ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಎಮ್ಮಾರ್ಕೆ ಅವರಕವಿತೆ, “ಕೆಂಪಿ(ಕೆಂಡ ನುಂಗಿದವಳು)”

ಕಾವ್ಯ ಸಂಗಾತಿ ಎಮ್ಮಾರ್ಕೆ “ಕೆಂಪಿ(ಕೆಂಡ ನುಂಗಿದವಳು)“ ಬಹುತೇಕ ನಿಮಗನಿಸಬಹುದುಮತ್ತೇಕೆ ಬಂದಳೋ ಈ ಕೆಂಪಿ?,ಹೌದು…ಅವಳಾಗಾಗ ಬರುವವಳೇ,ಹಳೆ ಮೂಸೆಯಲಿ ಹೊಸತು ಹೊತ್ತುಅವಳ ಕಷ್ಟ ಅವಳಿಗಷ್ಟೇ ಗೊತ್ತು ಇನ್ನೂ ಹಸುಳೆಯವಳುಮೊಸಳೆ ಬಾಯ್ಗೆ ಬಿದ್ದವಳು,ಪರದೇಶಿ ಕೂಸವಳುಪರರ ಪಾಲೇ ಆದವಳು,ಸಾಕುವೆನೆಂದವಳ ಒಯ್ದುಯಾರಿಗೋ ಮಾರಿದರು,ಇಲ್ಲಸಲ್ಲದ ಸಬೂಬು ಹೇಳಿಮೆಲ್ಲ ಮೆಲ್ಲಗೆ ಜಾರಿದರು,ಮೈಯ ಮಾರಿಕೊಳ್ಳುವವರಮಾರಕಟ್ಟೆಗೆ ದೂಡಿದರು,ಸ್ವಾರ್ಥಕ್ಕೆ ಕೆಂಪಿಯ ಬಾಳನ್ನೇದಾ(ಗಾ)ಳಕ್ಕೆ ಹೂ(ನೀ)ಡಿದರು ಬಂದು ಹೋಗುವವರಲ್ಲಿಯಾರೂ ಬಂಧುಗಳಲ್ಲ,ಮನಬಂದಂತೆ ಭೋಗಿಸಿಕಾಸು ಎಸೆಯುವರಲ್ಲ,ಬೇಕು ಬೇಡಗಳೆನಿತನುಕೇಳುವ ಕಿವಿಗಳಲ್ಲಿಲ್ಲ,ಕಣ್ಣು,ಕರುಳು ಎರಡೂಅರಿಯುತ್ತಲಿರಲಿಲ್ಲ,ಹಗಲು ಇರುಳಿಗೂ ಅಲ್ಲಿವ್ಯತ್ಯಾಸವೇ ಇರಲಿಲ್ಲ,ಯಾಕೆಂದರೆ ‘ಕಾಮ’ಗಾರಿಒಂದು ದಿನವೂ ನಿಲ್ಲಲಿಲ್ಲ ಉದರವ ಹೊರೆಯಲುದರ ನಿಗದಿಯಾಯಿತಲ್ಲ,ಒಲ್ಲದಿದ್ದರೂ ದೇಹವದುಒಗ್ಗಿಕೊಳ್ಳದೇ ವಿಧಿಯಿಲ್ಲ,ದಣಿದು,ಕುಣಿದು,ಮಣಿದುದೇಹದಿ ಏನೂ ಉಳಿದಿಲ್ಲ,ಕೆಂಡವನೇ ನುಂಗಿದವಳೀಕೆಸೆರಗಿಗೆ ಕಟ್ಟಿಕೊಂಡವಳಲ್ಲ, ವ್ಯಥೆಯ ಕಥೆ ಹೇಳಲೆಂದೇಹುಟ್ಟಿ ಬಂದಿರುವಳು,ಆಗಾಗ ತನ್ನೊಡಲ ಕಿಚ್ಚನುಕೊಂಚ ಬಿಚ್ಚಿಡುವಳು,ಸುತ್ತಿ ಸುತ್ತಿ ನೋವಿನತ್ತಲೇಮತ್ತೆ ಹೊರಳುವವಳು,ಮತ್ತೆ ಬರುವವಳು ಕೆಂಪಿಸದ್ಯಕ್ಕೆ ತೆರಳುವಳು,ಅಲ್ಲಿಯತನಕ ಅಯ್ಯೋ!ಪಾಪ…ಎಂದು ಬಿಡಿ ಎಮ್ಮಾರ್ಕೆ

ಎಮ್ಮಾರ್ಕೆ ಅವರಕವಿತೆ, “ಕೆಂಪಿ(ಕೆಂಡ ನುಂಗಿದವಳು)” Read Post »

ಕಾವ್ಯಯಾನ

ಡಾ ತಾರಾ  ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ”

