ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಭಾರತದಮಹಿಳಾ ಮುಖ್ಯಮಂತ್ರಿಗಳು

ಭಾರತದ ಮಹಿಳಾ ಮುಖ್ಯಮಂತ್ರಿಗಳು,ಸುರೇಖಾ ರಾಾಠೋಡ್

ಅಂಕಣ ಸಂಗಾತಿ ಭಾರತದ ಮಹಿಳಾ ಮುಖ್ಯಮಂತ್ರಿಗಳು, ಸುರೇಖಾ ರಾಾಠೋಡ್ ಮಾಯಾವತಿ ಭಾರತದ ಮೊದಲ ಮಹಿಳಾದಲಿತ ಮಂತ್ರಿ ಮಾಯಾವತಿ(ಆಡಳಿತ ಅವಧಿ ೭ ವರ್ಷ ೫ದಿನಗಳು) ಇವರು ಜನವರಿ ೧೫, ೧೯೫೬ ರಂದು ನವದೆಹಲಿಯಲ್ಲಿ ಜನಿಸಿದರು. ಇವರ ತಂದೆ ಪ್ರಭು ದಾಸ. ತಂದೆ ಅಂಚೆ ಕಛೇರಿ ಉದ್ಯೋಗಿಯಾಗಿದ್ದರು. ಇವರ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಕಳುಹಿಸಿದರೆ ಹೆಣ್ಣುಮಕ್ಕಳಿಗೆ ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಮಾಯಾವತಿಯವರು ೧೯೭೫ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ವಿಭಾಗದಿಂದ ಎಲ್‌ಎಲ್‌ಬಿ ಪದವಿ ಪಡೆದರು. ವಿಎಂಎಲ್‌ಜಿ ಕಾಲೇಜಿನಿಂದ ಬಿಎಡ್ ಪದವಿಯನ್ನು ಪಡೆದರು. ನಂತರ ಇವರು ಕೆಲ ದಿನಗಳವರೆ ಶಿಕ್ಷಕಿಯಾಗಿ ಕೆಲಸ ಮಾಡಿದರು. ಹಾಗೆಯೆ ಐಎಎಸ್ ಪರೀಕ್ಷೆ ತಯಾರಿ ನಡೆಸುವಾಗ ೧೯೭೭ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ರಾಜಕಾರಣಿಯಾದ ಕಾನ್ಶಿರಾಮ್ ಅವರು ಇವರ ಕುಟುಂಬಕ್ಕೆ ಭೇಟಿ ನೀಡಿದರು. ಅಜಯ್ ಬೋಸ್ ಅವರ ಬಯೋಗ್ರಾಫಿಯಲ್ಲಿ ಮಾಯಾವತಿಯವರಿಗೆ ರಾಮ್ ಅವರು ಒಂದು ಮಾತನ್ನು ಹೇಳುತ್ತಾರೆ ‘ನಾನು ನಿಮಗೆ ಒಂದು ದಿನ ಇಷ್ಟು ದೊಡ್ಡ ನಾಯಕಿಯಾನ್ನಾಗಿ ಮಾಡುತ್ತೇನೆಂದರೆ ನಿಮ್ಮ ಆದೇಶಗಳಿಗಾಗಿ ಒಂದಲ್ಲ ಸಾಲುಗಟ್ಟಲೇ ಐಎಎಸ್ ಅಧಿಕಾರಿಗಳು ಕಾಯುತ್ತಾರೆಂದು’. ೧೯೮೪ರಲ್ಲಿ ಕಾನ್ಶಿರಾಮ್ ಅವರು ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿದಾಗ ಮಾಯಾವತಿಯವರಿಗೆ ಸದಸ್ಯರನ್ನಾಗಿ ಸೇರಿಸಿಕೊಂಡರು. ಹೀಗೆ ಮಾಯಾವತಿಯವರು ರಾಜಕಿಯವನ್ನು ಪ್ರವೇಶ ಪಡೆದರು. ಇವರು ಮೊದಲ ಬಾರಿಗೆ ೧೯೮೯ರಲ್ಲಿ ಸಂಸತ್ತಿಗೆ ಆಯ್ಕೆಯಾದರು. ಮಾಯಾವತಿಯವರು ಡಾ. ಬಾಬಾ ಸಾಹೇಬ್ ಅಂಬೆಡ್ಕರ್ ಅವರ ವಿಚಾರಧಾರೆಗಳಿಂದ ತುಂಬಾ ಪ್ರಭಾವಿತರಾಗಿದ್ದವರು. ಇವರು ತಮ್ಮ ಅಧಿಕಾರವಧಿಯಲ್ಲಿ ದಲಿತರ ಪರವಾಗಿ ದಮನಿತರ ಪರವಾಗಿ ಅನೇಕ ಕೆಲಸಗಳನ್ನು ಮಾಡಿದರು. ಜನರು ಇವರನ್ನು ಸಹೋದರಿ(ಬೆಹೆನಜಿ) ಎಂದು ಕರೆಯುತ್ತಿದ್ದರು. ‘ಬೆಹೆನಜಿ ತುಮ್ ಸಂಘರ್ಷ ಕರೋ, ಹಮ್ ತುಮಾರೇ ಸಾಥ್ ಹೈ”(ಸಹೋದರಿ ನಿಮ್ಮ ಹೋರಾಟಗೊಂದಿಗೆ ಮುಂದುವರೆಯಿರಿ, ನಾವು ನಿಮ್ಮೊಂದಿಗೆ ಇದ್ದೇವೆ) ಎಂದು ಹೇಳುತ್ತಿದ್ದರು. ೧೯೮೪ರಲ್ಲಿ ನಡೆದ ತನ್ನ ಮೊದಲ ಚುನಾವಣಾ ಪ್ರಚಾರದಲ್ಲಿ ಬಿಎಸ್‌ಪಿ ಮಾಯಾವತಿಯವರನ್ನು ಮುಜಫರ್ ನಗರ ಜಿಲ್ಲೆಯ ಕೈರಾನಾ ಲೋಕಸಭಾ ಸ್ಥಾನಕ್ಕೆ, ೧೯೮೫ರಲ್ಲಿ ಬಿಜ್ನೋರ್‌ನಿಂದ ಮತ್ತು ೧೯೮೭ರಲ್ಲಿ ಹರಿದ್ವಾರದಿಂದ ಕಣಕ್ಕಿಳಿಸದರು. ಇವರು ೧೯೮೯ರಲ್ಲಿ ಬಿಜ್ನೋರ್‌ನಿಂದ ಪ್ರತಿನಿಧಿಯಾಗಿ ಆಯ್ಕೆಯಾದರು.ಮಾಯಾವತಿಯವರು ಮೊದಲ ಬಾರಿಗೆ ೧೯೯೪ರಲ್ಲಿ ಉತ್ತರ ಪ್ರದೇಶದ ರಾಜ್ಯಸಭೆಗೆ ಆಯ್ಕೆಯಾದರು. ೧೯೯೫ರಲ್ಲಿ ಇವರು ತಮ್ಮ ಪಕ್ಷದ ಮುಖ್ಯಸ್ಥರಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದರು. ಇವರು ಅತ್ಯಂತ ಕಿರಿಯ ಮತ್ತು ಭಾರತದ ಮೊದಲ ಮಹಿಳಾ ದಲಿತ ಮುಖ್ಯಮಂತ್ರಿಯಾದರು. ೧೯೯೬ರಲ್ಲಿ ಅವರು ಎರಡು ವಿಭಿನ್ನ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ೧೯೯೭ರಲ್ಲಿ ಎರಡನೆ ಮತ್ತು ಮೂರನೇ ಅವಧಿಗೆ ೨೦೦೨ ರಿಂದ ೨೦೦೩ವರೆಗೆ ಭಾರತೀಯ ಜನತಾ ಪಕ್ಷದೊಂದಿಗಿನ ಒಕ್ಕೂಟದಲ್ಲಿ ಮತ್ತೆ ಮುಖ್ಯ ಮಂತ್ರಿಯಾದರು. ಮತ್ತೆ ೨೦೦೭ರ ಮೇ ೧೩ರಂದು ನಾಲ್ಕನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.೨೦೦೧ರಲ್ಲಿ ರಾಮ್ ಅವರು ಪಕ್ಷದ ನಾಯಕತ್ವದ ಉತ್ತರಾಧಿಕಾರಿಯಾಗಿ ಇವರನ್ನು ಘೋಷಿಸಿದರು. ೨೦೦೩ ರಂದು ಇವರು ಮೊದಲ ಬಾರಿಗೆ ಬಿಎಸ್‌ಪಿಗೆ ರಾಷ್ಟಿçÃಯ ಅಧ್ಯಕ್ಷರಾಗಿ ಆಯ್ಕೆಯಾದರು. ೨೦೦೬ರಲ್ಲಿ ಮತ್ತೆ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾದರು. ೨೦೧೪ ರಲ್ಲಿ ಮೂರನೇ ಬಾರಿ ಮತ್ತು ೨೦೧೯ರಲ್ಲಿ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಯಾದರು. ೧೯೯೯ ರಿಂದ ೨೦೦೨ ೧೩ನೇ ಲೋಕಸಭೆಯಲ್ಲಿ ಅಕ್ಬರ್‌ಪುರದಿಂದ ಸಂಸದ ಸದಸ್ಯರಾದರು. ೨೦೦೭ ರಿಂದ ೨೦೧೨ವರೆಗೆ ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಎಂಎಲ್‌ಸಿಯಾಗಿ ಕಾರ್ಯನಿರ್ವಹಿಸಿದರು. ೨೦೧೨ ರಿಂದ ೨೦೧೭ರ ವರೆಗೆ ಉತ್ತರ ಪ್ರದೇಶದಿಂದ ರಾಜ್ಯಸಭೆಯ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಇವರ ಕುರಿತು ಸಾಹಿತ್ಯ ಕೂಡ ರಚನೆಯಾಗಿವೆ. ಅವುಗಳೆಂದರೆ ‘ಐರನ್ ಲೇಡಿ’, ‘ಮೇರೆ ಸಂಘರ್ಷಮೈ ಜೀವನ ಏವಂ ಬಹುಜನ ಚಳುವಳಿ ಕಾ ಸಫರ್ನಾಮಾ’, ‘ಬೆಹೆಂಜಿ’. ಇವರಿಗೆ ಅನೇಕ ಪ್ರಶಸ್ತಿಗಳು ದೊರತಿವೆ. ಅವುಗಳೆಂದರೆ ೨೦೦೩ರಲ್ಲಿ ಯುನಿಸ್ಕೋ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ರೋಟರಿ ಇಂಟರ್ನ್ಯಾಷನಲ್ ಪಾಲ್ ಹ್ಯಾರಿಸ್ ಫೆಲೋ ಪ್ರಶಸ್ತಿಯನ್ನು ನೀಡಿತು. ರಾಜರ್ಷಿ ಶಾಹು ಸ್ಮಾರಕ ಟ್ರಸ್ಟ್ನಿಂದ ರಾಜರ್ಷಿ ಶಾಹು ಪ್ರಶಸ್ತಿಯನ್ನು ನೀಡಿದೆ. ೨೦೦೮ರಲ್ಲಿ ಪೋರ್ಬ್ಸ್ ವಿಶ್ವದ ೧೦೦ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಮಾಯಾವತಿಯವರು ೫೯ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ೨೦೦೭ರಲ್ಲಿ ನ್ಯೂಸ್‌ವೀಕ್‌ನ ಉನ್ನತ ಮಹಿಳಾ ಸಾಧಕರ ಪಟ್ಟಿಯಲ್ಲಿ ಕೂಡ ಇವರು ಸ್ಥಾನ ಪಡೆದರು. ೨೦೦೭ರಲ್ಲಿ ಟೈಮ್ ನಿಯತಕಾಲಿಕೆಯು ಮಾಯಾವತಿಯವರನ್ನು ಭಾರತದ ೧೫ ಅತ್ಯಂತ ಪ್ರಭಾವಶಾಲಿ ಪಟ್ಟಿಯಲ್ಲಿ ಹೆಸರಿಸಿತು. ಸುರೇಖಾ ರಾಠೋಡ್

