ಕಾವ್ಯ ಸಂಗಾತಿ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
“ಚಳಿ-ಚಳಿ”


ಎಲ್ಲವನು ಕಳೆದುಕೊಂಡೆ
ತನುವು ಮನವು
ಒಲವು ಬಲವು
ಈ ಚಳಿಯ
ರಾತ್ರಿಗೆ!
ಏಕಾಂತದ ನಡುಕ
ಎದೆಯೊಳಗೆ
ವಿರಹದ ಉರಿ
ಅರಿವು ಜರಿದು
ಮರೆವು ಮಸೆದು
ಹೊರಗೆ-
ರಂಧ್ರ ಕೊರೆವ ಚಳಿ
ಒಳಗೆ-
ದಹಿಸುವ ನಿನ್ನ
ನೆನಪ ಸುಳಿ
ನೀನಿರದ ವೇಳೆ
ಜೀವ ಬಾದಿತ
ನಿದಿರೆ ಬಾರದೆ
ನೆಮ್ಮದಿ ಗದ್ಗದಿತ
ಮೆಲ್ಲುವ ವೇದನ
ಕನ್ನಡಿ ನಗುತ
ಕಾಯಿಲೆಗೆ ಕೆಡವಿದ
ಮೇಧಾವಿ ಶಕುನ
ಗಡಿಯಾರದ ಮುಳ್ಳುಗಳ
ಶಬ್ಧವು-
ಕಿವಿಯೊಳಗೆ
ಸಲಾಕೆ ಬಾರಿಸಿದ ಹಾಗೆ
ಮಿಣುಕು ದೀಪ
ಅಣಕಿಸಿದ ಹಾಗೆ
ನೀನಿರದ
ಈ ಚಳಿಯ ರಾತ್ರಿ
ಹಿಂಡುತಿವೆ
ಕರಳು ನರಳಗಳನು
ಹಿಮದ ಗರ್ಭದೊಳಗೆ
ಮಲಗಿಸಿ
——–
ಶರಣಪ್ಪ ತಳ್ಳಿ ಕುಪ್ಪಿಗುಡ್ಡ