ಕಾವ್ಯ ಸಂಗಾತಿ ಡಾ ತಾರಾ  ಬಿ ಎನ್ ಧಾರವಾಡ “ಅನುಬಂಧ” ಕಾಣದ ದಾರಿಯಲ್ಲಿಬೆಸೆದ ನಂಟು,ಹೆಸರಿಲ್ಲದರೂ ಹೃದಯಕ್ಕೆಪರಿಚಿತವಾದ ಬಂಧ…ಕಾಲದ ಹೊಳೆ ಹರಿದರೂಕಳೆಯದ ಗುರುತು, ಗಂಟುಅದು ಅನುಬಂಧ.ಮೌನದಲ್ಲೂ ಮಾತಾಡುವಸಂಬಂಧ, ಬಂಧ..ಕಣ್ಣಂಚಿನ ನೀರನ್ನೂಓದುತ್ತದೆ ಒರೆಸುತ್ತದೆ.ಹೃದಯ ಮುರಿದುನೊಂದ ಕ್ಷಣದಲ್ಲಿಅದೃಶ್ಯವಾಗಿ ಕೈಹಿಡಿದುಕೊಳ್ಳುತ್ತದೆ.ಮಣ್ಣಿನ ವಾಸನೆಯಂತೆಸಹಜ,ಬೆಳಗಿನ ಬೆಳಕಿನಂತೆಮೃದುವು.ನಗುವಿನಲ್ಲೂ, ನೋವಿನಲ್ಲೂಉಸಿರಾಡುವ ನಂಟು.ತಾಯಿ–ಮಗುವಿನಹಸಿರು ಪ್ರೀತಿಯಂತೆಸ್ನೇಹಿತರ ನಿಷ್ಕಪಟ ನಗು,ಗುರುವಿನ ಮಾರ್ಗದರ್ಶನ,ಅಸ್ಪಷ್ಟ ಮೌನಅನುಬಂಧದ ಬೇರೆ ಬೇರೆರೂಪಗಳು ಒಂದೇಕಾಲ ದೂರಸಿದರೂ,ಸ್ಮೃತಿ ಪಟದಲ್ಲಿ ಹತ್ತಿರ.ದೇಹಗಳು ದೂರವಾದರೂ,ಮನಗಳು ಒಡಲಿನಂತೆಬಿರುಗಾಳಿಯಲ್ಲಿ ಮರವನ್ನೆತ್ತಿದಬೇರುಗಳಂತೆ, ಗಟ್ಟಿಎತ್ತುವ ಶಕ್ತಿಯೇ ಅನುಬಂಧ.ಜಗತ್ತು ಕೈಬಿಟ್ಟ ಸಂದರ್ಭದಲ್ಲಿಉಳಿಸುವ ನಂಬಿಕೆ.ಅನುಬಂಧವೆಂದರೆಸಂಬಂಧವಲ್ಲ,ಬದುಕಿಗೆ ಅರ್ಥನೀಡುವ ಭಾವನೆ.ನಮ್ಮನ್ನು ನಾವುಗುರುತಿಸುವ ಕನ್ನಡಿ,ಜೀವನದ ದೀರ್ಘಪಯಣದಲ್ಲಿ ಜೊತೆಯಾದ ನೆರಳು.ಅರಿಯದಿದ್ದರೂ,ಮೌಲ್ಯ ಗೊತ್ತಾಗುವುದು.ಅದಕ್ಕಾಗಿಯೇ ಅನುಬಂಧ…ಹೃದಯದೊಳಗೆ ಮೌನವಾಗಿ ,ಹೂ ಬಿಡುವ ಅಮೂಲ್ಯ ವರ. ಡಾ ತಾರಾ ಬಿ ಎನ್ ಧಾರವಾಡ.

ಡಾ ತಾರಾ  ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ” Read Post »

ಕಾವ್ಯಯಾನ

ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!”

ಕಾವ್ಯ ಸಂಗಾತಿ ಸುಮತಿ ನಿರಂಜನ್‌ “ಪದ್ಯವೆಂದರೆ …. ಉತ್ಸವ !!!” The Hollow Men, The Waste Land ಬರೆದ ಮಹಾನ್ ಕವಿ ಟಿ.ಎಸ್. ಎಲಿಯಟ್ ಯಾವುದೋ ಲಹರಿಯಲ್ಲಿ ಹೇಳಿದನಂತೆ ಒಮ್ಮೆ – “Poetry is a mug’s game..”. ಪದ್ಯವೆಂದರೆಪದಗಳ ದೊಂಬರಾಟಅದು ಬರಿ ಹುಂಬರಾಟ !ಎಂದ ಪಶ್ಚಿಮದ ಕವಿಗೆಕಂಡದ್ದು ಬರಡುಬಂಜರು ಭೂಮಿಬೆಳೆವುದಲ್ಲಿ ಬರಿದೆಪಾಪಾಸುಕಳ್ಳಿ !ಬಟ್ಟೆ ತುಂಬಿಸಿಟ್ಟಬೆದರು ಬೊಂಬೆಗಳುತಲೆ ತುಂಬ ಬೈಹುಲ್ಲುಸುಮ್ಮ ಸುಮ್ಮನೆ ಗುಲ್ಲು … ಮೂಡಣ ಮನೆಯಮುತ್ತಿನ ನೀರುಕಾಣುವುದೇನುಪಡುವಣದಲ್ಲಿ ?ನುಣ್ಣನೆ ಎರಕದಬೆಳ್ಳಿಯ ಹೊಳೆ ಅದುಬರಿ ಬೆಳಗಲ್ಲೋ ಅಣ್ಣಾ !ಇದ ತಿಳಿಯಲು ಬಾರೋಸಾಧನಕೇರಿಗೆ ವಂದಿಸಿಬಾರೋ ಪಾಕಶಾಲೆಗೆಬೆಂದರೆ ಏನಾಗುವೆಯೋತಿಂದು ಹೇಳಲು ಬಾರೋ!,ಕರೆದೊಯ್ಯುವೆನುಕವಿಶೈಲಕೆ ನಿನ್ನಅನಿಕೇತನವೆಂದರೆಏನೆನ್ನಲಿ ಅಣ್ಣಾ !ಹಾಗೆಯೇ ಜೋಗದಸಿರಿ ಬೆಳಕಿನಲಿಕಾಣುವೆ ನೀನಿತ್ಯೋತ್ಸವ !ಪದಗಳ ಹುಂಬರಾಟವಲ್ಲೋಇದು ನಾದಬ್ರಹ್ಮೋತ್ಸವತಂತಿ ನಾಕು ವೇದಕಲರವ… ಸುಮತಿ ನಿರಂಜನ್

ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಕವಿತೆ,”ತಾಯಿಮನೆ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ತಾಯಿಮನೆ” ನಾನು ಹುಟ್ಟಿ ಬೆಳೆದ‌ ನನ್ನ ಆ ಭವ್ಯ ಮನೆಯು ನನ್ನ ತಂದೆಯ ಬೆವರಾಗಿತ್ತು ತಾಯಿಯ ಮಮತೆಯಾಗಿತ್ತು, ನಮ್ಮ ಬದುಕಿಗೊಂದು ಬೆಚ್ಚನೆಯ ಸೂರಾಗಿತ್ತು, ಆದರೆ ಇಂದು ಮರ ಬಿದ್ದಾಗ ಹಕ್ಕಿ ಹಾರಿತು ಗೂಡು ಕಳಚಿ ರಸ್ತೆ ಪಾಲಾಯಿತ್ತು, ಹಕ್ಕಿಗಳು ತಮ್ಮ ತಮ್ಮ ಪಾಡಿಗೆ ಹಾರಿ ಹೋದಂತೆ ಆ ಮನೆಯ ಸ್ಥಿತಿಲತೆಯ ಕಂಡು ನೋವಿಂದ ಬರೆದ ಕವನವಿದು. *ತಾಯಿ ಮನೆ* ಬೆವರ ಸುರಿಸಿ ದುಡಿದುತಂದೆ ಕಟ್ಟಿಸಿದ, ನಮ್ಮ ಮನೆಆಶ್ರಯ ನೀಡಿದ ಆ “ತಾಯಿ ಮನೆ”ಹಲವು ಕನಸುಗಳ ಅವರು ಕಂಡ ಮನೆ,! ನಮ್ಮ ತಾಯಿ ಮನೆನಾವು ಹುಟ್ಟಿ ಬೆಳೆದ ಮನೆಬಾಲ್ಯದಾಟದಲಿ ನಲಿದ ಮನೆತಾಯಿ ಮಮತೆಯ ಕಾರುಣ್ಯ ಮನೆ,! ಮತ್ತೇ ಬೆಳಗೊ ಕಾತರತಂದೆಯ ರಕ್ತದ ಆ ಬೆವರುನಿತ್ಯ ಸುವಾಸಿಸುವ ನಮ್ಮ ತವರುಮರೆಯಲಾರೆವು ನಾವೆಂದು ಕುವರರು,! ಕತ್ತಲಲಿ ಕೊಠಡಿಗಳುಗಾಜು ಹೊಡೆದ ಕಿಟಕಿಗಳುಬೀಡು ಬಿಟ್ಟ ಜೇಡ ಜಾಲಗಳುಕಾಡುತ್ತಿದೆ ಬಾಲ್ಯದ ಆ ನೆನಪುಗಳು,! ಅಂದು ರಾಜ ಮನೆತನಸಂಭ್ರಮ ಮೆರೆದಾಡಿತ್ತು ಕಣ್ಮನವೈವಾಹಿಕ ವೈಭವಗಳ ಜೊತೆ ಜೀವನಕತ್ತಲ ದಾಟಿ ಪಯನ, ವೈಭವದತ್ತ ಬೆಳಕಿನ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಕವಿತೆ,”ತಾಯಿಮನೆ” Read Post »

ಕಾವ್ಯಯಾನ

ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು

ಕಾವ್ಯ ಸಂಗಾತಿ ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು ಅವಳು  ಶಬ್ಧ  ಅವನು ಕಾವ್ಯ      ಅವನು ರಾಗ ಅವಳು ತಾಳಅವನು ಭಾವ ಅವಳು ಜೀವ.ಅರಳಿವೆ ಶಬ್ಧ ಕಾವ್ಯದಲಿಹೊಮ್ಮಿವೆ ರಾಗಸೂಸುತ ಭಾವ.ತುಂಬಿದಳವಳದಕೆ ಜೀವಧಾರೆಯೆರೆಯುತ  ಒಲವಇಮ್ಮಡಿಸುತ ಗೆಲುವ.ಜಗವೇಈ ಪ್ರೀತಿಯ ನೀನೆಂದರಿವೆನಿನಗಿಲ್ಲ ಇದರ ಪರಿವೆ         ಭಾವನೆಗಳ ಬೆಸುಗೆಗೆಪ್ರತಿದಿನಭೇಟಿಯಾಗ ಬೇಕೆಂದಿಲ್ಲಮಾತಾಡಬೇಕೆಂದಿಲ್ಲಅವ್ಯಕ್ತ ಭಾವನೆಗೆ ಸರಿಸಾಟಿ ಇಲ್ಲಹಿತಬಯಸುವಪ್ರೀತಿ ಹರಿಸುವ  ಉನ್ನತಿ ಹಾರೈಸುವ ಭಾವಎಲ್ಲಿದ್ದರೂ ಹೇಗಿದ್ದರೂ  ನೆಮ್ಮದಿಯಿಂದಿರುಮಾತನಾಡಿದರೂ ಮಾತನಾಡದಿದ್ದರೂಹಾರೈಕೆಯೊಂದೇಎಂದೆಂದಿಗೂ ನೀ ಸಂತಸದಿಂದಿರುಮೌನದಿ ಎಲ್ಲವ  ನುಡಿಯುತಿರುಸೂಸುತಿರು ಅಗೋಚರ ಭಾವನೆಗಳಸ್ಪರ್ಶಿಸುತಿರು ಈ ಮನದಾಳದ ಭಾವಗಳ. ಪ್ರೊ ರಾಜೇಶ್ವರಿ ಶೀಲವಂತ ಪುಣೆ

ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ಇನ್ನೂ ಕನಸಿದೆ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇನ್ನೂ ಕನಸಿದೆ” ಇನ್ನೂ ಕನಸಿದೆಬಣ್ಣ ಬಣ್ಣದ ಚಿತ್ರಸುಳಿವ ಗಾಳಿಸುರಿವ ಮಳೆಹಕ್ಕಿ ಪಕ್ಷಿಗಳ ಇಂಚರನೀಲಿ ಆಗಸದಲಿ ಹಾರುವ ಬಿಳಿ ಪಾರಿವಾಳಅದೆಷ್ಟೋ ಭಾವಗಳುಕವನವಾಗುವ ಸಮಯಬೆಸಗೊಳ್ಳುತ್ತಿವೆಪದ ಲಯಶಬ್ದಗಳ ಸಂಭ್ರಮಸೂರ್ಯನೇನೀನು ಇಷ್ಟು ಬೇಗಏಕೆ ಉದಯಿಸಿ ಬಿಟ್ಟೆಇನ್ನೂ ಕನಸಿದೆಮಧುರ  ಕ್ಷಣಗಳನ್ನುಕನಸಿನಲ್ಲಾದರೂ ಕಂಡುಕೊಂಚ ನೆಮ್ಮದಿಯಿಂದಇರುತ್ತಿದ್ದೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ಇನ್ನೂ ಕನಸಿದೆ” Read Post »

ಇತರೆ

“ಸಾತ್ವಿಕ ವಾತಾವರಣದಲ್ಲಿ ಸದ್ದು ಗದ್ದಲ!!!”ಲೇಖನ ಜಯಲಕ್ಷ್ಮಿ ಕೆ.