ಭಾರತದ ಮಹಿಳಾ ಮುಖ್ಯಮಂತ್ರಿಗಳು,ಸುರೇಖಾ ರಾಾಠೋಡ್ Read Post »

ಕಾವ್ಯಯಾನ

ಅನುರಾಧಾ ಶಿವಪ್ರಕಾಶ್ ಅವರ ಕವಿತೆ, “ಆಂತರ್ಯ”

ಕಾವ್ಯ ಸಂಗಾತಿ ಅನುರಾಧಾ ಶಿವಪ್ರಕಾಶ್ “ಆಂತರ್ಯ” ಅರಿಯಲಾರೆನು ನಿನ್ನ ಮನವನುತೆರೆದು ತೋರೆಯ ಆಂತರ್ಯವಭಾವಬಂಧಕೆ ತೊಡಕು ನೀಡಲುಕಾಣಲಾರೆನು ಸೌಂದರ್ಯವ/೧/ ಎದೆಯ ಗುಡಿಯಲಿ ಇನಿತು ಪ್ರೀತಿಯಬಯಸಿ ಬಂದಿಹೆ ನಲಿಯುತವಿಧಿಯ ಆಟಕೆ ಮುರುಟಿ ಹೋಯಿತೆಮನವು ನಲುಗಿತು ಮರುಗುತ/೨/ ಮಾತು ನಗುವನು ನುಂಗಿ ಹಾಕುವಸಿಡಿಲ ಭರವನು ತಾಳೆನುಕುಳಿತು ಕಲೆತು ಬೆರತು ಉಂಡಿಹಸಿಹಿಯ ಎಂದೂ ಮರೆಯೆನು/೩/ ಬದುಕ ಪಥದಲಿ ಕವಲು ದಾರಿಯಎಣಿಸಬಲ್ಲೆವೇ ಈ ಕ್ಷಣಹಾದಿ ಸವೆಸಲು ಪಾಠ ಹಲವಿದೆಕಲಿಯ ಬೇಕಿದೆ ಪ್ರತಿಕ್ಷಣ/೪/ ಮೌನದೊಳಗಿನ ಭಾವವೆಲ್ಲವುಚಿಪ್ಪಿನೊಳಗಿನ ಮುತ್ತದುಕಲ್ಲು ಬಂಡೆಯ ತೆರದಿ ಬಾಳಲುಚಿಂತೆ ಎಂದೂ ಮುತ್ತದು /೫/ ಅನುರಾಧಾ ಶಿವಪ್ರಕಾಶ್

ಅನುರಾಧಾ ಶಿವಪ್ರಕಾಶ್ ಅವರ ಕವಿತೆ, “ಆಂತರ್ಯ” Read Post »

