ್ಚಕರು. ನವರಂಗದ ಸುತ್ತಲೂ ಕಕ್ಷಾಸನವಿದ್ದು ನವರಂಗಕ್ಕೆ ಮೂರು ಪ್ರವೇಶ ದ್ವಾರಗಳಿವೆ. ಇವುಗಳು ಸಹ ಕಲ್ಯಾಣ ಚಾಲುಕ್ಯರ ಕಾಲದ ನಿರ್ಮಿತಿಗಳಾಗಿವೆ. ದೇವಾಲಯದ ಒಳಭಾಗದಲ್ಲಿ ಪ್ರಾಚೀನ ಶಿಲ್ಪ ಶೈಲಿಯ ಲಕ್ಷಣಗಳಿರುವ  ಆದಿಮಾಧವ ಮತ್ತು ಕಾರ್ತಿಕೇಯನ ಶಿಲ್ಪಗಳಿವೆ. ದೇವಾಲಯಕ್ಕೆ ಈಗಿರುವ  ಶಿಖರವು ವಿಜಯನಗರ ಸೋಂದಾ ಅರಸರ ಕಾಲಕ್ಕೆ ಸೇರಿದ್ದು ಸುಖನಾಸಿಯನ್ನು ಹೊಂದಿರುವ ಕದಂಬ ನಾಗರ ಶಿಖರವು ಪಿರಮಿಡ್ಡು ಆಕಾರದಲ್ಲಿ ಮೇಲಕ್ಕೇರುತ್ತದೆ.  ನಾಲ್ಕು ಮೂಲೆಗಳಲ್ಲಿ ನಂದಿ ವಿಷ್ಣುವಿನ ದಶಾವತಾರ ೧೨ ಆದಿತ್ಯರು, ದಿಕ್ಪಾಲಕರು, ನಾಗಬಂಧ ಮತ್ತು ಇತರ ದೇವತೆಗಳ ಗಾರೆ ಶಿಲ್ಪಗಳಿಂದ ಶಿಖರವನ್ನು ಅಲಂಕರಿಸಲಾಗಿದೆ. ನವರಂಗದ ಛಾವಣಿಯ ಸಮತಟ್ಟಾಗಿ ಅದರ ಅಂಚು ಇಳಿಜಾರಿನಿಂದ ಕೂಡಿದೆ. ದೇವಾಲಯದ ಮುಂಭಾಗ ದ್ವಜ ಸ್ಥಂಭವಿದೆ. ಪ್ರಾಕಾರದಲ್ಲಿರುವ ಉಪ ಗುಡಿಗಳಲ್ಲಿ ಸೋಂದಾ ಅರಸರ ಕಾಲದ ದಿಕ್ಪಾಲರು ದುಂಡಿರಾಜ, ಗಣಪತಿ ಚಿಂತಾಮಣಿ ನರಸಿಂಹ ಮತ್ತಿತರ ಶಿಲ್ಪಗಳಿವೆ. ಶಾಸನ ಸಹಿತ ನಾಗಶಿಲ್ಪ ಮತ್ತು ಅಲಂಕೃತ ಶಿಲಾಮಂಟಪದoತಿರುವ ಮಂಟಪವು ದೇವಾಲಯದಲ್ಲಿರುವ ಮುಖ್ಯ ರಚನೆಗಳಾಗಿವೆ. ಆಯತಾಕಾರದ ತೆಳು ಶಿಲಾ ಫಲಕದ ಮಧ್ಯದಲ್ಲಿ ಸುತ್ತಿಕೊಂಡಂತೆ ಇರುವ ೫ ಹೆಡಗಳುಳ್ಳ ನಾಗಶಿಲ್ಪವಿದೆ. ಶಿಲಾಫಲಕದ ಎರಡೂ ಬದಿಯ ಅಂಚಿನಲ್ಲಿ ಕ್ರಿ.ಶ.೨ನೇ ಶತಮಾನಕ್ಕೆ ಸೇರುವ ಬ್ರಾಹ್ಮಿ ಲಿಪಿಯ ಪ್ರಾಕೃತ ಶಾಸನವಿದೆ. ಅದು ಹರಿತಪುತ್ರ ವಿನುಕಡೆ ಚುಟುಕುಲಾನಂದ ಶಾಕಕರ್ಣಿಯ ೧೨ನೇ ಆಳ್ವಿಕೆಯ ವರ್ಷದಲ್ಲಿ ಅವನ ಪುತ್ರಿ ಶಿವಸ್ಕಂದ ನಾಗಶ್ರೀಯು ಒಂದು ಕೆರೆ ಹಾಗೂ ವಿಹಾರದೊಂದಿಗೆ ಈ ಕಲಾತ್ಮಕ ನಾಗಶಿಲ್ಪವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾಗಿ ತಿಳಿಸುತ್ತದೆ. ಸಂಜಯoತಿಯ (ಬನವಾಸಿ) ನಿವಾಸಿ ಅಚಾರ್ಯ ದಾಮೋರಕನ ಶಿಷ್ಯ ನಾಟಕನೆಂಬ ಶಿಲ್ಪಿಯು ಈ ನಾಗಶಿಲ್ಪವನ್ನು ಕೆತ್ತಿದನೆಂದು ಶಾಸನವು ದಾಖಲಿಸಿದೆ.  ಸೋಂದಾ ಅರಸ ಸದಾಶಿವ ನಾಯಕನು (ಕ್ರಿ.ಶ.೧೬ನೇ ಶತಮಾನ) ನಿರ್ಮಿಸಿರುವ ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ತ್ರಿಲೋಕ ಮಂಟಪವೆಂದು ಕರೆಯಲಾಗುವ ಶಿಲೆಯು ನವರಂಗದಲ್ಲಿದೆ. ರಘುನಾಥ ನಾಯಕ (ಕ್ರಿ.