ಕಾವ್ಯ ಸಂಗಾತಿ ಜಯಲಕ್ಷ್ಮಿ ಕೆ. “ಸಾತ್ವಿಕ ವಾತಾವರಣದಲ್ಲಿ ಸದ್ದು ಗದ್ದಲ!!!” ”  ಕ್ಯೂಗೆ ನುಗ್ಗಿ ಬಂದು ಸೇರಿಕೊಳ್ಳುತ್ತಾರಲ್ಲಯ್ಯ..? ನೀನು ನೋಡಿಕೊಂಡು ಸುಮ್ಮನಿದ್ದರೆ ಹೇಗೆ? “” ಅಲ್ಲ ಸರ್… “” ಏನು ಅಲ್ಲ ? ಯೂನಿಫಾರಂ ಬ್ಯಾಡ್ಜ್ ಎಲ್ಲಾ ಹಾಕ್ಕೊಂಡು, ಕೋಲು ಹಿಡ್ಕೊಂಡು, ಏನ್ ಕತ್ತೆ ಕಾಯೋದಕ್ಕಾ ನಿಂತಿದ್ದೀ? ಕ್ಯೂ ಮೈನ್ಟೈನ್ ಮಾಡಕ್ಕಾಗಲ್ವಾ ?  “” ಹೌದು ನಿಮ್ಮಂಥ ಕತ್ತೆ ಕಾಯೋಕೆ ನಾನು ನಿಂತಿರೋದು ಏನೀಗ? “” ದೇವಸ್ಥಾನದಲ್ಲಿ ಜನರನ್ನ ಕಾಯೋದಕ್ಕೆ ನಿಂತವನಿಗೂ ಏನ್ ಪೊಗರು? “” ಸರ್ .. ಪೊಗರು  – ಗಿಗರು ಅಂತೆಲ್ಲ ಮಾತಾಡ್ಬೇಡಿ. ವರ್ಷಕ್ಕೆ ಒಂದೆರಡು ಸಲ ಬಂದು ಇಲ್ಲಿ ಕ್ಯೂ ನಿಲ್ಲುವ ನಿಮಗೇ ಇಷ್ಟು ಕಷ್ಟ ಆಗುತ್ತೆ… ಇನ್ನು ನಾವು…. ವರ್ಷಪೂರ್ತಿ ಈ ಕೆಲಸ ಮಾಡ್ಬೇಕು,  ನಿಮ್ಮಂಥವರಿಂದ ಉಗುಸ್ಕೊಬೇಕು.. ನಮ್ಮ ಕಷ್ಟ ಎಷ್ಟಿರಬೇಡ?  ಅಷ್ಟಕ್ಕೂ  ಅವ್ರು ನನ್ನ ಪರ್ಮಿಷನ್ ಕೇಳಿ ಕ್ಯೂ ನಿಂದ ಆಚೆ ಹೋಗಿ ತಿರುಗಿ ಬಂದವರು “” ಎಷ್ಟು ಮಾತಾಡ್ತೀಯಾ? ಬಾಯಿ ಮುಚ್ಚು “” ನೀವೇ ಆ ಕೆಲಸ ಮಾಡಿ ನಿಮ್ಮಂಥವರನ್ನು ಪ್ರತಿದಿನ ಸಾಕಷ್ಟು ನೋಡ್ತಾ ಇರ್ತೇನೆ “  ದೇವರ ದರ್ಶನಕ್ಕೆಂದು ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಮತ್ತು ಭಕ್ತಾದಿಗಳನ್ನು ಸಾಲಾಗಿ ದೇವರ ದರ್ಶನಕ್ಕೆ ಕಳುಹಿಸುತ್ತಿದ್ದವನ ನಡುವೆ ನಡೆದ ಮಾತಿನ ಚಕಮಕಿ ಇದು! ನಾಲ್ಕೈದು ಸಾಲುಗಳಲ್ಲಿ ಇದ್ದ ಅಷ್ಟೂ ಭಕ್ತಾದಿಗಳಿಗೆ  ಕಿರಿಕಿರಿ ಉಂಟುಮಾಡಿದ ಪ್ರಸಂಗವದು. ಯಾರ ಸಮಾಧಾನದ ಮಾತುಗಳಿಗೂ ಅವರ ಜಗಳ ಜಗ್ಗಲಿಲ್ಲ. ಕೊನೆಗೆ  ದೇವರ ದರ್ಶನಕ್ಕೆಂದು ಬಂದಿದ್ದ ಆ ವ್ಯಕ್ತಿ ತನ್ನ ಮನೆ ಮಂದಿಯನ್ನು ಎಳೆದುಕೊಂಡು ಬ್ಯಾರಿಕೇಡರ್ ಹತ್ತಿ ಇಳಿದು ದರ್ಶನಕ್ಕೆ ಹೋಗುವ ಕ್ಯೂನಿಂದ ಆಚೆ ಹೋಗಿಯೇ ಬಿಟ್ಟರು. ಒಂದು ರೀತಿಯಲ್ಲಿ ಅವರು ಅಲ್ಲಿಂದ ಹೋಗಿದ್ದೇ ಒಳ್ಳೆಯದಾಯಿತು. ಏಕೆಂದರೆ ಕೋಪದಿಂದ ಕುದಿಯುತ್ತಿದ್ದ ಆ ವ್ಯಕ್ತಿ ದೇವರ ಎದುರು ನಿಂತರೂ ಯಾವ ಮನಸ್ಥಿತಿಯಿಂದ ಪ್ರಾರ್ಥನೆ ಮಾಡಬಹುದು?  ಕೋಪ ಶಮನ ಮಾಡಿಕೊಂಡು ದರ್ಶನ ಪಡೆಯುವುದೇ ಒಳಿತು ಎಂದು ಅತ್ತ ಹೋದರೋ  ಏನೋ!!  ಒಟ್ಟಿನಲ್ಲಿ ಅವರು ಅತ್ತ ಹೋದ ಮೇಲೆ ವಾತಾವರಣ ಶಾಂತವಾಯಿತು.  ಕ್ರಿಸ್ಮಸ್ ರಜೆಯಲ್ಲಿ  ಕರ್ನಾಟಕದ ಒಂದು ಪ್ರಸಿದ್ದ ಧಾರ್ಮಿಕ ಕ್ಷೇತ್ರಕ್ಕ ಹೋಗಿದ್ದಾಗ   ದೇವರ ದರ್ಶನಕ್ಕೆಂದು ನಿಂತಿದ್ದ ಸಂದರ್ಭದಲ್ಲಿ  ನನ್ನನ್ನೂ ಒಳಗೊಂಡಂತೆ  ಸರದಿಯಲ್ಲಿ ನಿಂತಿದ್ದ  ಭಕ್ತಾದಿಗಳ  ಗಮನ ಸೆಳೆದ ಜಗಳವದು. ದೇವರ ದರ್ಶನಕ್ಕೆಂದು ಯಾವ ಯಾವುದೋ ಊರಿನಿಂದ ಎಷ್ಟೋ ದೂರ ಪಯಣ ಬೆಳೆಸಿ ಹೋಗುತ್ತೇವೆ. ಅಲ್ಲಿ ಚಿಕ್ಕಪುಟ್ಟ ವಿಷಯಕ್ಕೆ ಸಹನೆ  ಸಂಯಮ ಕಳೆದುಕೊಂಡು ರೇಗಾಡಿ ದೇವಾಲಯದ ಸಾತ್ವಿಕ ವಾತಾವರಣವನ್ನು ಹದಗೆಡಿಸುತ್ತೇವೆ. ಅಲ್ಲಿ ಕ್ಯೂನಲ್ಲಿ ನಿಂತಿದ್ದ  ನಾರಿ  ಆಚೆ ಹೋಗಿ ಪುನಹ ಬರುವ ಅವಶ್ಯಕತೆ ಇರಲಿಲ್ಲ. ಅಥವಾ ನಿಂತಿದ್ದ ವ್ಯಕ್ತಿ ಅಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡುವ ಅಗತ್ಯ ಇರಲಿಲ್ಲ. ಕೆಲವೊಂದು ದೇವಸ್ಥಾನಗಳಲ್ಲಿ ಒಮ್ಮೆ ಲೈನ್ನಿಂದ ಆಚೆ ಹೋದರೆ ಮತ್ತೆ ಒಳಗೆ ಸೇರಿಸುವುದಿಲ್ಲ ಎಂದೇ ಹೇಳಿಬಿಡುತ್ತಾರೆ.  