ಇತರೆ

“ಹಾಸ್ಯ ಕವಿ ಬೀಚಿ…ಸವ್ಯಸಾಚಿ” ಜಯಲಕ್ಷ್ಮಿ  ಕೆ

ವ್ಯಕ್ತಿ ಸಂಗಾತಿ ಜಯಲಕ್ಷ್ಮಿ  ಕೆ “ಹಾಸ್ಯ ಕವಿ ಬೀಚಿ…ಸವ್ಯಸಾಚಿ” “ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೂ ಸ್ವಾಗತ ” ಇದು ತಮ್ಮ ಬಯೋಗ್ರಫಿಯಲ್ಲಿ ಬೀಚಿಯವರು ಬರೆದ ಮಾತು. “ಯಾರೊಬ್ಬನ ಬಾಳು ಕೂಡ ಬದುಕಲಿಕ್ಕೇ ಆಗದಷ್ಟು ಕಠಿಣವೂ ಅಲ್ಲ,  ಲೀಲಾಜಾಲವಾಗಿ ಸಾಗುವ ಸುಲಲಿತ ಯಾನವೂ ಅಲ್ಲ. ಏನೇ ಕಷ್ಟ ಬಂದರೂ ನಾವು ವಾರದಲ್ಲಿ ಮೂರು ದಿನಗಳಾದರೂ ನಗುತ್ತಾ ಇರಬೇಕು. ಅದು ನಿನ್ನೆ ಇವತ್ತು ಮತ್ತು ನಾಳೆ”. ಹೀಗೆ ಹೇಳುತ್ತಲೇ ಹಾಸ್ಯ ಬರಹದ ಮೂಲಕ ಜನರ ಬದುಕಿನಲ್ಲಿ  ಸದಾ ಭರವಸೆ ತುಂಬುತ್ತಿದ್ದ ಹಾಸ್ಯ ಕವಿ ಬೀಚಿಯವರು ಮರೆಯಾಗಿ ಇಂದಿಗೆ 45 ವರ್ಷಗಳು ಉರುಳಿವೆ. ಆದರೆ ಅವರ ನವಿರಾದ ಹಾಸ್ಯ ನಮ್ಮೆಲ್ಲರ ಮನದಲ್ಲಿ ಜೀವನೋತ್ಸಾಹ ತುಂಬುತ್ತಾ ಸದಾ ಜೀವಂತವಾಗಿದೆ. ಹಾಸ್ಯ ಎಂದರೆ ಬೀಚಿ, ಬೀಚಿ ಎಂದರೆ ಹಾಸ್ಯ. ಒಂದೇ ನಾಣ್ಯದ ಎರಡು ಮುಖಗಳು!! 1913ರಲ್ಲಿ  ಹರಪನಹಳ್ಳಿಯ ಶ್ರೀನಿವಾಸರಾವ್ ಮತ್ತು ಭಾರತಮ್ಮನವರ ಪುತ್ರನಾಗಿ ಜನಿಸಿದ ರಾಯಸಂ  ಭೀಮಸೇನರಾವ್ ‘ಬೀಚಿ’ ಎಂದೇ ಪ್ರಸಿದ್ಧರು. “ಹಾಸ್ಯ ಬ್ರಹ್ಮ” ಬೀಚಿಯವರು  ಕನ್ನಡದ ಮೊದಲ ಹಾಸ್ಯ ಕವಿಯಲ್ಲದಿದ್ದರೂ ಹಾಸ್ಯವನ್ನೇ ತಮ್ಮ ಕೃತಿಗಳ  ಪ್ರಮುಖ ಮಾಧ್ಯಮವನ್ನಾಗಿಸಿಕೊಂಡ ಕವಿಗಳಲ್ಲಿ ಇವರು ಮೊದಲಿಗರು. ನಗುವಿನ ಬಗೆಗಿನ ಅವರ ಸಿದ್ಧಾಂತ ಬಹಳ ಶುದ್ಧವಾದದ್ದು. ನಗುವಿನ ಸಂದರ್ಭಗಳಲ್ಲಿ ನಗು ಸಹಜವಾಗಿ ಹೊರ ಹೊಮ್ಮುತ್ತದೆ. ಆದರೆ ನೋವಿನ ಸನ್ನಿವೇಶಗಳಲ್ಲಿ ಕೂಡ ಮೊಗದಲ್ಲಿ ನಗುವನ್ನು ಅರಳಿಸುವುದು  ಕಷ್ಟದ ಮಾತು. ಆದರೆ ಆ ಶಕ್ತಿ ಬೀಚಿಯವರ ಸಾಹಿತ್ಯಕ್ಕೆ ಇದೆ. ಸರ್ವರ ಸಮ್ಮುಖದಲ್ಲಿಯೂ ಹಂಚಿಕೊಳ್ಳಬಹುದಾದ ನವಿರಾದ ಹಾಸ್ಯದ ತುಣುಕುಗಳು ಸಾಹಿತ್ಯ ಲೋಕಕ್ಕೆ ಇವರಿತ್ತ ಅಪೂರ್ವ ಕೊಡುಗೆ. ಹುಟ್ಟುವಾಗಲೇ ತಂದೆಯನ್ನು ಕಳೆದುಕೊಂಡ ಬೀಚಿಯವರು ತಮ್ಮ ಆರನೇ ವಯಸ್ಸಿನಲ್ಲಿ ತಾಯಿಯನ್ನು ಕೂಡ ಕಳೆದುಕೊಂಡರು. ಅವರೇ ಹೇಳುವಂತೆ ” ಬಡತನವೋ ಸಿರಿತನವೋ ಭೂಮಿಗೆ ಬಂದ ಮಗು ಆಯುಸ್ಸಿದ್ದರೆ  ಯಾರದೋ ಆಸರೆಯಲ್ಲಿ  ಬೆಳೆದೇ ಬೆಳೆಯುತ್ತದೆ. ಹಾಗೆ ಅವರಿಗೂ ಆಸರೆ ಸಿಕ್ಕಿತು. ಅದು ಅವರ ಸೋದರ ಮಾವನ ಆಸರೆ. ಬಡತನದಲ್ಲಿಯೂ ಅತ್ತೆ ಮಾವ ಅಕ್ಕರೆಯ ಆರೈಕೆಗೇನೂ ಕಡಿಮೆ ಮಾಡಲಿಲ್ಲ. ಅವರು ಓದಿದ್ದು ತೆಲುಗುಮಯವಾಗಿದ್ದ ಅಂದಿನ ಬಳ್ಳಾರಿಯಲ್ಲಿ. ಅಲ್ಲಿ ಒಂದೆರಡು ವರ್ಷ ಕನ್ನಡ ಕಲಿತದ್ದು ಬಿಟ್ಟರೆ ಉಳಿದಂತೆ ಶಿಕ್ಷಣಾಭ್ಯಾಸವೆಲ್ಲ ನಡೆದದ್ದು ಇಂಗ್ಲಿಷ್ ಮತ್ತು ತೆಲುಗು ಭಾಷೆಯಲ್ಲಿ. ಆದರೆ ಅಪ್ರತಿಮ ಸಾಹಿತ್ಯ ಸೃಷ್ಟಿಸಿ  ಹೆಸರು ಗಳಿಸಿದ್ದು ಮಾತ್ರ ಕನ್ನಡದಲ್ಲಿ!! ಬಡತನದಲ್ಲಿಯೇ ಸೀತಾಬಾಯಿಯವರೊಡಗೂಡಿ  ಬಾಳ ದೋಣಿಯನ್ನು ಸಾಗಿಸಿದ ಭೀಮಸೇನರಾವ್ ಅವರು ತಮ್ಮ ಇಬ್ಬರು ಗಂಡು ಮಕ್ಕಳನ್ನೂ ಚೆನ್ನಾಗಿ ಓದಿಸಿದರು. ಆದರೆ ಪದವಿ ಮುಗಿಸಿದ ಕಿರಿಯ ಮಗ ರವೀಂದ್ರನನ್ನು ಟೈಫಾಯಿಡ್ ಜ್ವರ ಬಲಿ ತೆಗೆದುಕೊಂಡುಬಿಟ್ಟಿತ್ತು. “ಕತ್ತಲಿನ ಬಸಿರಲ್ಲಿ ಬೆಳಕು ಹುಟ್ಟಿತು: ಬೆಳಕಿನ ಫಲವೂ ಮತ್ತೆ ಕತ್ತಲು  “… ಬೀಚಿ ದಂಪತಿಗಳಿಗೆ ಅತೀವ ವೇದನೆಯನ್ನು ತಂದೊಡ್ಡಿದ ಘಟನೆ ಇದು. ಬೀಚಿಯವರ ಮೊದಲ ಲೇಖನ ಪ್ರಕಟವಾದದ್ದು ಪ್ರಜಾವಾಣಿಯಲ್ಲಿ. ಅ. ನ ಕೃ ರವರ ಹಾಸ್ಯರಾಗ ಇವರ ಮೇಲೆ  ಪರಿಣಾಮ ಬೀರಿದ ಮೊದಲ ಕೃತಿ. ‘ ಗರುಡ ಪುರಾಣ ‘, ‘ ನಾನೇ ಸತ್ತಾಗ ‘, ‘ ರೇಡಿಯೋ ನಾಟಕಗಳು ‘ ಮೊದಲಾದ ಹಲವಾರು ಅಪೂರ್ವ ಕೃತಿಗಳನ್ನು ಇವರು ಬರೆದಿದ್ದಾರೆ. ” ನಿನ್ನಂತೆ ನೀನಾಗು, ನಿನ್ನ ನೀ ಅರಿ ಮೊದಲುಚೆನ್ನೆಂದು ದೊಡ್ಡವರ ಅನುಕರಿಸಬೇಡ  ಏನಾಯ್ತು ಮರಿ ಕತ್ತೆ?ಚೆಲುವಿತ್ತು, ಮುದ್ದಿತ್ತು,ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ್ಮ… “ ಯಾವುದೇ ಬರಹಗಾರನ ವೈಯಕ್ತಿಕ ಪ್ರತಿಭೆ  ಅನುಕರಣೆಯ ಮರಳಿನಲ್ಲಿ ಹೂತು ಹೋಗಬಾರದು ಎನ್ನುವುದು ಅವರ ನಿಲುವಾಗಿತ್ತು. ‘ರೈತವಾಣಿ’ ವಾರಪತ್ರಿಕೆಯಲ್ಲಿ ನಿರಂತರವಾಗಿ   ‘ ಬೇವಿನಕಟ್ಟೆ ತಿಮ್ಮ ‘ ಎಂಬ ಸ್ಥಿರ ಶೀರ್ಷಿಕೆಯಲ್ಲಿ ಬರೆಯುತ್ತಿದ್ದ ಇವರ ಬರಹಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದಿವೆ. ‘ತಿಂಮ್ಮನ ತಲೆ ‘ ಹಲವು ಬಾರಿ ಮುದ್ರಣ  ಕಂಡಿದೆ. ‘ದಾಸ ಕೂಟ ‘ ಕನ್ನಡಕ್ಕೆ ಇವರು ನೀಡಿದ ಮೊತ್ತ ಮೊದಲ ಹಾಸ್ಯ ಪ್ರಧಾನ ಕಾದಂಬರಿ. ” ಮಗಳನ್ನು ಬೆಂಗಳೂರಿಗೆ ಕೊಟ್ಟಿದ್ದೇವೆ “.. ಎಂದವರಿಗೆ, ಹಾಂ!!! ಇಡೀ ಬೆಂಗಳೂರಿಗಾ!!! ” ಎಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದ ಬೀಚಿಯವರಿಗೆ ” ಮಗಳನ್ನಾಗಲೀ, ಮತವನ್ನಾಗಲಿ, ಅಯೋಗ್ಯರಿಗೆ ಕೊಡಬಾರದು ಎನ್ನುವ ಪ್ರಬುದ್ಧ ಚಿಂತನೆ ಇತ್ತು. ಇವರ ಹಲವಾರು ಚುಟುಕುಗಳಲ್ಲಿ, ಹನಿ ಕವನಗಳಲ್ಲಿ, ಮೇಲ್ನೋಟಕ್ಕೆ ಹಾಸ್ಯ ಕಂಡರೂ, ಒಳಾರ್ಥದಲ್ಲಿ ಸಮಾಜದ ಸ್ಥಿತಿಗತಿಗಳ ಬಗೆಗಿನ ಟೀಕೆಯಿದೆ, ಸಮಾಜಮುಖಿ ಚಿಂತನೆಗಳಿವೆ. ” ಮಗುವಿಗೆ ಅಳುಹೆಣ್ಣಿಗೆ ನಗುಅವಿವೇಕಿಗೆ ಧೈರ್ಯಅಪ್ರಾಮಾಣಿಕನಿಗೆ ರಾಜಕಾರಣಅತ್ಯುತ್ತಮ ಆಯುಧಗಳು  ”  ಎಂದು ನಿರ್ಭೀತಿಯಿಂದ ಬರೆದವರು ಬೀಚಿ. ‘ ಕೋಳಿ ರುಚಿ ಕಂಡವನು  ಹೋಳಿಗೆ ತಿನ್ನಲಾರ. ಹಾಗೆಯೇ ಸಾರ್ವಜನಿಕ ಹಣದ ರುಚಿ ಕಂಡವನು ದುಡಿದು ತಿನ್ನಲಾರ  ಎನ್ನುವ ಬೀಚಿ  ಸಮಾಜದಲ್ಲಿ ನಡೆಯುವ ಅನ್ಯಾಯ ಭ್ರಷ್ಟಾಚಾರ ವಂಚನೆ ಎಲ್ಲದರ  ಬಗೆಗಿನ ತಮ್ಮ ನಿಲುವನ್ನು  ಕೇವಲ ನಾಲ್ಕು – ಆರು ಸಾಲುಗಳಲ್ಲಿಯೇ ಸ್ಪಷ್ಟಪಡಿಸಬಲ್ಲ, ಅನ್ಯಾಯವನ್ನು ಪ್ರತಿಭಟಿಸಬಲ್ಲ ಅಪ್ರತಿಮ ಬರಹಗಾರರಾಗಿದ್ದರು. ‘ ತಾಳಿ ಕದ್ದವನಿಗೆ ಕಠಿಣ ಶಿಕ್ಷೆ, ತಾಳಿ ಕಟ್ಟಿದವನಿಗೆ ಜೀವಾವಧಿ ಶಿಕ್ಷೆ ಎಂದು  ನವಿರಾದ ಹಾಸ್ಯವನ್ನು ಬಿಂಬಿಸುತ್ತಿದ್ದ ಅವರು  ಗೊಡ್ಡು  ಸಂಪ್ರದಾಯಗಳನ್ನು ಕಟುವಾಗಿ ಟೀಕಿಸಿ ಬರೆದದ್ದೂ ಇದೆ. ” ಹೆಣ್ಣು ಚಿನ್ನವನ್ನುರಾಜಕಾರಣಿ ಅಧಿಕಾರವನ್ನುಒಲ್ಲೆ ಎಂದ ದಿನವೇ ಪ್ರಳಯವಾಗುತ್ತದೆ ”  ಎನ್ನುವ ಬೀಚಿಯವರ ಬರಹ ಪ್ರಳಯದ ಬಗೆಗಿನ  ಹೊಸ  ವ್ಯಾಖ್ಯಾನವೆನಿಸಿದರೂ ಅಲ್ಲೊಂದು ಸತ್ಯ ನಿಷ್ಟುರತೆಯಿದೆ. ಜನಜೀವನದ ಎಲ್ಲ ಮುಖಗಳು ಅವರ ಲೇಖನಿಯ ಮೂಲಕ ಹೊರಹೊಮ್ಮಿವೆ. ನ್ಯಾಯ ನಿಷ್ಠುರದ ಮಾತುಗಳನ್ನು ಅಲ್ಲದವರಿಗೆ ಅವರ ಬರಹಗಳು ಕಹಿ ಎನಿಸಿದರೂ ಕವಿಯ ಭಾವನೆಗಳು ಮಾತ್ರ ನಿರ್ಭೀತಿಯಿಂದ ಕೃತಿ ರೂಪ ತಾಳಿವೆ. ಸತ್ಯ, ನ್ಯಾಯ, ಧರ್ಮ, ಸಮಾನತೆಯ ಸೋಗು ಹಾಕಿ  ಅವುಗಳ ವಿರುದ್ಧ ಹಾದಿಯನ್ನು ಕ್ರಮಿಸುವವರಿಗೆ ಕರೆಗಂಟೆಯಂತೆ ಎಚ್ಚರಿಸುವ ಅವರ ಬರಹಗಳು ಸಾಮಾಜಿಕ ಮೌಲ್ಯಗಳನ್ನು ಸಾರುವ  ನಿತ್ಯನೂತನ ಸಾಲುಗಳಾಗಿವೆ. ವಾಸ್ತವಿಕತೆಯನ್ನು  ಆಳವಾದ ಹಾಸ್ಯದೊಂದಿಗೆ ಜನಮನಕ್ಕೆ ತಲುಪಿಸುವ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿದ್ದ ಕವಿ ಬೀಚಿ ಕನ್ನಡ ಸಾಹಿತ್ಯ ಲೋಕದ, ಹಾಸ್ಯ ಪ್ರಪಂಚದ  ಸವ್ಯಸಾಚಿ. ಜಯಲಕ್ಷ್ಮಿ  ಕೆ,

