ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊಡೆದುಬಿಡು ಒಡೆದು ಹೋಗಲಿ
ಇದುವರೆಗೂ ನನ್ನ ಮನಸಲ್ಲಿ ಕಡೆದ ನಂಬಿಕೆಯ ಶಿಲೆ
ಗರಡಿಯಲ್ಲಿ ನಡೆದ ನುಡಿ ಒಡನಾಟ ಚನ್ನಾಗಿ ಸುಡುವ ಕಲೆ

ದಾನ ಕೊಟ್ಟು ಪ್ರಾಣ ಬಿಟ್ಟ
ಕರ್ಣನ ಹುಟ್ಟು ಸಾವಿಗೆ ಕಾರಣ
ನಾಡ ಬಿಟ್ಟು ಕಾಡು ಸೇರಿದ
ರಾಮನ ವನವಾಸಕ್ಕೆ ನಿನ್ನದೆ ತೋರಣ

ಮೊದಲು ನೆಲದ ಸುಮವೆಲ್ಲ ಬಿಳುಪೆ
ಮಾಯೆ ಪಡೆವ ಕದನ ಕಂಡ ಸಾಕ್ಷಿ ಹೂವೆಲ್ಲ ಕೆಂಪೆ
ನೆತ್ತರುಂಡ ನೆಲದಲ್ಲಿ ಇನ್ನು ಪತ್ರ ಸಾರುತ್ತಿವೆ
ನೀ ಉತ್ತರ ಪ್ರಶ್ನೆ ಹೊತ್ತವಳೆಂದು ಹೆತ್ತವಳೆಂದು

ಸೆರಗ ತುದಿಯ ಗಂಟಲ್ಲಿ ಎಷ್ಟೊಂದು ಭಾರ
ಭೂಮಿ ತೂಕ ಹೊರುವ ಹುನ್ನಾರ
ಉಸಿರು ನಿಂತರು ಮಿಸುಕದ ಘೋರ
ಅದು ಹಾಗೆಯೇ  ತನ್ನತನದ ನಿಗೂಢತೆ ಹಾರ

ಧ್ವನಿ ವರ್ಧಕವೆ ಬೇಡ ನಿನಗೆ ಎಷ್ಟು ಜಗ ಜಾಹಿರು
ಇದ್ದದ್ದು ಇರದೆ ಇದ್ದದ್ದು ಮೇಲೆ ಕಲೆಗಾರಿಕೆ ನವಿರು
ಉಸುರಿ ಹಗುರಾಗದ ಹೊರತು ತಳಮಳ ಹೊಟ್ಟೆಯಲ್ಲಿ ಢಮರು
ಅದು ಹಾಗೆಯೇ ಪರರ ಗುಟ್ಟೆಂದರೆ ಸರಿ ಸುಮಾರು


About The Author

Leave a Reply

You cannot copy content of this page

Scroll to Top