ಇಂತಹ ಜಗಳಗಳು ಆಗದಿರಲು ಅಂಥ ಕಟ್ಟು ನಿಟ್ಟಿನ  ಕ್ರಮವೇ ಸರಿ ಅನಿಸುತ್ತದೆ. ಇಂಥ ಸಂದರ್ಭಗಳಲ್ಲಿ  ಸರಿ ಯಾವುದು,ತಪ್ಪುಯಾವುದು ಎನ್ನುವ ಯೋಚನೆಗಳಿಗಿಂತಲೂ ಮುಖ್ಯವಾಗುವುದು  ನಾವು ಎಲ್ಲಿ ನಿಂತಿದ್ದೇವೆ? ನಿಂತಿರುವ ಉದ್ದೇಶ ಏನು? ಎಂಬುದು. ನಮ್ಮ ಜೊತೆ ಜೊತೆಯಲ್ಲಿ ಸಾಗುವವರಿಗೆ  ನಮ್ಮಿಂದ ಕಿರಿಕಿರಿ ಆಗಬಾರದು ಎಂಬ ಸಾಮಾನ್ಯ ಜ್ಞಾನ . ಆ ಸಂಯಮ ಇಲ್ಲದೇ ಹೋದರೆ ” ಇಲ್ಲಿಂದಲೇ ಕೈಮುಗಿವೆ ಅಲ್ಲಿಂದಲೇ ಹರಸು” ಎನ್ನುತ್ತಾ ಮನೆಯಲ್ಲೇ ಪ್ರಾರ್ಥನೆ ಮಾಡಬಹುದಲ್ಲವೇ ? ದೇವಸ್ಥಾನ ಎಂದ ಮೇಲೆ ಭಕ್ತರು ಪಾಲಿಸಲೇಬೇಕಾದ ಕೆಲವು ನಿಯಮಗಳಿರುತ್ತವೆ. ಆ ವಾತಾವರಣದ ಧನಾತ್ಮಕ ಅಂಶಗಳನ್ನು ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ಭಕ್ತಾದಿಗಳಿಗಿದೆ. ಚಿತ್ತವನ್ನು ದೇವರತ್ತ ನೆಲೆಗೊಳಿಸಲು ಪ್ರಶಾಂತ ವಾತಾವರಣ ಬೇಕಲ್ಲವೇ? ದೇಗುಲದ ಪಾವಿತ್ರಕ್ಕೆ ಅಡ್ಡಿ ಬರುವಂತಹ  ಅಲ್ಲಿನ ಶಾಂತ ವಾತಾವರಣವನ್ನು ಅಶಾಂತ ಗೊಳಿಸುವ ಯಾವ ಕೆಲಸಗಳನ್ನು ನಾವು ಮಾಡಿದರೂ ನಮಗೆ ದೇವರ ಕೃಪಾಶೀರ್ವಾದ ದೊರೆಯದು. ” ಇಲ್ಲಿ ಭಾವಚಿತ್ರಗಳನ್ನು ತೆಗೆಯಕೂಡದು ” ಎಂಬ ನಾಮ ಫಲಕವಿದ್ದರೂ  ಕೆಲವರು ಅಲ್ಲಿನ ಮೇಲುಸ್ತುವಾರಿ ಮಾಡುವವರ ಜೊತೆ ಕಿತ್ತಾಟ ನಡೆಸಿ ಅಲ್ಲಿಯೇ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ‘ ಮೌನ  ವಹಿಸಿ ‘ ಎಂಬ ಬರಹದ ಬಳಿಯೇ ನಿಂತು ಜೋರಾಗಿ ತಿರುಚಾಡುತ್ತಾರೆ. ” ತೀರ್ಥ ಸ್ವೀಕಾರ ಮಾಡಲು ಸಾಲಿನಲ್ಲಿ ಶಿಸ್ತುಬದ್ಧವಾಗಿ ನಿಲ್ಲುವುದನ್ನು ಬಿಟ್ಟು ಎಲ್ಲರೂ  ಅರ್ಚಕರ ಮುಂದೆ ಒಟ್ರಾಸಿ ಕೈ ಚಾಚುವುದು,  ತಮ್ಮ ಕೈಗೆ ತೀರ್ಥ ಸಿಗುವುದು ಸ್ವಲ್ಪ ವಿಳಂಬ ಆದರೆ ಸಾಕು, ” ಇಲ್ಲಿ ಹಾಕಿ ” ಎಂದು ಜೋರಾಗಿ ಹೇಳುವುದು, ದೇವರ ಪ್ರಸಾದಕ್ಕೆ ಸಾಲಾಗಿ ಬನ್ನಿ”  ಎಂದರೆ  ಅಲ್ಲಿಯೂ ನೂಕುನುಗ್ಗ ಲು.. ದೇವಾಲಯದ ಆವರಣದ ಮೂರ್ತಿಗಳನ್ನು ಮುಟ್ಟಕೂಡದು ಎಂದರೆ  ಆ ಮೂರ್ತಿಗಳಿಗೆಲ್ಲ ಅರಿಶಿನ ಕುಂಕುಮ ಹಚ್ಚುವುದು. ಗಂಧ ಅಂಟಿಸಿ  ಇಡುವುದು.. ದೇವಸ್ಥಾನದ ಮೆಟ್ಟಿಲುಗಳ ಮೇಲೆಲ್ಲಾ ದೀಪ   ಹಚ್ಚಿ ಇಡುವುದು, ದೇವಸ್ಥಾನದ ಸರಳುಗಳಿಗೆ  ದಾರ ಕಟ್ಟಿ ಇಡುವುದು ಇತ್ಯಾದಿ ಅವಿಧೇಯ ವರ್ತನೆಗಳನ್ನು  ಮಾಡುವುದರಿಂದ , ಆಶಿಸ್ತಿನ ನಡವಳಿಕೆಗಳನ್ನು ತೋರುವುದರಿಂದ  ತಾನೇ ಅಲ್ಲಿ ಕೆಲಸ ಕಾರ್ಯನಿರ್ವಹಿಸುವವರು ಕೂಡ ನಮ್ಮ ಮೇಲೆ ರೇಗುವುದು? ಅವರಾದರೂ  ಎಷ್ಟು ಅಂತ ಸಹಿಸಿಯಾರು? ಯಾವ ಸ್ಥಳವೇ ಆಗಲಿ  ಅಲ್ಲಿನ ನೀತಿ ನಿಯಮಗಳನ್ನು  ಪಾಲಿಸುವುದರಲ್ಲಿಯೇ ನಮ್ಮ ವ್ಯಕಿತ್ವದ ಹಿರಿಮೆ ಇದೆ. ಶಿಸ್ತು ಪಾಲನೆ ಮತ್ತು ಸಂಯಮದ ವರ್ತನೆ  ನಮ್ಮದಾದಾಗ   ನಮ್ಮೊಳಗೂ  ಹೊರಗೂ ಶಾಂತಿ ನೆಲೆಸಲು ಸಾಧ್ಯ.ಆ ಪ್ರಬುದ್ಧತೆ ನಮ್ಮಲ್ಲಿರಲಿ. ಜಯಲಕ್ಚ್ಮಿ ಕೆ.