“ಹಾಸ್ಯ ಕವಿ ಬೀಚಿ…ಸವ್ಯಸಾಚಿ” ಜಯಲಕ್ಷ್ಮಿ  ಕೆ Read Post »

ಕಾವ್ಯಯಾನ

ಪ್ರಮೋದ ಜೋಶಿ “ಅಡಗಿ ಕುಳಿತ ಮಾತು”

ಕಾವ್ಯಸಂಗಾತಿ ಪ್ರಮೋದ ಜೋಶಿ “ಅಡಗಿ ಕುಳಿತ ಮಾತು” ಮೌನದೊಳು ಮಾತು ಅಡಗಿಕುಳಿತಿದೆತರ್ಕಬದ್ಧಿತ ಧೀರ್ಘಾವಧಿ ಯೊಚನೆಗೋಲೆಕ್ಕಿತ ಲಾಭದ ಮೋಹಕೊಆಡದೆ ನಿಶಬ್ದವಾಗಿದೆ ಬಂಧ ಸಂಬಂಧಗಳ ಬಂಧನದಿನಿರ್ಗಮಿಸಲಾಗದೇ ಒಳಗೆ ಸಿಲುಕಿತನ್ನ ತನವನ್ನೂ ಬಿಡಲಾಗದೆದ್ವಂಧ್ವತ್ವದೊಳು  ಮುಳುಗಿರಲು ನಂಬಿಕೆ ಭಾವದ ಹೊದಿಕೆಯೊಳುಬೆನ್ನಿಗೆ ಇರಿದ ಚೂರಿಯಿಂದರಕುತ ಬಾರದ ಗಾಯಕೆವೆಚ್ಚಿಸಿ ತಂದ ಮದ್ದಿಗಾಗಿ ದ್ವಿಭಾವದ ಮನಸಿನ ಏಕೈಕ ತನುಇಡುವ ಹೆಜ್ಜೆಯ ತಳಮಳತನಕೆಹೆಜ್ಜೆಯೂ ಇಡಲಾಗದಂತ ಕ್ಷಣಕೆನಿಂತಲ್ಲೆ ನಿಂತ ಸ್ಥಿತಿಗಾಗಿ ಆಡುವ ಮಾತಿಗೆ ಕೇಳದ ಕಿವಿಆಸೆ ಆಮೀಷಕೆ ಒಳಗಾಗಿನೈಜ ಗುರುವ ಹಿಂದಿಕ್ಕಿಹಣವಂದನ್ನೆ ಗುರುವಾಗಿಸಿದಾಗ ಬದುಕಿನೊಳ ಆಗು ಹೊಗುಗಳಿಗೂಬಲಿಪಶುಮಾಡಿ ತೆಗಳುತಒಂಟಿ ಮಾಡಿ ಇಟ್ಟ ಕ್ಷಣಕೆಉತ್ತರವಿಲ್ಲದೇ ಶರಣಾಗತನಾದಾಗ ನನ್ನ ನಾನೆ ಕಂಡ ನನಗೆಅರಿಯದೇ ದೂಷಿಸಿ ಕೀಳಾಗಿ ನಿಂತಾಗನಿದಿರೆ ದಾರಿಯೂ ದೂರಾಗಿ ಕಂಡಾಗಭ್ರಮನಿರಶನ ಮರೀಚಿಕೆ ಕ್ಷಣಕೆ ಮೌನದೊಳು ಮಾತು ಅಡಗಿ ಕುಳಿತುಹೊರ ಬಾರದೇ ಸತ್ತದ್ದಕ್ಕೆಹೊತ್ತ ಮನ ರೋಸಿಹೋಗಿಇದ್ದ ತನವ ಕುಗ್ಗಿಸಿದೆ —————- ಪ್ರಮೋದ ಜೋಶಿ

