ಅನುವಾದ ಸಂಗಾತಿ
“ನಿಶ್ಶಬ್ದರತ್ನಾಕರ”
ತೆಲುಗು ಕವಿತೆ-
ಮೂಲ: ಪನ್ಯಾಲ ಜಗನ್ನಾಥದಾಸ್
ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್



ನನ್ನೊಳಗಿನ ನಿಶ್ಶಬ್ದವೇ
ನನಗೆ ಅರ್ಥವಾಗದೆ ಸಾಯುತ್ತಿದೆ;
ಇನ್ನು ಎದುರಿಗಿರುವವರ ಮೌನವನು
ನಾನೇಗೆ ತಾನೇ ಅರಿಯಲಿ?
ಹೇಗಾದರೂ ಮಾಡಿ ಈ ಮೌನಕ್ಕೆ
ಒಂದು ಪರಿಹಾರ ಕಂಡುಕೊಳ್ಳಬೇಕು;
ಜಗದ ಮಾತುಗಳೆಲ್ಲವೂ
ಬತ್ತಿ ಹೋಗುವ ಮುನ್ನವೇ
ಒಂದು ‘ನಿಶ್ಶಬ್ದರತ್ನಾಕರ’ವ ರೂಪಿಸಿಕೊಳ್ಳಬೇಕು.
ನಿಶ್ಶಬ್ದದ ಮರ್ಮಕ್ಕೆ ಸಾವಕಾಶವಾಗಿ
ಟೀಕು-ಟಿಪ್ಪಣಿಗಳನ್ನು ಬರೆದಿಡಬೇಕು;
ಎದುರಿಗಿರುವವರ ಮೌನವನ್ನ
ಅವರ ಪಾಡಿಗೆ ಬಿಟ್ಟರೆ-
ಕನಿಷ್ಠ ಪಕ್ಷ, ಆಗಲಾದರೂ
ನನ್ನ ನಿಶ್ಶಬ್ದ
ನನಗೆ ಅರ್ಥವಾಗಬಹುದೇನೋ!
ಮೂಲ: ಪನ್ಯಾಲ ಜಗನ್ನಾಥದಾಸ್
ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್