“ಸಾತ್ವಿಕ ವಾತಾವರಣದಲ್ಲಿ ಸದ್ದು ಗದ್ದಲ!!!”ಲೇಖನ ಜಯಲಕ್ಷ್ಮಿ ಕೆ. Read Post »

ಕಾವ್ಯಯಾನ

ಡಾ ಗೀತಾ ದಾನಶೆಟ್ಟಿ ಅವರ ಕವಿತೆ “ಭಾವೈಕ್ಯದ ಗುಟ್ಟು”

ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ “ಭಾವೈಕ್ಯದ ಗುಟ್ಟು” ಕಲ್ಲು ಮಣ್ಣಿಗೆ ಕಂತೆ ಕೊಟ್ಟುಅದಕೆ ನೂರು ನಾಮವಿಟ್ಟುಜಾತಿಯೆಂಬ ಕಳಸವಿಟ್ಟುಮನುಜ ಪಥದ ದಾರಿ ಬಿಟ್ಟುಮೌಲ್ಯ ತತ್ವಗಳನು ಸುಟ್ಟುಮೃದು ಭಾವಗಳಿಗೆ ಪೆಟ್ಟುದೂರ ತಳ್ಳು ಕ್ರೋಧ ಸಿಟ್ಟುಬದುಕ ಬೇಡ ದ್ವೇಷ ನೆಟ್ಟುಅಪ್ಪಿಕೋ ಎಲ್ಲರನ್ನೂ ಇಷ್ಟ ಪಟ್ಟುಬೆಳೆಸು ಭಾವೈಕ್ಯದ ಗುಟ್ಟುಸ್ನೇಹ ಪ್ರೀತಿಗೆ ಕೈ ಕಟ್ಟುಸುಖದ ಯಶಕೆ ಬೆನ್ನ ತಟ್ಟು ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ ಗೀತಾ ದಾನಶೆಟ್ಟಿ ಅವರ ಕವಿತೆ “ಭಾವೈಕ್ಯದ ಗುಟ್ಟು” Read Post »