ಪ್ರಮೋದ ಜೋಶಿ “ಅಡಗಿ ಕುಳಿತ ಮಾತು” Read Post »

ಕಾವ್ಯಯಾನ

“ಚಳಿಗಾಲದಲ್ಲಿ ಭುವಿ – ರವಿ” ಪರವಿನಬಾನು ಯಲಿಗಾರ

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ ಚಳಿಗಾಲದಲ್ಲಿ ಭುವಿ – ರವಿ ಮಂಜಿನ ಮುಸುಕು ಹೊದ್ದು ಕುಳಿತ ಧರಿತ್ರಿ ,ಷೋಡಶ ಶೃಂಗಾರದ  ಮಧುವಣಗಿತ್ತಿ ,ಉದಯ ರವಿಯ ಸ್ವರ್ಣ ರಶ್ಮಿಯು ತಾಗಿದಾಗ ,ನಸು ನಾಚಿ ಕೆಂಪಾಗುವಳುಆ ನವಿರಾದ ಸ್ಪರ್ಶಕೆ …… ಮದ್ಯಾಹ್ನದ ವೇಳೆಗೆ ಸುಡುವ ಸೂರ್ಯನುಧರಣಿಯನು ದಹಿಸುವನು.ತಾಳ್ಮೆಯಿಂದಲೇ ಸಹಿಸುವಳು.ಅವಳ ಮೈ ಮೇಲಿನ ಹಸಿರೆಲ್ಲವೂ ಮೆಲ್ಲನೆಒಣಗಿ ಮಾಯವಾಗುವುದು…. ಸಂಜೆ ಬೀಸುವ ಶೀತಲ ಮಂದ ಮಾರುತ ,   ಇಡೀ ದಿನ ಕಾದು ಬೆಂದ ಪ್ರಕೃತಿಯಲಿತುಸು ತಂಪಿನ ಸಿಂಚನದ ಅನುಭವ.ಮೋಡದ ಆ ಅಂಚಿನಲ್ಲಿ ಕೈ ಬೀಸುತ್ತಹೋರಟ ಆದಿತ್ಯ. ಅದೇನು ಮುನಿಸೊ ಅವನಿಗೆ ,ಆ ಭೂ ರಮಣೀಯ ಮೇಲೆ ,ದಿನವೂ ಮರೆಯಾಗುವನು ಇರುಳಿಗೆ .ಬೆಳಗಿನ ಒಲವು ರಾತ್ರಿಗಿಲ್ಲ ,ಬಹುಶಃ ಇರುವಳೇನೊ ,ಒಬ್ಬ ಸವತಿ ಭುವಿಗೂ ….. ಇನಿಯನ ಬರುವಿಕೆಗಾಗಿಕಾಯುವ ಭೂರಮೆ ,ವಸಂತನ ಆಗಮನಕೆಹಾತೊರೆಯುವ ಪ್ರಕೃತಿ ,ಜಗದ  ಈ  ಚಕ್ರ ಉರುಳುವುದು ಹೀಗೆ ,ಒಮ್ಮೆ ನಗಿಸಿ , ಮತ್ತೊಮ್ಮೆ ಅಳಿಸಿ…… ———- ಪರವಿನ ಬಾನು ಯಲಿಗಾರ

“ಚಳಿಗಾಲದಲ್ಲಿ ಭುವಿ – ರವಿ” ಪರವಿನಬಾನು ಯಲಿಗಾರ Read Post »

ಕಾವ್ಯಯಾನ

ವ್ಯಾಸ ಜೋಶಿ ಅವರ ಚಳಿಗಾಲದ ತನಗಗಳು

ಕಾವ್ಯ ಸಂಗಾತಿ ವ್ಯಾಸ ಜೋಶಿ ಚಳಿಗಾಲದ ತನಗಗಳು  ಚಳಿಯೇ ಚಳಿಯಲ್ಲಿ ಕಂಪಿಸಿ ನಡುಗಿದೆ. ಥಂಡೀ ತಾಳಲಾರದೆ ಸೂರ್ಯನ ಕರೆದಿದೆ.  ಭೂಮಿಯೇ ನಡುಗಿದೆ ಈ ಪರಿಯ ಥಂಡಿಗೆ ಮನೆಗೇ ಹೊಚ್ಚಬೇಕುದೊಡ್ಡ ಕೌದಿ ಬೆಚ್ಚಗೆ.  ಉರಿಯುವ ರವಿಗೆಬೈಯುವರು ‘ಮೇ’ನಲ್ಲಿ,ಕರೆವರಾದರದಿಹೇಮಂತ ಋತುವಲ್ಲಿ.  ಇಷ್ಟು ವರ್ಷ ಬಂದ್ಹೊಯ್ತು ಎಷ್ಟೊಂದು ಚಳಿಗಾಲ, ಈ ಸಾರಿ ಬೆಚ್ಚಗಿದೆ ಎಂದನು ಮದುಮಗ. ನವದಂಪತಿಗಳುಗೆಲ್ಲಲು ಚಳಿಯನ್ನದೊಡ್ಡ ಕಂಬಳಿಗಿಂತಅಪ್ಪುಗೆ ವರದಾನ. ಎಷ್ಟೊಂದು ಚಳಿಯಲ್ಲೂಮಧುಚಂದ್ರದಿ ಜೋಡಿಗೆಲ್ಲುವರು ಚಳಿಯಸ್ಕೂಬಾ ಡೖವಿಂಗು ಮಾಡಿ.   ಓ ಸೂರ್ಯ ಬಂದುಬಿಡು ಗೆಳೆಯನಂತೆ ಹತ್ರ, ಅದಕ್ಕೆ ನಿನಗೊಂದು ಅನ್ವರ್ಥನಾಮ ‘ಮಿತ್ರ’. ವ್ಯಾಸ ಜೋಶಿ

ವ್ಯಾಸ ಜೋಶಿ ಅವರ ಚಳಿಗಾಲದ ತನಗಗಳು Read Post »

ಕಾವ್ಯಯಾನ

ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು

ಕಾವ್ಯ ಸಂಗಾತಿ ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು ರಗ್ಗು ಮಧುರ ಪ್ರಿಯನಿಗೆ ಚಳಿಯ ಚಿಂತೆ ಇಲ್ಲಬಳಿ ಇರುವಾಗ ಮೊ(ನ)ಲ್ಲೆಯ ಮೊಗ್ಗು !‘ಮಧು’ ಪ್ರಿಯನಿಗೂ ಚಳಿಯ ಹಂಗಿಲ್ಲಒಳ ಹೋದೊಡೆ ಒಂದು ಪೆಗ್ಗುಹೊತ್ತಂತೆ ಎರಡೆರಡು ರಗ್ಗು !!               ***ಈ ‘ಚಳಿ’ಗೆ ಚಳಿಯಾಗುವುದಿಲ್ಲವೆ !?ಊರೆಲ್ಲ ಸುತ್ತಿ ಎಲ್ಲರಿಗೂಚಳಿಯಲ್ಲಿ ನಡುಗಿಸುತ್ತದೆ,ಮನೆಯ ಮೂಲೆ ಸೇರಿಬೆಚ್ಚನೆ ಕೂರಬಾರದೆ !?            ***ಚಳಿಗೆ ಬೆಚ್ಚನೆ ಕಾಫಿ ಹೀರಲು ಕುಳಿತ್ತಿದ್ದೆಗಡ ಗಡ ನಡುಗುತ್ತ ಬಳಿ ಬಂದ ಚಳಿತನಗೊಂದು ಲೋಟ ಕಾಫಿಗೆ ಅಂಗಲಾಚಿತು!ಕೈಯಲ್ಲದ್ದ ಕಾಫಿ ಲೋಟ ಚಾಚಿದೆಮನದಲ್ಲಿ ಚಳಿಯ ಚಳಿ ಹೋಗಲಾಡಿಸಿದ ಬೆಚ್ಚನೆಯ ಅನುಭವ !!                 ***ನೀರಿಗೂ ಚಳಿ ಆಗಬಾರದೆಂದುಬಿಸಿ ಮಾಡಿಮೆಲ್ಲನೆ ಕೈ ಹಿಡಿದುಕೊಂಡು ಕರೆದ್ಹೋಗುತ್ತೇನೆ ಸ್ನಾನಕ್ಕೆ !!             ***ಅತಿ ಯಾಯಿತು ಈ ಚಳಿಯ ಗಲಾಟೆಸೂರ್ಯ ಮೆರೆಯಾಗುವುದೇ ತಡಬಂದು ಬಿಡುತ್ತಾನೆ ನಡುಗಿಸಲು ಗಡ ಗಡ ————————— ರಾಜು ಪವಾರ್ ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು

ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು Read Post »

ಕಾವ್ಯಯಾನ

“ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್

ಕಾವ್ಯ ಸಂಗಾತಿ “ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್ ಸ್ಪರ್ಧೆ ಎನಿಸಿದರೆ‌ ನಿಮಗೆನ್ನಕಾಯಕ‌ವದರ ದೋಷಿ‌ಯು ನಾನಲ್ಲ||ಕೆರೆಯುತಲಿದ್ದು ಮಾಯುವುದಕ್ಕೆಡೆ ಕೊಡದೆ ನಂಜಾಗುತಿರೆ ಗಾಯ ದೋಷಿ‌ಯು ನಾನಲ್ಲ|| ನಾನಾಡುವ‌ ದಿಟ ಮಾತು ಸದಾಕಟುವೆನಿಸಿದರಕೆ ದೋಷಿಯು ನಾನಲ್ಲ||ನಾ ಬಲ್ಲೆ ಎನ್ನರಿವು‌ ಹರಿವಿನ ಹಿತಮಿತಅಹಂ‌ ಅನಿಸಿದರದು‌ ತಮಗೆ ದೋಷಿ‌ ನಾನಲ್ಲ|| ಎನ್ನ‌ ಬಾಹ್ಯ‌-ಆಂತರ್ಯ‌ ಸೊಬಗಿಗೆ ನಿಮ್ಮಕಣ್ಗಳು ಸೋಲುಂಬುದಕೆ ದೋಷಿ‌ಯು ನಾನಲ್ಲ||ಮುನ್ನ ಕೃತಿ ಪ್ರೌಢಿಮೆಯ‌ ಆಳವರಿಯದೆವರ್ಜಿಸಿ ಕಳೆದುಕೊಳ್ಳುವುದಕೆ ದೋಷಿ‌ಯು ನಾನಲ್ಲ|| ಎನ್ನಾತ್ಮ‌ ಮೆಚ್ಚುವಂತೆ ಮಾಡುವ‌ ಕೆಲಸ‌ನಿಮ್ಮ ಕಾಡಿದರದರ ದೋಷಿಯು ನಾನಲ್ಲ||ಬೆನ್ನಂತೆ ಕಾಣದಿರುವ ನಿಮ್ಮ‌ ಗುಣ‌ವ ನೀವೆ ತಿಳಿಯದಿರುವುದಕೆ ದೋಷಿಯು ನಾನಲ್ಲ|| ಆವುದನ್ನು ತಲೆಗೇರಿಸಿ‌ಕೊಳ್ಳದೆ ಇಷ್ಟದೊಂದಿಗೆ‌ ಬಾಳುತಿರುವ ಅಂತರ್ಧ್ಯಾನಿ ನನಗಾವ ದೋಷವಿಲ್ಲ||ಆಕರ್ಷ ಜಗಕೆ‌ ಮರುಳಾಗುತಿರುವ‌ ಮೋಹಿ ನೀ ನಿನ್ನ ಅರಿಯದಕೆ ಅನಿಸುತ್ತಿದೆ ನಿಮಗೆ ದೋಷವೇ ಎಲ್ಲ || ಕೊ//ಮಾಳೇಟಿರ ಸೀತಮ್ಮ ವಿವೇಕ್, ಹಾಸನ.

“ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ದೂರಾದವಳ ಮೇಲೆ ದೂರೊಂದ ನೀಡಬೇಕಿತ್ತುಮೌನವಾದವಳ ಜತೆ ಮಾತೊಂದ ಆಡಬೇಕಿತ್ತು ಇಟ್ಟ ಹೆಜ್ಜೆ ಕೊಟ್ಟ ಭಾಷೆ ಅರ್ಥ ಕಳೆದುಕೊಂಡಿವೆಕಟ್ಟಿದ ಕಾಲ್ಗೆಜ್ಜೆಯದು ಸದ್ದೊಂದ ಮಾಡಬೇಕಿತ್ತು ಪ್ರಮಾಣಿಸಿ ನೋಡದುದರ ಪರಿಣಾಮ ಘೋರಬರಿಗಣ್ಣಿಂದಲ್ಲ ಎದೆಯ ಕಣ್ಣಿಂದ ನೋಡಬೇಕಿತ್ತು ಗೂಡು ತೊರೆದ ಹಕ್ಕಿಗಂತೂ ಹೇಳತೀರದ ಪಾಡುನೋವ ಮರೆಸುವಂತ ಹಾಡೊಂದ ಹಾಡಬೇಕಿತ್ತು ಅವಳ ಆ ನಿಮಿಷ ಕುಂಬಾರನಿಗೆ ವರುಷವೇ ಸರಿಕಳೆದ ನೆನಹು ಬಿಡದೇ ಒಂದೊಂದ ಕಾಡಬೇಕಿತ್ತು ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಇತರೆ

“ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ” ಜಯಶ್ರೀ.ಜೆ. ಅಬ್ಬಿಗೇರಿಯವರ ಲೇಖನ.