ಶ.೧೬೨೮) ಕೊಡುಗೆಯಾಗಿ ನೀಡಿದ ಶಿಲಾಮಂಟಪದಲ್ಲಿ ಗಿಡ, ಬಳ್ಳಿ, ಪ್ರಾಣಿ  ಮತ್ತು ಜಾಮಿತಿಯ ಅಲಂಕರಣಿಗಳಿಂದ ಕೂಡಿದ ಸೂಕ್ಷ್ಮ ಕೆತ್ತನೆಗಳಿವೆ. ಇಲ್ಲಿನ ಗಣೇಶನ ಅರ್ಧಬಾಗ ಮಾತ್ರ ಇರುವ ಮೂರ್ತಿ ಇದರ ಇನ್ನರ್ದ ವಾರಣಾಸಿಯಲ್ಲಿದೆಯಂತೆ.   ದೇವಾಲಯ ಸಮುಚ್ಛಯದ ಪೂರ್ವ ಭಾಗದಲ್ಲಿರುವ ಮುಖ್ಯ ಪ್ರವೇಶ ದ್ವಾರದಲ್ಲಿರುವ ಮೆಟ್ಟಿಲುಗಳ ಕೈಪಿಡಿ ಗೋಡೆಗಳನ್ನು ಎರಡು ಅಲಂಕೃತ ಆನೆಗಳ ಶಿಲ್ಪಗಳಿಂದ ಕೆತ್ತಲಾಗಿದೆ.  ಇಲ್ಲಿಯ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಬನವಾಸಿ ಪರಿಸರದಲ್ಲಿ ಸಾಮಾನ್ಯ ಅಲಂಕರಣೆಗಳ  ಆದಿ ಕದಂಬರೇಶ್ವರ, ಆದಿ ಮಧುಕೇಶ್ವರ, ಅಲ್ಲಮಪ್ರಭು  ದೇವಾಲಯಗಳಿವೆ. ನಾವು ದೇವಸ್ಥಾನದಿಂದ ಹೊರಬಂದಾಗ ಕತ್ತಲು ಆವರಿಸುತ್ತಿತ್ತು. ದೇವಾಲಯದ ಹೊರಬಾಗದಲ್ಲಿ ಎರಡು ರಥಗಳನ್ನು ಎತ್ತರಕ್ಕೆ ಮನೆ ನಿರ್ಮಿಸಿ ನಿಲ್ಲಿಸಲಾಗಿದೆ. ಈಗ ರಥೋತ್ಸವಕ್ಕೆ ಹೊಸ ರಥ ಬಳಸಲಾಗುತ್ತಿದ್ದು ಹಳೆಯ ರಥವನ್ನು ಸಂರಕ್ಷಿಸಲಾಗಿದೆ. ಹೊರಗಡೆ ಒಂದು  ಸುತ್ತು ಹಾಕಿ ನಡೆದುಕೊಂಡೆ ಬಸ್‌ಸ್ಟ್ಯಾಂಡ್‌ಗೆ  ಬಂದೆವು. ಕೆಲಹೊತ್ತಿಗೆ ಬಸ್ಸು ಬಂತು. ಹತ್ತಲು ಹೋದೆವು. ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಇಲ್ಲೇ ಇರಿ ಎಂದ ಕಂಡಕ್ಟರ್ ಮೇಡಂ ಹತ್ತಿಸಿಕೊಳ್ಳಲಿಲ್ಲ. ಕದಂಬ ಸೈನ್ಯ ಅಧ್ಯಕ್ಷರು ಬೇಕ್ರಿ ರಮೇಶ್ ನಮಗೆ ಬನವಾಸಿಯ ಗುತ್ಯಪ್ಪ ಮಾದರ್ ಕಪ್ಪಗೇರಿ ಅವರ ಪೋನ್ ನಂಬರ್ ನೀಡಿದ್ದರು. ನಾವು ಬಸ್ ಕಾಯುವಾಗ ಗುತ್ಯಪ್ಪರು ಪೋನ್ ಮಾಡಿ ನಮ್ಮನ್ನು ಗುರುತಿಸಿ   ಮಾತನಾಡಿಸಲು ಬಂದರು. ಅಷ್ಟರಲ್ಲಿ ದೇವಸ್ಥಾನದಿಂದ ಬಸ್ಸು ಬಂತು. ನಾಳೇ ಭುವನಗಿರಿಯಲ್ಲಿ ಭೇಟಿಯಾಗೋಣ ಎಂದು ಗುತ್ಯಪ್ಪರಿಗೆ ವಿಶ್ ಮಾಡಿ ಶಿರಸಿ ಬಸ್ಸು ಹತ್ತಿದವು. ಗೊರೂರು ಅನಂತರಾಜು, ಹಾಸನ.

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತ ರಾಜು ಹಾಸನ. Read Post »

You cannot copy content of this page

Scroll to Top