ಇತರೆ

“ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” ನಾಗರತ್ನ ಎಚ್ ಗಂಗಾವತಿ

ರಾಷ್ಟ್ರೀಯ ಸಂಗಾತಿ ನಾಗರತ್ನ ಎಚ್ ಗಂಗಾವತಿ “ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” *ಏಳಿ ಎದ್ದೇಳಿ ಎಚ್ಚರಾಗಿ* ಎನ್ನುವ ಸಂದೇಶವನ್ನು ನೀಡಿದಂತಹ ಸ್ವಾಮಿ ವಿವೇಕಾನಂದರು ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಿ ಎನ್ನುವ ಮಂತ್ರದೊಂದಿಗೆ ವ್ಯಕ್ತಿತ್ವ ಪ್ರಭಾವ ಪೂರ್ವ ಮತ್ತು ಉತ್ತಮ  ಬರಹಗಳ ಮೂಲಕ ಉತ್ತಮ ಸಂದೇಶ ನೀಡಿದರು  ಸ್ವಾಮೀ ವಿವೇಕಾನಂದರು. ತಮ್ಮ ವಿಚಾರಗಳಿಗೆ ಅನುಗುಣವಾಗಿ ಭಾರತೀಯ ಸಮಾಜವನ್ನು ಬದಲಾವಣೆ ಮಾಡಲು ಬಯಸಿದರು ಹಾಗೂ ವೈಜ್ಞಾನಿಕ ಪ್ರಜಾಪ್ರಭುತ್ವ ಕಲ್ಪನೆಯಲ್ಲಿ ಜಾತಿ ಪದ್ಧತಿಯನ್ನು ಮುಕ್ತವಾದ ನವ ಭಾರತ ನಿರ್ಮಾಣದ ಕನಸನ್ನು ಕಂಡಿದ್ದರು. ಸ್ವಾಮಿ ವಿವೇಕಾನಂದರು ಭಾರತೀಯ ದೇಶಭಕ್ತ ಸುಧಾರಕ ಹಾಗೂ ಸಂಘಟಕರು ಮಾತ್ರವಲ್ಲ ರಾಷ್ಟ್ರೀಯ ಪುನರಸ್ಥಾನದ ಶಕ್ತಿಗಳನ್ನು ಹೊಡೆದ ಆಂಗ್ಲ ಆಡಳಿತದ ಹೊಡೆತಕ್ಕೆ ತತ್ತರಿಸಿ ದಾಸ್ಯದಲ್ಲಿ ಮುಳುಗಿದ್ದ ನಮ್ಮ ನಾಡಿನ ರಾಷ್ಟ್ರೀಯ ಪುನರಸ್ಥಾನದ ಹಾದಿ ಯನ್ನು ಸುಗಮಗೊಳಿಸಿದ ಅಗ್ರಗಣ್ಯರು ಎನ್ನಬಹುದು.  ಭಾರತದ ಬಡ ಜನರ ಪರವಾಗಿ ಅಷ್ಟೊಂದು ತೀವ್ರ ಮರುಕರಿಂದ ತಡೆಯಲಾರದ ನೋವಿನಿಂದ ಮಾತಾಡಿ ಅವರ ಪರವಾಗಿ ಹೋರಾಡಿದರು. ಹಾಗೂ ಆಧ್ಯಾತ್ಮಿಕ ವ್ಯಕ್ತಿ ದೇಶ ಕಂಡರಿಯದ ಅಪ್ರತಿಮ ಚಿಂತಕರು ಸ್ವಾಮಿ ವಿವೇಕಾನಂದರು ರಾಷ್ಟ್ರೀಯತೆಯ  ಪ್ರತೀಕವಾದರು. ಬಡವರನ್ನ ಹಿಂಸಿಸಿ ಸುಖ-ಸೌಕರ್ಯಗಳಲ್ಲಿ ತೇಲಾಡುವವರನು ವಿರೋಧಿಸಿದ್ದಾರೆ. ಅಷ್ಟೇ ಅಲ್ಲದೆ ಅಂತವರನ್ನು ದೇಶದ್ರೋಹಿ ಅಥವಾ ವಂಚಕರೆಂದು ಕರೆಯುತ್ತಾರೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಸ್ವಾಮಿ ವಿವೇಕಾನಂದರು ಜನವರಿ 12 1863ನೇ ಜನಿಸಿದರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು ನಿರ್ಭಯತೆ ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿಸಿದ್ದಾರೆ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12ರಂದು *ರಾಷ್ಟ್ರೀಯ ಯುವ ದಿನವೆಂದು* ಆಚರಿಸಲಾಗುತ್ತದೆ. ಇವರ ಜನ್ಮನಾಮ ನರೇಂದ್ರನಾಥ ದತ್ತಇವರ ತಾಯಿ ಭುವನೇಶ್ವರಿ ದೇವಿ ತಂದೆ ವಿಶ್ವನಾಥನತ್ತ.ಉತ್ತಮ ವೇದಾಂತತ್ವಗಳನ್ನು ಅನುಸರಿಸಿದಂತ ಬಿಟ್ಟ ವ್ಯಕ್ತಿ ಹಾಗೂ ಇವರ ಗುರುಗಳು ರಾಮಕೃಷ್ಣ ಪರಮಹಂಸರು ಅಷ್ಟೇ ಇಲ್ಲದೆ ಹಲವಾರು ಪ್ರಮುಖ ಕೃತಿಗಳನ್ನು ಕೂಡ ರಚನೆ ಮಾಡಿದ್ದಾರೆ ಅವುಗಳೆಂದರೆ ರಾಜಯೋಗ ಕರ್ಮ ಯೋಗ ಭಕ್ತಿ ಯೋಗ ಮತ್ತು ಜ್ಞಾನ ಯೋಗ ವಿಶೇಷವಾಗಿ ರಚನೆ ಮಾಡಿದ್ದಾರೆ ಅಷ್ಟೇ ಅಲ್ಲದೆ. ನರೇಂದ್ರರು 5 ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು. ಹಾಗೂ ಭಾರತದ ಪರ್ಯಟನೆಗೆ 1888 ರಲ್ಲಿ  ಹೊರಟರು ಅವರು ಹೋಗುವಾಗ ಅವರ ಜೊತೆಯಲ್ಲಿ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆಯನ್ನು ಒಯ್ಯುತ್ತಿದ್ದರು. ವಿವೇಕಾನಂದರು ಭಾರತದ ತತ್ವ ಜ್ಞಾನ ಯೋಗ ವೇದಾಂತ ಇವೆಲ್ಲವನ್ನ ಪಾಶ್ಚಿಮಾತ್ಯ ದೇಶಗಳಲ್ಲಿ  ಪ್ರಚಾರ ಮಾಡಿದರು ಹಾಗೂ ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು.  ನಂತರ ಚಿಕಾಗೋ ಪ್ರವಾಸ ಕೈಗೊಂಡರು 1893ರಲ್ಲಿ ಹಾಗೂ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು.  ದೇಶದ ಬಡ ಜನರಿಗಾಗಿ ಕೆಲಸ ಮಾಡಲು ಕರೆ ನೀಡಿದರು ಅಷ್ಟೇ ಅಲ್ಲದೆ ಹಿಂದೂ ಧರ್ಮದ ಮೂಲ ತತ್ವಗಳಾದ ವೇದಾಂತ ಮತ್ತು ಯೋಗವನ್ನು ಪಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿದರು. ಹಾಗೂ ಮಾನವರಲ್ಲಿ ದೈವತ್ವವನ್ನು ಕಂಡರು ಮತ್ತು ಆತ್ಮವಿಶ್ವಾಸ ಧೈರ್ಯ, ಶುದ್ಧತೆ, ತಾಳ್ಮೆ ಮತ್ತು ಏಕಾಗ್ರತೆಗಳ ಮೂಲಕ  ಶ್ರೇಷ್ಠತೆಯನ್ನು ಸಾಧಿಸಬಹುದು ಎಂದು ತಿಳಿಸಿದರು. ಅವರ ಮುಖ್ಯ ಸಂದೇಶವೆಂದರೆ ಆತ್ಮವಿಶ್ವಾಸ *ನಿನ್ನನ್ನು ನೀನು ನಂಬು ನೀನು ಅಸಾಧ್ಯವಾದನ್ನು ಸಾಧಿಸಬಲ್ಲೆ*ಹಾಗೂ ಮಾನವನ ಕಲ್ಯಾಣ ಮತ್ತು ಆಧ್ಯಾತ್ಮಿಕತೆಯನ್ನು ಮುಖ್ಯ ಗುರಿಯಾಗಿಟ್ಟುಕೊಂಡು ರಾಮಕೃಷ್ಣ ಮಿಷನ್ 1897ರಲ್ಲಿ ಸ್ಥಾಪಿಸಿದರು.ಹಾಗೂ ವೇದಗಳ ಸಾರವನ್ನು ಆಧುನಿಕ ಸಾರ್ವತ್ರಿಕ ರೂಪದಲ್ಲಿ ಪ್ರಸ್ತುತಪಡಿಸಿದರು.ಎಲ್ಲಾ ಜೀವಗಳಲ್ಲಿ ದೇವರನ್ನು ಕಂಡು ಮಾನವ ಸೇವೆಯ ಮೂಲಕ ದೇವರನ್ನು ಪೂಜಿಸಬೇಕು ಎಂದು ಬೋಧಿಸಿದರು. ಶಿಕ್ಷಣವೆಂದರೆ ಕೇವಲ ಮಾಹಿತಿ ತುಂಬುವುದಲ್ಲ ಅದು ವ್ಯಕ್ತಿತ್ವ ವಿಕಾಸನ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಇಂದಿಗೂ ಕೂಡ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು ಹಾಗೂ ಆದರ್ಶಗಳು ಜನರಿಗೆ ಉತ್ತಮ ಸ್ಪೂರ್ತಿದಾಯಕ ಸಂದೇಶಗಳಾಗಿವೆ. ನಾಗರತ್ನ ಎಚ್ ಗಂಗಾವತಿ

“ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” ನಾಗರತ್ನ ಎಚ್ ಗಂಗಾವತಿ Read Post »

You cannot copy content of this page

Scroll to Top