ಸ್ಪೂರ್ತಿ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ”                                                   ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಾಮರ್ಥ್ಯ ತನ್ನ ಇರುವಿಕೆಯ ಮಹತ್ವವನ್ನು ಸಾರಿ ಹೇಳುತ್ತದೆ. ಸಾಮರ್ಥ್ಯವಿಲ್ಲದೇ ಸಣ್ಣ ಪುಟ್ಟ ಕೆಲಸಗಳನ್ನೂ ಚೆನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಸಮರ್ಥನಾದವನ ಕೆಲಸದ  ಗುಣಮಟ್ಟ ಸೂಜಿಗಲ್ಲಿನಂತೆ  ಸೆಳೆಯುತ್ತದೆ. ಸಾಮರ್ಥ್ಯವೆನ್ನುವುದು ಒಮ್ಮಿಂದೊಮ್ಮೆಲೇ ಉದ್ಭವಿಸುವುದಿಲ್ಲ. ಶ್ರದ್ಧೆಯಿಂದ, ನಿರಂತರವಾಗಿ, ಕಷ್ಟ ಪಟ್ಟು ಶ್ರಮವಹಿಸಿದಾಗ ಮಾತ್ರ ಒಲಿಯುವಂಥದ್ದು. ಮಾನವನ ಅತ್ಯಂತ ಅಗತ್ಯಗಳಲ್ಲಿ ಸಾಮರ್ಥ್ಯ ಅಗ್ರಸ್ಥಾನ ಪಡೆಯುತ್ತದೆ. ಉಪ್ಪಿಲ್ಲದೇ ಅಡುಗೆಯಿಲ್ಲ ಹಾಗೆಯೇ ಸಾಮರ್ಥ್ಯವಿಲ್ಲದೇ ಜೀವನದಲ್ಲಿ ಏನೂ ಇಲ್ಲ. ‘ನಾವು ಕಲಿಯುವುದನ್ನು ಬಿಟ್ಟರೆ ಕೆಲವು ರೀತಿಯಲ್ಲಿ ಸಾಯಲು ಪ್ರಾರಂಭಿಸುತ್ತೇವೆ.’ ನಾವು ಯಾವುದೇ ಪದವಿಯನ್ನು ಗಳಿಸಿದ್ದರೂ ಅಥವಾ ನಮ್ಮ ಹೆಸರಿನ ನಂತರ ಯಾವುದೇ ಮೊದಲಕ್ಷರಗಳು ಬಂದರೂ, ಪ್ರತಿದಿನವೂ ನಾವು ಸಾಮರ್ಥ್ಯವನ್ನು ಸುಧಾರಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಹೇಗೆ ಕಲಿಯುವುದು? ಸಾಮಾನ್ಯನನ್ನು ಅಸಾಮಾನ್ಯನಾಗಿಸುವುದೇ ಸಾಮರ್ಥ್ಯ. ಜಗದ ಬಹುತೇಕ ಸಾಧಕರು ಸಾಧಿಸಿದ ಅತ್ಯದ್ಭುತ ಗೆಲುವು ಅವರ ಸಾಮರ್ಥ್ಯದಿಂದಲೇ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಸಾಮರ್ಥ್ಯದ ಸದುಪಯೋಗ ಪ್ರಗತಿಗೆ ದಾರಿ. ಸಮರ್ಥರಾದವರು ಜಗತ್ತಿನ ಎಲ್ಲ ವಸ್ತುಗಳಿಂದಲೂ  ಕಲಿಯುವ  ಸಾಮರ್ಥ್ಯವನ್ನು ಬೆಳೆಸಿಕೊಂಡಿರುತ್ತಾರೆ. ಇದನ್ನೇ ವರಕವಿ ಬೇಂದ್ರೆ ‘ಜಾಣನಾದವನು ಕೋಣನಿಂದಲೂ ಕಲಿಯಬಲ್ಲ.’ ಎಂದು ಹೇಳಿದ್ದಾರೆ. ‘ನಾನು ವಾಚಾಳಿಗಳಿಂದ ಮೌನವನ್ನೂ, ಅಸಹನೆಯ ವ್ಯಕ್ತಿಗಳಿಂದ ಸಹನೆಯನ್ನೂ ಕ್ರೂರಿಗಳಿಂದ ಕರುಣೆಯನ್ನು ಕಲಿತಿದ್ದೇನೆ.’ ಎನ್ನುತ್ತಾನೆ ಜಗತ್ಪ್ರಸಿದ್ಧಚಿಂತಕ ಖಲಿಲ್ ಗಿಬ್ರಾನ್.ಇದನ್ನೇ ಸರ್ವಜ್ಞನ ಒಂದು ವಚನದಲ್ಲಿ ನೋಡಿದರೆ,“ಸರ್ವಜ್ಞನೇನು ಗರ್ವದಿಂದ ಆದವನೆಸರ್ವರೊಳಗೆಒಂದೊಂದು ನುಡಿಗಲಿತುವಿದ್ಯದಾ ಪರ್ವತವೇ ಆದ ಸರ್ವಜ್ಞ .”ಸರ್ವಜ್ಞನ ಪ್ರಕಾರ ಬೇರೆ ಬೇರೆ ವ್ಯಕ್ತಿಗಳಲ್ಲಿ ಪ್ರಾಣಿಗಳಲ್ಲಿ ಬೇರೆ ಬೇರೆ ಉತ್ತಮ ಸಂಗತಿಗಳು ಇರುತ್ತವೆ. ಅವುಗಳನ್ನು ಅಹಂ ಬಿಟ್ಟು ಕಲಿಯಬೇಕೆಂಬುದು ಸ್ಪಷವಾಗಿ ತಿಳಿಯುತ್ತದೆ. ಮೊದಲ ಹೆಜ್ಜೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೊದಲ ಹೆಜ್ಜೆ ನೀವು ಇನ್ನೂ ತಲುಪಿಲ್ಲ ಎಂದು ಅರ್ಥ ಮಾಡಿಕೊಳ್ಳುವುದು. ನೀವು ಬೆಳೆಯಲು ಯಾವುದೇ ಸ್ಥಳವಿಲ್ಲ ಎಂದು ನೀವು ಭಾವಿಸಿದರೆ, ನೀವು ಬೆಳೆಯುವುದಿಲ್ಲ. ನಿಮ್ಮ ಜೀವನದಲ್ಲಿ ಸುಧಾರಣೆಗೆ ಕ್ಷೇತ್ರಗಳಿವೆ ಎಂದು ನೀವು ಒಮ್ಮೆ ನೋಡಿದ ನಂತರ ಆ ಕ್ಷೇತ್ರಗಳಲ್ಲಿ ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ನಿಜವಾಗಿಯೂ ತುಂಬಾ ಸರಳವಾಗಿದೆ. ಪರಿಗಣಿಸಿ ಯಶಸ್ಸಿನ ಪ್ರಮುಖ ಅಧಿಕಾರಿ ನೆಪೊಲಿಯನ್ ಹಿಲ್ ಹೇಳಿದರು, ’ಪ್ರತಿಯೊಂದು ಪ್ರತಿಕೂಲತೆಯು ಅದರೊಂದಿಗೆ ಸಮಾನ ಪ್ರಯೋಜನದ ಬೀಜವನ್ನು ತರುತ್ತದೆ.’ನೀವು ಪ್ರತಿಯೊಂದು ಸಂಘರ್ಷ, ಪ್ರತಿ ವಿಳಂಬ ಮತ್ತು ಪ್ರತಿ ಹತಾಶೆಯನ್ನು ಈ ಬೆಳಕಿನಲ್ಲಿ ನೋಡಲು ಸಿದ್ಧರಿದ್ದರೆ ನಿಮ್ಮ ಇಡೀ ಜೀವನವು ಕಲಿಕೆಯ ಅವಕಾಶವಾಗುತ್ತದೆ. ಸಾಮರ್ಥ್ಯವು ಇನ್ನಿಲ್ಲದಂತೆ ಬೆಳೆಯುತ್ತದೆ. ನಾಯಕರು ಹುಟ್ಟಿನಿಂದಲೇ ಯಾರೂ ನಾಯಕರು ಆಗಿಲ್ಲ. ನಾಯಕನ ಸಾಮರ್ಥ್ಯವನ್ನು ಬೆಳೆಸಿಕೊಂಡೇ ನಾಯಕರಾಗಿದ್ದಾರೆ. ನಾಯಕ ತನ್ನ ಸಾಮರ್ಥ್ಯದಿಂದ ಕೇವಲ ವ್ಯಕ್ತಿಯಾಗುವುದಿಲ್ಲ. ದೊಡ್ಡದೊಂದು ಶಕ್ತಿಯಾಗಿ ಬೆಳೆಯುತ್ತಾನೆ. ಪ್ರಬಲ ನಾಯಕರು ಚಿಂತಕರು ಅವರ ಹಿಂಬಾಲಕರ ಮೇಲೆ ಬೀರುವ ಪ್ರಭಾವ ಅಷ್ಟಿಷ್ಟಲ್ಲ. ನಿಮಗಿಂತ ಹೆಚ್ಚು ಯಶಸ್ವಿ ಹೆಚ್ಚು ಸಮರ್ಥ ಮತ್ತು ಹೆಚ್ಚು ಅರ್ಹತೆ ಹೊಂದಿರುವ ಜನರೊಂದಿಗೆ ನೀವಿದ್ದರೆ ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವದು ಖಚಿತ. ಬಹುತೇಕ ಪ್ರತಿಯೊಬ್ಬ ನಾಯಕನು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮಾರ್ಗದರ್ಶಕನನ್ನು ಹೊಂದಿಯೇ ಇರುತ್ತಾನೆ. ನೀವು ಬಯಸಿದರೆ ಅದು ಸಿಕ್ಕೇ ಸಿಗುತ್ತದೆ. ದೌರ್ಬಲ್ಯ ಸಾಮರ್ಥ್ಯ ನಮ್ಮಲ್ಲಿರುವ ಮನೋಶಕ್ತಿಯನ್ನು ಸೂಚಿಸುತ್ತದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಬದುಕಿಗೆ ಅರ್ಥ ನೀಡುತ್ತದೆ. ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳು ಹಿನ್ನೆಡೆಯನ್ನು ಸಮಸ್ಯೆ ಎಂದು ಕರೆಯದೇ ಅದನ್ನು ತಮ್ಮ ಸಾಮರ್ಥ್ಯವನ್ನು ಎತ್ತರಕ್ಕೇರಿಸಲು ಬಳಸಿಕೊಂಡಿದ್ದಾರೆ. ಸದಾ ನಮ್ಮನ್ನು ಹಿಂಬಾಲಿಸುವ ನೆರಳನ್ನು ಬೆಳಕಿಗೊಡ್ಡಿದರೆ ಮಾಯವಾಗುತ್ತದೆ. ಅದೇ ರೀತಿ ವೈಯುಕ್ತಿಕ ದೌರ್ಬಲ್ಯಗಳನ್ನು ಗುರುತಿಸಿ ಆ ಕುರಿತು ಕಾರ್ಯಪ್ರವೃತ್ತರಾದಾಗ ಪ್ರಾಬಲ್ಯ ಮೆರೆಯಬಹುದು.ತನ್ಮೂಲಕ ಟೀಕಾಕಾರರ ಮುಂದೆಯೂ ತಲೆಯೆತ್ತಿ ನಿಲ್ಲಬಹುದು. ಸಮಯ ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಟಿವಿ ನೋಡುವುದು ಅಥವಾ ವಿಡಿಯೋಗಳು ಟ್ರಾಫಿಕ್ ನಲ್ಲಿ ಕುಳಿತುಕೊಳ್ಳುವುದು ಸಭೆ ಪ್ರಾರಂಭವಾಗಲು ಕಾಯುವುದು ಇನ್ನೂ ಮುಂತಾದ ಅರ್ಥಹೀನ ಕೆಲಸಗಳನ್ನು ಮಾಡುತ್ತ ಸಮಯ ವ್ಯರ್ಥವಾಗುತ್ತದೆ. ಕಾರಿನಲ್ಲಿ ಹೋಗುವಾಗ ಪಾಡ್ ಕ್ಯಾಸ್ಟ್ಗಳನ್ನು ಕೇಳುವ ಮೂಲಕ, ಆ ಖಿನ್ನತೆಯ ಕ್ಷಣಗಳಿಂದಾಗಿ ನಿಮ್ಮ ಕಂಪ್ಯೂಟರ್ ಅಥವಾ ಫೋನ್‌ಗೆ ಪ್ರಸ್ತಕಗಳನ್ನು ಲೋಡ್ ಮಾಡುವ ಮೂಲಕ, ಅವುಗಳನ್ನು ಆಲಿಸಿದರೆ ಜ್ಞಾನ ವೃದ್ಧಿಯಾಗುವುದು. ಜ್ಞಾನ ಸಾಮರ್ಥ್ಯವನ್ನು ಹೆಚ್ಚಿಸುವುದು. ವ್ಯರ್ಥ ಕ್ಷಣಗಳ ಲಾಭ ಪಡೆಯಲು ಉಪಯೋಗಿಸಿ. ಇದರಿಂದ ಸಾಮರ್ಥ್ಯ ದಿನೇ ದಿನೇ ಬೆಳೆಯುತ್ತ ಹೋಗುವುದು ಖಂಡಿತ. ತಂತ್ರಜ್ಞಾನ “ಒಳ್ಳೆಯ ಪುಸ್ತಕಗಳನ್ನು ಓದದ ಮನುಷ್ಯನಿಗೆ ಅವುಗಳನ್ನು ಓದಲು ಬಾರದ ಮನುಷ್ಯನಿಗಿಂತ ಯಾವುದೇ ಅನುಕೂಲವಿಲ್ಲ.” ಎಂದು ಮಾರ್ಕ್ ಟ್ವೇನ್ ಹೇಳಿದ್ದಾನೆ. ಒಳ್ಳೆಯ ಪುಸ್ತಕಗಳನ್ನು ಖರೀದಿಸಿ. ನಿಮಗೆ ಸವಾಲು ಹಾಕುವ ಪುಸ್ತಕಗಳನ್ನು ಓದಿ. ಇತ್ತೀಚಿಗೆ ಪುಸ್ತಕಗಳನ್ನು ಕೇಳುವ ಅವಕಾಶ ತಂತ್ರಜ್ಞಾನದಿಂದ ಲಭಿಸಿದೆ. ಇದರಿಂದ ಒಂದೇ ಕಡೆ ಕುಳಿತು ಓದಬೇಕಂತಿಲ್ಲ. ಪುಸ್ತಕಗಳನ್ನು ಆಲಿಸಿ ಅದರಲ್ಲಿನ ತಿರುಳನ್ನು ತಿಳಿಯಬಹುದು. ತಂತ್ರಜ್ಞಾನವು ನಿರಂತರವಾಗಿ ಸುಧಾರಿಸುತ್ತಿದೆ. ಕಲಿಯಲು ಅದು ಒದಗಿಸುವ ಅವಕಾಶಗಳನ್ನು ಬಳಿಸಿಕೊಳ್ಳಬೇಕು. ಸಮಸ್ಯೆಗಳು ಶಕ್ತಿಯ ಮಿತಿಯಾಚೆಗಿರುವ  ಸಮಸ್ಯೆಗಳು ಎಂದು ಭಾವಿಸಿರುವಂಥವು  ನಮ್ಮ ಅಸಾಮರ್ಥ್ಯದ ನೆಪದಲ್ಲಿ ಅಟ್ಟಹಾಸ ಮೆರೆಯುತ್ತಿರುತ್ತವೆ. ನಿಜ ಹೇಳಬೇಕೆಂದರೆ ಇಂಥ ತಲೆ ಕೆಡಿಸುವ ಸಂಗತಿಗಳೇ ನಾವು ಹೆಚ್ಚೆಚ್ಚು ಸಮರ್ಥರಾಗಲು ದೊಡ್ಡ ಅವಕಾಶಗಳಾಗುತ್ತವೆ. ‘ಇತರರ ಬಗ್ಗೆ ನಮ್ಮಲ್ಲಿ ಕಿರಿಕಿರಿ ಉಂಟು ಮಾಡುವ ಸಂಗತಿಗಳು ನಮ್ಮನ್ನು ಅರ್ಥ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಬಹುದು.’  ಎಂದೊಮ್ಮೆ ಪ್ರಸಿದ್ಧಮನಃಶಾಸ್ತ್ರಜ್ಞ ಕಾರ್ಲಜಂಗ್ ಹೇಳಿದ್ದ ಮಾತು ದಿಟವಾದುದು. ಜ್ಞಾಪಿಸಿಕೊಳ್ಳಿ ನಾನು ಸಾಮಾನ್ಯ ನನ್ನಲ್ಲಿ ಹೇಳಿಕೊಳ್ಳುವ ಸಾಮರ್ಥ್ಯಗಳು ಯಾವವೂ ಇಲ್ಲ ಎಂದುಕೊಳ್ಳುವಾಗ ‘ನೀವು ಏನೂ ಪರಿಣಾಮ ಬೀರಲು ಸಾಧ್ಯವಾಗದಷ್ಟು ಸಣ್ಣವರೆಂದು ಭಾವಿಸಿಕೊಳ್ಳುವುದಾದರೆ ಸೊಳ್ಳೆ ಪರದೆಯೊಳಗಿರುವ ಸೊಳ್ಳೆಯನ್ನು ಜ್ಞಾಪಿಸಿಕೊಳ್ಳಿ” ಎಂದು ಮಾರ್ಮಿಕವಾಗಿ ಹೇಳಿದ್ದಾಳೆ ‘ದ ಬಾಡಿ ಶಾಪ್’ನ ಸಂಸ್ಥಾಪಕಿ ಅನಿತಾ ರಾಡಿಕ್. ಆಯ್ಕೆ ಹದ್ದು ಬಾನೆತ್ತರಕ್ಕೆ ಹಾರಬಲ್ಲದು.. ಇರುವೆ ಅತೀ ಚಿಕ್ಕದಾದರೂ, ತನ್ನ ತೂಕಕ್ಕಿಂತ ಹೆಚ್ಚು ಪಟ್ಟು ವಸ್ತುವನ್ನು ಹೊತ್ತೊಯ್ಯುವ ಸಾಮರ್ಥ್ಯ ಗಳಿಸಿಕೊಂಡಿದೆ. ಏನೆಲ್ಲವನ್ನು ದಕ್ಷತೆಯಿಂದ ನಿರ್ವಹಿಸಲು ನಾನು ಸಮರ್ಥ ಎಂಬ ಅಹಂಭಾವ ತಲೆಗೇರಿದರೆ ರಿಚರ್ಡ್ ಕ್ಯಾರಿಯನ್ ಹೇಳಿದಂತೆ, ‘ಯಶಸ್ಸು ಸೋಲನ್ನೂ ಸೃಷ್ಟಿಸುತ್ತದೆ.’ ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆಯೇ ಸರಿ. ನಮ್ಮಲ್ಲಿರುವ ಶಕ್ತಿಯನ್ನು ನಾವೇ ನಿರಾಕರಿಸುವುದು ಅಸಮರ್ಥತೆ. ಅಸಮರ್ಥರಾಗಿ ವೈಫಲ್ಯಗಳಿಗೆ ಬಲಿಪಶುಗಳಾಗುವುದಕ್ಕಿಂತ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಯಶಸ್ವಿ ವ್ಯಕ್ತಿಗಳಾಗುವುದು ಉತ್ತಮ. ಆಯ್ಕೆ ನಮ್ಮ ಕೈಯಲ್ಲಿದೆ. ಜಯಶ್ರೀ ಜೆ ಅಬ್ಬಿಗೇರಿ

“ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ” ಜಯಶ್ರೀ.ಜೆ. ಅಬ್ಬಿಗೇರಿಯವರ ಲೇಖನ. Read Post »

You cannot copy content of this page

Scroll to Top